ಕಲ್ಲು ಕತೆಯ ಹೇಳಿದೆ!


Team Udayavani, May 19, 2018, 4:14 PM IST

2556.jpg

ಇಬ್ಬರು ವ್ಯಕ್ತಿಗಳು ಬೆಂಗಳೂರಿನ ಗಲ್ಲಿಯೊಂದರಲ್ಲಿ ಶತಮಾನಗಳಷ್ಟು ಹಳೆಯದಾದ ಕಲ್ಲೊಂದರ ಹುಡುಕಾಟದಲ್ಲಿ ತೊಡಗಿದ್ದರು. ಅದಾಗಲೇ ಇಳಿಸಂಜೆಯಾಗಿತ್ತು. ಇನ್ನೇನು ವಾಪಸ್‌ ಹೊರಡಬೇಕು ಎನ್ನುವಷ್ಟರಲ್ಲಿ ಹುಡುಕುತ್ತಿದ್ದಿದ್ದು ಸಿಕ್ಕೇಬಿಡು¤. ಅದರ ಮೇಲೆ ಕುಂಕುಮ, ಬಳೆ ಚೂರುಗಳ ಅವಶೇಷಗಳಿದ್ದವು. “ಅಯ್ಯೋ ಆ ಕಲ್ಲಾ ಸಾರ್‌?! ಅದನ್ನು ಮುಟ್ಟಬೇಡಿ. ಯಾರೋ ಮಾಟ ಮಾಡಿಸಿದ ಕಲ್ಲದು. ಮುಟ್ಟಿದರೆ ಗಾಳಿ ಮೆಟ್ಟಿಕೊಳ್ಳುತ್ತೆ, ಕೆಟ್ಟದ್ದಾಗುತ್ತೆ’ ಎಂದು ಹೆಂಗಸೊಬ್ಬಳು ಎಚ್ಚರಿಸಿದಳು. ಅವಳ ಮಾತನ್ನು ಕೇಳಿ ತಬ್ಬಿಬ್ಟಾದ ಆ ಇಬ್ಬರು ವ್ಯಕ್ತಿಗಳು ಮುಖ ಮುಖ ನೋಡಿಕೊಂಡರು. ಆ ಹೆಂಗಸಿನ ಎಚ್ಚರಿಕೆಯ ಹೊರತಾಗಿಯೂ ಅವರು ಯಾವುದೇ ಹಿಂಜರಿಕೆಯಿಲ್ಲದೆ ಆ ಕಲ್ಲನ್ನು ಎತ್ತಿ ಪಕ್ಕಕ್ಕಿಟ್ಟರು!

ಮನೆಗೆ ನೆಂಟರು ಬಂದರೆ ಲಾಲ್‌ಬಾಗ್‌, ವಿಧಾನಸೌಧ, ಕಬ್ಬನ್‌ ಪಾರ್ಕ್‌, ಮ್ಯೂಸಿಯಂ ಇವಿಷ್ಟನ್ನು ತೋರಿಸಿ ಇದೇ ಬೆಂಗಳೂರು ಎಂದು ಕೈ ಮುಗಿದುಬಿಡುತ್ತೇವೆ. ಆದರೆ ನಿಜವಾದ ಬೆಂಗಳೂರು ಇರೋದು ಅಲ್ಲಲ್ಲ, ಈ 30 ಕಲ್ಲುಗಳಲ್ಲಿ!

