ಮೋಹಕ ಕೈ ತೋಟ ಶಾಲೆ


Team Udayavani, Jul 10, 2017, 1:10 PM IST

10-ISIRI-4.jpg

ಬಿಸಿಯೂಟಕ್ಕೆ ರುಚಿಕರವಾದ ಅಡುಗೆಗೆ ಬೇಕಾದಷ್ಟು ತರಕಾರಿ. ಊಟವಾದ ಮೇಲೆ ವಿದ್ಯಾರ್ಥಿಗಳಿಗೆ ತಿನ್ನಲು ಹಣ್ಣು. ಅದಾದ ಬಳಿಕ ಉಳಿದ ತರಕಾರಿಗಳ ಮಾರಾಟದಿಂದ ಬಂದ ವರಮಾನದಲ್ಲಿ ಅಡುಗೆಗೆ ಬೇಕಾಗುವ ಮಿಕ್ಸಿ, ಗ್ರೆ„ಂಡರ್‌ ಖರೀದಿ, ಗೌರವ ಶಿಕ್ಷಕರಿಗೆ ವೇತನ ಪೂರೈಸುವುದಕ್ಕೂ ಇದೇ ಸಂಪನ್ಮೂಲ ಇದರಿಂದಲೇ ಸಾಧ್ಯವಾಗುತ್ತಿದೆ !

ಇದೆಲ್ಲವೂ ಎಲ್ಲಿ ಸಾಧ್ಯ ಎಂದು ಕೇಳುವವರು ಕಾರ್ಕಳದ ಪುಲ್ಕೇರಿಯಲ್ಲಿರುವ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯೆಡೆಗೆ ಹೋಗಬೇಕು. ನೂರು ವಿದ್ಯಾರ್ಥಿಗಳಿರುವ ಈ ಶಾಲೆಯನ್ನು ನೋಡಲು ಹೋದರೆ ದೂರದಿಂದಲೇ ಗಮನ ಸೆಳೆಯುತ್ತದೆ ಶಾಲೆಯ ಆವರಣ ಗೋಡೆ. ಅದರ ರಕ್ಷೆಯಲ್ಲಿ ಬುಡದಿಂದ ತಲೆಯ ತನಕ ಕಾಯಿಗಳನ್ನು ಹೊತ್ತ ಎಪ್ಪತ್ತೆ„ದು ಪಪ್ಪಾಯದ ಮರಗಳು, ಸೊಂಟದೆತ್ತರದ ಗೊನೆ ಹಾಕಿ ಬಲಿಯುತ್ತಿರುವ ಸಾಲು ಸಾಲು ಬಾಳೆಗಳು, ಬಸಳೆಯ ಚಪ್ಪರ, ಹೀರೆ, ಸೋರೆಯ ಬಳ್ಳಿಗಳು. ಎಲ್ಲವೂ ಕಾಯಿ ಕೊಡುತ್ತವೆ. ಮಕ್ಕಳ ಹಸಿವು ತಣಿಸುತ್ತವೆ. ಶಾಲೆಯ ಹಳೆಯ ಕಟ್ಟಡದ ಸುತ್ತಲೂ ಹಸಿರಿನ ನವ ಕಳೆಯಿಂದ ನಳನಳಿಸಿವೆ.

