ಮನೆಯೊಳಗಿನ ವಾಸ್ತುದೋಷ ನಿವಾರಣೆಗೆ ಸರಳ ಪರಿಹಾರಗಳು ಇಲ್ಲುಂಟು


Team Udayavani, Jul 10, 2017, 1:21 PM IST

10-ISIRI-6.jpg

ಇರುವುದನ್ನು ಇದ್ದಂತೆ ಹೇಳಿದಾಗ ಕೇಳಿದವರಿಗೆ ಮನಸ್ಸು ಮುದುಡುತ್ತದೆ. ಕಟ್ಟಿದ ಮನೆಯನ್ನು ಒಡೆಯಿರಿ, ಬದಲಿಸಿರಿ ಎನ್ನುವುದು ಕಷ್ಟದ ಕೆಲಸ ಸೂಕ್ತವಾದ ಸಲಹೆಗಳನ್ನು ಕೊಟ್ಟರೆ, ಮತ್ತೆ ಸಾಲ ಮಾಡಿ ಮನೆಯನ್ನು ಪುನರೂಪಿಸಲು ಬಹಳ ಜನ ಮುಂದಾಗುತ್ತಾರೆ. 

ನಿಮ್ಮ ಮನೆಯನ್ನು ಸಕಲಸೌಭಾಗ್ಯದ ಸಂಪನ್ನದ ಗಣಿಯಾಗಿಸಿಕೊಳ್ಳಲು ನಿರಂತರವಾದ ಪ್ರಯತ್ನ ನಡೆಸುತ್ತೀರಿ. ಪಂಚಭೂತಗಳನ್ನು ಸೂಕ್ತನೆಲೆಯಲ್ಲಿ ನಮ್ಮ ಮನೆಗೆ ಸಂಬಂಧಿಸಿದ ಪೂರ್ವ ಪಶ್ಚಿಮಾದಿ ಅಷ್ಟದಿಕ್ಕುಗಳನ್ನು ಜಲಯುತ ಗೊಳಿಸಲು ಆಧುನಿಕ ಕಾಲದಲ್ಲಿ ಸ್ವಲ್ಪ ಕಷ್ಟದ ವಿಷಯವೇ ಆಗಿದೆ. ಹಿಂದೆ ಸುಲಭವಾಗಿತ್ತು ಎಂದೇನಲ್ಲ. ಆದರೆ ಸರ್ವತ್ರ ಮಲಿನತೆಗೆ ಕಾರಣವಾಗುವ ಬಚ್ಚಲು, ಸಂಡಾಸು ಮನೆಯ ಹೊರಗಡೆ ಇದ್ದು ಮನೆ ಶುಚಿಯಾಗಿರಲು ಅನುಕೂಲವಾಗಿತ್ತು. ಈಗ ಆಧುನಿಕ ವಿಧಾನಗಳು ಎಲ್ಲವನ್ನೂ ಕಲಸುಮೇಲೊಗರಗೊಳಿಸಿವೆ. ಮನೆಯೊಳಗೇ ನಾಲ್ಕು ಸಂಡಾಸುಗಳು, ನಾಲ್ಕು ಬಚ್ಚಲುಮನೆಗಳು, ಮನೆಯ ಅಳತೆಗೆ ಸರಿಹೊಂದದ ದೇವರ ಮನೆ, ಎಲ್ಲೋ ಊಟ ಎಲ್ಲೋ ಅಡುಗೆ, ಎಲ್ಲೋ ಮಲಗುವ ವ್ಯವಸ್ಥೆ ಇತ್ಯಾದಿಗಳಿಂದ ಹೇಳತೀರದ ಗೊಂದಲಗಳ ನಡುವೆ ಬದುಕು ಸಾಗಿದೆ. ಮುಖ್ಯವಾಗಿ ಈ ಎಲ್ಲಾ ರೀತಿಯ ಇಕ್ಕಟ್ಟುಗಳಿಂದ ಮನಸ್ಸು ಪ್ರಫ‌ುಲ್ಲವಾಗಿರಲು ಅಸಾಧ್ಯವಾಗಿದೆ.

