ಬಿಎಸ್ಸೆನ್ನೆಲ್ “ನಗೆಹಬ್ಬ’
Team Udayavani, Sep 1, 2018, 1:43 PM IST
ಬಿ.ಎಸ್.ಎನ್.ಎಲ್ ನೌಕರರ ಸಹಕಾರ ಸಂಘ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಈ ಕಾರ್ಯಕ್ರಮವನ್ನು ಸಹಕಾರ ಸಚಿವ ಬಂಡಪ್ಪ ಕಾಶಂಪೂರ ಉದ್ಘಾಟಿಸಲಿದ್ದು, “ಸುವರ್ಣ ಸೌರಭ’ ಸ್ಮರಣ ಸಂಚಿಕೆಯನ್ನು ಬಿ.ಎಸ್.ಎನ್.ಎಲ್ ಕರ್ನಾಟಕ ವೃತ್ತದ ಮುಖ್ಯ ಮಹಾಪ್ರಬಂಧಕ ಆರ್. ಮಣಿ ಲೋಕಾರ್ಪಣೆಗೊಳಿಸಲಿದ್ದಾರೆ.ಬೆಂಗಳೂರು ಜಿಲ್ಲಾ ಮಹಾಪ್ರಬಂಧಕ ಸಂಘದ ಅಂತರ್ಜಾಲ ತಾಣವನ್ನು ಉದ್ಘಾಟಿಸುವರು. ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಹಾಗೂ ಜಂಟಿ ನಿಬಂಧಕ ಮೊಹಮ್ಮದ್ ಜಫರುಲ್ಲಾಖಾನ್ ಪ್ರತಿಭಾ ಪುರಸ್ಕಾರ, ಗೌರವಾಪರ್ಣೆ ನಡೆಸಿಕೊಡುತ್ತಾರೆ. ಮಧ್ಯಾಹ್ನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಿಮ್ಮನ್ನು ನಗಿಸಲು ಹಾಸ್ಯ ಸಾಹಿತಿಗಳಾದ ಎಂ.ಎಸ್.ನರಸಿಂಹ ಮೂರ್ತಿ, ರಿಚರ್ಡ್ ಲೂಯಿಸ್, ಮೈಸೂರು ಆನಂದ್, ಕಿರ್ಲೋಸ್ಕರ್ ಸತ್ಯ ಬರುತ್ತಿದ್ದಾರೆ. ಸಹನಾ ಭಾರದ್ವಾಜ್ರಿಂದ ಭರತನಾಟ್ಯ ಮತ್ತು ಗೀತಗಾಯನ ಹಾಗೂ ಸಂಘದ ನೌಕರರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.
ಎಲ್ಲಿ?: ಸಂಯುಕ್ತ ಗುಜರಾತಿ ಭವನ, ಸರ್ದಾರ್ ಪಟೇಲ್ ಭವನ, #16, ತಿಮ್ಮಯ್ಯ ರಸ್ತೆ, ವಸಂತನಗರ
ಯಾವಾಗ?: ಸೆ.2, ಭಾನುವಾರ ಬೆಳಗ್ಗೆ 10.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