ಬಜೆಟ್‌ ಹದಿನೆಂಟು-ಹಿರಿಯ ನಾಗರಿಕರ ನಂಟು


Team Udayavani, Feb 5, 2018, 7:45 AM IST

BUDGET.jpg

ಹಿರಿಯ ನಾಗರಿಕರಿಗೆ ಈ ಬಜೆಟ್ಟಿನಲ್ಲಿ ಸಾಕಷ್ಟು ರಿಯಾಯಿತಿ ನೀಡಲಾಗಿದೆ. ಇಡೀ ಬಜೆಟ್ಟಿನ ನಾಲ್ಕು ಪ್ರಮುಖ ನಿಗಾ ಕ್ಷೇತ್ರಗಳಲ್ಲಿ ಹಿರಿಯ ನಾಗರಿಕರ ರಿಯಾಯಿತಿಯೂ ಒಂದು. ರಾಯರ ಸಂತಸ ಉಕ್ಕಿ ಹರಿಯಲು ಮೂಲ 
ಕಾರಣ ಇದೇ.

ಗುರುಗುಂಟಿರಾಯರ ಸಂತಸ ಉಕ್ಕಿ ಹರಿಯುತ್ತಿದೆ. ಆದರೆ ಅದರ ಗುಣಗಾನ ಮಾಡುತ್ತಾ ಕೂರಲು ನನಗಿಲ್ಲಿ ಸ್ಥಳಾವಕಾಶವಿಲ್ಲ. ಅದನ್ನು ಇನ್ನೊಮ್ಮೆ ನೋಡೋಣ. ಸದ‌Âಕ್ಕೆ ಈ ಬಜೆಟ್ಟಿನ ಮಹಜರು ಈ ಕೆಳಗಿನಂತೆ ಸಂಕ್ಷಿಪ್ತವಾಗಿ: 

1 ಸ್ಟಾಂಡರ್ಡ್‌ ಡಿಡಕ್ಷನ್‌
ಸಂಬಳ ಪಡೆಯುವ ಉದ್ಯೋಗಿಗಳಿಗೆ ಹಾಗೂ ಪೆನ್ಶನ್‌ ಪಡೆಯುವ ನಿವೃತ್ತರು ಇನ್ನು ಮುಂದೆ ತಮ್ಮ ಸಂಬಳ/ಪೆನÒನ್‌ ಮೊತ್ತದಿಂದ ನೇರವಾಗಿ ರೂ 40,000ವನ್ನು ಸ್ಟಾಂಡರ್ಡ್‌ ಡಿಡಕ್ಷನ್‌ ಹೆಸರಿನಲ್ಲಿ ಕಳೆಯಬಹುದಾಗಿದೆ. ಆದರೆ ಈ ಬದಲಾವಣೆಯು ಮೇಲ್ನೋಟಕ್ಕೆ ಕಂಡಷ್ಟು ಆಕರ್ಷಕವಲ್ಲ. ಏಕೆಂದರೆ ಇದರೊಂದಿಗೆ ಈ ಮೊದಲು ಉದ್ಯೋಗಿಗಳಿಗೆ ಪ್ರಯಾಣ ವೆಚ್ಚದ ಮೇಲೆ ಸಿಗುತ್ತಿದ್ದ ವಾರ್ಷಿಕ ರೂ. 19,200 ಹಾಗೂ ಬಿಲ್‌ ತೋರಿಸಿ ವೈದ್ಯಕೀಯ ವೆಚ್ಚಕ್ಕೆ ಸಿಗುತ್ತಿದ್ದ ವಾರ್ಷಿಕ ರೂ. 15,000 (ಒಟ್ಟು ರೂ.34,200)ವಿನಾಯಿತಿ ಇನ್ನು ಮುಂದೆ ಇಲ್ಲವಾಗುತ್ತದೆ. ಅಂದರೆ ಈ ಮೊದಲು ರೂ. 34,200ರ ವಿನಾಯಿತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದವರಿಗೆ ಈಗಿನ ಒಟ್ಟಾರೆ ವಿನಾಯಿತಿ ರೂ. 5,800 ಮಾತ್ರ. (40000-34200). ಅಂತಿಮ ಲಾಭವು ಈ ಮೊತ್ತದ ಮೇಲೆ ಅವರು ಸ್ಲಾéಬ್‌ ಅನುಸಾರ ಕಟ್ಟಬೇಕಾದ ತೆರಿಗೆಯ ಮೊತ್ತದಷ್ಟು ಮಾತ್ರ ಅಂದರೆ ರೂ. 5,800ರ ಶೇ.5, ಶೇ.20 ಯಾ ಶೇ.30 ಮಾತ್ರ. ಆದರೆ ಹಲವಾರು ಸಂಸ್ಥೆಗಳಲ್ಲಿ ಪ್ರಯಾಣ ಭತ್ತೆ ಮತ್ತು ವೈದ್ಯಕೀಯ ಭತ್ತೆ ನೀಡುತ್ತಿರಲಿಲ್ಲ. ಅಲ್ಲದೆ ಹಲವಾರು ಜನರಿಗೆ ವೈದ್ಯಕೀಯದ ಖರ್ಚು ಬರುತ್ತಲೇ ಇರಲಿಲ್ಲ ಅಥವಾ ಭಾಗಶಃ ಬರುತ್ತಿತ್ತು. ಇನ್ನು ಮುಂದೆ ಎಲ್ಲ ಸಂದರ್ಭ ಗಳಲ್ಲಿಯೂ ಎಲ್ಲ ಉದ್ಯೋಗಿಗಳಿಗೂ ಪರ್ಯಾಯವಾಗಿ ಈ ರೂ. 40,000ದ ಲಾಭ ಸಿಕ್ಕಿಯೇ ಸಿಗುತ್ತದೆ. ಅಂತವರಿಗೆ ಇದು ಸಂತಸದ ವಿಷಯವೇ ಸರಿ. ಪೆನÒನ್‌ ಪಡೆಯುವವರಿಗೂ ಇದು ಲಾಭಕರ. 