ಕಾರ್ಪೊರೇಟ್‌ ಕಲ್ಚರ್‌, ಪರಭಾಷಿಕರ ಸಂಸ್ಕೃತಿಯ ಮಧ್ಯೆ ವಾಸಿಸುತ್ತಿರುವ ನಮಗೆ ನಮ್ಮ ಇತಿಹಾಸವನ್ನು ಕಾಪಾಡಿಕೊಳ್ಳುವ ಜರೂರತ್ತು ತುಂಬಾ ಇದೆ. ನಾವು ಬೆಂಗಳೂರಿನವರು, ಕೆಂಪೇಗೌಡ ಮೆಟ್ಟಿದ ಕನ್ನಡ ನೆಲದವರು, ಎಂದೆಲ್ಲಾ ಹೇಳಿಕೊಂಡು ಹೆಮ್ಮೆಪಡುತ್ತೇವೆ. ಆಟೋಗಳ ಹಿಂದೆ ಭಾಷಾಭಿಮಾನ ಸಾರುವ ಸ್ಲೋಗನ್ನುಗಳನ್ನು ಓದಿ ಖುಷಿ ಪಡುತ್ತೇವೆ. ಕೆಂಪೇಗೌಡ, ಕೆಂಗಲ್‌ ಹನುಮಂತಯ್ಯನವರನ್ನು ನೆನೆದು ಹರ್ಷಿಸುತ್ತೇವೆ. ರಾಜ್ಯೋತ್ಸವ ಬಂದಾಗ ಕನ್ನಡ ಟೀಶರ್ಟುಗಳನ್ನು ಆನ್‌ಲೈನಿನಲ್ಲಿ ಖರೀದಿಸಿ ಪರಭಾಷಿಕರ ಮುಂದೆ ಬೀಗುತ್ತೇವೆ. ಎಸ್‌, ಕರೆಕ್ಟ್… ಅವೆಲ್ಲಾ ಸರಿ. ಆದರೆ ಅಷ್ಟಕ್ಕೇ ನಮ್ಮ ಕನ್ನಡಾಭಿಮಾನ ಸೀಮಿತವಾಗಬೇಕೆ? ನಾವು- ನೀವು ವಾಸಿಸುತ್ತಿರುವ ಪ್ರದೇಶ ಎಷ್ಟು ಹಳೆಯದು ಗೊತ್ತಾ? ಇಂದು ಅಪಾರ್ಟ್‌ಮೆಂಟುಗಳು, ಎಮ್ಮೆನ್ಸಿ ಕಟ್ಟಡಗಳು, ರಸ್ತೆಗಳು, ಮೆಟ್ರೊ ಪಿಲ್ಲರ್‌ಗಳು ಎದ್ದಿರುವ ಜಾಗದಲ್ಲಿ ಹಿಂದೇನಿತ್ತು ಅಂತ ಯಾವತ್ತಾದರೂ ಯೋಚಿಸಿದ್ದೀರಾ? ಹನುಮಂತನಗರದ ಒರಿಜಿನಲ್‌ ಹೆಸರು ಸುಂಕೇನಹಳ್ಳಿ ಎಂಬುದು ಎಷ್ಟು ಜನರಿಗೆ ಗೊತ್ತು? ಹಿಂದೆ ರಾಜರ ಕಾಲದಲ್ಲಿ ಅಲ್ಲೊಂದು ಸುಂಕ ವಸೂಲಿ ಮಾಡುವ ಗೇಟ್‌ ಇತ್ತು ಎನ್ನುವುದು ಎಷ್ಟು ಜನರಿಗೆ ಗೊತ್ತು? ರಾಜಾಜಿನಗರ, ಚಾಮರಾಜಪೇಟೆ, ಮಾಗಡಿ ಮುಂತಾದ ಏರಿಯಾಗಳು ಎಷ್ಟು ವರ್ಷ ಹಳೆಯವು? ಆಗಿನ ಕಾಲದ ಜನ ಜೀವನ, ಸಾಮಾಜಿಕ ಸ್ಥಿತಿಗತಿ ಹೇಗಿತ್ತು? ಈ ಎಲ್ಲಾ ಪ್ರಶ್ನೆಗಳು ಕಾಡಿದ್ದು ಉದಯ್‌ ಕುಮಾರ್‌ ಮತ್ತು ವಿನಯ್‌ ಕುಮಾರ್‌ ಅವರನ್ನು.  

