ಬಾನಲಿ ತೇಲುವ ಖಾನಾವಳಿ


Team Udayavani, Oct 20, 2018, 5:46 PM IST

5525.jpg

 ಆಗಸದಲ್ಲಿ ತೇಲುವ ವಸ್ತುಗಳೆಂದರೆ ಮನುಷ್ಯನಿಗೆ ಹಿಂದಿನಿಂದಲೂ ಅದೇನೋ ಆಕರ್ಷಣೆ. ಚಂದ್ರ, ತಾರೆಗಳಲ್ಲದೆ ಮಾನವ ನಿರ್ಮಿತ ವಸ್ತುಗಳೂ ಈ ಆಕರ್ಷಣೆಯ ಕೇಂದ್ರಬಿಂದುಗಳಾಗಿವೆ. ಈ ಕಾರಣಕ್ಕೇ ಬ್ಯಾಬಿಲಾನಿನ ತೇಲುವ ಉದ್ಯಾನವನ ಒಂದು ಕಾಲದಲ್ಲಿ ಪ್ರಪಂಚದ ಅದ್ಭುತವೆಂದು ಪರಿಗಣಿತವಾಗಿದ್ದು. ಎಷ್ಟು ಸಲ ನೋಡಿದರೂ ಹ್ಯಾಂಗಿಂಗ್‌ ಬ್ರಿಜ್‌ಗೆ ಭೇಟಿ ನೀಡಿ ಅದರ ಮೇಲೆ ನಡೆದಾಡಿ ಖುಷಿಪಡುವುದಕ್ಕೂ ಇದೇ ಕಾರಣ. ಜಗತ್ತಿನಲ್ಲಿ ಕ್ರೇಝ್ ಹುಟ್ಟು ಹಾಕಿರುವ ತೇಲುವ ಖಾನಾವಳಿಯ ಟ್ರೆಂಡ್‌ ಬೆಂಗಳೂರಿಗೂ ಕಾಲಿಟ್ಟಿದೆ. 

22 ಆಸನಗಳು
150 ಅಡಿ ಎತ್ತರ
360 ಡಿಗ್ರಿ ನೋಟ
ನಾಗವಾರ ಕೆರೆಯ ವಿಹಂಗಮ ದೃಶ್ಯ

ವಿಶೇಷ ಸಂದರ್ಭಗಳಲ್ಲಿ ನಾವು, ಆಪ್ತರನ್ನು ಮನೆಗೆ ಊಟಕ್ಕೆ ಬನ್ನಿ ಆಹ್ವಾನಿಸುತ್ತೇವೆ. ಇನ್ನು ಮುಂದೆ ಬನ್ನಿ ಆಕಾಶದಲ್ಲಿ ಊಟ ಮಾಡೋಣ ಎಂದು ಯಾರಾದರೂ ಆಹ್ವಾನಿಸಿದರೆ ಎಲ್ಲೋ ಹುಚ್ಚು ಎಂದು ನಕ್ಕುಬಿಡಬೇಡಿ. ಭಾರತದಲ್ಲೇ ಪ್ರಥಮ ಬಾರಿಗೆ ಆಕಾಶದಲ್ಲಿ ಭೋಜನ ಸರ್ವ್‌ ಮಾಡುವ ರೆಸ್ಟೋರೆಂಟೊಂದು ನಗರದಲ್ಲಿ ಪ್ರಾರಂಭವಾಗಿದೆ. ಇದರ ಹೆಸರು “ಫ್ಲೈ ಡೈನಿಂಗ್‌’.

