ಇಂದ ಕಾಲತ್ತಿಲೂ ಶೇ. 8.1 ನೀಡುವ ಸುಕನ್ಯಾ ಸಮೃದ್ಧಿ 


Team Udayavani, Sep 3, 2018, 9:14 PM IST

sukanya-samriddhi-yojana.jpg

ಸುಕನ್ಯಾ ಸಮೃದ್ಧಿ ಎನ್ನುವುದು ಒಂದು ಅಂಚೆ ಇಲಾಖೆ ಮಾದರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಆಯ್ದ ಪೋಸ್ಟ್‌ ಆಫೀಸು ಮತ್ತು ಸರಕಾರಿ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯಬಹುದು. ಈ ಖಾತೆಯನ್ನು ಪಾಲಕರು ತೆರೆಯಬಹುದು. ಹೆತ್ತವರು ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದು. 

ಬ್ಯಾಂಕಿಗಿಂತ ಜಾಸ್ತಿ ಬಡ್ಡಿ ಪಡೆಯುವ ಪರಿ ಯಾವುದಯ್ನಾ ಎನ್ನುವ ಪ್ರಶ್ನೆ ಇತ್ತೀಚೆಗೆ ಎಲ್ಲರೂ ಕೇಳಲು ಆರಂಭಿಸಿದ್ದಾರೆ. ಕೇವಲ ಶೇ.6.5-ಶೇ.7.0 ಬಡ್ಡಿ ಸಿಗುವ ಎಫಿxಗಳ ಇಂದ ಕಾಲತ್ತಿಲೂ ಶೇಕಡಾ ಎಂಟು ಮೀರುವ ಬಡ್ಡಿ ನೀಡುವ ಕೆಲ ವಿಶಿಷ್ಟ ಯೋಜನೆಗಳು ಭರತ ಖಂಡದಲ್ಲಿ ಅಸ್ತಿತ್ವದಲ್ಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಪೋಸ್ಟಾಫೀಸಿನ ಕೆಲ ವಿಶೇಷ ಯೋಜನೆಗಳು ಬ್ಯಾಂಕು ಎಫಿxಗಳಿಂದ ಜಾಸ್ತಿ ಆಕರ್ಷಕವಾಗಿವೆ.
 