ವಾಸ್ತು ವಿಚಾರವಾಗಿ ಪರಿಶೀಲಿಸಿ ಎಂದು ವಿನಂತಿಸುತ್ತಾರೆ. ಇರುವುದನ್ನು ಇದ್ದಂತೆ ಹೇಳಿದಾಗ ಕೇಳಿದವರಿಗೆ ಮನಸ್ಸು ಮುದುಡುತ್ತದೆ. ಕಟ್ಟಿದ ಮನೆಯನ್ನು ಒಡೆಯಿರಿ, ಬದಲಿಸಿರಿ ಎನ್ನುವುದು ಕಷ್ಟದ ಕೆಲಸ ಸೂಕ್ತವಾದ ಸಲಹೆಗಳನ್ನು ಕೊಟ್ಟರೆ, ಮತ್ತೆ ಸಾಲ ಮಾಡಿ ಮನೆಯನ್ನು ಪುನರೂಪಿಸಲು ಬಹಳ ಜನ ಮುಂದಾಗುತ್ತಾರೆ. ಪಶ್ಚಿಮಕ್ಕೆ ಮುಖ ಮಾಡಿದ ದೇವರನ್ನು ಕೂಡಿಸಲು ಸಾಧ್ಯವಾಗದ ರೀತಿ ಮನೆಯ ಪೂರ್ವಭಾಗ ರೂಪುಗೊಂಡಿದ್ದರೆ ಇಕ್ಕಟ್ಟುಗಳ ನಡುವೆಯೇ ದೇವರನ್ನು ಕೂಡ್ರಿಸಿ ಎನ್ನುವುದು ತಪ್ಪಾಗುತ್ತದೆ. ಉತ್ತರದಲ್ಲಿ ಪೇರಿಸಿದ ಎನರ್ಜಿಗೆ ತೊಡೆತಟ್ಟುವ ತ್ಯಾಜ್ಯ ಅಥವಾ ಬಿಡು ಬೀಸು ತುಂಡು ಕಟ್ಟಿಗೆ, ಕಬ್ಬಿಣದ ಡಬ್ಬಿ, ಕಡತಗಳನ್ನು ರವಾನಿಸಿ ಎಂದು ಹೇಗೆ ತಿಳಿಸುವುದು? ಸೋರುವ ನೀರಿನ ಟ್ಯಾಪ್‌, ಮುಚ್ಚಲಾಗದ ಬಚ್ಚಲ ಮನೆಯ ಬಾಗಿಲು ಕಾಣದಂತೆ ಇಳಿಬಿಟ್ಟ ಪರದೆ, ಕೊಳೆವೆಗೊಂದು ಅಸಾಧ್ಯವಾದ ಅಸಮರ್ಪಕ ಕೆಡು ಅಲೆಗಳನ್ನು ಮನೆಯಲ್ಲಿ ತುಂಬಿಸಿವೆ ಎಂದು ತಿಳಿಸಿ ಹೇಳಿದರೂ, ಅವುಗಳ ಸೂಕ್ತ ಅಚ್ಚುಕಟ್ಟುತನ ಸರ್ರನೆ ಬದಲುಗೊಳ್ಳಲು ಅನೇಕ ಅಡೆ ತಡೆಗಳಿರುತ್ತವೆ. ಒಂದು ಮನೆ ಹಲವು ಕಾರಣಗಳಿಗಾಗಿ ಅಂಚಿನವರೆಗೆ ನೀರು ತುಂಬಿದ ಹರಿವಾಣವನ್ನು, ಒಂದು ಚೂರೂ ತುಳುಕಿಸದೆ, ಹತ್ತು ಅಡಿ ಎತ್ತು ಎನ್ನುವಷ್ಟೇ ಕಷ್ಟದ ವಿಚಾರವಾಗಿರುತ್ತದೆ.

