ಕುಡಿದು ವಾಹನ ಚಾಲನೆ ಪ್ರಮಾಣ ಇಳಿದಿದೆ


Team Udayavani, Jan 10, 2019, 5:53 AM IST

drive.jpg

ಹೊಸ ವರುಷದ ಆಚರಣೆಯಲ್ಲಿ ಮೋಜು ಮಸ್ತಿ ಸಾಮಾನ್ಯ. ಆಲ್ಕೋಹಾಲ್‌ ಸೇವಿಸಿ ಹೊಸ ವರ್ಷದ ರಾತ್ರಿ ವಾಹನ ಚಲಾಯಿಸಿ ಪೊಲೀಸ್‌ ಕೇಸು ಬಿಗಿಸಿಕೊಳ್ಳುವುದು ಪ್ರತೀ ವರ್ಷದ ವಿದ್ಯ ಮಾನ. ಅಪಘಾತ, ಸಾವುನೋವು ಕೂಡ ನಡೆಯುತ್ತವೆ. ಆದರೆ ವರ್ಷದಿಂದ ವರ್ಷಕ್ಕೆ ಇದು ಕಡಿಮೆ ಯಾಗುತ್ತಿದೆಯೇ?

ಹೌದು ಎನ್ನುವ ಆಶಾದಾಯಕ ಬೆಳವಣಿಗೆ ಈ ವರ್ಷದ ಮತ್ತು ಕಳೆದ ವರ್ಷದ ಅಂಕಿ ಅಂಶಗಳನ್ನು ಗಮನಿಸಿದರೆ ತಿಳಿಯುತ್ತದೆ. ರಾಜ್ಯ ರಾಜಧಾನಿಯಲ್ಲಿ ಈ ಬಾರಿ ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ 667 ಕೇಸುಗಳು ದಾಖಲಾದರೆ, ಕಳೆದ ಬಾರಿ 1,390 ದಾಖ ಲಾಗಿದ್ದವು. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಈ ಬಾರಿ 509 ಡ್ರಿಂಕ್‌ ಆ್ಯಂಡ್‌ ಡ್ರೈವ್‌ ಕೇಸುಗಳು ದಾಖಲಾಗಿದ್ದವು, ಕಳೆದ ಬಾರಿ ಇದು 765 ಆಗಿತ್ತು. ವಾಣಿಜ್ಯ ನಗರಿ ಮುಂಬಯಿಯಲ್ಲಿ ಈ ವರ್ಷ 455 ಕೇಸು, ಕಳೆದ ಬಾರಿ 615 ಪ್ರಕರಣ ದಾಖಲಾಗಿದ್ದವು.  ಕೋಲ್ಕತ್ತಾ ಮತ್ತು ಚೆನ್ನೈಗಳಲ್ಲಿ ಕ್ರಮವಾಗಿ 182 ಮತ್ತು 263 ಕೇಸುಗಳು ದಾಖಲಾಗಿವೆ. 

ವರ್ಷಾಚರಣೆ ಸಂದರ್ಭದಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ತಪಾಸಣೆ, ಸುರಕ್ಷತೆಗಾಗಿ ಪ್ರಮುಖ ನಗರಗಳಾದ ಮುಂಬಯಿ, ದಿಲ್ಲಿ, ಕೋಲ್ಕತಾ ಸೇರಿದಂತೆ ದೇಶದ ಇತರೆಡೆ ಸಾವಿರಾರು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕಾನೂನು ಏನು?
1988ರ ಮೋಟಾರ್‌ ವಾಹನ ಕಾಯ್ದೆ ಪ್ರಕಾರ ಸೆಕ್ಷನ್‌ 185 ಅಡಿಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಶಿಕ್ಷಾರ್ಹ ಅಪರಾಧ. ಇದಕ್ಕೆ ದಂಡವನ್ನೂ ತೆರಬೇಕಾಗಿದೆ. ಮೊದಲ ಬಾರಿಯ ತಪ್ಪಿಗಾಗಿ 2,000 ರೂ. ದಂಡ ಮತ್ತು 6 ತಿಂಗಳ ಸೆರೆವಾಸ ಅನುಭವಿಸಬೇಕು. ಮೂರು ವರ್ಷಗಳಲ್ಲಿ ಪದೇ ಪದೇ ಡ್ರಿಂಕ್‌ ಆ್ಯಂಡ್‌ ಡ್ರೈವ್‌ ಕೇಸ್‌ ದಾಖಲಾದರೆ ಎರಡು ವರ್ಷಗಳ ಜೈಲು ಅನುಭವಿಸಬೇಕು ಮತ್ತು 3,000 ರೂ. ದಂಡ ಪಾವತಿಸಬೇಕು. 

