ಸುಂದರ ಸುಗಂಧ ಬದುಕು


Team Udayavani, Jul 24, 2017, 6:55 AM IST

suganda.jpg

ಎರಡು ವರ್ಷಗಳ ಹಿಂದೆ ಮಳೆಗಾಲದ ದಿನಗಳಲ್ಲಿ ಮಾತ್ರ ಹಚ್ಚಹಸಿರಾಗುತ್ತಿದ್ದ ಭೂಮಿಯಲ್ಲೀಗ ವರ್ಷದುದ್ದಕ್ಕೂ ಸುಗಂಧದ ಪರಿಮಳ ಬೀರುತ್ತಿದೆ. ಸರ್ವಋತುಗಳಲ್ಲೂ ಇಳುವರಿ ಪಡೆಯಬೇಕೆಂಬ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿದರೂ ಅದರಿಂದ ಪ್ರಯೋಜನವಾಗಲಿಲ್ಲ. ಇಲ್ಲಿನ ಒಣ ಭೂಮಿಯಲ್ಲಿ ಪುಷ್ಪ ಬೆಳೆಯುವ ಬಗ್ಗೆ ಯೋಚಿಸಿದವರೇ ಕಡಿಮೆ. ಇದೀಗ ಕಳೆದ ಎರಡು ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನದಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಚಂದನಮಟ್ಟಿ ಗ್ರಾಮದ ಹೂವಪ್ಪ ನಾಗಪ್ಪ ಎಮೊಜಿಯವರ ಭೂಮಿ ಸುಗಂಧಮಯವಾಗಿದೆ.

ಇವರಂತೆ ಯೋಜನೆಯ ಪ್ರೇರಣೆಯಿಂದ ಅರ್ಧ ಎಕರೆಯಿಂದ ಎರಡು ಎಕರೆಯವರೆಗೆ ಸುಗಂಧರಾಜ ಬೆಳೆಯುತ್ತಿರುವ ಐವತ್ತು ಮಂದಿ ರೈತರಿದ್ದಾರೆ. ಕಳೆದೆರಡು ವರ್ಷಗಳಿಂದ ಸುಗಂಧ ಪುಷ್ಪ ಬೆಳೆಯುತ್ತಿರುವ ಹೂವಪ್ಪ ನಾಗಪ್ಪ ಎಮೊಜಿ ಇಂದೊಬ್ಬ ಅನುಭವಸ್ಥ ಬೆಳೆಗಾರ.

ಇವರು ಬೇಸಿಗೆಗಾಲದಲ್ಲಿ ಅಂದರೆ ಜನವರಿಯಲ್ಲಿ ಕಾಂಡವನ್ನು ನಾಟಿ ಮಾಡಿದ್ದಾರೆ. ಆರಂಭದಲ್ಲಿ ನಾಟಿಗೆ ಬೇಕಾದ ಕಾಂಡವನ್ನು ಬೇರೆಡೆಯ ಬೆಳೆಗಾರರಿಂದ ಖರೀದಿಸಿದ್ದಾರೆ. ಜೂನ್‌ ತಿಂಗಳಲ್ಲಿ ಹೂವು ಬಿಡುವ ಸಮಯ ಆರಂಭ. ನಂತರ ಕಡಿಮೆಯೆಂದರೂ ಮೂರರಿಂದ ನಾಲ್ಕು ವರ್ಷಗಳವರೆಗೆ ಹೂವು ನೀಡುತ್ತದೆ. ಚಳಿಗಾಲದಲ್ಲಿ ಅಧಿಕ ಇಳುವರಿಯನ್ನು ನೀಡುತ್ತಿದ್ದು ಏಪ್ರಿಲ್‌, ಮೇ ತಿಂಗಳಲ್ಲಿ ಇಳುವರಿ ಕಡಿಮೆಯಾಗುತ್ತದೆ.