2 ಸೆಸ್‌ ಏರಿಕೆ 
ಈ ಬಾರಿ ಆದಾಯ ತೆರಿಗೆಯ ಸ್ಲಾéಬ್‌ ಮತ್ತು ದರಗಳಲ್ಲಿ ಯಾವುದೇ ವ್ಯತ್ಯಾಸ ಮಾಡದಿದ್ದರೂ ಎಲ್ಲರಿಗೂ ಅನ್ವಯವಾಗು ವಂತೆ ಶೈಕ್ಷಣಿಕ ಸೆಸ್‌ ನಲ್ಲಿ ಶೇ.1 ಹೆಚ್ಚಳ ಮಾಡಿ¨ªಾರೆ. ಈ ವರೆಗೆ ಶೇ.3 ಇದ್ದ ಎಜುಕೇಶನ್‌ ಸೆಸ್‌ ಇನ್ನು ಮುಂದೆ ಶೇ.4 ಆಗಲಿದೆ. ಸೆಸ್‌ ಅಂದರೆ ತೆರಿಗೆಯ ಮೇಲೆ ಕಟ್ಟುವ ತೆರಿಗೆ. ತೆರಿಗೆ ಮೊತ್ತದ ಮೇಲೆ ಹೆಚ್ಚುವರಿ ಶೇ.4 ಸೆಸ್‌ ಸೇರಿಸಿ ಒಟ್ಟು ತೆರಿಗೆ ಕಟ್ಟಬೇಕು. (ತೆರಿಗೆ ರೂ.100 ಇದ್ದರೆ ಸೆಸ್‌ ಸೇರಿಸಿ ರೂ. 104 ಕಟ್ಟಬೇಕು. ಶೂನ್ಯ ತೆರಿಗೆಯವರಿಗೆ ಸೆಸ್‌ ಬರುವುದಿಲ್ಲ) ಆದಾಯ ಜಾಸ್ತಿ ಆದಂತೆÇÉಾ ಈ ಸೆಸ್‌ ಮೊತ್ತ ಮೇಲೆ ಹೇಳಿದ ಸ್ಟಾಂಡರ್ಡ್‌ ಡಿಡಕ್ಷನ್‌ ಲಾಭವನ್ನು ಕಮ್ಮಿ ಮಾಡುತ್ತಾ ಹೋಗುತ್ತದೆ. 