ವೃತ್ತಿಯಲ್ಲಿ ಅವರು ಎಂಜಿನಿಯರ್. ಸಾಫ್ಟ್ವೇರ್‌ ಮಂದಿ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಎಣಿಸುವವರು. ದೇಶದ ಭವಿಷ್ಯವನ್ನು ರೂಪಿಸುವವರು ಅವರು ಎನ್ನುವ ಅಭಿಪ್ರಾಯ ಸಮಾಜದಲ್ಲಿದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಭವಿಷ್ಯವನ್ನು ಒಂದು ಕ್ಷಣ ಪಕ್ಕಕ್ಕಿಟ್ಟು ಬೆಂಗಳೂರಿನ ಇತಿಹಾಸವನ್ನು ರೂಪಿಸುತ್ತಿದ್ದಾರೆ ಉದಯ್‌ ಮತ್ತು ವಿನಯ್‌. ಉದಯ್‌ ಮೆಕಾನಿಕಲ್‌ ಎಂಜಿನಿಯರ್‌. ಸಾಫ್ಟ್ವೇರ್‌ ವೃತ್ತಿಯಲ್ಲಿದ್ದ ವಿನಯ್‌, ಈಗ ಅದರಿಂದ ಹೊರಬಂದಿದ್ದಾರೆ. ಇತಿಹಾಸದ ತುಣುಕನ್ನು ಜೋಪಾನ ಮಾಡಿ ಅದರ ಮುಖಾಂತರ ಬೆಂಗಳೂರಿಗರಿಗೆ ತಮ್ಮ ಊರು ಎಷ್ಟು ಶ್ರೀಮಂತವಾಗಿತ್ತು, ಆ ಕಾಲದಲ್ಲೇ ಎಷ್ಟೊಂದು ಮುಂದುವರಿದಿತ್ತು ಎನ್ನುವುದನ್ನು ಮನದಟ್ಟು ಮಾಡಿಕೊಡಬೇಕು ಎನ್ನುವುದು ಅವರ ಕಾಳಜಿ. ಅಂದಹಾಗೆ ಈ ಇತಿಹಾಸದ ತುಣುಕು ಎಂದರೆ ಬೇರೇನೂ ಅಲ್ಲ “ಶಾಸನ ಕಲ್ಲುಗಳು’. 

ಮಹಾನುಭಾವ ಬಿ.ಎಲ್‌. ರೈಸ್‌  
18ನೇ ಶತಮಾನದಲ್ಲಿ, ಮೈಸೂರು ಸಂಸ್ಥಾನದಲ್ಲಿ, “ಬಿಳಿ ಕನ್ನಡಿಗ’ ಎಂದೇ ಹೆಸರಾಗಿದ್ದ ಬಿ.ಎಲ್‌. ರೈಸ್‌ ಎನ್ನುವ ಮಹಾನುಭಾವರೊಬ್ಬರಿದ್ದರು. ಅವರು ಬೆಂಗಳೂರಿನಲ್ಲಿ ಶಿಕ್ಷಕವೃತ್ತಿ ನಿರ್ವಹಿಸುತ್ತಿದ್ದಾಗ ಹಾದಿ ಬದಿಯ ಕಲ್ಲುಗಳನ್ನು ನೋಡಿದ್ದರು. ಅದರ ಮೇಲಿದ್ದ ಹಳಗನ್ನಡ ಕೆತ್ತನೆಗಳನ್ನು ಗಮನಿಸಿದ್ದರು. ಅದರ ಕುರಿತು ವಿಚಾರಿಸಿದಾಗ ಯಾರ ಬಳಿಯೂ ಮಾಹಿತಿ ಸಿಗಲಿಲ್ಲ. ಆಮೇಲೆ ತಾವೇ ಸ್ವತಃ ಸ್ಥೂಲವಾಗಿ ಅಧ್ಯಯನ ನಡೆಸಿದಾಗ ಅವೆಲ್ಲವೂ ಶತಮಾನಗಳಷ್ಟು ಹಳೆಯವು ಎಂಬುದು ತಿಳಿದು ಬಂತು. ಅವರ ಆಸಕ್ತಿ ಕಂಡು ಸರ್ಕಾರ ಅವರಿಗೆ ಪ್ರಾಚ್ಯ ಇಲಾಖೆಯಲ್ಲಿ ಹುದ್ದೆ ನೀಡಿತು. ಅವರು ಬೆಂಗಳೂರಿನ ಉದ್ದಗಲಕ್ಕೂ ಓಡಾಡಿ ಶಾಸನ ಕಲ್ಲುಗಳ ಪಟ್ಟಿ ತಯಾರಿಸಿದರು. ಅವಷ್ಟನ್ನೂ “ಎಪಿಗ್ರಾಫಿಯಾ’ ಗ್ರಂಥದ ಒಂಭತ್ತನೇ ಆವೃತ್ತಿಯಲ್ಲಿ ಪ್ರಕಟಿಸಿದರು. 

