ಬೆಂಗಳೂರು ಅವರೇಕಾಯ್ ಮೇಳ
Team Udayavani, Dec 29, 2018, 7:16 AM IST
ಈಗ ಅವರೆಕಾಯಿ ಸೀಸನ್. ವಾರದಲ್ಲಿ ಮೂರು ಬಾರಿ ಅವರೆ ಸಾರು, ಅವರೆ ಉಪ್ಪಿಟ್ಟು ತಿಂದು ಬೇಜಾರಪ್ಪಾ, ಬೇಜಾರು ಅಂದ್ರಾ? ಹಾಗಾದರೆ, ಅವರೆಯ ಥರಹೇವಾರಿ ತಿನಿಸುಗಳನ್ನು ಸವಿಯಲು ನೀವಿಲ್ಲಿಗೆ ಬರಲೇಬೇಕು. ಎಲ್ಲಿಗೆ, ವಾಸವಿ ಕಾಂಡಿಮೆಂಟ್ಸ್ ನಡೆಸುವ ಅವರೆ ಬೇಳೆ ಮೇಳಕ್ಕೆ. ಅವರೆ ಬೇಳೆ ಐಸ್ ಕ್ರೀಂ, ಅವರೆಬೇಳೆ ಬೋಂಡಾ ಸೇರಿದಂತೆ 112ಕ್ಕೂ ಹೆಚ್ಚಿನ ಬಗೆಯ ಅವರೆ ಕಾಯಿ ತಿನಿಸುಗಳು ಮೇಳದಲ್ಲಿ ಇರಲಿವೆ. ಮಾಗಡಿಯ ರೈತರು ಬೆಳೆದ ಫ್ರೆಶ್ ಅವರೆಕಾಯಿಯನ್ನು ಖರೀದಿಸಿ, ಮನೆಯಲ್ಲಿ ಹೊಸ ತಿನಿಸುಗಳನ್ನು ಮಾಡಬಹುದು. ಇಂದು ಬೆಳಗ್ಗೆ 10.30ಕ್ಕೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮೇಳವನ್ನು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಾಸವಿ ಕಾಂಡಿಮೆಂಟ್ಸ್ನ ಆನ್ಲೈನ್ ಸ್ಟೋರ್(www.vasavi.store) ಕೂಡ ಉದ್ಘಾಟನೆಗೊಳ್ಳಲಿದೆ. ಶಾಸಕ ಉದಯ ಗರುಡಾಚಾರ್, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಪಾಲಿಕೆ ಸದಸ್ಯೆ ವಾಣಿ ವಿ. ರಾವ್, ಶಾಸಕ ರಾಮಲಿಂಗಾರೆಡ್ಡಿ, ನಟಿ ತಾರಾ ಅನುರಾಧ, ಸಾಯಿ ಗೋಲ್ಡ್ನ ಶರವಣ, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ, ನಟ ದೊಡ್ಡಣ್ಣ, ನಿರ್ಮಾಪಕ ಚಿನ್ನೇಗೌಡರು, ಆರ್. ಜೆ. ಶ್ರುತಿ, ನಟಿ ರೂಪಿಕಾ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಾಗಡಿಯ 25 ರೈತರನ್ನು ಸನ್ಮಾನಿಸುವ ಕಾರ್ಯಕ್ರಮವೂ ಏರ್ಪಾಡಾಗಿದೆ.
ಎಲ್ಲಿ?:ಶ್ರೀ ವಾಸವಿ ಕಾಂಡಿಮೆಂಟ್ಸ್, ಸಜ್ಜನ್ ರಾವ್ ವೃತ್ತ, ವಿ.ವಿ.ಪುರಂ
ಯಾವಾಗ? : ಡಿ.29-ಜನವರಿ 8, ಬೆಳಗ್ಗೆ 11-10
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