ಏನಿದು ಫ್ರೈ ಡೈನಿಂಗ್‌?
ಶ್ರುತಿ ಮತ್ತು ವಿವೇಕ್‌ ಇಬ್ಬರಿಗೂ ಇದು ಮೊದಲ ಅನುಭವ. ಮದುವೆಯ ಮೊದಲ ವರ್ಷದ ಆ್ಯನಿವರ್ಸರಿಗೆಂದು ವಿವೇಕ್‌ ಫ್ಲೈ ಡೈನಿಂಗನ್ನು ಬುಕ್‌ ಮಾಡಿದ್ದ. ಅವಳಿಗೆ ಮೊದಲೇ ಅಡ್ವೆಂಚರ್‌ ರೈಡುಗಳೆಂದರೆ ಭಯ. ಫ್ಲೈಡೈನಿಂಗಿನ ಆಸನಗಳು ರೋಲರ್‌ ಕೋಸ್ಟರ್‌ ಮಾದರಿಯಂತಿರುವುದನ್ನು ನೋಡಿ ಅವಳಿಗೆ ಗಾಬರಿ. ಆದರೆ ಪತಿ ವಿವೇಕ್‌ ಜೊತೆಗಿದ್ದನಲ್ಲ. ಅವನ ಕೈ ಹಿಡಿದು ಬಿಗಿಯಾಗಿ ಕುಳಿತುಕೊಂಡಳು. ಅಂದ ಹಾಗೆ ಆಕಾಶ ಖಾನಾವಳಿಯನ್ನು ರೋಮಾಂಚನಕಾರಿ ಭೋಜನ ಸವಿಯುವ ವ್ಯವಸ್ಥೆ ಎಂದು ಕರೆಯಬಹುದು. ರೌಂಡ್‌ ಟೇಬಲ್‌ ಮಾದರಿಯಲ್ಲಿ 22 ಆಸನಗಳಿವೆ. ಆಸನ, ಟೇಬಲ್‌ ಎಲ್ಲವೂ ಬೆಸೆದುಕೊಂಡಿರುತ್ತದೆ. ಇದಕ್ಕೊಂದು ಗಾಜಿನ ಸೂರು ಕೂಡಾ ಇದೆ. ಇವಿಷ್ಟೇ ಖಾನಾವಳಿಯ ಬಾಗ. 

ಗ್ರಾಹಕರು ಆಸನದಲ್ಲಿ ಕುಳಿತ ಮೇಲೆ ಸೀಟಿನ ಬೆಲ್ಟಾಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಸುರಕ್ಷತಾ ತಂಡದವರು ಬಂದು ಪರೀಕ್ಷಿಸುತ್ತಾರೆ. ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಖಾತರಿ ಪಡಿಸಿಕೊಂಡ ನಂತರವೇ ಹೊರಡುವುದು. ಬಾಣಸಿಗ ಸೇರಿದಂತೆ ಒಟ್ಟು ಐವರು ಮಂದಿ ಗ್ರಾಹಕರ ಜೊತೆಗಿರುತ್ತಾರೆ. ಖಾನಾವಳಿಯನ್ನು ಕ್ರೇನ್‌ಗೆ ಕಟ್ಟಲಾಗಿರುತ್ತದೆ. ಅದರ ಸಹಾಯದಿಂದ ನೆಲದಿಂದ ಮೇಲಕ್ಕೆ ನಿಧಾನವಾಗಿ ಎತ್ತಲಾಗುತ್ತದೆ. ಸಾಕಷ್ಟು ಎತ್ತರ ತಲುಪಿದ ಮೇಲೆ ಆಕಾಶದಲ್ಲೊಂದು ಸ್ಟಾಪ್‌ ನೀಡಲಾಗುತ್ತದೆ. ನಂತರ ಭೋಜನವನ್ನು ಸರ್ವ್‌ ಮಾಡಲಾಗುತ್ತದೆ. ಬೆಲೆ 4,000ದಿಂದ ಶುರುವಾಗುತ್ತದೆ.