ಇವರಿಗೆ ಗ್ರಾಮಾಭಿವೃದ್ಧಿ ಯೋಜನೆ ರೂ. 1000ನಂತೆ ಪ್ರೋತ್ಸಾಹ ಧನ ನೀಡಿದೆ. ಬೆಳೆಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಗಂಧರಾಜ ಬೆಳೆಗಾರರ ರೈತ ಕ್ಷೇತ್ರ ಪಾಠಶಾಲೆಯನ್ನು ಏರ್ಪಡಿಸಲಾಗಿದೆ. ಪರಿಣಾಮವಾಗಿ ಇಲ್ಲಿನ ಭೂಮಿಗೆ ಸುಗಂಧ ರಾಜ ಹೂವಿನ ಬೆಳೆ ಸೂಕ್ತವಲ್ಲವೆಂದುಕೊಂಡಿದ್ದ ಐವತ್ತು ಮಂದಿ ಸುಗಂಧ ಬೆಳೆಯಲು ತೊಡಗಿದರು. ಈ ಹಿಂದೆ ಬೆಳೆದರೂ ಅತಿ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದರು. ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ, ಉತ್ತಮ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಹೂವಪ್ಪರವರಿಗೆ ಗ್ರಾಮಾಭಿವೃದ್ಧಿ ಯೋಜನೆ ಮಾರ್ಗದರ್ಶನವನ್ನು ನೀಡಿ ರೈತರೆಲ್ಲಾ ಬೆಳೆದ ಹೂವನ್ನು ಮಾರುಕಟ್ಟೆಗೆ ಕೊಂಡುಹೋಗುವ ಕೆಲಸವನ್ನು ಅವರಿಗೆ ವಹಿಸಿದೆ. ಧಾರವಾಡ ಮಾರುಕಟ್ಟೆಗೆ ಇಲ್ಲಿಂದ ಹತ್ತು ಕಿ. ಮೀ ದೂರವಿದ್ದು, ಪ್ರತಿದಿನ ರೈತರಿಂದ ಹೂ ಸಂಗ್ರಹಿಸಿ ಅಲ್ಲಿಗೆ ಮಾರಾಟ ಮಾಡುತ್ತಿದ್ದಾರೆ. ಹತ್ತು ಕೆ. ಜಿ ಹೂ ನೀಡುವವರು ಒಂದು ಕೆ. ಜಿ ಹೂವಿನ ಮೊತ್ತವನ್ನು ಹೂವಪ್ಪರವರಿಗೆ ಸಾಗಾಟ ವೆಚ್ಚವಾಗಿ ನೀಡಬೇಕೆಂಬ ನಿಯಮ ಇಲ್ಲಿನದು. ಇದರಿಂದಾಗಿ ಬೆಳೆಗಾರರೆಲ್ಲ ಒಗ್ಗಟ್ಟಾದರು. ಮಾರುಕಟ್ಟೆಗೆ ಎಲ್ಲಾ ಬೆಳೆಗಾರರ ಹೂವನ್ನು ಒಬ್ಬರೇ ತರುತ್ತಿರುವುದರಿಂದ ಖರೀದಿದಾರರು ಹೆಚ್ಚು ಬೆಲೆ ನೀಡುವುದು ಅನಿವಾರ್ಯವಾಯಿತು. ದಲ್ಲಾಳಿಗಳ ಸಮಸ್ಯೆಯೂ ದೂರವಾಯಿತು. ಇದರಿಂದಾಗಿ ದಿನಕಳೆದಂತೆ ಬೆಳೆಗಾರರ ಸಂಖ್ಯೆಯೂ ಹೆಚ್ಚಾಗಿದೆ. ಹಿಂದೆ ಒಂದು ಕೆ. ಜಿಗೆ ರೂ. 40, 50 ಸಿಗುತ್ತಿತ್ತು.  ಇದೀಗ, ಕೆ.ಜಿಗೆ ರೂ. 100 ರಿಂದ 200 ರೂ. ವರೆಗೆ ಬೆಲೆ ಸಿಗುತ್ತಿದೆ. 

ಸುಗಂಧರಾಜ ಪುಷ್ಪಕ್ಕೆ ರೋಗಗಳು ಬಾಧಿಸುವುದು ಕಡಿಮೆ. ಹಾರ, ವೇದಿಕೆ, ಮಾಲೆ ತಯಾರಿಯಲ್ಲಿ ಬಳಸುತ್ತಿದ್ದ ಪುಷ್ಪವನ್ನು ಕಲ್ಲುಮಿಶ್ರಿತ ಭೂಮಿಯಲ್ಲೂ ಬೆಳೆಯಬಹುದೆಂಬುವುದನ್ನು ತೋರಿಸಿದ ಹೆಗ್ಗಳಿಕೆ ಇವರದ್ದು. ಇದೀಗ ಸುಗಂಧ ಪುಷ್ಪದಿಂದ ಉತ್ತಮ ಆದಾಯವನ್ನು ಗಳಿಸುತ್ತಿದ್ದೇನೆ ಎಂಬುದು ಬೆಳೆಗಾರ ಹೂವಪ್ಪ ನಾಗಪ್ಪರವರ ಅನುಭವದ ಮಾತು.

