ಬಾಲ್ಕನಿಯಲ್ಲಿ ಉದ್ಯಾನ
Team Udayavani, Aug 12, 2017, 4:04 PM IST
ಗಿಡ, ಮರ, ಹಸಿರು ಎಂದರೆ ಎಲ್ಲರಿಗೂ ಇಷ್ಟ ಇದ್ದೇ ಇರುತ್ತೆ. ಬಹುತೇಕರು ಬಿಡುವು ಸಿಕ್ಕ ಕೂಡಲೆ ಬೆಂಗ್ಳೂರು ಬಿಟ್ಟು ದೂರಕ್ಕೆ ಹೊರಟು ನಿಲ್ಲುತ್ತಾರೆ. ಇನ್ನು ಕೆಲವರು ಮನೆಯ ಸುತ್ತಮುತ್ತ ಉಳಿದ ಅಷ್ಟಿಷ್ಟು ಜಾಗದಲ್ಲಿಯೇ ಪುಟ್ಟ ಉದ್ಯಾನವನಗಳನ್ನು ಮಾಡಿಬಿಡುತ್ತಾರೆ. ಆದರೆ ಬಹುತೇಕರಿಗೆ ಆ ಸೌಭಾಗ್ಯವೂ ಇರೋದಿಲ್ಲ. ಏಕೆಂದರೆ ಅವರು ಮಹಡಿ ಮನೆಗಳಲ್ಲಿ, ಅಪಾರ್ಟ್ಮೆಂಟುಗಳಲ್ಲಿ ವಾಸಿಸುತ್ತಿರುತ್ತಾರೆ. ಅಂಥವರನ್ನು ಗಮನದಲ್ಲಿರಿಸಿಕೊಂಡು ಒಂದು ಕಾರ್ಯಾಗಾರ ಆಯೋಜನೆಯಾಗಿದೆ.
ಇಲ್ಲಿ ಬಾಲ್ಕನಿ, ಟೆರೇಸುಗಳಲ್ಲಿ ಗಿಡ ಬೆಳೆಸುವುದನ್ನಷ್ಟೇ ಅಲ್ಲ, ಯಾವುದೇ ಕೆಮಿಕಲ್ ಬಳಸದೆ, ನೈಸರ್ಗಿಕವಾಗಿ ಸಿಗುವ ಸಾವಯವ ವಸ್ತುಗಳಿಂದಲೇ ಬೆಳೆಸುವುದನ್ನು ಹೇಳಿಕೊಡುತ್ತಾರೆ. ಮಕ್ಕಳೂ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. 6 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಶುಲ್ಕ ಇರುವುದಿಲ್ಲ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರಿಗೆ ಒಂದು ಗಾರ್ಡನಿಂಗ್ ಕಿಟ್ ಒದಗಿಸಲಾಗುತ್ತದೆ.
ಎಲ್ಲಿ?: ಮೈ ಡ್ರೀಮ್ ಗಾರ್ಡನ್, ಎಲ್. ಪಿ ಕಾಂಪ್ಲೆಕ್ಸ್, ಒಎಂಬಿಆರ್ ಲೇಔಟ್, ಬಾಣಸವಾಡಿ
ಯಾವಾಗ?: ಆಗಸ್ಟ್ 13, ಬೆಳಗ್ಗೆ 10- 12.30
ಪ್ರವೇಶ: 400 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್