ಮೋದಿ ಸರಕಾರದ ಅಶೋತ್ತರಗಳಲ್ಲಿ ಒಂದಾದ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ಅಂಗವಾಗಿ ಕೆಂದ್ರ ಸರಕಾರವು ಮೈನರ್‌ ಹೆಣ್ಣುಮಕ್ಕಳಿಗಾಗಿಯೇ ವಿಶೇಷವಾಗಿ ಆಯೋಜಿಸಿದ “ಸುಕನ್ಯಾ ಸಮೃದ್ಧಿ’ ಯೋಜನೆಯನ್ನು 2 ಡಿಸೆಂಬರ್‌ 2014 ರಂದು ಬಿಡುಗಡೆ ಮಾಡಿದೆ. ಈ ಯೋಜನೆಯು 2016, ಮೇ 18ರ ಗಜೆಟ್‌ ಪ್ರಕಟನೆಯ ಮೂಲಕ ಕೆಲವು ಮುಖ್ಯ ಬದಲಾವಣೆಗಳನ್ನು ಕಂಡಿದೆ. ಆ ಬಳಿಕ ಇದೀಗ 2018ರ ಅಮೆಂಡೆ¾ಂಟ್‌ ಅನುಸಾರ ಇನ್ನಷ್ಟು ಸುಧಾರಣೆ ಕಂಡಿದೆ. ಈ ಎಲ್ಲಾ ಬದಲಾವಣೆಗಳನ್ನು ಒಳಗೊಂಡಂತೆ ಸ್ಕೀಮಿನ ಕೆಲ ವಿವರಗಳು ಈ ಕೆಳಗಿನಂತಿವೆ: 
ಸುಕನ್ಯಾ ಸಮೃದ್ಧಿ ಎನ್ನುವುದು ಒಂದು ಅಂಚೆ ಇಲಾಖೆ ಮಾದರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು ಆಯ್ದ ಪೋಸ್ಟ್‌ ಆಫೀಸು ಮತ್ತು ಸರಕಾರಿ ಬ್ಯಾಂಕುಗಳಲ್ಲಿ ಇದರ ಖಾತೆಗಳನ್ನು ತೆರೆಯಬಹುದಾಗಿದೆ. ಈ ಖಾತೆಯನ್ನು ಹೆತ್ತವರು ಅಥವಾ ರಕ್ಷಕರು ತೆರೆಯಬಹುದು. ಹೆತ್ತವರು/ರಕ್ಷಕರು ಕೇವಲ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದು. ಆದರೆ ಅವಳಿ/ತ್ರಿವಳಿ ಹೆರಿಗೆಯಾಗಿದ್ದಲ್ಲಿ ಮೂರನೆಯ ಹೆಣ್ಣು ಮಗುವಿಗೂ ಖಾತೆ ತೆರೆಯಬಹುದು. ಒಂದು ಹೆಣ್ಣು ಮಗುವಿನ ಮೇಲೆ ದೇಶದಾದ್ಯಂತ ಒಂದು ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ. ಈ ಖಾತೆಯನ್ನು ಬ್ಯಾಂಕಿನಿಂದ ಪೋಸ್ಟಾಫೀಸಿಗೂ ಹಾಗೂ ತದ್ವಿರುದ್ಧ ಗತಿಯಲ್ಲೂ ಯಾವುದೇ ಶುಲ್ಕವಿಲ್ಲದೆ ವರ್ಗಾಯಿಸಬಹುದಾಗಿದೆ.

ವಯೋ ಮಿತಿ 
ಖಾತೆ ತೆರೆಯುವಾಗ ಹೆಣ್ಣು ಮಗುವಿಗೆ 10 ವರ್ಷ ವಯಸ್ಸು ಮೀರಿರಬಾರದು. ಆದರೆ ಸ್ಕೀಮು ಆರಂಭದ (2.12.2014) ವರ್ಷ ಮಾತ್ರವೇ ಹಿಂದಿನ 1 ವರ್ಷದಲ್ಲಿ 10 ತುಂಬಿದವರಿಗೂ ವಿಶೇಷ ರಿಯಾಯಿತಿಯಾಗಿ ಈ ಖಾತೆಯನ್ನು ತೆರೆಯುವ ಅನುಮತಿ ನೀಡಲಾಗಿತ್ತು. ಅಂದರೆ 2 ಡಿಸೆಂಬರ್‌ 2013 ರಿಂದ 1 ಡಿಸೆಂಬರ್‌ 2014ರಲ್ಲಿ 10 ತುಂಬಿದವರು. ಆದರೆ ಈಗ ಆ ರಿಯಾಯಿತಿ ಇಲ್ಲ.

ನಿವಾಸ/ಪೌರತ್ವ 
ಭಾರತೀಯ ನಿವಾಸಿ ಹಾಗೂ ಪೌರತ್ವಕ್ಕೆ ಮಾತ್ರ ಅನ್ವಯವಾಗುವ ಈ ಖಾತೆಯನ್ನು ಬೇರೆ ದೇಶದ ನಿವಾಸಿ/ಪೌರತ್ವ ಪಡೆದೊಡೆ ಒಂದು ತಿಂಗಳ ಒಳಗಾಗಿ ಮುಚ್ಚಬೇಕು. ಮುಚ್ಚದಿದ್ದಲ್ಲಿ ಖಾತೆಯಲ್ಲಿನ ಮೊತ್ತದ ಮೇಲೆ ಬಡ್ಡಿ ಸಿಗಲಾರದು. 