ಇವರು ನಾಟಿಗೆ ಬೇಕಾದ ಗಡ್ಡೆಯನ್ನೂ ಮಾರಾಟ ಮಾಡುತ್ತಿದ್ದಾರೆ.  ಸಮಪ್ರಮಾಣದ ಬಿಸಿಲು, ನೀರಾವರಿ ವ್ಯವಸ್ಥೆಯಿದ್ದರೆ ಎಲ್ಲೆಡೆಯೂ ನಾಟಿ ಮಾಡಬುದಾಗಿದೆ. ಸುಗಂಧ ಪುಷ್ಪ ಸಸಿಯನ್ನು ನಾಟಿ, ನೀರಾವರಿ, ಕಳೆಕೀಳುವ, ಗೊಬ್ಬರ ನೀಡುವ ಮುಂತಾದ ಕೆಲಸಗಳಲ್ಲಿ ತಾವೇ ಸ್ವತಃ ತೊಡಗಿಸಿಕೊಂಡರೆ ತಗಲುವ ಖರ್ಚು ಕಡಿಮೆ. ಅಪ್ಪಟ ಸಾವಯವದಲ್ಲೂ ಬೆಳೆಯಬಹುದಾದ ಪುಷ್ಪಕೃಷಿ ಇದಾಗಿದ್ದು ಸಾಮಾನ್ಯವಾಗಿ ಐವತ್ತು ಕೆ. ಜಿ ತೂಗುವ ಒಂದು ಗೋಣಿ ಚೀಲದಲ್ಲಿ ತುಂಬಿದ ಗೆಡ್ಡೆಗೆ ರೂ. 700 ರಿಂದ 800 ದರವಿದೆ. ಹೆಚ್ಚು ಮಳೆಬೀಳುವ ಪ್ರದೇಶಗಳನ್ನು ಹೊರತುಪಡಿಸಿ ಇತರೆಡೆಗಳಲ್ಲಿ ಸರ್ವ ಋತುಗಳಲ್ಲೂ ನಾಟಿ ಮಾಡಬಹುದಾಗಿದೆ. ಸಾಮಾನ್ಯವಾಗಿ ಜುಲೈ, ಆಗಸ್ಟ್‌ ತಿಂಗಳು ನಾಟಿಗೆ ಸೂಕ್ತ ಸಮಯ. ನಾಟಿಗಿಂತ ಮುಂಚೆ ಭೂಮಿಯನ್ನು ಉಳುಮೆ ಮಾಡಿಕೊಳ್ಳಬೇಕು. ನಂತರ ಮೂರು ಅಡಿ ಅಂತರಬಿಟ್ಟು ಸಾಲು ತೆಗೆದು ಐದು ಇಂಚು ಆಳವಾಗಿ ಕೈಯಿಂದ ಗುಂಡಿ ತೆಗೆದು ಗಿಡದಿಂದ ಗಿಡಕ್ಕೆ 6 ಸೆಂ. ಮೀ ಅಂತರಬಿಟ್ಟು ನಾಟಿ ಮಾಡಬೇಕು. ನಾಟಿ ಮಾಡುವ ಸಮಯದಲ್ಲಿ ಗಡ್ಡೆಗಳಿಗೆ ಕೊಟ್ಟಿಗೆ ಗೊಬ್ಬರ ನೀಡಿದರೆ ಒಳ್ಳೆಯದು. ವಾರಕ್ಕೊಮ್ಮೆ ನೀರು ನೀಡಬೇಕು. ಗಿಡ ಆರರಿಂದ ಎಂಟು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಮದುವೆ, ಹಬ್ಬ, ಹರಿದಿನಗಳಲ್ಲಿ ಹೂವಿಗೆ ಬಹುಬೇಡಿಕೆಯಿದೆ.
ಮಾಹಿತಿಗೆ: 9880381484.

– ಚಂದ್ರಹಾಸ ಚಾರ್ಮಾಡಿ

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.