ಮೋರಿ ಕೊಚ್ಚೆ ಗುಂಡಿಗಳಲ್ಲಿ ಇಳಿದರು
ಉದಯ್‌ ಮತ್ತು ವಿನಯ್‌, ಬಿ.ಎಲ್‌ ರೈಸ್‌ ಬರೆದ ಗ್ರಂಥವನ್ನು ಆಧಾರವಾಗಿಟ್ಟುಕೊಂಡು ಛಲದಂಕಮಲ್ಲರಂತೆ ಶಾಸನ ಕಲ್ಲುಗಳ ಹುಡುಕಾಟಕ್ಕೆ ಬಿದ್ದಿದ್ದರು. ಇದಕ್ಕಾಗಿ ಅವರು ಗಲ್ಲಿ ಗಲ್ಲಿಗಳನ್ನು ಸುತ್ತಿದ್ದಾರೆ. ಸರಕಾರಿ ಕಡತಗಳ ಸಮುದ್ರದಲ್ಲಿ ಮುಳುಗಿದ್ದಾರೆ, ಅನೇಕ ಹಿರಿಯ ಸ್ಥಳೀಯರನ್ನು ಭೇಟಿ ಮಾಡಿದ್ದಾರೆ. ಈ ಸಾಹಸದ ನಂತರ ಅವರಿಗೆ ತಿಳಿದು ಬಂದಿದ್ದಿಷ್ಟು- ಬಿ.ಎಲ್‌ ರೈಸ್‌ ಅವರ ಕಾಲದಲ್ಲಿ ಬೆಂಗಳೂರಿನಲ್ಲಿದ್ದ ಶಾಸನ ಕಲ್ಲುಗಳ ಸಂಖ್ಯೆ 130. ಅವುಗಳಲ್ಲಿ ಈಗ ಉಳಿದಿರೋದು ಬರೇ 30! ಅವುಗಳು ಸಿಕ್ಕಿದ್ದಾದರೂ ಎಲ್ಲಿ ಅಂತೀರಾ…? ಮೋರಿ ಬದಿ, ಕೊಚ್ಚೆ ಗುಂಡಿಗಳಲ್ಲಿ, ಮರಗಳ ಕೆಳಗೆ!ಅವುಗಳಿಗೊದಗಿದ ಅವಸ್ಥೆಗೆ ಮರುಗಬೇಕೋ, ಇಲ್ಲಾ ನಮ್ಮ ಸಮಾಜದ ಅಜ್ಞಾನಕ್ಕೆ ಮರುಗಬೇಕೋ ಎಂದು ಅವರಿಬ್ಬರಿಗೂ ತಿಳಿಯದಾಯಿತು. ಸಿಕ್ಕಿದ್ದರಲ್ಲಿ ಕೆಲವನ್ನು ಮ್ಯೂಸಿಯಂಗೆ ಸ್ಥಳಾಂತರಿಸಲಾಗಿದ್ದರೆ, ಇನ್ನು ಕೆಲವು ದೇವಸ್ಥಾನಗಳಲ್ಲಿವೆ. ಇವುಗಳನ್ನು ಕಾಪಾಡಿಕೊಳ್ಳದಿದ್ದರೆ ನಾವು ಆದಷ್ಟು ಬೇಗನೆ ಬೆಂಗಳೂರಿನ ಇತಿಹಾಸದ ಪ್ರಮುಖ ಕೊಂಡಿಗಳನ್ನು ಕಳೆದುಕೊಳ್ಳಲಿದ್ದೇವೆ. 