ಖಾತೆ ಚಲಾವಣೆ 
ಈ ಖಾತೆಯನ್ನು ಹೆತ್ತವರು/ರಕ್ಷಕರು ಅಥವಾ 10 ವರ್ಷ ತುಂಬಿದ ನಂತರ ಹೆಣ್ಣು ಮಗು ಸ್ವತಃ ಚಲಾಯಿಸಬಹುದಾಗಿದೆ. 18 ತುಂಬಿದ ನಂತರ ಸ್ವತಃ ಹೆಣ್ಣು ಮಗು ಮಾತ್ರವೇ ಇದನ್ನು ಚಲಾಯಿಸಬೇಕಾಗಿದೆ. ಇದಕ್ಕಾಗಿ ಒಂದು ಪಾಸ್‌ಬುಕ್‌ ನೀಡಲಾಗುತ್ತದೆ. 

ಖಾತೆಯ ಅವಧಿ 
ಈ ಖಾತೆಯ ಒಟ್ಟು ಅವಧಿ 21 ವರ್ಷ, ಅಂದರೆ ಖಾತೆ ತೆರೆದ ದಿನಾಂಕದಿಂದ 21 ವರ್ಷಗಳವರೆಗೆ. ಅವಧಿ 21 ವರ್ಷಗಳಾದರೂ ಕಂತು ಕಟ್ಟುವ ಅವಧಿ ಕೇವಲ 15 (ಮೊದಲು 14 ಇತ್ತು) ವರ್ಷಗಳು ಮಾತ್ರ. 21 ವರ್ಷಗಳ ಬಳಿಕ ಖಾತೆಯ ಮೇಲೆ ಯಾವುದೇ ಬಡ್ಡಿ ಸಿಗಲಾರದು. (ಮೊದಲು ಖಾತೆಯನ್ನು ಮುಂದುವರಿಸಬಹುದಿತ್ತು; ಹಾಗೂ ಬಡ್ಡಿ ಸಿಗುತ್ತಲಿತ್ತು. ಆದರೀಗ ಆ ಸೌಲಭ್ಯವಿಲ್ಲ) 

ಕಂತು 
ಕನಿಷ್ಠ ರೂ. 250ದೊಂದಿಗೆ (ಮೊದಲು ರೂ. 1000 ಇತ್ತು) ಈ ಖಾತೆಯ ಆರಂಭ ಮಾಡಬಹುದು. ಆ ಬಳಿಕ ವಾರ್ಷಿಕ ಗರಿಷ್ಠ ರೂ. 1,50,000ವನ್ನು ಈ ಖಾತೆಗೆ ಕಟ್ಟಬಹುದು. ಗರಿಷ್ಟ ಮಿತಿಯನ್ನು ಮೀರಿ ಠೇವಣಿ ಮಾಡಿದರೆ ಆ ಹೆಚ್ಚುವರಿ ಮೊತ್ತದ ಮೇಲೆ ಬಡ್ಡಿ ಸಿಗಲಾರದು; ಅಲ್ಲದೆ ಆ ಹೆಚ್ಚುವರಿ ಮೊತ್ತವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದಾಗಿದೆ. ಈ ಖಾತೆಗೆ ವಾರ್ಷಿಕ ಕನಿಷ್ಠ ಠೇವಣಿಯ ಮಿತಿ ರೂ. 250 (ಈ ಮೊದಲು ರೂ. 1000 ಆಗಿತ್ತು) ಯಾವುದೇ ವರ್ಷ ಈ ಕನಿಷ್ಠ ಠೇವಣಿಯನ್ನು ಕಟ್ಟದೇ ಇದ್ದಲ್ಲಿ ಅದನ್ನು ವಾರ್ಷಿಕ ರೂ. 50ರ ತಪ್ಪು ದಂಡದೊಂದಿಗೆ ಆ ಬಳಿಕ ಕಟ್ಟತಕ್ಕದ್ದು. ಒಂದು ವೇಳೆ ಖಾತೆಯ ಆರಂಭದಿಂದ 15 ವರ್ಷಗಳ ಅವಧಿಯವರೆಗೂ ಈ ರೀತಿ ತಪ್ಪು ದಂಡ ಕಟ್ಟಿ ಒಂದು ನಿಷ್ಕ್ರಿಯ ಖಾತೆಯನ್ನು ಊರ್ಜಿತಗೊಳಿಸದಿದ್ದಲ್ಲಿ ಆ ಖಾತೆಯಲ್ಲಿ ಆರಂಭದಿಂದ ಮಾಡಿದ ಎಲ್ಲಾ ಠೇವಣಿಗಳ ಮೇಲೂ ಎಸ್‌.ಬಿ. ಖಾತೆಯ ಬಡ್ಡಿ ದರ ಮಾತ್ರವೇ ಸಿಕ್ಕೀತು. 