3 ಶೇರುಗಳ ಮೇಲಿನ ಶೇ.10 ತೆರಿಗೆ 
ಶೇರು ಮತ್ತು ಶೇರು ಪ್ರಾಧಾನ್ಯ ಮ್ಯೂಚುವಲ್‌ ಫ‌ಂಡುಗಳು (ಕನಿಷ್ಠ ಶೇ.65 ಶೇರುಗಳಲ್ಲಿ ಹೂಡಿಕೆಯುಳ್ಳವು) ಖಖಖ (STT (Securities Transaction Tax)ತೆತ್ತು ಮಾರಾಟವಾದಲ್ಲಿ ಅಲ್ಪಕಾಲಾವಧಿಗೆ ಲಾಭಾಂಶದ ಮೇಲೆ ಶೇ.15ಹಾಗೂ ದೀರ್ಘ‌ ಕಾಲಾವಧಿಗೆ ಶೂನ್ಯ ತೆರಿಗೆ ಈ ವರೆಗೆ ಇತ್ತು. ಹೂಡಿಕೆ ಮಾಡಿದ ದಿನದಿಂದ ಮಾರಾಟದ ದಿನದವರೆಗೆ 1 ವರ್ಷ ಅವಧಿಯು ಅಲ್ಪ ಹಾಗೂ 1 ವರ್ಷ ಮೀರಿದ ಅವಧಿಯು ದೀರ್ಘ‌ ಕಾಲಾವಧಿ ಎಂದು ಪರಿಗಣಿಸಲಾಗುತ್ತದೆ. ಈ ಬಜೆಟ್ಟಿನಲ್ಲಿ 1 ವರ್ಷ ಮೀರಿದ ದೀರ್ಘ‌ ಕಾಲಾವಧಿಯ ಹೂಡಿಕೆಯಲ್ಲಿ ಉಂಟಾದ ಲಾಭಾಂಶದ ಮೇಲೆ ವಾರ್ಷಿಕ ರೂ. 1 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಅದನ್ನು ಮೀರಿದ ಲಾಭಾಂಶದ ಮೇಲೆ ಶೇ.10 ತೆರಿಗೆ ಹಾಕುವ ಪ್ರಸ್ತಾಪ ಇಡಲಾಗಿದೆ. ಈ ಶೇ.10 ತೆರಿಗೆಯ ಲೆಕ್ಕಾಚಾರದಲ್ಲಿ ಯಾವುದೇ indexation benefit ನೀಡಲಾಗುವುದಿಲ್ಲ ಹಾಗೂ STT  ಸಹಿತ ಇನ್ನಾವುದೇ ವ್ಯಾವಹಾರಿಕಾ ವೆಚ್ಚ ಅಥವಾ ಅಭಿವೃದ್ಧಿ ವೆಚ್ಚಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ಅಷ್ಟೇ ಅಲ್ಲದೆ ಶೇರು ಪ್ರಾಧಾನ್ಯ ಮ್ಯೂಚುವಲ್‌ ಫ‌ಂಡುಗಳು ನೀಡುವ ಡಿವಿಡೆಂಡುಗಳ ಮೇಲೆ ಯಾವುದೇ ಈಈಖ (DDT (Dividend Distribution Tax)ಇರಲಿಲ್ಲ. ಇನ್ನು ಮುಂದೆ ಶೇ.10 ಈಈಖ ಮೂಲದಲ್ಲಿಯೇ ಕಡಿತವಾಗಿ ಉಳಿದ ಡಿವಿಡೆಂಡ್‌ ಮಾತ್ರ ನಿಮ್ಮ ಕೈಸೇರಲಿದೆ. ಈ ನಡೆ ಲಕ್ಷಾಂತರ ಶೇರುದಾರರಿಗೆ ನಿರಾಸೆಯನ್ನು ತಂದಿದೆ; ಮಾರುಕಟ್ಟೆ ಸ್ವಲ್ಪ ಕುಸಿದಿದೆ. 

