ಸ್ಕೂಟರು ಕಾರು ಬಿಟ್ಟು ಬಿಡಿ, ಆಕಾಶಕ್ಕೇ ಲಗ್ಗೆ ಇಡಿ


Team Udayavani, Jan 28, 2017, 3:30 PM IST

9.jpg

ಆಕಾಶದಲ್ಲಿ ಹಾರುವ ವಿಮಾನವನ್ನು ನೋಡಿ ಅದೆಷ್ಟೋ ಮಂದಿ ನಾನೂ ಒಂದಲ್ಲ ಒಂದಿನ ವಿಮಾನದಲ್ಲಿ ಹೋಗೇ ಹೋಗುತ್ತೇನೆ ಅಂತ ಆಸೆ ಪಟ್ಟಿರುತ್ತಾರೆ. ಇನ್ನು ಕೆಲವರ ಆಸೆ ಅದಕ್ಕಿಂತ ಒಂದು ಲೆವೆಲ್‌ ಜಾಸ್ತಿಯೇ ಇರುತ್ತದೆ. ಅದೇನೆಂದರೆ ವಿಮಾನ ಹಾರಿಸುವುದು. ವಿಪರ್ಯಾಸವೆಂದರೆ ಬಹುತೇಕರ ಕನಸು ಅರ್ಧದಲ್ಲೇ ಕೊನೆಯಾಗಿರುತ್ತದೆ. ಈಗ ಕಾಲ ವೇಗವಾಗಿರುವುದರಿಂದ ಕನಸು ಅರ್ಧದಲ್ಲೇ ನಿಂತುಹೋಗಬೇಕಾಗಿಲ್ಲ. ಆಸೆಪಟ್ಟವರೆಲ್ಲಾ ವಿಮಾನ ಹಾರಿಸಲು ಕಲಿಯಬಹುದು. ವಿಮಾನ ಹಾರಿಸಲು ಕಲಿಸುವ ಒಂದು ಸ್ಕೂಲು ನಮ್ಮೂರಲ್ಲಿದೆ. ಅದರ ಹೆಸರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ.

ಏನಿದು?
ಇದೊಂದು ಸರ್ಕಾರಿ ಶಾಲೆ. ವೈಮಾನಿಕ ತರಬೇತಿ ನೀಡುವ ಶಾಲೆ. ಇಲ್ಲಿ ಮೂರು ಥರದ ಕೋರ್ಸು ಇದೆ.
1. ಸ್ಟುಡೆಂಟ್ಸ್‌ ಪೈಲೆಟ್‌ ಲೈಸೆನ್ಸ್‌
ಈ ಕೋರ್ಸು ಎಲ್‌ಎಲ್‌ಆರ್‌ ಥರ. ಉಳಿದೆರಡು ಕೋರ್ಸುಗಳನ್ನು ಕಲಿಯಬೇಕಾದರೆ ಈ ಕೋರ್ಸು ಕಲಿಯುವುದು ಕಡ್ಡಾಯ. ಹತ್ತನೇ ಕ್ಲಾಸು ಪಾಸಾದ, ವಯಸ್ಸು 16 ದಾಟಿದ ಯಾರು ಬೇಕಾದರೂ ಈ ಕೋರ್ಸಿಗೆ ಸೇರಿಕೊಳ್ಳಬಹುದು.

2. ಪ್ರೈವೇಟ್‌ ಪೈಲೆಟ್‌ ಲೈಸೆನ್ಸ್‌
ವಯಸ್ಸು ಹದಿನೇಳು ದಾಟಿದವರು ಈ ಕೋರ್ಸಿಗೆ ಸೇರಿಕೊಳ್ಳಬಹುದು. ಹತ್ತನೇ ಕ್ಲಾಸು ಪಾಸಾಗಿರಬೇಕು. ಈ ಕೋರ್ಸಿನ ಅವಧಿ ಒಂದು ವರ್ಷ. 

3. ಕಮರ್ಷಿಯಲ್‌ ಪೈಲೆಟ್‌ ಲೈಸೆನ್ಸ್‌
ಈ ಕೋರ್ಸು ಕಲಿತವರು ಪೈಲೆಟ್‌ಗಳಾಗಬಹುದು. ವಿಜ್ಞಾನ ವಿಭಾಗದಲ್ಲಿ 10+2 ಉತ್ತೀರ್ಣರಾದವರಿಗೆ ಮಾತ್ರ ಈ ಕೋರ್ಸು. ಎರಡು ವರ್ಷ ಅವಧಿಯ ಈ ಕೋರ್ಸು ಕಲಿತರೆ ಕಮರ್ಷಿಯಲ್‌ ವಿಮಾನಗಳನ್ನು ಹಾರಿಸಬಹುದು.

ಹೇಗೆ?
ಈ ಯಾವ ಕೋರ್ಸುಗಳನ್ನು ಕಲಿಯುವುದಾದರೂ ಆರೋಗ್ಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಇಂಡಿಯನ್‌ ಏರ್‌ಕ್ರಾಫ್ಟ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಕಲಿಯಲು ಅನುಮತಿ ದೊರೆಯದು.

ಫೀಸು- ಅಪ್ಲಿಕೇಷನ್‌ ಫೀಸು ರೂ.4000. ವಿಮಾನ ಹಾರಿಸಲು ಗಂಟೆಗೆ ರೂ.9500. ಇನ್ನುಳಿದ ಮಾಹಿತಿಯನ್ನು ದೂರವಾಣಿ ಕರೆ ಮಾಡಿ ಅಥವಾ ವೆಬ್‌ಸೈಟ್‌ನಲ್ಲಿ ತಿಳಿದುಕೊಳ್ಳಬಹುದು.

ಎಲ್ಲಿ- ಸರ್ಕಾರಿ ವೈಮಾನಿಕ ತರಬೇತಿ ಶಾಲೆ, ಜಕ್ಕೂರು ವಿಮಾನ ನಿಲ್ದಾಣ, ಯಲಹಂಕ ಅಂಚೆ
ದೂ- 9986656788, 9483530582, 080 23332251 
ಇಮೇಲ್‌- [email protected]
ವೆಬ್‌ಸೈಟ್‌-  http://gfts.kar.nic.in/

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.