ಎಂಗ್ಟನ ಪುಂಗಿ ನಾಟಕ ಪ್ರದರ್ಶನ
Team Udayavani, Sep 8, 2018, 10:34 AM IST
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 80ನೇ ಹುಟ್ಟುಹಬ್ಬದ ನಿಮಿತ್ತ, ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡವು ಎಂಗ್ಟನ ಪುಂಗಿ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ಇದು ತೇಜಸ್ವಿಯವರ ಪರಿಸರದ ಕತೆ ಕೃತಿಯನ್ನಾಧರಿಸಿದ ನಾಟಕ. ಹಾವುಗೊಲ್ಲ ಎಂಗ್ಟ, ಹೊಟ್ಟೆಪಾಡಿಗಾಗಿ ಏನೇನೆಲ್ಲಾ ಮಾಡುತ್ತಾನೆ ಎಂಬುದನ್ನು ನಿರ್ದೇಶಕ ಅಶೋಕ್.ಬಿ ರಂಜನೀಯವಾಗಿ ರಂಗದ ಮೇಲೆ ತಂದಿದ್ದಾರೆ. ತೇಜಸ್ವಿಯವರನ್ನು ನೆನೆಯುತ್ತಾ ನಾಟಕವನ್ನು ನೋಡಿಆನಂ ದಿಸಿ.
ಎಲ್ಲಿ?: ಕೆ.ಇ.ಎ.ಪ್ರಭಾತ್ ರಂಗಮಂದಿರ,ಬಸವೇಶ್ವರನಗರ
ಯಾವಾಗ?: ಸೆ.8,
ಶನಿವಾರ ಸಂಜೆ 5
ಹೆಚ್ಚಿನ ಮಾಹಿತಿ: 9945977184