ಈ ಹೊಸ ಶೇ.10 ತೆರಿಗೆ ಎ.1, 2018 ರ ಅನಂತರ ಮಾರಾಟ ವಾದ ಶೇರು/ಶೇರು ಪ್ರಾಧಾನ್ಯ ಮ್ಯೂಚುವಲ್‌ ಫ‌ಂಡುಗಳಿಗೆ ಮಾತ್ರ ಅನ್ವಯ. ಅದರ ಮೊದಲು ಮಾರಾಟವಾದವುಗಳ ಮೇಲೆ ಪ್ರಸ್ತುತ ಕಾನೂನಿನ ಪ್ರಕಾರ ಶೂನ್ಯ ತೆರಿಗೆಯ ಲಾಭ ಪಡೆಯಬಹುದು. ಎರಡನೆಯದಾಗಿ ಲಾಭಾಂಶ ನಿರ್ಣಯಕ್ಕೆ ಜ. 31, 2018 ರ ಮಾರುಕಟ್ಟೆ ಬೆಲೆ ಅಥವಾ ಮೂಲ ಹೂಡಿಕಾ ಬೆಲೆ ಎರಡರಲ್ಲಿ ಯಾವುದು ಜಾಸ್ತಿಯೋ ಅದನ್ನು ಹೂಡಿಕೆ ಎಂದು ಪರಿಗಣಿಸಲಾಗುವುದು. ಇದರಿಂದಾಗಿ ಈ ವರೆಗೆ ಮಾಡಿದ ಲಾಭಾಂಶ ಅಥವಾ ನಷ್ಟಾಂಶದ ಮೇಲೆ ತೆರಿಗೆ ಕಟ್ಟಬೇಕಾದ್ದುದಿಲ್ಲ. ಅಂದರೆ ಸಂಪೂರ್ಣವಾಗಿ ಈ ಕಾನೂನು ಈ ಕಾಲಘಟ್ಟದಿಂದಲೇ ಲಾಗೂ ಆಗುತ್ತದೆ. ಹಳೆ ಲೆಕ್ಕವನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. (ಈ ಜ.31ರ ಪ್ರಮೇಯ ಲಾಭಾಂಶ ನಿರ್ಣಯಕ್ಕೆ ಮಾತ್ರ. ಒಂದು ವರ್ಷದ ಹೂಡಿಕಾ ಅವಧಿಯ ನಿರ್ಣಯಕ್ಕೆ ನಿಜವಾದ ಹೂಡಿಕೆ ಮತ್ತು ಮಾರಾಟದ ತಾರೀಕುಗಳನ್ನೇ ತೆಗೆದುಕೊಳ್ಳಬೇಕು). ಈ ಬಗ್ಗೆ ಸಾಕಷ್ಟು ವಿರೋಧ/ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ಜೇಟಿÉಯವರು ಈ ಬಗ್ಗೆ ಸ್ವಲ್ಪ ಮೃದು ಧೋರಣೆ ತೋರಿಸಬಹು ದೇನೋ? ಕಾದು ನೋಡೋಣ.  

