ಹೋಳಿಗೆಯೆಂಬ ನೆನಪಿನ ಜೋಳಿಗೆ; ಒಬ್ಬಟ್ಟಿನಲ್ಲಿ ಒಲವಿದೆ!


Team Udayavani, Mar 17, 2018, 1:27 PM IST

3-aa.jpg

ಯುಗಾದಿ ಪ್ರಯುಕ್ತ ಹೆಚ್ಚು ಕಮ್ಮಿ ಕರ್ನಾಟಕದ ಎಲ್ಲಾ ಮನೆಗಳಲ್ಲೂ ಒಬ್ಬಟ್ಟು ಮಾಡೇ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಪುರನಪೊಳಿ, ಆಂಧ್ರದಲ್ಲಿ ಬೊಬ್ಬಟ್ಲು ಅಂತ ಹೆಸರು ಅದಕ್ಕೆ. ಹೆಸರು ಬೇರೆ ಬೇರೆ ಆದರೇನಂತೆ? ರುಚಿ ಒಂದೇ, ಮಾಡುವ ವಿಧಾನವೂ ಒಂದೇ. ಆದರೆ, ರುಚಿ ಅನ್ನೋದು ಕೈಯಿಂದ ಕೈಗೆ ಬೇರೆ ಆಗುತ್ತದೆ. ಅದಕ್ಕೇ “ಕೈ ಅಡುಗೆ’ ಅನ್ನೋದು. ಒಬ್ಬಟ್ಟಿನ ಜೊತೆ ಸೇರಿಕೊಂಡಿರುವ ಅಂಥ ಕೈ ರುಚಿಯ ನೈಜ ಕಥೆ ಇಲ್ಲಿದೆ…

ನನ್ನ ಮದುವೆಯಾದ ನಂತರ, “ಒಬ್ಬಟ್ಟು ಮಾಡಲು ಬರುತ್ತೆ ತಾನೇ?’ ಎಂದು ಅಕ್ಕಮ್ಮ ಕೇಳಿದಾಗ, ನಾನು “ಓಯೆಸ್‌, ಬರದೇ ಏನು?’ ಎಂದುಬಿಟ್ಟಿದ್ದೆ. ಅದನ್ನು ಕೇಳಿ ಅವರಿಗೂ ಖುಷಿಯಾಯ್ತು. ಪರವಾಗಿಲ್ಲ, ಒಬ್ಬಟ್ಟು ಮಾಡಲು ಬರುವ ಹೆಣ್ಣು ಎಲ್ಲ ಕೆಲಸಕ್ಕೂ ಸೈ ಎಂದು ಅವರ ಕುಟುಂಬದವರಿಗೆ ಹೇಳಿದರಂತೆ. ಮುಂದೆ ಯುಗಾದಿ ಬಂತು. ಮನೆಯಲ್ಲಿ ಎಲ್ಲರೂ ಕೆಲಸ ಹಂಚಿಕೊಳ್ಳುವುದು ಸಂಪ್ರದಾಯ. ಅತ್ತೆಯವರು ಅಡುಗೆ-ತಿಂಡಿ, ಉಪಚಾರಗಳ ಜವಾಬ್ದಾರಿ ಹೊತ್ತುಕೊಂಡರು. ಮಾವನವರು ಹಣಕಾಸಿನ ವಿಲೇವಾರಿ ನೋಡುತ್ತಿರುವುದರಿಂದ ಯಜಮಾನರಿಗೆ ತರಕಾರಿ, ಹಣ್ಣು ಹಂಪಲು, ದಿನಸಿ ತರುವ ಕೆಲಸ ಹೇಳಿದರು.

