ಕಂಚುಕಿ: ಕೇಂದ್ರದ ಸುತ್ತ ಅಭಿನಯದ ಉತ್ತುಂಗ


Team Udayavani, Aug 12, 2017, 4:01 PM IST

6588.jpg

ಕಾದಂಬರಿ ಪ್ರಕಾರದ ಹರವು ವಿಸ್ತಾರವಾದದ್ದು; ಬದುಕಿನ ಚಿತ್ರಣ ಅಲ್ಲಿ ನಿರೂಪಣೆಯ ಹಿನ್ನೆಲೆಯಲ್ಲಿ ಸೂಕ್ಷ್ಮವೂ ಹೌದು, ವಿಸ್ತೃತವೂ ಹೌದು. ಕಾದಂಬರಿಯಲ್ಲಿನ ಬದುಕಿನ ಚಿತ್ರಣವನ್ನು ರಂಗಪ್ರಯೋಗಕ್ಕೆ ಅದರ ಕಾಲಮಿತಿ ಅನುಸಾರ ಅಳವಡಿಸುವುದು ನಿಜಕ್ಕೂ ಸವಾಲು.  

ಇತ್ತೀಚೆಗೆ “ನಟರಂಗ’ ರಂಗತಂಡ, ಚಂದ್ರಶೇಖರ ಕಂಬಾರರ “ಸಿಂಗಾರೆವ್ವ ಮತ್ತು ಅರಮನೆ’ ಕಾದಂಬರಿಯನ್ನು ರಂಗಶಂಕರದಲ್ಲಿ ರಂಗರೂಪಕ್ಕೆ ಇಳಿಸಿತ್ತು. ಕಾದಂಬರಿಕಾರರ ಆಶಯಗಳನ್ನು ಕಾಣಿಸುತ್ತಲೇ ನಾಟಕ ಕಟ್ಟಲು ಬೇಕಾದ ಕೇಂದ್ರವನ್ನು ಕಂಡುಕೊಂಡು ಅದರ ಧ್ವನಿಯನ್ನು ದೃಶ್ಯಗಳಾಗಿ ಕಟ್ಟಿದರು. ಕಂಬಾರರು “ಸಿಂಗಾರೆವ್ವ ಮತ್ತು ಅರಮನೆ’ ಅಂತ ಹೆಸರಿಸಿರುವುದನ್ನು ದಿವ್ಯಾ ಕಾರಂತ್‌ “ಕಂಚುಕಿ’ ಎಂದು ಮರುನಾಮಕರಿಸಿದ್ದು, ಕುತೂಹಲವೆನಿಸಿತು.

ಸಿಂಗಾರಿ ಅರಮನೆಯಲ್ಲಿದ್ದರೂ ಬಂಜೆಯಾಗಿ ನೋವಿನಲ್ಲಿ ನೆಣೆಯುವ ವೈರುಧ್ಯಗಳನ್ನು ಕಂಬಾರರು ಕಟ್ಟಿಕೊಟ್ಟರೆ ದಿವ್ಯಾ ತಮ್ಮ ಪ್ರಯೋಗಕ್ಕೆ ಕೇಂದ್ರವನ್ನು ಕಂಚುಕಿ ರೂಪದಲ್ಲಿ ತೋರಿಸಿದ್ದಾರೆ. “ಕಂಚುಕಿ’ ಪದಕ್ಕೆ ಅಂತಃಪುರದ ಅಧಿಕಾರಿ ಎಂಬರ್ಥವೂ ಇದೆ. 

ರಾಜಮನೆತನದ ತನ್ನ ಗಂಡ ಬಲಹೀನತೆಯಲ್ಲಿ ಬಳಲುತ್ತಿರುವುದರಿಂದ ಸಿಂಗಾರಿಯ ಬದುಕಿನ ನಡೆ ಕ್ರಮೇಣ ಕವಲೊಡೆಯುತ್ತದೆ. ಆಕೆ ಅನಿರೀಕ್ಷಿತಗಳಿಗೆ ಪಕ್ಕಾಗುತ್ತಾಳೆ. ಆರಂಭದಲ್ಲಿನ ಭಯ ಮತ್ತು ಹೇವರಿಕೆಗಳು ಕ್ರಮೇಣ ಬದಲಾಗುತ್ತವೆ. ಕಾಯುವಿಕೆಯ ಹಂತ ಮುಗಿದಾಗ ಸಿಂಗಾರಿ ತನ್ನ ನಪುಂಸಕ ಗಂಡನನ್ನು ಬದಿಗೆ ಸರಿಸಿ ತನ್ನನ್ನು ಬೆಚ್ಚಿಸುವ, ಅದೇ ವೇಳೆ ಕಾಳಜಿಯೂ ತೋರುವ, ಒರಟನಂತಿರುವ ಆದರೆ ಆಳದಲ್ಲಿ ಮೃದುವಾಗಿರುವವನನ್ನು ತನ್ನ ಅಂತಃಪುರದ ಅಧಿಕಾರಿಯಾಗಿಸಿಕೊಂಡು ಗರ್ಭ ಧರಿಸುತ್ತಾಳೆ. ದಿವ್ಯಾರವರು ಕಾದಂಬರಿಯ ಶೀರ್ಷಿಕೆಯನ್ನು ಕಂಚುಕಿಯಾಗಿ ಮಾರ್ಪಾಡು ಮಾಡಿರುವ ರೀತಿ ಈ ಬಗೆಯದು.