4 ಆರೋಗ್ಯ ವಿಮೆ
ಸುಮಾರು 10 ಕೋಟಿ ಬಡ ಕುಟುಂಬಗಳಿಗೆ ಅನ್ವಯವಾಗು ವಂತೆ ವಾರ್ಷಿಕ ರೂ. 5 ಲಕ್ಷ ಮೊತ್ತದ ಆರೋಗ್ಯ ವಿಮೆಯನ್ನು ಸರಕಾರವು ನೀಡುತ್ತದೆ. ಸದ‌Âಕ್ಕೆ ಇದರ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ. ಇದು ಅನುಷ್ಠಾನಕ್ಕೆ ಬಂದ ಮೇಲಷ್ಟೇ ವಿವರವಾಗಿ ಚರ್ಚೆ ಮಾಡಬಹುದು. ಆದರೆ ಇದು ಎÇÉಾ ನಾಗರಿಕರಿಗೂ ಸಿಗುವ ಸಂದರ್ಭವಿಲ್ಲ. ಇದಕ್ಕೆ ಆದಾಯ ಇತಿಮಿತಿಗಳು ಖಂಡಿತಾ ಇರುತ್ತವೆ. ಬಡವರ ಪಾಲಿಗೆ ಇದೊಂದು ವರದಾನವೇ ಸರಿ. ಒಂದು ಲ್ಯಾಂಡ್‌ ಮಾರ್ಕ್‌ ಯೋಜನೆ. 

5 ಇಪಿಎಫ್ ದೇಣಿಗೆ
ಇನ್ನು ಮುಂದೆ ಹೊಸದಾಗಿ ಕೆಲಸಕ್ಕೆ ಸೇರುವ ನೌಕರರ ಶೇ.12 ಇಪಿಎಫ್ ದೇಣಿಗೆಯನ್ನು ಮೊದಲ 3 ಸೇವಾ ವರ್ಷಗಳ ಕಾಲ ಸರಕಾರವೇ ಭರಿಸಲಿರುವುದು. ಮಹಿಳೆಯರಿಗೆ ಪ್ರಸ್ತುತ ಇರುವ ಉದ್ಯೋಗಿ ದೇಣಿಗೆಯನ್ನು ಶೇ.12ರಿಂದ ಶೇ.8ಕ್ಕೆ ಇಳಿಸಲಾಗಿದೆ. ಈ ಬಗ್ಗೆ ಜಾಸ್ತಿ ಮಾಹಿತಿ ಅಗತ್ಯವಿದೆ, ಆದರೆ ಸದ್ಯಕ್ಕೆ ಲಭ್ಯವಿಲ್ಲ. ವಿವರಗಳಿಗೆ ಕಾಯೋಣ. ಇದಕ್ಕೆ ಇತಿಮಿತಿಗಳು ಖಂಡಿತಾ ಇರುತ್ತವೆ. 

6 ಕರಮುಕ್ತ NPS ಹಿಂಪಡೆತ
ಈ ವರೆಗೆ ಎನ್‌.ಪಿ.ಎಸ್‌ ಖಾತೆಯಿಂದ ಅಂತಿಮವಾಗಿ ಹಿಂಪಡೆಯುವ ಶೇ.40 ಮೊತ್ತದ ಮೇಲೆ ನೀಡಲಾಗಿದ್ದ ಕರ ವಿನಾಯಿತಿಯು ಕೇವಲ ನೌಕರ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಇನ್ನು ಮುಂದೆ ಈ ಕರ ವಿನಾಯಿತಿಯು ಎÇÉಾ ಸಾರ್ವಜನಿಕರಿಗೂ ಅನ್ವಯವಾಗುತ್ತದೆ. ಇದೊಂದು ಉತ್ತಮ ಹೆಜ್ಜೆ. 

7. ಸಕಾಲಕ್ಕೆ ರಿಟರ್ನ್ಸ್ ಸಲ್ಲಿಕೆ 
ಎಪ್ರಿಲ್‌ನಿಂದ ಮಾರ್ಚ್‌ ವರೆಗಿನ ವಿತ್ತ ವರ್ಷದ ಆದಾಯ ಕರ ಸಲ್ಲಿಕೆಯನ್ನು (ರಿಟರ್ನ್ಸ್ ಫೈಲಿಂಗ್‌) ಮುಂದಿನ ಜು.31ರ ಒಳಗಾಗಿ ನೀಡಬೇಕು. ಆ ಬಳಿಕ ಬಡ್ಡಿ ದಂಡ ಆರಂಭವಾಗುತ್ತದೆ. ಹೇಗಾದರೂ ಮುಂದಿನ ಮಾರ್ಚ್‌ ಒಳಗಡೆ ಬಡ್ಡಿ/ದಂಡ ಸಹಿತ ಸಲ್ಲಿಕೆ ಮಾಡಲೇ ಬೇಕು. 