ಗ್ರಾಹಕರ ಮನರಂಜನೆಗೆ
ಒಂದೊಂದು ಕಡೆ ಒಂದೊಂದು ರೀತಿಯ ಮನರಂಜನಾ ಚಟುವಟಿಕೆಗಳನ್ನು ತೇಲುವ ಖಾನಾವಳಿ ಹೊಂದಿರುತ್ತದೆ. ಗ್ರಾಹಕರನ್ನು ಹೊರತು ಪಡಿಸಿ ಫೋಟೋಗ್ರಾಫ‌ರ್‌ ಒಬ್ಬ ಇದ್ದೇ ಇರುತ್ತಾನೆ. ಗ್ರಾಹಕರ ಸಂತಸದ ಕ್ಷಣಗಳನ್ನು ಸೆರೆ ಹಿಡಿದು ಅದರ ಫೋಟೋ ಪ್ರತಿಯನ್ನು ನೀಡುವುದು ಅವನ ಕೆಲಸ. ಇನ್ನು ಕೆಲವೆಡೆ  ತೇಲುವ ಖಾನಾವಳಿಗಳಲ್ಲಿ ಸಂಗೀತ ಕಛೇರಿಯನ್ನೇ ನಡೆಸುವುದುಂಟು. ಪಾಶ್ಚಾತ್ಯ ದೇಶಗಳಲ್ಲಿ ಮ್ಯೂಸಿಕ್‌ ಡಿ.ಜೆ.ಗಳನ್ನು ಕರೆಸುತ್ತಾರೆ. ಬೆಂಗಳೂರಿನ ತೇಲುವ ಖಾನಾವಳಿಯಲ್ಲಿ ಗಿಟಾರ್‌ ಮತ್ತು ವಯಲಿನ್‌ ವಾದಕರಿರುತ್ತಾರೆ.

ಬಿಸಿಲೇ ಇರಲಿ ಮಳೆಯೇ ಬರಲಿ
ಸಂಜೆಯ ವೇಳೆ ಈ ಖಾನಾವಳಿಗಳಲ್ಲಿ ಬೋಜನ ಸವಿಯುವುದು ಚೆನ್ನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಮಿಕ್ಕ ಸಮಯದಲ್ಲೂ ಭೋಜನ ಸವಿಯಲು ಅನುವಾಗುವ ಹಾಗೆ ವ್ಯವಸ್ಥೆಯನ್ನು ಆಯೋಜಕರು ಮಾಡಿಕೊಂಡಿರುತ್ತಾರೆ. ಸಾಮಾನ್ಯವಾಗಿ ಗಾಜಿನ ಸೂರನ್ನು ಹೊದಿಸಿರುತ್ತಾರಾದರೂ, ಅವಶ್ಯಕತೆ ಇದ್ದಲ್ಲಿ, ಬಿಸಿಲಿಗೆ ರಕ್ಷಣೆ ನೀಡಲೆಂದು ಪ್ರತ್ಯೇಕ ಸೂರನ್ನೂ ಹೊದಿಸುತ್ತಾರೆ. ಸೆಕೆಗೆ ಎ.ಸಿ, ಚಳಿಗೆ ಇನ್‌ಫ್ರಾರೆಡ್‌ ಹೀಟಿಂಗ್‌ ವ್ಯವಸ್ಥೆಯೂ ಇಲ್ಲಿರುತ್ತದೆ. 