ಏನ್ಮಾಡಿದ್ದೀರಾ ನೋಡಿ…
1342ನೇ ಇಸವಿಗೆ ಸೇರಿದ ಶಾಸನ ಕಲ್ಲು ಜಕ್ಕೂರಿನಲ್ಲಿ ಪತ್ತೆಯಾಗಿತ್ತು. ಅದರ ಮೇಲೆ ಜಕ್ಕೂರು ಅಂತಲೇ ಬರೆದಿತ್ತು. ಉದಯ್‌ ಮತ್ತು ತಂಡ ಕಲ್ಲನ್ನು ಶುಚಿಗೊಳಿಸುತ್ತಿದ್ದಾಗ ಊರಿನವರು ಕುತೂಹಲದಿಂದ - ಏನ್‌ ಸ್ವಾಮಿ ಇದು? ಅಂತ ಕೇಳಿದ್ದರು. ಕಲ್ಲಿನ ದುಃಸ್ಥಿತಿ ಕಂಡು ಮೊದಲೇ ಸಿಟ್ಟಾಗಿದ್ದ ಉದಯ್‌ “1342ನೇ ಇಸವಿ ಕಲ್ಲಿದು. ಇದರ ಮೇಲೆ ಜಕ್ಕೂರು ಅಂತಲೇ ಬರೆದಿದೆ. ಏನ್ಮಾಡಿದ್ದೀರಾ ನೋಡಿ’ ಅಂತ ಅಸಹನೆ ವ್ಯಕ್ತಪಡಿಸಿದರು. ಇದಾದ ಕೆಲ ದಿನಗಳ ಬಳಿಕ ಉದಯ್‌ ಹೋಗಿ ನೋಡಿದಾಗ ಊರಿನವರು ಆ ಕಲ್ಲನ್ನು ರಸ್ತೆಯ ಮಧ್ಯೆ ವೃತ್ತವೊಂದರಲ್ಲಿ ನಿಲ್ಲಿಸಿದ್ದರು. ಈಗ ಜಕ್ಕೂರಿನ ಪ್ರತಿ ಮನೆಯವರಿಗೂ ಆ ಕಲ್ಲಿನ ಕುರಿತು ಹೆಮ್ಮೆಯಿದೆ. ಮಕ್ಕಳು, ಮನೆಗೆ ಬಂದ ನೆಂಟರಿಗೆ ಆ ಕಲ್ಲನ್ನು ತೋರಿಸಿ ಅದು ನಮ್ಮ ಊರಿನ ಇತಿಹಾಸ ಎಂದು ಎದೆ ತಟ್ಟಿ ತೋರಿಸುತ್ತಾರೆ. “ಇಂಥ ಕೆಲಸ ಬೇರೆ ಏರಿಯಾಗಳಲ್ಲೂ ಆಗಬೇಕು. ಜನರಲ್ಲಿಯೇ ಈ ಬಗ್ಗೆ ಕಾಳಜಿ ಮೂಡಬೇಕು.’ ಎನ್ನುವ ಉದಯ್‌, ನಿರ್ಲಕ್ಷ್ಯಕ್ಕೊಳಪಟ್ಟ ಈ ಅತ್ಯಮೂಲ್ಯ ಶಾಸನ ಕಲ್ಲುಗಳು, ಮೂಢನಂಬಿಕೆಯಿಂದ, ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ ಮುಂತಾದ ಕೆಲಸಗಳಿಗೆ ಒಡೆಯಲ್ಪಟ್ಟಿರುವುದನ್ನೂ ನೋಡಿದ್ದಾರೆ. ಅಂದಹಾಗೆ, ಆ ಅಪರಾಧದಲ್ಲಿ ನಾವೆಲ್ಲರೂ ಭಾಗಿದಾರರು. ಯಾಕೆ ಗೊತ್ತಾ? ಶತಮಾನಗಳಿಂದ ಉಳಿದುಕೊಂಡು ಬಂದ ಕಲ್ಲುಗಳಲ್ಲಿ ಬಹುತೇಕವು ನಾಶಗೊಂಡಿದ್ದು ಕಳೆದ 15 ವರ್ಷಗಳಲ್ಲಿ!