8. 54EC ಬಾಂಡುಗಳ ಅವಧಿ ಮತ್ತು ಲಕ್ಷ್ಯ
ಒಂದು ಕ್ಯಾಪಿಟಲ್‌ ಅಸೆಟ್‌ ಅನ್ನು ಮಾರಿದಾಗ ಬರುವ ಕ್ಯಾಪಿಟಲ್‌ ಗೈನ್ಸ್‌ ಲಾಭಾಂಶವನ್ನು ಮಾರಿದ ದಿನಾಂಕದಿಂದ 6 ತಿಂಗಳ ಒಳಗಾಗಿ NHAIA ಅಥವಾ REC ಬಾಂಡುಗಳಲ್ಲಿ 3 ವರ್ಷಗಳ ಅವಧಿಗೆ ಹೂಡಿದರೆ ಅಂತಹ ಲಾಭದ ಮೇಲೆ ಕ್ಯಾಪಿಟಲ್‌ ಗೈನ್ಸ್‌ ಕರ ವಿನಾಯಿತಿ ಸಿಗುವುದು ಎಲ್ಲರಿಗೂ ಗೊತ್ತಿರುವ ಅಂಶ. ಆದರೆ ಈಗ ಅಂದರೆ ಎ.1, 2018ರ ನಂತರ ಆ ಬಾಂಡುಗಳ ಹೂಡಿಕಾ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ಏರಿಸಲಾಗಿದೆ ಹಾಗೂ ಈ ಸೌಲಭ್ಯವನ್ನು ಭೂಮಿ ಮತ್ತು ಕಟ್ಟಡದ ಮಾರಾಟಕ್ಕೆ ಮಾತ್ರವೇ ಸೀಮಿತಪಡಿಸಲಾಗಿದೆ. ಚಿನ್ನ ಶೇರು ಇತ್ಯಾದಿ ಕಾಪಿಟಲ್‌ ಆಸ್ತಿಗಳಿಗೆ ಇರುವುದಿಲ್ಲ. 

9. ಹಿರಿಯ ನಾಗರಿಕರಿಗೆ
ಹಿರಿಯ ನಾಗರಿಕರಿಗೆ ಈ ಬಜೆಟ್ಟಿನಲ್ಲಿ ಸಾಕಷ್ಟು ರಿಯಾಯಿತಿ ನೀಡಲಾಗಿದೆ. ಇಡೀ ಬಜೆಟ್ಟಿನ ನಾಲ್ಕು ಪ್ರಮುಖ ನಿಗಾ ಕ್ಷೇತ್ರ
ಗಳಲ್ಲಿ ಹಿರಿಯ ನಾಗರಿಕರ ರಿಯಾಯಿತಿಯೂ ಒಂದು. ರಾಯರ ಸಂತಸ ಉಕ್ಕಿ ಹರಿಯಲು ಮೂಲ ಕಾರಣ ಇದೇ. 

ಮೆಡಿಕಲ್‌ ಇನುÏರೆನ್ಸ್‌ (ಸೆಕ್ಷನ್‌ 80ಡಿ)
ಇದು ಆರೋಗ್ಯ ವಿಮೆಗೆ ನೀಡುವ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ. 25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ. 25,000 ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. 60 ದಾಟಿದ ಹಿರಿಯ ನಾಗರಿಕರಿಗೆ ಈ ಮಿತಿ ರೂ. 30,000 ಆಗಿದೆ. ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ. 5,000ದ ಒಳಮಿತಿಯನ್ನು ಇದು ಹೊಂದಿರುತ್ತದೆ. (80 ವರ್ಷ ದಾಟಿದ ಅತಿ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಈ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿ ಸಬಹುದು). ಈ ಬಜೆಟ್ಟಿನಲ್ಲಿ ಹಿರಿಯ ನಾಗರಿಕರ ಮಿತಿಯನ್ನು ವಾರ್ಷಿಕ ರೂ.30,000ದಿಂದ ರೂ. 50,000ಕ್ಕೆ ಏರಿಸಲಾಗಿದೆ. ಕಟ್ಟಿದ ಪ್ರೀಮಿಯಂ ಒಂದಕ್ಕಿಂತ ಜಾಸ್ತಿ ವರ್ಷಗಳಿಗೆ ಅನ್ವಯಿಸು ವುದಿದ್ದಲ್ಲಿ ಪ್ರತಿ ವರ್ಷಕ್ಕೆ ಪ್ರೊ ರೇಟಾ ಪ್ರಕಾರ ಮಾತ್ರವೇ ಈ ಸೌಲಭ್ಯ ದೊರಕುತ್ತದೆ. 