ಇದೊಂದು ಕರಾಳ ಕಾಯಿದೆ. ಈ ಕಾಯಿದೆಯ ಪ್ರಕಾರ ಒಮ್ಮೆ ತೆರೆದ ಸುಕನ್ಯಾ ಸಮೃದ್ಧಿ ಖಾತೆಯನ್ನು ಮಧ್ಯದಲ್ಲಿ ಶಾಶ್ವತವಾಗಿ ಕೈಬಿಡಬಾರದು. ಒಂದೊಮ್ಮೆ ಕಂತು ಕಟ್ಟುವುದು ಬಿಟ್ಟು ಹೋದರೂ ಅದನ್ನು ಕೂಡಲೇ ತಪ್ಪುದಂಡ ಕಟ್ಟಿ ಜೀವಂತವಾಗಿಸಿ ಇಟ್ಟುಕೊಳ್ಳಬೇಕು. (ಇಂತಹ ಕಾಯಿದೆ ಪೋಸ್ಟಾಫೀಸಿನ ಬಾಕಿ ಕೆಲ ಖಾತೆಗಳಲ್ಲೂ ಇದೆ) ಈ ಕಾಯಿದೆಗೆ ಅಪವಾದವೆಂದರೆ ಮಗುವಿನ ಹೆತ್ತವರ/ರಕ್ಷಕರ ಮೃತ್ಯು ಸಂಭವಿಸಿದ ಸಂದರ್ಭದಲ್ಲಿ (ಮಾತ್ರ) ಖಾತೆಯು ಮಧ್ಯದಲ್ಲಿ ಶಾಶ್ವತವಾಗಿ ನಿಷ್ಕ್ರಿಯವಾದರೂ ಮಾಮೂಲಿ ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ವರ್ಷಕ್ಕೆ ಎಷ್ಟು ಬಾರಿಯಾದರೂ ಯಾವಾಗಲಾದರೂ ಕಂತು ಕಟ್ಟಬಹುದು. ಆದರೆ ಒಂದು ಕಂತಿನ ಕನಿಷ್ಠ ಮಿತಿ ರೂ. 100 ಆಗಿರಬೇಕು.
 
ಪಾವತಿ 
ಆರಂಭದಲ್ಲಿ ನಗದು, ಚೆಕ್‌ ಅಥವಾ ಡಿಡಿ ಮೂಲಕ ಮಾತ್ರ ಸಾಧ್ಯವಿದ್ದ ಪಾವತಿ ಈಗ ವಿದ್ಯುನ್ಮಾನ ಪಾವತಿಯ ಮೂಲಕವೂ ಸಾಧ್ಯವಾಗಿದೆ.
 
ದಾಖಲೆಗಳು 
ಈ ಖಾತೆಯನ್ನು ತೆರೆಯಲು ಮಗುವಿನ ಜನ್ಮ ಪತ್ರ, ಹೆತ್ತವರ ವಿಳಾಸ ಮತ್ತು ಗುರುತು ಪುರಾವೆ, ಪ್ಯಾನ್‌ ಇತ್ಯಾದಿ ಅಗತ್ಯ. ಮಗು 18 ತುಂಬಿದ ಬಳಿಕ ಅವಳ ದಾಖಲೆಗಳೂ ಅಗತ್ಯ. 

