ಉಂಡು ಹೋಗೋ ಕೊಂಡು ಹೋಗೋ ಅಳಿಯ
Team Udayavani, Feb 2, 2019, 2:43 AM IST
ಆದಷ್ಟು ಬೇಗನೆ ಮಗಳು ಲೈಲಾಳ ಮದುವೆ ಮಾಡಬೇಕೆಂಬುದು ವಿಶಾಲು ಆಸೆ. ಆದರೆ ಪತಿರಾಯ ವಿಶ್ವನಿಗೆ ಈಗಲೇ ಯಾಕೆ ಅರ್ಜೆಂಟು ಎಂಬ ಮನಸ್ಥಿತಿ. ಈ ವಿಷಯವಾಗಿಯೇ ಮನೆಯಲ್ಲಿ ದೊಡ್ಡ ಜಗಳ ಆಗಾಗ್ಗೆ ನಡೆಯುತ್ತಿರುತ್ತದೆ. ಪ್ರತಿ ಸಲ ಜಗಳ ನಡೆದಾಗಲೂ ಶಾಂತಿ ಸಂಧಾನ ಮಾಡಿಸೋ ಜವಾಬ್ದಾರಿ ಅವರ ಮನೆಯಲ್ಲೇ ಬಾಡಿಗೆಗಿರುವ ಇಬ್ಬರು ವಕೀಲರದು. ಈ ಹೊತ್ತಿಗೆ ಮೂವರು ಹುಡುಗರು ಲೈಲಾಳನ್ನು ಮದುವೆಯಾಗಲು ಮುಂದೆ ಬರುತ್ತಾರೆ. ಅವರು ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದವರು. ತನ್ನ ಅಳಿಯ ಸಿನಿಮಾ ಹಿನ್ನೆಲೆಯವನಾಗಿರಬೇಕೆಂಬುದು ಮಾವ ವಿಶ್ವನ ಮಹದಾಸೆ. ಇದು ಮತ್ತಷ್ಟು ಪಜೀತಿಗೆ ಎಡೆ ಮಾಡಿಕೊಡುತ್ತದೆ. ಈ ನಡುವೆ ಇನ್ಸ್ಪೆಕ್ಟರ್ ವಿಕ್ರಂ, ಕೊಲೆಯ ತನಿಖೆ ನಡೆಸಲು ಮನೆಗೆ ಬರುತ್ತಾನೆ. ಇದರ ಹಿನ್ನೆಲೆ ಏನು? ಲೈಲಾ ಮದುವೆಯಾಗುತ್ತಾಳೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ‘ಬೆಗ್ ಬಾರೋ ಅಳಿಯ’ ನಾಟಕ ನೋಡಿ. ಈ ನಾಟಕವನ್ನು ಎಂ.ಎಸ್.ನರಸಿಂಹಮೂರ್ತಿ ರಚಿಸಿದ್ದು, ಹನುರಾಮ ಸಂಜೀವ ಅವರು ನಿರ್ದೇಶಿಸಿದ್ದಾರೆ. ವೆಂಕಟೇಶ್ ಭಾರದ್ವಾಜ್, ಮೋಹಿನಿ ಗಿರೀಶ್, ಪವನ್, ಅರುಣ, ಸಚಿನ್, ರಂಜಿತ್, ಸುಧಾಕರ್, ವರ್ಚಸ್ವಿನಿ ಮತ್ತು ಹರ್ಷ ಅಭಿನಯಿಸುತ್ತಿದ್ದಾರೆ. ಬೆಂಗಳೂರು ರಾಷ್ಟ್ರೀಯ ರಂಗಶಾಲೆಯ ನಿರ್ದೇಶಕ ಬಸವಲಿಂಗಯ್ಯ, ಹಿರಿಯ ರಂಗಕರ್ಮಿ ಕಿಟ್ಟಿ ಮತ್ತು ಚಿತ್ರನಟಿ ಸುಮನ್ ನಗರ್ಕರ್ ಉಪಸ್ಥಿತರಿರಲಿದ್ದಾರೆ. ಶ್ರೀ ವಿವೇಕಾನಂದ ಕಲಾಕೇಂದ್ರ ನಡೆಯುತ್ತಿರುವ ರಂಗಸಂಭ್ರಮದ ಪ್ರಯುಕ್ತ ಈ ನಾಟಕ ಪ್ರದರ್ಶನ ನಡೆಯುತ್ತಿದೆ. ಪ್ರವರ ಆರ್ಟ್ ಸ್ಟುಡಿಯೋ ನಾಟಕವನ್ನು ಪ್ರಸ್ತುತ ಪಡಿಸುತ್ತಿದೆ.
•ಎಲ್ಲಿ?: ಸಂಸ್ಕೃತಿ ಸದನ, ವಿದ್ಯಾಪೀಠ ಸರ್ಕಲ್ ಬಳಿ, ಕತ್ರಿಗುಪ್ಪೆ ಮುಖ್ಯರಸ್ತೆ
•ಯಾವಾಗ?: ಫೆ. 2, ಸಂಜೆ 6.30 | ಪ್ರವೇಶ: ಉಚಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