ಗುರುವಿನ ಪ್ರಭೆಯಲ್ಲಿ ಮಿನುಗಿದ ಯಕ್ಷರು


Team Udayavani, Jan 12, 2019, 6:27 AM IST

96.jpg

ಕಲಾಪ್ರಕಾರವೊಂದನ್ನು ಒಂದು ಕಾಲಘಟ್ಟ ಲಿಂಗಭೇದದಲ್ಲಿ ಬಂಧಿಸಬಹುದು. ಅನಿವಾರ್ಯತೆ ಇದಕ್ಕೆ ಕಾರಣವಾಗಿರಲೂಬಹುದು. ಆದರೆ, ಕಲೆ ನಿತ್ಯ ಹೊಸದನ್ನು ರೂಢಿಸಿಕೊಂಡಂತೆ ಚಲನಶೀಲವೂ ಆಗುತ್ತಿರುತ್ತದೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅದು ಕಾಲದಿಂದ ಪುರುಷಪ್ರಧಾನ ಕಲೆಯಾಗಿಯೇ ಇದೆ. ಸ್ತ್ರೀಪಾತ್ರಗಳನ್ನು ಪುರುಷರೇ ಸ್ತ್ರೀಯರು ನಾಚುವಂತೆ ತಮ್ಮ ಹಾವಭಾವದಲ್ಲಿ ಅಭಿನಯಿಸಿ ತೋರಿಸಿದ್ದಾರೆ. ಹಾಗಾಗಿ, ಇಂದಿಗೂ ಯಕ್ಷಗಾನದಲ್ಲಿ ಪುರುಷ ಕಲಾವಿದನೊಬ್ಬ ಹಾಕುವ ಸ್ತ್ರೀವೇಷಕ್ಕೆ ಹೆಚ್ಚು ಮಹತ್ವವಿದೆ. ಇದರ ಅರ್ಥ ಸ್ತ್ರೀಯರು ಈ ಕಲಾಪ್ರಕಾರದಲ್ಲಿ ಈ ಪರಿ ಕುಣಿಯಲಾರರು ಎಂದಲ್ಲ. ರೂಢಿ ಬೆಳೆದುಕೊಂಡು ಬಂದಿರುವುದೇ ಹಾಗಿದೆ.

ಈ ರೂಢಿ ಪಲ್ಲಟಗೊಳ್ಳುವುದೇ ಇಲ್ಲ ಎಂದುಕೊಂಡವರ ಕಣ್ಣೆದುರೂ ಕಾಲ ಸರಿಯುತ್ತಲೇ ಇರುತ್ತದೆ. ಅದು ನಿತ್ಯ ಹೊಸತು. ಜೊತೆಗೆ ಪ್ರಯೋಗಶೀಲ ಕೂಡ. ಒಂದು ಘಟ್ಟದ ವಂಚಿತರಿಗೆ ಅದು ಅವಕಾಶ ಕಲ್ಪಿಸುತ್ತದೆ. ಉತ್ಸಾಹದ ಜೊತೆಗೆ ಶಕ್ತಿಯನ್ನೂ ತುಂಬುತ್ತದೆ. ಯಕ್ಷಗುರುಗಳನ್ನು ಹೊಸ ಕಾಲಕ್ಕೆ ಒಗ್ಗಿಸುತ್ತದೆ. ಪರಿಣಾಮವಾಗಿ ಹೆಣ್ಣುಗಳು ಯಕ್ಷರಾಗುತ್ತಾರೆ, ಕುಣಿಯುತ್ತಾರೆ, ಜೊತೆಗೆ ಸಾಬೀತುಪಡಿಸುತ್ತಾರೆ.

ಈಚೆಗೆ ಈ ಎಲ್ಲವನ್ನೂ ಮೌಂಟ್‌ ಕಾರ್ಮೆಲ್‌ ಕಾಲೇಜಿನ ಹೆಣ್ಣುಮಕ್ಕಳು ಸಾಧ್ಯಮಾಡಿ ತೋರಿಸಿದರು. ಹದಿನೈದೇ ದಿನಗಳ ಅಭ್ಯಾಸ; ಯಾರೂ ಯಕ್ಷಗಾನದಲ್ಲಿ ನುರಿತವರಲ್ಲ. ಚೂರು ಬೇರೆಬೇರೆ ಪ್ರಕಾರಗಳ ನೃತ್ಯಗಳ ಬಗೆಗೆ ತಿಳಿದರಷ್ಟೇ. ಆಗಾಗ ಹೆಜ್ಜೆಗಳನ್ನು ಹಾಕಿದವರು. ಅದನ್ನು ಮೆಲುಕು ಹಾಕುವಷ್ಟು ಅಂತರ ಕಾಯ್ದುಕೊಂಡವರು. ಇವರುಗಳು ಯಕ್ಷಗಾನಕ್ಕೆ ತಮ್ಮನ್ನು ತಾವು ಅಣಿಮಾಡಿಕೊಂಡ ರೀತಿ ಅನನ್ಯ. ಯಕ್ಷಗಾನ ಶಾಸ್ತ್ರೀಯ ಕಲೆಯಾದ್ದರಿಂದ ಹೆಜ್ಜೆಗಳು, ಅಭಿನಯದಲ್ಲಿ ಕರಾರುವಕ್ಕು ಅಗತ್ಯ. 