ಅತ್ಯದ್ಭುತ ಸೆಲ್ಫಿ
ತೇಲುವ ಖಾನಾವಳಿಗಳಿಗೆ ಭೇಟಿ ನೀಡುವವರಲ್ಲಿ ಹೊಸತನ್ನು ಪ್ರಯತ್ನಿಸುವ ಅಡ್ವೆಂಚರ್‌ ಮನೋಭಾವದವರು ಒಂದು ಕೆಟಗರಿಯಾದರೆ ಇನ್ನು ಕೆಲವರು ಸೆಲ್ಪಿ ತೆಗೆದುಕೊಳ್ಳಲೆಂದೇ ಇಲ್ಲಿ ಬರುವವರಿದ್ದಾರೆ. ಪ್ಯಾರಿಸ್‌, ದುಬೈ ಮುಂತಾದ ಪ್ರಖ್ಯಾತ ಪ್ರವಾಸಿ ತಾಣಗಳ ತೇಲುವ ಖಾನಾವಳಿಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಪ್ರತಿಷ್ಠೆಯ ವಿಷಯವೂ ಹೌದು. ಅದಕ್ಕೆಂದೇ ಆಯೋಜಕರು ಫೋಟೋಗ್ರಾಫ‌ರ್‌ನನ್ನೂ ನೇಮಿಸಿಕೊಂಡಿರುತ್ತಾರೆ. ಗ್ರಾಹಕರು ಸೆಲ್ಪಿ ತೆಗೆದುಕೊಳ್ಳುವುದರ ಜೊತೆಗೆ ಫೋಟೋಗ್ರಾಫ‌ರ್‌ ನೀಡುವ ಗುಣಮಟ್ಟದ ಫೋಟೋ ಮತ್ತು ವಿಡಿಯೋಗಳನ್ನೂ ಪಡೆದುಕೊಳ್ಳಬಹುದು. 

60ಕ್ಕೂ ಹೆಚ್ಚು ದೇಶಗಳಲ್ಲಿವೆ
ಭಾರತದಲ್ಲಿ ಇದು ಮೊದಲನೆಯದಾದರೂ, ತೇಲುವ ರೆಸ್ಟೋರೆಂಟಿನ ಪರಿಕಲ್ಪನೆ ಹೊಚ್ಚ ಹೊಸತೇನಲ್ಲ. 60ಕ್ಕೂ ಹೆಚ್ಚಿನ ದೇಶಗಳಲ್ಲಿ ಆಕಾಶದ ಖಾನಾವಳಿಗಳಿವೆ. ನಗರಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿವೆ. ಅದಕ್ಕೆ ಕಾರಣವೂ ಇದೆ. ಈ ರೆಸ್ಟೋರೆಂಟುಗಳು ನಗರದ ವಿಭಿನ್ನ, ಯಾರೂ ಕಾಣದ ನೋಟವನ್ನು ನೀಡುವವು. ಸಂಜೆಗತ್ತಲಿನಲ್ಲಿ ಪಕ್ಷಿಗಳು ಗೂಡಿಗೆ ವಾಪಸ್ಸಾಗುವ ಹೊತ್ತಿನಲ್ಲಿ ದಡದಲ್ಲಿನ ಕಟ್ಟಡಗಳ ಪ್ರತಿಫ‌ಲನದಲ್ಲಿ ನಗರ ಬೇರೆಯದೇ ರಂಗು ಪಡೆದುಕೊಳ್ಳುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 
 
ಈ ಆಕಾಶ ಖಾನಾವಳಿಯನ್ನು ರೂಪಿಸಿದ್ದು ಮತ್ತು ಉಸ್ತುವಾರಿಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದು ಜರ್ಮನ್‌ ಸಂಸ್ಥೆ. ಜಗತ್ತಿನ ಪ್ರಖ್ಯಾತ ಪ್ರೇಕ್ಷಣೀಯ ಸ್ಥಳಗಳಲ್ಲಿರುವ ಆಕಾಶ ಖಾನಾವಳಿಯ ಜವಾಬ್ದಾರಿಯನ್ನೂ ಅದು ನೋಡಿಕೊಳ್ಳುತ್ತಿದೆ. ಸುರಕ್ಷತೆಯೇ ತೇಲುವ ಖಾನಾವಳಿಗಳ ಪ್ರಥಮ ಆದ್ಯತೆ. 
– ನೇಹಾ, ಸಿ.ಇ.ಓ, ಫ್ಲೈಡೈನಿಂಗ್‌

ಮಾಹಿತಿಗೆ: www.flydining.com

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.