ಸಖತ್ತಾಗಿದೆ, ಸೌತ್‌ ರುಚೀಸ್‌!


Team Udayavani, Apr 28, 2018, 4:32 PM IST

sakhatagide.jpg

ಸಾವಯವ, ದೇಸೀ ಆಹಾರ ಇಂದು ಮಹಾನಗರದ ಆಕರ್ಷಣೆ. ಜಂಕ್‌ಫ‌ುಡ್‌ನಿಂದ ಆರೋಗ್ಯಕ್ಕೆ ಆಪತ್ತಿದೆ ಎಂಬುದನ್ನು ಅರಿತುಕೊಂಡವರೆಲ್ಲ, ಆರೋಗ್ಯಸ್ನೇಹಿ ಆಹಾರ ತಾಣಗಳನ್ನು ಹುಡುಕಿಕೊಂಡು ಹೋಗ್ತಾರೆ. ಅದರಲ್ಲೂ ರುಚಿಗೂ ಸೈ, ಶುಚಿಗೂ ಸೈ ಎನ್ನುವಂಥ ಹೋಟೆಲ್‌ಗ‌ಳಿದ್ದುಬಿಟ್ಟರೆ, ಆಹಾರಪ್ರಿಯರೆಲ್ಲ ಜಮಾಯಿಸುವುದು ಅಲ್ಲಿಯೇ!

ನಗರದ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ “ಸೌತ್‌ ರುಚೀಸ್‌’ನಲ್ಲಿ ಅಂಥದ್ದೇ ರಶ್‌ ಇರುತ್ತೆ. ಹಾಗೆಬಂದವರೆಲ್ಲ ತಾವು ತಿನ್ನುವ ಆಹಾರ ರುಚಿಕಟ್ಟಾಗಿರಬೇಕು, ದೇಸಿ ಶೈಲಿಯಲ್ಲಿಯೇ ಅದನ್ನು ಸಿದ್ಧಪಡಿಸಿರಬೇಕು ಎಂದು ಬಯಸುವವರು. ಗ್ರಾಹಕರ ಆ ನಿರೀಕ್ಷೆಗೆ ತಕ್ಕಂತೆ ಅಲ್ಲಿ ಖಾದ್ಯ ಸಿದ್ಧವಾಗುತ್ತೆ.

ಇಲ್ಲಿನ ಅಡುಗೆ ಮನೆಗೆ ಹೋದರೆ, ಅಲ್ಲಿ ಕಣ್ಣಿಗೆ ಬೀಳ್ಳೋದು ರಾಸಾಯನಿಕ ಮುಕ್ತ ತರಕಾರಿಗಳು; ಶುದ್ಧ ಸಾಂಬಾರ ಪದಾರ್ಥಗಳು, ದೇಸಿ ಹಾಲು- ತುಪ್ಪ, ಬೇಳೆಕಾಳು. ಮೂಲತಃ ಕುಂದಾಪುರದ ಕೋಟೇಶ್ವರ ಸಮೀಪದ ಗೋಪಾಡಿಯಾದ ಜಿ.ಪಿ. ರಾಘವೇಂದ್ರ ಈ ಹೋಟೆಲ್‌ನ ರೂವಾರಿ. ಈಗ ಇದನ್ನು ಅವರ ಮಗ ಪ್ರದೀಪ್‌ ಜಿ.ಎ. ಮುನ್ನಡೆಸುತ್ತಿದ್ದಾರೆ. ಕಾರ್ಯನಿರ್ವಾಹಕರಾಗಿ ರಘುನಾಥ್‌ ಶ್ರೀವತ್ಸ ಇಲ್ಲಿ ನಗುತ್ತಾ ನಿಮ್ಮನ್ನು ಸ್ವಾಗತಿಸುತ್ತಾರೆ.

ಸಾವಯವ ವಿಧಾನದ ಮೂಲಕ ಬೆಳೆದ ತರಕಾರಿ, ಸಾಂಬಾರ ಪದಾರ್ಥಗಳು, ಹಾಲು, ಸಿರಿಧಾನ್ಯಗಳು ಚಿಕ್ಕಮಗಳೂರು, ನೆಲಮಂಗಲ, ಸಕಲೇಶಪುರದಿಂದ ತರಿಸಿಕೊಳ್ಳುತ್ತಾರೆ. ಇದಕ್ಕೆ ಹೆಚ್ಚಿನ ವೆಚ್ಚವಾದರೂ, ಗ್ರಾಹಕರ ಮೇಲಿನ ಆರೋಗ್ಯ ಕಾಳಜಿಗೆ ಸೌತ್‌ ರುಚೀಸ್‌ ಅದ್ಯತೆ ಕೊಡುತ್ತೆ. ಈ ಹೋಟೆಲ್‌ನಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್‌ ಅನ್ನು ಬಳಸುವುದಿಲ್ಲ. ಸೇರಾಮಿಕ್‌ ಪ್ಲೇಟ್‌ಗಳಲ್ಲಿ ಆಹಾರ ನೀಡುತ್ತಾರೆ. ಮಂದವಾದ ಬೆಳಕಿನಲ್ಲಿ, ತಾಜಾ ವಾತಾವರಣದಲ್ಲಿ ಕುಳಿತ ಅನುಭವ ಗ್ರಾಹಕನಿಗೆ ಆಗುತ್ತೆ.

ಸ್ಪೆಷಲ್‌ ಏನಿದೆ?: ಇಡ್ಲಿ, ವಡೆ, ಕೇಸರಿಬಾತ್‌, ಖಾರಾಬಾತ್‌, ಸಿರಿಧಾನ್ಯ ಪೊಂಗಲ್‌, ಸಿರಿಧಾನ್ಯ ಖಾರಾಬಾತ್‌ ಹೋಳಿಗೆ… ಇವಿಷ್ಟು ಬೆಳಗ್ಗಿನ ಹೈಲೈಟ್‌. ಮಧ್ಯಾಹ್ನ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ತಿನಿಸುಗಳು, ಹಲವು ವೆರೈಟಿಯ ದೋಸೆಗಳು ಲಭ್ಯ. ತರಕಾರಿ ದೋಸೆ, ನೀರು ದೋಸೆ, ಪನ್ನೀರು ದೋಸೆ, ಈರುಳ್ಳಿ ಹೂವಿನ ದೋಸೆ, ಹಾಲುಬಾಯಿ, ಕಾಶಿ ಹಲ್ವಾ, ಬಾದಾಮಿ ಹಲ್ವಾ… ಇಲ್ಲಿನ ವಿಶೇಷತೆಗಳು. ಇಲ್ಲಿ ಮಾಡುವ ಮೊಘಲ್‌ ಬಿರಿಯಾನಿಗೆ ದೊಡ್ಡ ಫ್ಯಾನ್ಸ್‌ ಇದ್ದಾರೆ.

ಎಲ್ಲಿದೆ?: ಸೌತ್‌ ರುಚೀಸ್‌, ರೇಸ್‌ಕೋರ್ಸ್‌ ರಸ್ತೆ, ಶಿವಾನಂದ ವೃತ್ತದ ಬಳಿ

* ವಿ.ಎಸ್‌. ನಾಯಕ್‌

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.