ಬಾಕ್ಸ್‌- ಶಾಸನ ಕಲ್ಲು ಯಾಕೆ ಮುಖ್ಯವಾಗುತ್ತೆ?
ಶತ ಶತಮಾನಗಳ ಹಿಂದೆ ಪತ್ರಿಕೆಗಳಿರಲಿಲ್ಲ, ಟಿವಿಗಳಿರಲಿಲ್ಲ. ಆಗಿನ ಎಲ್ಲಾ ಕೆಲಸಗಳು ಸಾರ್ವಜನಿಕರಿಗೆ ತಿಳಿಯುತ್ತಿದ್ದಿದ್ದು, ದಾಖಲಾಗುತ್ತಿದ್ದಿದ್ದು ಶಾಸನ ಕಲ್ಲುಗಳ ಮೂಲಕ. ಕೆರೆಕಟ್ಟೆ ನಿರ್ಮಾಣ, ದೇವಸ್ಥಾನ ಜೀರ್ಣೋದ್ಧಾರ, ಸುಂಕ ವಸೂಲಾತಿ ನಿಯಮ ಮುಂತಾದ ಪ್ರಮುಖ ಸಂದರ್ಭಗಳಲ್ಲಿ ರಾಜರು ಶಾಸನ ಕಲ್ಲುಗಳನ್ನು ಸ್ಥಾಪಿಸಿಬಿಡುತ್ತಿದ್ದರು. ಕಾಲದ ಹೊಡೆತಕ್ಕೆ ಸಿಕ್ಕಿ ಮಾಸಿದ, ಒಡೆದು ಹೋದ ಇಂಥ ಒಂದು ಕಲ್ಲಿನ ಚೂರೊಂದರ ಮೂಲಕ ನಾವು ಎಂತೆಂಥ ವಿಚಾರಗಳನ್ನು ಬಯಲಿಗೆಳೆಯಬಹುದು ಎನ್ನುವುದನ್ನು ತಿಳಿದರೆ ನೀವು ಹೌಹಾರಿಬಿಡುತ್ತೀರಿ!

ಕೊಡಿಗೆಹಳ್ಳಿಯ ಶಾಸನಕಲ್ಲಿನಲ್ಲಿ ಬರೆದದ್ದರ ಭಾವಾರ್ಥವಿದು- ಈ ಬಾರಿ ತೆರಿಗೆ ಕಟ್ಟುವ ಹಣವನ್ನು ಊರಿನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದಾನ ನೀಡಬೇಕೆಂದು ಗ್ರಾಮಸ್ಥರು ನಿಶ್ಚಯಿಸಿದ್ದಾರೆ. ಅದಕ್ಕೆ ರಾಜರ ಒಪ್ಪಿಗೆ ಸಿಕ್ಕಿರುತ್ತದೆ. ಸೂರ್ಯಗ್ರಹಣದ ದಿನ ಶುಭಮುಹೂರ್ತದ ವೇಳೆ ದಾನ ಪ್ರಕ್ರಿಯೆ ನೆರವೇರುತ್ತದೆ.