ಈ ಎಲ್ಲಾ ಕ್ಲಿಷ್ಟತೆಗಳಿಂದಾಗಿ ಮನೆಯೊಳಗಿನ ಸಕಾರಾತ್ಮಕ ಅಲೆಗಳನ್ನು ಗಟ್ಟಿಗೊಳಿಸಲು ನಮಗೆ ಸಹಕಾರಿಯಾಗಬೇಕಾದ ಸೂರ್ಯ, ಚಂದ್ರ, ಮಂಗಳ ಇತ್ಯಾದಿ ನವಗ್ರಹಗಳನ್ನು ಸಂತೃಪ್ತಿ ಪಡಿಸುವುದೇ ಸೂಕ್ತ ವಿಧಾನವಾಗಿದೆ. ದೇವರ ಮನೆಯಲ್ಲಿ ಒಂದು ಅಗಲವಾದ ಹರಿವಾಣವಿರಿಸಿ, ದೇವರೆದುರಿಗೆ ಇರುವ ದಿಕ್ಕನ್ನು ಅನುಸರಿಸಿ, ಪೂರ್ವ ಪಶ್ಚಿಮ, ಉತ್ತರ ದಕ್ಷಿಣ, ಈಶಾನ್ಯ ನೈಋತ್ಯ, ಆಗ್ನೇಯ ಹಾಗೂ ವಾಯುವ್ಯ ದಿಕ್ಕುಗಳನ್ನು ಗುರುತಿಸಿಕೊಳ್ಳಿ. ಎಂಟು ಸುಮಾರು ನೂರು ಗ್ರಾಂ. ಅಥವಾ ಅದಕ್ಕಿಂತ ಜಾಸ್ತಿ ಸ್ಥಳಾವಕಾಶವಿರುವ ಪುಟ್ಟ ತಟ್ಟೆಗಳನ್ನಿರಿಸಿ ಇದೆಲ್ಲದರ ನಡುವೆ ಮಧ್ಯದಲ್ಲಿ ಒಂಭತ್ತನೆಯ ತಟ್ಟೆಯನ್ನಿಡಿ. ಸೋಮವಾರದಿಂದ ಶುರು ಮಾಡಿ, ಭಾನುವಾರದವರೆಗೂ ಪೂರ್ವಭಾಗದ ತಟ್ಟೆಗೆ ಪ್ರತಿದಿನ ಒಂದು ಸಲಕ್ಕೆ ಐದು ಗ್ರಾಂನಂತೆ ಅಕ್ಕಿಯನ್ನು, ಆಗ್ನೇ¿åಭಾಗದ ತಟ್ಟೆಗೆ ತೊಗರಿ ಬೇಳೆಯನ್ನು, ದಕ್ಷಿಣ ದಿಕ್ಕಿನ ತಟ್ಟೆಗೆ ಹೆಸರು ಕಾಳು, ನೈಋತ್ಯ ದಿಕ್ಕಿನ ತಟ್ಟೆಗೆ ಎಳ್ಳು, ಪಶ್ಚಿಮ ದಿಕ್ಕಿಗೆ ಅವರೆಕಾಳು ಮಧ್ಯಭಾಗದ ತಟ್ಟೆಗೆ ಗೋಧಿಯನ್ನು ಪ್ರತಿದಿನ ಪೌರ್ಣಿಮೆಯ ದಿನ ಇವನ್ನೆಲ್ಲಾ ಒಂದು ಪಾತ್ರೆಗೆ ಸುರಿದು ಆ ರಾತ್ರಿ ಅವುಗಳನ್ನು ನೀರಲ್ಲಿ ನೆನೆಸಿ ಮಾರನೆ ದಿನ ಶುದ್ಧ ನೀರಲ್ಲಿ ನೆನೆಸಿದ ನವಧಾನ್ಯಗಳನ್ನು ಬೆಲ್ಲದೊಂದಿಗೆ ಹಸುವಿಗೆ ಗ್ರಾಸ ನೀಡಿ ಮಾರನೇ ದಿನದಿಂದ ಮತ್ತೆ ನವಧಾನ್ಯಗಳ ಸಂಗ್ರಹ ಮತ್ತೆ ಮಾಡಿ. ಇದು ನಿರಂತರವಾಗಿ ನಡೆಯಲಿ ತುಂಬುತ್ತಿರುವ ಧಾನ್ಯದ ತಟ್ಟೆಗಳನ್ನು ಮುಚ್ಚಳದಿಂದ ಮುಚ್ಚಿರಿ, ಇದರಿಂದ ದೋಷ ಪರಿಹಾರ ಆಗುತ್ತದೆ. 

ಅನಂತಶಾಸ್ತ್ರಿ

ಟಾಪ್ ನ್ಯೂಸ್

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

Rajeev Chandrashekhar

Corrupt ಡಿಕೆಶಿ ಸರ್ಟಿಫಿಕೆಟ್‌ ಬೇಕಾಗಿಲ್ಲ: ಕೇಂದ್ರ ಸಚಿವ ರಾಜೀವ್‌ ತಿರುಗೇಟು

1-wqewqe

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

mamata

CAA, NRC ರದ್ದು: ದೀದಿ ಶಪಥ ಪ್ರಣಾಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.