ಎಲ್ಲಿ ಅತಿಹೆಚ್ಚು ?
ಉತ್ತರಪ್ರದೇಶ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ. ಅದೇ ರೀತಿ ಕುಡಿದು ವಾಹನ ಚಾಲನೆಯಿಂದ ಸಾವನ್ನಪ್ಪಿದವರ ಪ್ರಮಾಣವೂ ಇಲ್ಲೇ ಅಧಿಕ. 2017ರಲ್ಲಿ 3,336 ರಸ್ತೆ ಅಪಘಾತಗಳು ನಡೆದಿದ್ದು, 1,687 ಜನರು ಸತ್ತಿದ್ದರು, 2,524 ಮಂದಿ ಗಾಯಗೊಂಡಿದ್ದರು. ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೀಡಾದ ಪ್ರಕರಣಗಳಲ್ಲಿ ಶೇ.24ರಷ್ಟು ಉತ್ತರಪ್ರದೇಶದಲ್ಲೇ ನಡೆದಿದೆ. ಅನಂತರದ ಸ್ಥಾನಗಳನ್ನು ದಕ್ಷಿಣದ ಆಂಧ್ರಪ್ರದೇಶ (2,064) ಮತ್ತು ತ.ನಾಡು (1,833) ಹೊಂದಿವೆ. 

ಬ್ರಿಕ್ಸ್‌ ಪಟ್ಟಿಯಲ್ಲಿ ಭಾರತದ ಸ್ಥಾನ 4
ಅಂಕಿಅಂಶಗಳು ವರ್ಷದಿಂದ ವರ್ಷಕ್ಕೆ ಆಶಾಭಾವನೆ ತೋರ್ಪಡಿಸುತ್ತಿದ್ದರೂ ಮದ್ಯಪಾನ ಮಾಡಿ ವಾಹನ ಚಲಾವಣೆಯನ್ನು ತಡೆಯುವ ಕಾನೂನನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಿದ ದೇಶಗಳ ಪಟ್ಟಿಯಲ್ಲಿ ಭಾರತ ಕಳಪೆ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ 0-10ರ ರ್‍ಯಾಂಕಿಂಗ್‌ನಲ್ಲಿ ಭಾರತ 4 ಅಂಕ ಗಳಿಸಿದೆ. ಬ್ರಿಕ್ಸ್‌ ದೇಶಗಳ ಪೈಕಿಯೂ ಭಾರತ ಕೆಳಸ್ಥಾನದಲ್ಲಿದೆ.


ಮದ್ಯಪಾನ ಮಾಡಿ ವಾಹನ ಚಾಲನೆ: ಸಾವಿನ ಪ್ರಮಾಣ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆಯಿಂದ ಸಾವು, ಗಾಯಗೊಂಡವರ ಸಂಖ್ಯೆ ಪ್ರಮಾಣ ಇಂತಿದೆ. 2018ರಲ್ಲಿ  14,071 ಅಪಘಾತಗಳು ನಡೆದು 4,776 ಸಾವು ಸಂಭವಿಸಿದ್ದರೆ, 11,776 ಜನರು ಗಾಯಗೊಂಡಿದ್ದಾರೆ. 2017ರಲ್ಲಿ 6,131 ಜನರು ಕುಡಿದು ವಾಹನ ಚಾಲನೆಯಿಂದ ಸಾವಿಗೀಡಾಗಿದ್ದರು. ಇದಲ್ಲದೆ, ರಾಷ್ಟ್ರವ್ಯಾಪಿಯಾಗಿ 2008ರಿಂದ 2017ರವರೆಗೆ ಮದ್ಯಪಾನ ಮಾಡಿ ವಾಹನ ಚಾಲನೆಯಿಂದ 2,11,405 ರಸ್ತೆ ಅಪಘಾತಗಳಲ್ಲಿ 76,446 ಮಂದಿ ಸಾವು ಹೊಂದಿದ್ದಾರೆ. 


ಎಷ್ಟು ಪ್ರಮಾಣ ಶಿಕ್ಷಾರ್ಹ?

ಕಾಯಿದೆಯ ಪ್ರಕಾರ ಬ್ರೆಥ್‌ ಅನಲೈಸರ್‌ ಮೂಲಕ ತಪಾಸಣೆ ನಡೆಸುವಾಗ ಪ್ರತೀ 100 ಮಿ. ಲೀ. ರಕ್ತಕ್ಕೆ 30 ಮಿ. ಗ್ರಾಂ.ಗಿಂತ ಹೆಚ್ಚು ಪ್ರಮಾಣದ ಆಲ್ಕೋ ಹಾಲ್‌ ಅಂಶ ಪತ್ತೆಯಾದರೆ ವ್ಯಕ್ತಿಯನ್ನು ಶಿಕ್ಷೆಗೊಳಪಡಿಸಬಹುದು.

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.