ಬಡ್ಡಿ ದರ 
ಅಂಚೆಯ ಸಣ್ಣ ಉಳಿತಾಯದಲ್ಲಿ ಪ್ರತಿ ತ್ತೈಮಾಸಿಕ ಅವಧಿಗೆ ಬಡ್ಡಿ ದರಗಳನ್ನು ಪೂರ್ವಭಾವಿಯಾಗಿ ಘೋಷಿಸುವ ಕಾನೂನು ಬಂದಿದೆ. ಹಾಗೆಯೇ ಈ ಸ್ಕೀಮಿನ ಬಡ್ಡಿ ದರವೂ ಪ್ರತಿ ತ್ತೈಮಾಸಿಕ ವರ್ಷ ಬದಲಾಗುತ್ತದೆ. ಸದ್ಯಕ್ಕೆ 2018, ಜ.1ರ ಬಳಿಕ ಇದರ ಘೋಷಿತ ವಾರ್ಷಿಕ ಬಡ್ಡಿದರ ಶೇ. 8.1. ಇದು ಪಿಪಿಎಫ್ (ಶೇ.7.6) 5 ವರ್ಷದ ಎನ್‌ಎಸ್‌ಸಿ (ಶೇ.7.6) ಹಾಗೂ ಎಮ…ಐಡಎಸ್‌ (ಶೇ.7.3)ಗಳಿಗಿಂತ ಜಾಸ್ತಿ. ಸೀನಿಯರ್‌ ಸಿಟಿಜನ್‌ ಸ್ಕೀಮಿನಲ್ಲಿ ಮಾತ್ರ ಅಂಚೆ ಇಲಾಖೆ ಶೇ. 8.3 ಬಡ್ಡಿ ದರ ನೀಡುತ್ತದೆ. ಪ್ರತಿ ತ್ತೈಮಾಸಿಕ ಘೋಷಿತವಾದ ಬಡ್ಡಿದರ ಆ ತ್ತೈಮಾಸಿಕಕ್ಕೆ ಮಾತ್ರವೇ ಅನ್ವಯವಾಗುತ್ತದೆ. ಮುಂದಿನ ತ್ತೈಮಾಸಿಕಕ್ಕೆ ಪುನಃ ಹೊಸ ಬಡ್ಡಿದರ. ಆದರೆ ಈ ತ್ತೈಮಾಸಿಕವಾಗಿ ಅನ್ವಯವಾಗುವ ಬಡ್ಡಿಯನ್ನು ವಾರ್ಷಿಕವಾಗಿ ವರ್ಷಾಂತ್ಯದಲ್ಲಿ (ಮಾರ್ಚ್‌ 31) ಮಾತ್ರವೇ ಕ್ರೆಡಿಟ್‌ ಮಾಡಲಾಗುತ್ತದೆ ಮತ್ತದು ವಾರ್ಷಿಕವಾಗಿಯೇ ಚಕ್ರೀಕೃತಗೊಳ್ಳುತ್ತದೆ. ಪ್ರತಿ ತಿಂಗಳ 10ನೆಯ ತಾರೀಕಿನ ಹಾಗೂ ಮಾಸಾಂತ್ಯದ ನಡುವಿನ ಕನಿಷ್ಟ ಬ್ಯಾಲೆನ್ಸ್‌ ಮೊತ್ತದ ಮೇಲೆ ಆ ತಿಂಗಳಿನ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ. 