ಶಾಲೆಗಳಿಗೆ ಕೈತೋಟ ನಿರ್ಮಾಣ ಮಾಡುವ ವಿಶಿಷ್ಟ ಯೋಜನೆಯ ತಾಯಿಬೇರು ಕಾರ್ಕಳದ ರೊಟೇರಿಯನ್‌ ಸಂಸ್ಥೆಯ ಎಲ್ಲ ಸದಸ್ಯರು. ಎತ್ತರದ ನೆಲವನ್ನು ಜೆಸಿಬಿ ಮೂಲಕ ಅನುಕೂಲಕರವಾಗಿ ಸಮತಟ್ಟು ಮಾಡಿಸಿ ತೋಟಗಾರಿಕೆ ಇಲಾಖೆಯಿಂದ ಬೀಜಗಳನ್ನು, ಹೊಸಮಾರಿನ ನರ್ಸರಿಯಿಂದ ಉಚಿತವಾಗಿ ಪಪ್ಪಾಯ ಗಿಡಗಳನ್ನು ಒದಗಿಸುವಲ್ಲಿ ರೊಟೇರಿಯನ್‌ ಗಣೇಶ ಸಾಲಿಯಾನ್‌ ಸಾಕಷ್ಟು ಶ್ರಮಪಟ್ಟಿದ್ದಾರೆ. ಇದೇ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಯೊಬ್ಬರು ತಮ್ಮ ಮರದ ಮಿಲ್ಲಿನಿಂದ ಬಸಳೆ ಮತ್ತಿತರ ಬಳ್ಳಿಗಳ ಚಪ್ಪರಕ್ಕೆ ಬೇಕಾಗುವ ಸಲಕರಣೆಗಳನ್ನು ಒದಗಿಸಿದ್ದಾರೆ. ಇನ್ನೊಬ್ಬ ಹಳೆಯ ವಿದ್ಯಾರ್ಥಿ ಸಾವಯವ ಗೊಬ್ಬರ ನೀಡಿದ್ದಾರೆ. ಈ ಮಾದರಿಯ ತೋಟಕ್ಕೆಂದು ನಗರಸಭೆಯಿಂದ ಎರೆಗೊಬ್ಬರವನ್ನು ಪೂರೈಸಿದ್ದಾರೆ.

    ಇವಿಷ್ಟಿದ್ದರೆ ಸಾಕೆ? ಈ ಅನುಕರಣೀಯ ಕೈ ತೋಟ ನಿರ್ಮಾಣದ ಹಿಂದೆ ಅಪಾರ ಪರಿಶ್ರಮ ಕಾಣುವುದು ಈಗ ನಿವೃತ್ತರಾಗಿರುವ ಅಧ್ಯಾಪಕ ಶ್ರೀಧರ ಸುವರ್ಣ ಅವರದು. 40 ವರ್ಷ ಈ ಶಾಲೆಗಾಗಿ ದುಡಿದು ಉತ್ತಮ ಶಿಕ್ಷಕರೆಂದು ಜಿಲ್ಲಾ ಪ್ರಶಸ್ತಿ ಪಡೆದವರು. ಸಾಂಸ್ಕೃತಿಕವಾಗಿ ಕೂಡ ಶಾಲೆಯ ಹೆಸರನ್ನು ಎತ್ತರಕ್ಕೇರಿಸಿದವರು. ಕೈತೋಟದ ಗಿಡಗಳಿಗೆ ಮುನ್ಸಿಪಾಲ್ಟಿಯ ನೀರು ಹಿಡಿಯಲು ಅವರು ಬೆಳಗಿನ ಜಾವ ನಾಲ್ಕು ಗಂಟೆಗೆ ಬರುತ್ತಿದ್ದರೆಂಬುದನ್ನು ಸಹ ಶಿಕ್ಷಕ ಸುಧಾಕರ ಅತ್ತೂರ್‌ ನೆನಪು ಮಾಡುತ್ತಾರೆ. ಕಡು ಬೇಸಿಗೆಯಲ್ಲಿ ನೀರಿನ ಕೊರತೆ ಕಾಡಿದರೆ ಸ್ವಂತ ಹಣದಿಂದ ಟ್ಯಾಂಕರ್‌ ನೀರು ತರಿಸಿ ಅವರು ಗಿಡಗಳಿಗೆ ಉಣಿಸುತ್ತಿದ್ದರಂತೆ.

