ನಮ್ಮನೆ ಕತ್ತಲಲ್ಲಿಟ್ಟು.ಪಕ್ಕದ ಮನೆಗೆ ಬೆಳಕು ನೀಡಲ್ಲ!


Team Udayavani, Jan 12, 2019, 6:22 AM IST

98.jpg

ಅದು 80, 90ರ ದಶಕ. ಬೆಂಗಳೂರಿನಲ್ಲಿ ಸ್ಪೀಚ್‌ & ಹಿಯರಿಂಗ್‌ ಕ್ಲಿನಿಕ್ಕುಗಳೇ ಇರಲಿಲ್ಲ. ಒಂದೆರಡು ಮೆಡಿಕಲ್‌ ಕಾಲೇಜುಗಳಲ್ಲಿ ಒಂದು ವಿಭಾಗವಾಗಿತ್ತಷ್ಟೆ. ಕಾಲೇಜಾದ್ದರಿಂದ ಆ ವಿಭಾಗ ದಿನವಿಡೀ ತೆರೆದಿರುತ್ತಿರಲಿಲ್ಲ. ಸೀಮಿತ ಅವಧಿಯಲ್ಲೇ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಬೇಕಿದ್ದಿತು. ಅಂಥಾ ಸಮಯದಲ್ಲಿ ತೆರೆದುಕೊಂಡಿತ್ತು ನಾಯಕ್‌ ಸ್ಪೀಚ್‌ & ಹಿಯರಿಂಗ್‌ ಕ್ಲಿನಿಕ್‌. ಇಂದಿಗೆ ಕ್ಲಿನಿಕ್‌ ಶುರುವಾಗಿ 25 ವರ್ಷಗಳೇ ಕಳೆದವು. ಡಾ. ನಾಯಕ್‌ ಅದರ ಸ್ಥಾಪಕರು. ಕೆಲಸವನ್ನು ಅರಸುತ್ತಾ ಬೆಂಗಳೂರಿಗೆ ಬಂದಿದ್ದ ಅವರು ಇಂದು ನೂರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. 

ಹುಣಸೂರಿನ ಪುಟ್ಟ ಗ್ರಾಮ ಮರೂರಿನಿಂದ ಹೊರಟ ನಾಯಕ್‌ ಸ್ಪೀಚ್‌ & ಹಿಯರಿಂಗ್‌ ಕೋರ್ಸ್‌ ಮಾಡಿದ್ದರ ಹಿಂದೊಂದು ಕತೆಯಿದೆ. ಉತ್ತಮ ಅಂಕ ಗಳಿಸಿದ್ದ ಅವರ ಮುಂದೆ ಎಂಜಿನಿಯರಿಂಗ್‌ ಮತ್ತು ಮೆಡಿಕಲ್‌, ಆಯ್ಕೆಗಳಿದ್ದವು. ಸೀಟೇನೋ ಸಿಕ್ಕಿತು ಆದರೆ ಕಾಲೇಜು ಫೀಸು ಹೋಗಲಿ, ಪುಸ್ತಕ ಕೊಳ್ಳಲೂ ಅವರ ಬಳಿ ದುಡ್ಡಿರಲಿಲ್ಲ. ಕೃಷ್ಟಿಯನ್ನು ನಂಬಿಕೊಂಡಿದ್ದ ಕುಟುಂಬವಾದ್ದರಿಂದ ಹಣ ಹೊಂದಿಸುವುದು ಕಷ್ಟವಾಗಿತ್ತು. ಆ ಸಮಯದಲ್ಲಿ ಯಾರೋ ಪುಣ್ಯಾತ್ಮರು “ಸ್ಪೀಚ್‌ & ಹಿಯರಿಂಗ್‌’ ಕೋರ್ಸ್‌ ಮಾಡಿದರೆ ಅವರೇ ಸ್ಟೈಪೆಂಡ್‌  ಕೊಡುತ್ತಾರೆ’ ಎಂಬ ಮಾಹಿತಿ ನೀಡಿದ್ದರು. ಅಷ್ಟೇ ಸಾಕಾಗಿತ್ತು ನಾಯಕ್‌ರವರಿಗೆ. ಹಿಂದೆಮುಂದೆ ನೋಡದೆ ತರಗತಿಗೆ ಸೇರಿಕೊಂಡುಬಿಟ್ಟಿದ್ದರು.

ಮಾನಸ ಗಂಗೋತ್ರಿಯಲ್ಲಿ ಅವರೊಂದಿಗೆ ಓದಿದವರೆಲ್ಲರೂ ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಎಂದು ವಿದೇಶಕ್ಕೆ ಹಾರಿದರು. ಆದರೆ ನಾಯಕ್‌ರಿಗೆ  ವಿದೇಶದ ಕನಸಿರಲಿಲ್ಲ. ಸರ್ಕಾರಿ ಸವಲತ್ತುಗಳ ನೆರವಿನಿಂದ ಓದುತ್ತೇವೆ. ಆದರೆ ಓದಿದ್ದರ ಪ್ರಯೋಜನ ಮಾತ್ರ ಯಾಕೆ ಬೇರೆ ದೇಶದವರಿಗೆ ಸಿಗಬೇಕು ಎನ್ನುವುದು ಅವರ ಪ್ರಶ್ನೆಯಾಗಿತ್ತು. ವಿದೇಶಗಳಲ್ಲಿ ಉತ್ತಮ ಸಂಬಳ ಕೊಡಬಹುದು, ಐಷಾರಾಮಿ ಜೀವನವನ್ನೂ ನಡೆಸಬಹುದು, ಆದರೆ ಸ್ವಂತ ಮನೆಯನ್ನು ಕತ್ತಲಲ್ಲಿಟ್ಟು ಪಕ್ಕದ ಮನೆಗೆ ಬೆಳಕು ನೀಡುವ ಆಸೆ ಯಾವತ್ತೂ ನಾಯಕ್‌ ಅವರ ಮನದಲ್ಲಿ ಮೂಡಲಿಲ್ಲ. 

ಇಂದು ನಗರದಲ್ಲಿ 5 ಶಾಖೆಗಳನ್ನು ತೆರೆದಿರುವ ನಾಯಕ್‌, ಸರ್ಕಾರಿ ಶಾಲೆಗಳಲ್ಲಿ, ಕೊಳಚೆ ಪ್ರದೇಶಗಳ ಮಕ್ಕಳಿಗೆ ಉಚಿತ ತಪಾಸಣಾ ಶಿಬಿರಗಳನ್ನು ನಡೆಸುತ್ತಾರೆ. ದುಡ್ಡಿನಿಂದ ವಸ್ತುಗಳನ್ನು ಕೊಂಡುಕೊಳ್ಳಬಹುದು ಆದರೆ ಆತ್ಮಸಂತೋಷವನ್ನಲ್ಲ. “ನಾವು ಮಾಡುವ ಉದ್ಯೋಗದಿಂದ ನಾಲ್ಕಾರು ಜನರಿಗೆ ಒಳ್ಳೆಯದಾದಾಗ ಮಾತ್ರ ನಾವು ಕಲಿತ ವಿದ್ಯೆಗೆ ಬೆಲೆ ಸಿಗೋದು’ ಎನ್ನುವುದು ಅವರ ಅನುಭವದ ಮಾತು. ಈ ಮನೋಭಾವ ನಾಗರಿಕರೆಲ್ಲರದೂ ಆದಾಗಲೇ ಊರಿನ ಅಭಿವೃದ್ದಿಯಾಗೋದು!

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.