ಗಂಭೀರ ಕಾಯಿಲೆಗಳ ಚಿಕಿತ್ಸೆ (ಸೆಕ್ಷನ್‌ 80ಡಿಡಿಬಿ)
ಸ್ವಂತ ಹಾಗೂ ಅವಲಂಬಿತರ ಕ್ಯಾನ್ಸರ್‌, ನ್ಯುರೋ, ಏಡ್ಸ್‌, ಥಲಸೇಮಿಯ, ರೀನಲ…, ಹೀಮೋಫಿಲಿಯಾ ಇತ್ಯಾದಿ ಕೆಲ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸ ಬಹುದು. 60 ದಾಟದ ಜನರಿಗೆ ಇದರ ಮೇಲಿನ ಮಿತಿ ರೂ. 40,000. ಆದರೆ 60 ದಾಟಿದ ವರಿಷ್ಠರಿಗೆ ಈ ಮಿತಿ ರೂ. 60,000 ಹಾಗೂ 80 ದಾಟಿದ ಅತಿ ವರಿಷ್ಠರಿಗೆ ಇದು ರೂ. 80,000. ಈ ಬಜೆಟ್ಟಿನಲ್ಲಿ 60 ದಾಟಿದ ಎÇÉಾ ನಾಗರಿಕರಿಕರಿಗೆ ಈ ಮಿತಿಯನ್ನು ರೂ. 1,00,000 ಲಕ್ಷಕ್ಕೆ ಏರಿಸಲಾಗಿದೆ. 