ಶಾಸನದ ಲಿಪಿಯಿಂದ ಆಗಿನ ಕಾಲಮಾನವನ್ನೂ ಪತ್ತೆಹಚ್ಚಬಹುದು. ಇದರಿಂದ ಊರಿನ ದೇವಸ್ಥಾನ ಎಷ್ಟು ಹಳೆಯದೆಂಬುದು ತಿಳಿಯುತ್ತದೆ. ಸುಂಕ ವಿವರದಿಂದ ಆಗಿನ ಕಾಲದ ಸಾಮಾಜಿಕ ವ್ಯವಸ್ಥೆಯನ್ನು ತಿಳಿಯಬಹುದು. ಜನಜೀವನವನ್ನೂ ಅಂದಾಜಿಸಬಹುದು. ಇನ್ನೊಂದು ಕುತೂಹಲದ ವಿಷಯವೆಂದರೆ ಕೊಡಿಗೆಹಳ್ಳಿಯ ಶಾಸನದಲ್ಲಿ ಸೌರಗ್ರಹಣದ ಕುರಿತಾದ ವಿವರಗಳಿದ್ದಿದ್ದು. ಇದರಿಂದ ಆಗಿನವರಿಗೆ ಆ ಕುರಿತು ನಿಖರ ದಿನಾಂಕದ ಮಾಹಿತಿ ಇತ್ತು ಎಂಬುದು ತಿಳಿದುಬರುತ್ತದೆ. ಆಗಿನ ಕಾಲದಲ್ಲಿ ವಿಜ್ಞಾನ ಎಷ್ಟು ಮುಂದುವರಿದಿತ್ತು ಎಂಬುದನ್ನೂ ಇದರಿಂದ ತಿಳಿಯಬಹುದು. ಲಿಪಿಯಿಂದ ಶಾಸನ 14ನೇ ಶತಮಾನದ್ದೆಂದು ಗೊತ್ತಾಯ್ತು. ಅಷ್ಟಕ್ಕೇ ಸುಮ್ಮನಾಗದ ಉದಯ್‌ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅವರ ವೆಬ್‌ಸೈಟಿಗೆ ಭೇಟಿ ನೀಡಿ ಇತಿಹಾಸದಲ್ಲಿ ಘಟಿಸಿದ ಸೌರಗ್ರಹಣದ ಪಟ್ಟಿಯನ್ನು ಜಾಲಾಡಿದಾಗ ಅವರಿಗೆ 1431ನೇ ಇಸವಿ ಆಗಸ್ಟ್‌ 8 ರಂದು ಭಾರತದಲ್ಲಿ ಸೌರಗ್ರಹಣ ಕಂಡಿದ್ದ ಮಾಹಿತಿ ಸಿಕ್ಕಿತ್ತು. ಮೈ ಜುಮ್ಮೆನ್ನುವುದೊಂದು ಬಾಕಿ! 

ಎಪಿಗ್ರಾಫಿಯಾ ಆನ್‌ಲೈನ್‌ ಗೂಗಲ್‌ ಲಿಂಕ್‌ -  goo.gl/XZmGrf
ಶಾಸನಗಳಿರುವ ಪ್ರದೇಶದ ಗೂಗಲ್‌ ನಕಾಶೆಯ ಲಿಂಕ್‌ ಇಲ್ಲಿದೆ. ಜೊತೆಗೆ ಶಾಸನದಲ್ಲಿರುವ ವಿವರಗಳನ್ನೂ ಇಲ್ಲಿ ತಿಳಿಯಬಹುದು. ಗೂಗಲ್‌ ಸಹಾಯದಿಂದ ಉದಯ್‌ ಅವರು ಈ ನಕಾಶೆಯನ್ನು ಸಿದ್ಧಪಡಿಸಿದ್ದಾರೆ. ಆಸಕ್ತರು ತಾವೇ ಸ್ವತಃ ಆ  goo.gl/vYY3Ky
ಶಾಸನಗಳ 3ಡಿ ಮಾದರಿ- goo.gl/oQAMgp

ಫೇಸ್‌ಬುಕ್‌ ಪೇಜ್‌ - goo.gl/MCjics 
ಸಂಪರ್ಕ- 9845204268(ಉದಯ್‌)

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.