ಮಾವಿನಸೊಪ್ಪು, ಬೇವಿನಸೊಪ್ಪು ತರುವ ಕೆಲಸ ನಮ್ಮ ಭಾವನವರದ್ದಾಯ್ತು. ನಂತರ ಒಬ್ಬಟ್ಟನ್ನು ಅಂಗಡಿಯಿಂದ ತರುವುದೆಂದು ತೀರ್ಮಾನಿಸಲಾಯ್ತು. ಆದರೆ, ಅಕ್ಕಮ್ಮ ಅದಕ್ಕೆ ಒಪ್ಪಲೇ ಇಲ್ಲ. ನಾನು ಹೇಳಿದ್ದೆನಲ್ಲ, ನನಗೆ ಒಬ್ಬಟ್ಟು ಮಾಡಲು ಬರುತ್ತದೆ ಎಂದು. ಹಾಗಾಗಿ ಒಬ್ಬಟ್ಟು ಮಾಡುವ ಕೆಲಸ ನನ್ನದಾಯ್ತು.

ನನಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದ ಹಾಗಾಯ್ತು. ನಿದ್ದೆ ಬರಲೊಲ್ಲದು. ಕೊನೆಗೆ ಯೂ ಟ್ಯೂಬ್‌ನಲ್ಲಿ ಒಬ್ಬಟ್ಟು ಮಾಡುವ ವಿಧಾನವನ್ನು ನೋಡಿ ತಿಳಿದುಕೊಂಡೆ. ಒಂದು ಬಿಳಿ ಹಾಳೆ ತಗೊಂಡು ಅದರಲ್ಲಿ ಒಬ್ಬಟ್ಟು ಮಾಡುವ ಪ್ರತಿಯೊಂದು ಹೆಜ್ಜೆಯನ್ನೂ ಬರೆದುಕೊಂಡೆ. ಅದನ್ನು ನಾಲ್ಕೈದು ಬಾರಿ ಓದಿದೆ. ಶಾಲೆಯಲ್ಲಿದ್ದಾಗ ಮಗ್ಗಿಯನ್ನೂ ಹೀಗೆಲ್ಲಾ ಬಾಯಿಪಾಠ ಮಾಡಿರಲಿಲ್ಲ. ಆದರೂ ಸೋಲೊಪ್ಪಿಕೊಳ್ಳದೆ, ಒಬ್ಬಟ್ಟೇನು ಮಹಾ ಎಂದುಕೊಳ್ಳುತ್ತಾ ಇದನ್ನು ಮಾಡೇ ಮಾಡುತ್ತೇನೆ ಎಂದು ಶಪಥ ಮಾಡಿಕೊಂಡೆ.

ಏನೇ ಆದರೂ, ನಾವು ಅಡುಗೆ ಮನೆಯಲ್ಲಿ ಸ್ವತಃ ತಯಾರಿ ಮಾಡುವುದಕ್ಕೂ, ಈ ಟಿವಿ, ಯೂಟ್ಯೂಬ್‌ನಲ್ಲಿ ತೋರಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಅದಕ್ಕೇ ಹೇಳ್ಳೋದು “ಪ್ರಾಕ್ಟೀಸ್‌ ಮೇಕ್ಸ್‌ ಮ್ಯಾನ್‌ ಪಫೆìಕ್ಟ್’ ಅಂತ. ನಾವು ಸ್ವತಃ ಅಭ್ಯಾಸ ಮಾಡಿದರೆ ಮಾತ್ರ ಯಾವುದಾದರೂ ಕರಗತವಾಗುವುದು.