ರಂಗರೂಪದಲ್ಲಿನ ತಮ್ಮ ದರ್ಶನದ ಅನುಸಾರ ಕೇಂದ್ರವನ್ನು ತುಂಬ ಸ್ಪಷ್ಟಪಡಿಸಿಕೊಂಡಿದ್ದರಿಂದ ದಿವ್ಯಾರಿಗೆ ಈ ಎಲ್ಲವನ್ನೂ ಅಭಿನಯದ ಸಾಧ್ಯತೆಯಲ್ಲಿ ತುಂಬಾ ಪ್ರೌಢಿಮೆಯಿಂದ ಕಟ್ಟಿ, ನಿರ್ದೇಶಿಸಲು ಸಾಧ್ಯವಾಗಿದೆ.  

ಅಭಿನಯದ ಸಾಧ್ಯತೆಗಳಿಗೆ ಒತ್ತು ನೀಡಿದ್ದು ಪ್ರತಿ ಹಂತದಲ್ಲೂ ಸ್ಪಷ್ಟವಾಗುತ್ತಿತ್ತು. ಸಾಧ್ಯತೆಗಳನ್ನು ಪಕ್ವಗೊಳಿಸಿಕೊಂಡಿರುವ ಬಗೆಯೂ ಆಗಾಗ ಇಣುಕುತ್ತಿತ್ತು. ಪ್ರತಿಯೊಬ್ಬರ ಅಭಿನಯವೂ ಸಹಜವಾಗಿತ್ತು; ಅಂದರೆ, ಅಭಿನಯವನ್ನು ನಾಟಕೀಯಗೊಳಿಸಲು ದಿವ್ಯಾ ಮುಂದಾಗಿಲ್ಲ. ಹಾಗಾಗಿ ಇಲ್ಲಿ ಅತೀ ಕಸರತ್ತುಗಳಿರಲಿಲ್ಲ. ಎಲ್ಲೋ ಸ್ವಗತದ ಮಾದರಿಯ ಮಾತುಗಳನ್ನು ಮತ್ತು ಭಯ ಆತಂಕಗಳನ್ನು ವ್ಯಕ್ತಪಡಿಸುವ ಸಂದರ್ಭಗಳಲ್ಲಿ ಮಾತ್ರ ಚೂರು ನಾಟಕೀಯ- ಅದೂ ಸಹಜತೆಯ ಕಕ್ಷೆಯ ಒಳಗೇ ಬರುವಂತೆ ನೋಡಿಕೊಳ್ಳಲಾಗಿದೆ.  

 ಇಲ್ಲಿ ತಂತ್ರಗಾರಿಕೆಯನ್ನು ಮೇಲಾಟ ಮಾಡಿಕೊಳ್ಳದ ಪರಿಣಾಮ ನಿರೂಪಿತ ಬದುಕಿನ ಸಹಜ ಗತಿ ಆವರಿಸಿಕೊಳ್ಳಲಾರಂಭಿಸಿತು. ಇಲ್ಲಿ ತಂತ್ರಗಾರಿಕೆ ಇರಲೇ ಇಲ್ಲವೆಂದಲ್ಲ; ರಂಗವನ್ನು ನೆರಳು ಬೆಳಕಿನಲ್ಲಿ ವಿಭಾಗಿಸಿಕೊಂಡ ಕ್ರಮ ಸರಳವಾಗಿಯೂ, ಪೂರಕವಾಗಿಯೂ ಇತ್ತು. ಸಿಂಗಾರಿ ಮತ್ತು ಆಕೆಯ ಅಂತಃಪುರದ ಅಧಿಕಾರಿ ಮಿಲನದಲ್ಲಿ ಸೇರುವ ದೃಶ್ಯವನ್ನು ಕಟ್ಟಿಕೊಟ್ಟ ಪರಿ ಶ್ಲಾಘನೀಯ. 

ಪ್ರತಿಯೊಬ್ಬರ ಅಭಿನಯವೂ ಆಯಾ ಪಾತ್ರಗಳ ನೋವಿನ ಅನುಭವದಲ್ಲಿ ಪಾಲುಗೊಳ್ಳುವಷ್ಟು ದಟ್ಟವಾಗಿತ್ತು. ಸಿಂಗಾರಿ ಪಾತ್ರದಾಕೆ ತನ್ನ ಸಾಮರ್ಥ್ಯವನ್ನು ತೋರಿಸಿದರು. ಶ್ರೀನಿಂಗಿ ಪಾತ್ರದ ನಟಿ ಅಭಿನಯದ ಬೇರೆ ಬೇರೆ ಮಜಲುಗಳನ್ನು ಸಮರ್ಥವಾಗಿ ಕಾಣಿಸಿದರು. ದೇಸಾಯಿ ಪಾತ್ರ ನಿರ್ವಹಣೆ ತಾರಕ ಮುಟ್ಟಿತ್ತು. 

ಹಿನ್ನೆಲೆ ಸಂಗೀತ ತುಸು ಪೇಲವವಾಗಿತ್ತು. ಸಾಹಿತ್ಯ ಚೆಂದವಿದ್ದರೂ, ಅದು ಸಂಗೀತದಲ್ಲಿ ಸಮರ್ಥವಾಗಿ ಧ್ವನಿಸಲಿಲ್ಲ. ಮಂಜು ನಾರಾಯಣ್‌ ಉತ್ತಮವಾಗಿ ಬೆಳಕಿನ ನಿರ್ವಹಣೆ ಮಾಡಿದ್ದಾರೆ. 

ಎನ್‌. ಸಿ. ಮಹೇಶ್‌

ಟಾಪ್ ನ್ಯೂಸ್

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.