ಫ‌ುಲ್‌ ಸಾವಯವ
ಇಲ್ಲಿ ರಸ ಗೊಬ್ಬರದ ಸೋಂಕಿಲ್ಲ. ಕೀಟಗಳು ಬಾಧಿಸಿದರೆ ಬೇವಿನೆಣ್ಣೆ ಸಿಂಪಡಿಸುತ್ತಾರೆ ಅಷ್ಟೆ. ಪಕ್ಕದ ಶಾಲೆಗಳಿಗೆ ತರಕಾರಿ ಅಭಾವ ಉಂಟಾದರೆ ಇಲ್ಲಿಂದಲೇ ಉಚಿತವಾಗಿ ಕೊಡುತ್ತಾರೆ. ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳು ಇಲ್ಲಿ ಆಗುವುದಿದ್ದರೆ ಭೋಜನಕ್ಕೆ ತರಕಾರಿಯ ಕೊಡುಗೆ ಇಲ್ಲಿಂದಲೇ. ಕಸ, ಕಡ್ಡಿಗಳನ್ನು ಗುಡಿಸಿ ತಯಾರಿಸಿದ ಸುಡುಮಣ್ಣು, ಬೂದಿ, ಸಗಣಿ ಮುಂತಾಗಿ ಸಾವಯವ ಸತ್ವದಲ್ಲಿ ಬೆಳೆಯುವ ಕಾರಣ ಮಿಗುವ ಪಪ್ಪಾಯ, ಬಸಳೆ, ತರಕಾರಿಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದಕ್ಕಾಗಿ ಶಾಲೆಗೇ ಬಂದು ಕೊಂಡುಹೋಗುತ್ತಾರೆ. ಶಾಲೆಗೆ ಇದೊಂದು ಗಮನಾರ್ಹ ಆದಾಯ ಮೂಲವಾಗಿದೆ. ಶಾಲೆಗೆ ಭೇಟಿ ನೀಡಿದ ಗಣ್ಯರು, ಅಧಿಕಾರಿಗಳು ತೋಟವನ್ನು ಮುಕ್ತ ಕಂಠದಿಂದ ಹೊಗಳಿ ಹೋಗುತ್ತಾರೆ. 

    ಐದು ವರ್ಷಗಳಿಂದಲೂ ಈ ಶಾಲೆಯ ಕೈತೋಟ ಮಾದರಿಯಾಗಿ ಗಮನ ಸೆಳೆಯುತ್ತಿದೆ. ವಿವಿಧ ತಳಿಗಳ ಪಪ್ಪಾಯ ಗಿಡಗಳು ಸದಾ ಫ‌ಲಭರಿತವಾಗಿರುತ್ತವೆ. ಸಿಹಿ ಗೆಣಸು, ಬೂದುಗುಂಬಳ, ಸಿಹಿಗುಂಬಳ, ಅಲಸಂದೆ, ತೊಂಡೆ, ಸೌತೆ, ಬದನೆ ಮುಂತಾಗಿ ಮಳೆಗಾಲ ಮತ್ತು ಬೇಸಗೆಗೆ ಪ್ರತ್ಯೇಕವಾಗಿ ವೈವಿಧ್ಯಮಯ ತರಕಾರಿಗಳನ್ನು ಬೆಳೆಯುವ ಕೆಲಸದಲ್ಲಿ ಮಕ್ಕಳು ತೊಡಗುತ್ತಾರೆ. ಚಿಕ್ಕ ಮಕ್ಕಳನ್ನು ಹೊರತುಪಡಿಸಿ ಏಳು ಮಕ್ಕಳ ಒಂದೊಂದು ಪಂಗಡಗಳನ್ನು ಮಾಡಿದ್ದಾರೆ. ಒಂದೊಂದು ದಿನ ಒಂದೊಂದು ಪಂಗಡ ತರಕಾರಿ ಗಿಡಗಳಿಗೆ ಕಳೆ ಕೀಳುವುದು, ಗೊಬ್ಬರ ಹಾಕುವುದು, ಬುಡಕ್ಕೆ ಮಣ್ಣು ಸೇರಿಸುವುದು ಮೊದಲಾದ ಕೆಲಸಗಳನ್ನು ಮಾಡುತ್ತದೆ. ತರಕಾರಿಗಳಲ್ಲದೆ ಅನಾನಸ್‌, ನಕ್ಷತ್ರ ನೇರಳೆಯಂತಹ ಹಣ್ಣಿನ ಗಿಡಗಳು ಫ‌ಲ ಕೊಡುತ್ತಿವೆ.  ಕಸಿ ಸಾಗುವಾನಿಯ ಗಿಡಗಳು ಬೆಳೆಯುತ್ತಿವೆ. ಹೀಗೊಂದು ಕೈತೋಟ ಮಾಡಬೇಕು ಎನ್ನುವವರಿಗೆ ಇಂತಹ ಮಾದರಿ ಅಪೂರ್ವ ಎನ್ನಬೇಕು. 

ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.