 ಇದರ ಹಿಂದೆ ಗುರು ರಾಧಾಕೃಷ್ಣ ಉರಾಳ ಅವರ ಜಾಣ್ಮೆ ಇದೆ. ಪ್ರಸಂಗ ನಿರ್ಧರಿಸುವ ಮೊದಲು ಅವರು ಹೆಣ್ಣುಮಕ್ಕಳಲ್ಲಿನ ತಾಳಜ್ಞಾನ, ಹೆಜ್ಜೆಗಳ ಸ್ಪಷ್ಟತೆ, ಅಭಿನಯದ ಸಾಧ್ಯಾಸಾಧ್ಯತೆಗಳನ್ನು ಅಳೆದರು. ಪ್ರತಿ ಹೆಣ್ಣುಮಗಳೂ ಯಕ್ಷಗಾನಕ್ಕೆ ಹೊಸಬಳು. ಇದು ತಿಳಿದು ತಾಳ ಮತ್ತು ಹೆಜ್ಜೆಗಳಲ್ಲಿ ಚೂರು ಸ್ಪಷ್ಟತೆ ಹೊಂದಿರುವವರ ಸಂಖ್ಯೆ ಆಧರಿಸಿ, ಪ್ರಸಂಗ ನಿಗದಿ ಮಾಡಿದರು. “ಚಕ್ರವ್ಯೂಹ ಕಾಳಗ’ ನಿಗದಿ ಆದದ್ದು ಯಾಕೆ ಎನ್ನುವುದು ದಿನದಿನದ ತಾಲೀಮುಗಳಲ್ಲಿ ಸ್ಪಷ್ಟವಾಗತೊಡಗಿತು. ಉರಾಳಾರ ಆಯ್ಕೆಯಲ್ಲಿ ಖಾಚಿತ್ಯ ಇತ್ತು. ಇದರ ಸಲುವಾಗಿಯೇ ಆಟ ಕಳೆಕಟ್ಟಿತು. ಈ ಆಟದಲ್ಲಿ ಕೆಲವು ಬದಲಾವಣೆಗಳೂ ನುಸುಳಿದ್ದವು. ಉದಾಹರಣೆಗೆ ರಂಗದ ಮಧ್ಯಭಾಗದಲ್ಲಿ ಭಾಗವತರು ಕೂತು ಹಾಡಲಿಲ್ಲ. ಅವರ ಬದಿಯಲ್ಲಿ ಕೂತು ಯಾರೂ ಚಂಡೆ ನುಡಿಸಲಿಲ್ಲ. ಬದಲಾಗಿ ಹಾಡು ಮತ್ತು ಮಾತು ಮೊದಲೇ ಧ್ವನಿಮುದ್ರಿತಗೊಂಡಿತ್ತು. ಹೆಣ್ಣುಮಕ್ಕಳ ಧ್ವನಿಮುದ್ರಿಸಿದ್ದರಿಂದ ಅವರಿಗೂ ಒಂದು ಬಗೆಯ ನೆಮ್ಮದಿ ಮತ್ತು ತಮ್ಮ ಧ್ವನಿಗಳ ಬಗೆಗೆ ಒಲವು. ಉದ್ದೇಶವಿದ್ದದ್ದು ಜೋರಾಗಿ ಕೇಳಿಸಲಿ ಎಂದು. ಹೀಗಾದಾಗ ಎರಡು ಪ್ರಯೋಜನಗಳಿವೆ. ಒಂದು, ಮರೆಗೆ ಅವಕಾಶವಿರುವುದಿಲ್ಲ. ಎರಡು ಈ ಹೆಣ್ಣುಮಕ್ಕಳಿಗೆ ಸಮಯಸ್ಫೂರ್ತಿಯಿಂದ ಮಾತಾಡುವ ಕಲೆಗಾರಿಕೆ ಬಗ್ಗೆ  ತಿಳಿದಿಲ್ಲ ಹಾಗೂ ಸಿದ್ಧಿಸಿಲ್ಲವಾದ್ದರಿಂದ ಈ ಪ್ರಯೋಗ ನೆರವಿಗೆ ಬಂದೀತು.