ಎಫ್.ಡಿ/ಆರ್‌.ಡಿ ಬಡ್ಡಿಗೆ ಕರವಿನಾಯಿತಿ
ಹಲವು ವರ್ಷಗಳಿಂದ ನಿವೃತ್ತ ಹಿರಿಯ ನಾಗರಿಕರ ಬೇಡಿಕೆ ಇದಾಗಿತ್ತು. ಇಳಿ ವಯಸ್ಸಿನಲ್ಲಿ ಹೆಚ್ಚಿನವರು ಹೂಡಿಕೆಗೆ ಎಫ್.ಡಿ.ಗಳನ್ನು ಮಾತ್ರವೇ ನಂಬಿರುತ್ತಾರೆ, ಹೆಚ್ಚು ರಿಸ್ಕ್ ತೆಗೆದುಕೊಳ್ಳಲಿಕ್ಕೆ ಹೋಗುವುದಿಲ್ಲ. ಆದರೆ ಎಫ್.ಡಿ. ಮೇಲಿನ ಬಡ್ಡಿಯ ಪ್ರತಿ ಪೈಸೆಯೂ ಕರಾರ್ಹವಾಗಿತು, ಯಾವುದೇ ರಿಯಾಯಿತಿ ಇಲ್ಲದೆ. ಸೆಕ್ಷನ್‌ 80TTA ಅನುಸಾರ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಕೇವಲ ಎಸಿº ಖಾತೆಯಲ್ಲಿ ಬರುವ ಬಡ್ಡಿಗೆ ರೂ. 10,000ದ ವರೆಗೆ ಬಡ್ಡಿಯ ಮೊತ್ತದಲ್ಲಿ ಕರ ವಿನಾಯಿತಿ ಇದೆ. ಆದರೆ ಈ ಬಜೆಟ್ಟಿನಲ್ಲಿ ಕೇವಲ ಹಿರಿಯ ನಾಗರಿಕರಿಗೆ ಮಾತ್ರವೇ (ಎಲ್ಲರಿಗೂ ಅಲ್ಲ) ಅನ್ವಯಿಸುವಂತೆ ಒಂದು ಹೊಸ ಸೆಕ್ಷನ್‌ 80TTA ಅನುಸಾರ ರೂ. 50,000ದ ವರೆಗೆ ಬ್ಯಾಂಕ್‌ ಬಡ್ಡಿಯ ಮೇಲೆ ಕರ ವಿನಾಯಿತಿ ನೀಡಲಾಗಿದೆ. ಹಿರಿಯ ನಾಗರಿಕರಿಗೆ ಇನ್ನು ಮುಂದೆ 80TTA ಅನ್ವಯವಾಗುವುದಿಲ್ಲ. ಈ ರೂ. 50,000 ದಲ್ಲಿ ಎಸ್‌.ಬಿ ಬಡ್ಡಿಯ ಜೊತೆಗೆ ಎಫಿx ಮತ್ತು ಆರ್‌.ಡಿ. ಗಳ ಬಡ್ಡಿಯನ್ನೂ ಇದೀಗ ಸೇರಿಸಬಹುದಾಗಿದೆ. ಅಲ್ಲದೆ ಈ ವರ್ಗದ ಬಡ್ಡಿ ಆದಾಯದ ಮೇಲೆ ರೂ. 50,000 ವರೆಗೆ ಟಿಡಿಎಸ್‌ ಕಡಿತವೂ ಇರುವುದಿಲ್ಲ. ಇದರೊಂದಿಗೆ ಹಿರಿಯ ನಾಗರಿಕರ ಬಹುದಿನದ ಹಂಬಲ ಕೊಂಚ ಮಟ್ಟಿಗಾದರೂ ಈಡೇರಿತು ಅಂದುಕೊಳ್ಳಬಹುದು. 

ಪ್ರಧಾನ ಮಂತ್ರಿ ವಯ ವಂದನ ಯೋಜನಾ (PMVVY)
ಹಿರಿಯ ನಾಗರಿಕರಿಗಾಗಿ ಹಿಂದೊಮ್ಮೆ ವರಿಷ್ಟ ಪೆನÒನ್‌ ಯೋಜನಾ ಎಂಬ ಹೆಸರಿನಲ್ಲಿ ಜನ್ಮವೆತ್ತಿದ ಈ ಯೋಜನೆಗೆ ಕಳೆದ ವರ್ಷ ಪ್ರಧಾನ ಮಂತ್ರಿ ವಯ ವಂದನ ಯೋಜನಾ ಎಂಬ ಹೊಸ ಹೆಸರಿನಲ್ಲಿ ಪುನರ್ಜನ್ಮ ನೀಡಿದ ಸರಕಾರ ಇದೀಗ ಆ ಯೋಜನೆಯನ್ನು 2020 ಇಸವಿಯವರೆಗೆ ಜಾರಿಯಲ್ಲಿಡುತ್ತಿದೆ. ಶೇ.8 ಬಡ್ಡಿ ನೀಡುವ ಈ ಯೋಜನೆಯು ಎಲ್‌ಐಸಿಯ ಮೂಲಕ ಬಿಕರಿಯಾಗುತ್ತಿದೆ. ಈ ವರೆಗೆ ಇದ್ದ ತಲಾ ರೂ. 7.5 ಲಕ್ಷದ ಹೂಡಿಕಾ ಮಿತಿಯನ್ನು ತಲಾ ರೂ. 15 ಲಕ್ಷಕ್ಕೆ ಏರಿಸಲಾಗಿದೆ. 60 ದಾಟಿದ ಎÇÉಾ ಹಿರಿಯ ನಾಗರಿಕರು ಈ ಯೋಜನೆಯ ಫಾಯಿದಾ ತೆಗೆದುಕೊಳ್ಳಬಹುದು.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.