ಅವಧಿಪೂರ್ವ ಹಿಂಪಡೆತ 
ಪಿಪಿಎಫ್ ಖಾತೆಯಂತೆಯೇ ಇಲ್ಲೂ ಅವಧಿಪೂರ್ವ ಹಿಂಪಡೆತ ಮಾಡಬಹುದಾಗಿದೆ. ಖಾತೆದಾರಳ ಉಚ್ಚ ಶಿಕ್ಷಣದ ಸಂದರ್ಭದಲ್ಲಿ ನಿಮಿತ್ತ ಖಾತೆಯಲ್ಲಿ ಹಿಂದಿನ ವರ್ಷಾಂತ್ಯದಲ್ಲಿದ್ದ ಮೊತ್ತದ ಶೇ.50 ಭಾಗವನ್ನು ಹಿಂಪಡೆಯಬಹುದಾಗಿದೆ. ಆದರೆ ಇದಕ್ಕಾಗಿ ಅವಳಿಗೆ 18 ತುಂಬಿರಬೇಕಾದುದು ಅವಶ್ಯ ಅಥವಾ ಹತ್ತನೆಯ ತರಗತಿ ತೇರ್ಗಡೆ ಆಗಿರಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ವಿದ್ಯಾಭ್ಯಾಸ ಹಾಗೂ ಫೀಸಿನ ಸಂಪೂರ್ಣ ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಒಂದೇ ಏಟಿಗೆ ಅಥವಾ 5 ಕಂತುಗಳಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಇದರಲ್ಲಿ ಪಿಪಿಎಫ್ನಂತೆ ಸಾಲ ಸೌಲಭ್ಯ ಇಲ್ಲ.

ಅವಧಿಪೂರ್ವ ಮುಕ್ತಾಯ
18 ತುಂಬಿ ಮದುವೆ ಆಗುವ ಸಂದರ್ಭದಲ್ಲಿ ಮಾತ್ರ ಈ ಖಾತೆಯನ್ನು ಅವಧಿಪೂರ್ವ ಮುಕ್ತಾಯಗೊಳಿಸಿ ಸಂಪೂರ್ಣ ದುಡ್ಡನ್ನು ವಾಪಾಸು ಪಡಕೊಳ್ಳಲು ಬರುತ್ತದೆ. ಮದುವೆಯ 1 ತಿಂಗಳು ಮೊದಲು ಅಥವಾ 3 ತಿಂಗಳು ನಂತರದ ಅವಧಿಯೊಳಗೆ ಈ ಮುಕ್ತಾಯ ನಡೆಯತಕ್ಕದ್ದು. ಈ ಮೊದಲು ಮದುವೆಯ ಕಾರಣಕ್ಕ ಶೇ.50 ಹಿಂಪಡೆತ ಸೌಲಭ್ಯ ಮಾತ್ರ ಇದ್ದಿದ್ದು. ಈಗ ಶೇ.100 ಮುಕ್ತಾಯದ ಸೌಲಭ್ಯವನ್ನು ನೀಡಲಾಗಿದೆ. ಅವಧಿ ಪೂರ್ವ ಮುಕ್ತಾಯ ಖಾತೆದಾರಳ ಮೃತ್ಯು ಸಂಭವಿಸಿದಾಗಲೂ ಮಾಡಬೇಕು. 

ಕರ ವಿನಾಯಿತಿ
ಈ ಯೋಜನೆಗೆ ಸೆಕ್ಷನ್‌ 80ಸಿ ಅಡಿಯಲ್ಲಿ ಕರ ವಿನಾಯಿತಿಯನ್ನು ಘೋಷಿಸಲಾಗಿದೆ. ಅಂದರೆ ಪಿಪಿಎಫ್, ವಿಮೆ, 5 ವರ್ಷದ ಬ್ಯಾಂಕ್‌ ಎಫಿx , ಎನ್‌ಎಸ್‌ಸಿ ಇತ್ಯಾದಿ ಯೋಜನೆಗಳ ಒಟ್ಟಾರೆ ಮಿತಿ ರೂ. 1,50,000ದ ಒಳಗೆ ಇದನ್ನೂ ಸೇರಿಸಿಕೊಳ್ಳಲಾಗಿದೆ.ಅದಲ್ಲದೆ, ಪಕ್ಕಾ ಪಿಪಿಎಫ್ ಶೈಲಿಯಲ್ಲಿಯೇ ಇದರಲ್ಲಿ ಬರುವ ಬಡ್ಡಿಯ ಮೇಲೂ ಕೂಡಾ ಯಾವುದೇ ರೀತಿಯ ಕರ ಇರುವುದಿಲ್ಲ. ಅಂದರೆ ಪ್ರತಿ ವರ್ಷ ಖಾತೆಗೆ ಸೇರಿಸಲ್ಪಡುವ ಬಡ್ಡಿಯ ಮೇಲಾಗಲಿ ಅಥವಾ ಮೆಚೂÂರಿಟಿಯ ಸಂದರ್ಭದಲ್ಲಿ ಹಿಂಪಡೆಯುವ ಮೊತ್ತಕ್ಕಾಗಲಿ ಯಾವುದೇ ರೀತಿಯ ಆದಾಯ ಕರ ಇರುವುದಿಲ್ಲ.ಇದೊಂದು ಉxಛಿಞಟಠಿ ಉxಛಿಞಟಠಿ ಉxಛಿಞಟಠಿ ಮಾದರಿಯ ಮೂರೂ ಹಂತಗಳಲ್ಲಿ ಕರ ವಿನಾಯಿತಿ ನೀಡುವ ಕಾಮಧೇನು. 