ಸುಭದ್ರೆ ಬಿಟ್ಟರೆ ಉಳಿದೆಲ್ಲವೂ ಇಲ್ಲಿ ಗಂಡು ಪಾತ್ರೆಗಳೇ. ಅಭಿನಯಿಸಿದವರು ಹೆಣ್ಣುಮಕ್ಕಳೇ. ಇಲ್ಲಿ ಬಡಗು ಮತ್ತು ತೆಂಕು ಎರಡೂ ತಿಟ್ಟುಗಳು ಮಿಳಿತಗೊಂಡಿದ್ದವು. ಹೆಜ್ಜೆಗಳಲ್ಲಿ ಚೂರು ವ್ಯತ್ಯಾಯವಾಯಿತಾದರೂ ಅದು ನಗಣ್ಯವಾಯಿತು. ತಮ್ಮ ಅಭಿನಯದ ಹಾವಭಾವಗಳಲ್ಲಿ ಹೆಣ್ಣುಮಕ್ಕಳು ವಿಜೃಂಭಿಸಿದರು. ಅಭಿಮನ್ಯುವಿನ ಸಾವನ್ನು “ಭಾವನೆಗಳನ್ನು ಕೊಲ್ಲುವ ಯುದ್ಧಬೇಡ’ ಎಂಬಂತೆ ಬಿಂಬಿಸಿದ್ದು ಪ್ರಸಂಗದ ಒಟ್ಟಾರೆ ಅಂತರಾರ್ಥವನ್ನು ಅದು ತೆರೆದಿಟ್ಟಿತು. ಹಲವು ರಸಗಳು ಈ ಪ್ರಯೋಗದಲ್ಲಿ ಮಿಳಿತಗೊಂಡಿದ್ದರಿಂದ ಪ್ರಸಂಗ ಹಂತದಿಂದ ಹಂತಕ್ಕೆ ತೀವ್ರವಾಗತೊಡಗಿತು.
ಹೆಣ್ಣುಮಕ್ಕಳ ಭಂಗಿಗಳಲ್ಲಿ ಲೋಪ ಎಣಿಸುವ ಹಾಗಿರಲಿಲ್ಲ. ಪಾತ್ರಗಳನ್ನು ಹಾಗೆ ಅಂತರಂಗೀಕರಿಸಿಕೊಳ್ಳದಿದ್ದರೆ ಅಭಿನಯ ಬರಡಾಗುತ್ತಿತ್ತು. ಆದರೆ, ಗುರುವಿನ ಪ್ರಭೆಯಲ್ಲಿ ಎಲ್ಲರೂ ಮಿನುಗಿದರು. ಅಭಿಮನ್ಯುವಾಗಿ ಸಹನಾ, ಸುಭದ್ರೆಯಾಗಿ ಯುಕ್ತ ಪಾತ್ರಗಳ ಒಳಹೊಕ್ಕು ರಸಾನುಭೂತಿ ಮೂಡಿಸಿದರು. ಕೃಷ್ಣನಾಗಿ ಶ್ರೀಲಕ್ಷ್ಮಿ, ಅರ್ಜುನನಾಗಿ ಅಖೀಲ ಚಲನೆ ತಪ್ಪದೇ ಚೇತೋಹಾರಿಯಾಗಿ ನಟಿಸಿದರು. ಉಳಿದವರು ಅವರವರ ಪಾತ್ರಗಳಿಗೆ ನ್ಯಾಯ ಸಲ್ಲಿಸಿದರು. ಬೆಳಕಿನ ಬಣ್ಣಗಳ ಮಿನುಗಿನಲ್ಲಿ ಕದಲಿದ ಈ ಪ್ರಸಂಗ ತನ್ನ ಅಭಿವ್ಯಕ್ತಿಯಲ್ಲಿ ಬೆಳಕಿಗಿಂತ ಸ್ಪಷ್ಟವಾಗಿತ್ತು.

 ಎನ್‌.ಸಿ.ಮಹೇಶ್‌

ಟಾಪ್ ನ್ಯೂಸ್

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.