ಹೀಗೆ ನಾನು ಒಬ್ಬಟ್ಟು ಮಾಡುವ ವಿಧಾನವನ್ನು ಕಲಿತುಕೊಂಡೆ. ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ನಾನೇ ಅಂಗಡಿಗೆ ಹೋಗಿ ತೆಗೆದುಕೊಂಡು ಬಂದೆ. ನನ್ನ ಉತ್ಸಾಹ ಹೇಳತೀರದು. ಬೆಳಗಿನ ಜಾವವೇ ಸ್ನಾನ ಮಾಡಿ, ಅಡುಗೆ ಮನೆಗೆ ಧಾವಿಸುವ ಆತುರ ನನಗೆ. ದೇವರ ಪೂಜೆ ಮಾಡಿ, ಬೇವು ಬೆಲ್ಲ ತಿಂದು, ಒಬ್ಬಟ್ಟು ಮಾಡಲು ಕೂತೆ. ಹಿಟ್ಟನ್ನೇನೋ ಕಲೆಸಿದೆ. ಆದರೆ, ಅದನ್ನು ಅಂದುಕೊಂಡಂತೆ ಲಟ್ಟಿಸಿಕೊಳ್ಳಲು ಆಗಲೇ ಇಲ್ಲ. ಸದ್ಯ ನನ್ನ ಪಾಡನ್ನು ಯಾರೂ ನೋಡಲಿಲ್ಲ. ಹೀಗಾಗಿ ಕೆಡವಿದ ಹಿಟ್ಟನ್ನು ಬೇರೆ ಇಟ್ಟು, ಒಬ್ಬಟ್ಟಿನ ಮಣೆಯಲ್ಲಿ ಹಿಟ್ಟು ಹಾಕಿ ಲಟ್ಟಿಸಿದೆ.

ಮೊದಲಿಗೆ ಕಷ್ಟವಾದರೂ ನಂತರ ಒಂದೆರಡನ್ನು ಕಾಯಿಸಿದ ನಂತರ ಒಬ್ಬಟ್ಟು ಚೆನ್ನಾಗಿಯೇ ಬಂತು. ಮನೆಯೆಲ್ಲಾ ಘಮಘಮ ವಾಸನೆ. ಅಕ್ಕಮ್ಮ ಮೂಲೆಯಿಂದ ನನ್ನನ್ನು ಗಮನಿಸುತ್ತಿದ್ದುದನ್ನು ನಾನು ಓರೆ ನೋಟದಿಂದ ನೋಡಿ ಸುಮ್ಮನಾದೆ. ಊಟಕ್ಕೆ ಕೂತಾಗ ಎಲ್ಲರೂ “ಪರವಾಗಿಲ್ಲ, ಹುಡುಗಿ ಒಬ್ಬಟ್ಟು ಚೆನ್ನಾಗಿ ಮಾಡಿದಾಳೆ’ ಎಂದರು.

ಸಾಯಂಕಾಲ ಮಾವನವರ ತಂಗಿ ಮಕ್ಕಳು ಬಂದಾಗ ಎಲ್ಲರಿಗೂ ನಾನೇ ತಟ್ಟೆ ಇಟ್ಟು ಒಬ್ಬಟ್ಟು, ಹಾಲು, ತುಪ್ಪ ಬಡಿಸಿದೆ. ನನ್ನ ಅಣ್ಣನೂ ಬಂದಿದ್ದ ಅವನಿಗೂ ಕೊಟ್ಟಿದ್ದೆ. ಅವನು ಅದನ್ನು ತಿಂದು ಒಂಥರಾ ಮಾಡಿಕೊಂಡು ನನ್ನ ಮುಖ ನೋಡಿದ. ನನಗೆ ಪೆಚ್ಚೆನಿಸಿತು. ಆಮೇಲೆ ಗೊತ್ತಾಗಿದ್ದೇನೆಂದರೆ, ನಾನು ಮೊದಲು ಮಾಡಿದ ಎರಡು ಒಬ್ಬಟ್ಟಿಗೆ ಬೆಲ್ಲ ಹಾಕಿರಲೇ ಇಲ್ಲ. ಅದೇ ಒಬ್ಬಟ್ಟು ಅಣ್ಣನ ತಟ್ಟೆಗೆ ಬಿದ್ದಿತ್ತು. ಪ್ರತಿ ಯುಗಾದಿಗೂ ಇದು ಮರೆಯಲಾಗದ ನೆನಪಾಗಿ ಉಳಿದುಕೊಂಡಿದೆ. 

 ಹೀರಾ ರಮಾನಂದ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.