ವಿಶ್ಲೇಷಣೆ
ಇದು ಹೆಣ್ಣು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ರೂಪಿಸಲ್ಪಟ್ಟ ಒಂದು ವಿಶಿಷ್ಟ ಯೋಜನೆ. ಉನ್ನತ ವಿದ್ಯಾಭ್ಯಾಸ ಮತ್ತು ಮದುವೆಯ ಸಂದರ್ಭಗಳಲ್ಲಿ ಆರ್ಥಿಕವಾಗಿ ನೆರವಾಗುವಂತಹ ಒಂದು ಯೋಜನೆ. ಅವಧಿಯ ದೃಷ್ಟಿಯಿಂದಲೂ ದೀರ್ಘ‌ಕಾಲಕ್ಕೆ ಧನ ಸಂಚಯ ಮಾಡುವಂತಹ ಯೋಜನೆ. ಬಡ್ಡಿ ದರವೂ ಅತ್ಯುತ್ತಮವಾಗಿದೆ. ಪಿಪಿಎಫ್ ಖಾತೆಗಿಂತಲೂ ಜಾಸ್ತಿ ಬಡ್ಡಿ ನೀಡುವುದು ಇದರ ವಿಶೇಷತೆ. ವಾರ್ಷಿಕ ಶೇ.8.1 ಬಡ್ಡಿ ಇನ್ನಾವ ಸಾಧಾರಣ ಖಾತೆಗಳಲ್ಲೂ ಲಭ್ಯವಿಲ್ಲ. (ಸೀನಿಯರ್‌ ಸಿಟಿಜನ್‌ ಖಾತೆಯಲ್ಲಿ ಮಾತ್ರ ಶೇ.8.3 ದೊರಕುತ್ತದೆ) ಈ ನಿಟ್ಟಿನಲ್ಲಿ ಸರಕಾರ ಉತ್ತಮ ಯೋಜನೆಯನ್ನೇ ಹಾಕಿಕೊಂಡಿದೆ. 

ಒಟ್ಟಿನಲ್ಲಿ 10 ವರ್ಷದ ಒಳಗಿನ ವಯಸ್ಸಿನ ಹೆಣ್ಣು ಮಕ್ಕಳಿರುವವರಿಗೆ ಸುಕನ್ಯಾ ಸಮೃದ್ಧಿ ಒಂದು ವರದಾನವೇ ಸರಿ. ಹೆಣ್ಣು ಮಕ್ಕಳು ಇರುವವರು ಈ ನಿಟ್ಟಿನಲ್ಲಿ ಯೋಚಿಸುವುದು ಉತ್ತಮ. ಹೆಣ್ಣು ಮಕ್ಕಳು ಇಲ್ಲದವರು ಕೂಡಾ ಆ ನಿಟ್ಟಿನಲ್ಲಿ ಯೋಚಿಸುವುದು ಉತ್ತಮ!!

ಟಾಪ್ ನ್ಯೂಸ್

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.