ಒಂದು ವರ್ಷ ತುಂಬಿತು:  ಹ್ಯಾಪಿ ಬರ್ತಡೇ ಟೂ ಯೂ..


Team Udayavani, Sep 18, 2017, 2:01 PM IST

18-ISIRI-7.jpg

ಜೀಯೋಗೆ ಒಂದು ವರ್ಷ. ಹೇಳಿ ಕೇಳಿ ಇದು ರಿಲಯನ್ಸ್‌ ಕೊಡುಗೆ. ಇದು ಎಷ್ಟು ವರ್ಷ ಇರುತ್ತೋ? ಅಂತ ಮೂಗು ಮುರಿಯುವವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಒಂದು ವರ್ಷ ದಾಟಿದೆ.  ಜೀಯೋ ಬಂದ ಮೇಲೆ ಎಲ್ಲರ ಕೈಯಲ್ಲೂ ಮೊಬೈಲು ಮಾತ್ರ ಬರಲಿಲ್ಲ. ಅದರೊಳಗೆ ಇಂಟರ್‌ನೆಟ್ಟೂ, ಅದರ ಹಿಂದೆಯೇ ಗೇಮ್ಸು, ಫೇಸ್‌ಬುಕ್ಕು ಸೇರಿದಂತೆ ಸಕಲೆಂಟು ಅನುಕೂಲಗಳು ದಕ್ಕಿದವು.  ಬದುಕಲ್ಲಿ ಮೊಬೈಲ್‌ ಮುಖ್ಯವಾಗುತ್ತಾ ಹೋಗುವ ಹೊತ್ತಿಗೆ, ಉಚಿತ ಇಂಟರ್‌ನೆಟ್‌ ಕೊಟ್ಟು ಮೊಬೈಲ್‌ ಇಲ್ಲದಿದ್ರೆ ಲೈಫ‌ು ಕಷ್ಟ. ಇವತ್ತು ಮೊಬೈಲ್‌ ಎಲ್ಲರಿಗೂ ಮತ್ತಷ್ಟು ಅನಿವಾರ್ಯವಾಗಿಸಿದ್ದು ರಿಲಯನ್ಸ್‌ ಕಂಪೆನಿ. 

  ಇವತ್ತು ಒಂದು, ಎರಡು ಜಿಬಿಗೆ 200-300ರೂ. ತೆಗೆದುಕೊಳ್ಳುತ್ತಿದ್ದ ಕಂಪೆನಿಗಳು ಇವತ್ತು ದಿನಕ್ಕೆ ಒಂದು ಜಿ.ಬಿ ಡಾಕ ಬಿಕರಿಗೆ ನಿಂತುಬಿಟ್ಟಿದೆ.  ಒಂದರ್ಥದಲ್ಲಿ ಇಡೀ ಮೊಬೈಲ್‌ ಮಾರುಕಟ್ಟೆಯನ್ನು ಜಿಯೋ ಅಂಗೈಯಲ್ಲಿ ಇಟ್ಟುಕೊಂಡಿದೆ.  ಜಿಯೋ ಕೆಲವೊಂದು ಹೈಲೆಟ್ಸ್‌ ಇಲ್ಲಿದೆ. 

1.    ಜಿಯೋ ಪ್ರಪಂಚದ ಏಕೈಕ 4ಜಿ ಸಂಪೂರ್ಣ ಐಪಿ ಜಾಲ. ಅತಿದೊಡ್ಡ ಫೈಬರ್‌ ಹೆಜ್ಜೆಗುರುತಿನೊಡನೆ ಜಿಯೋ ಭಾರತದ ಬೇರೆಲ್ಲ ಟೆಲಿಕಾಂ ಸಂಸ್ಥೆಗಳಿಗಿಂತ ದೊಡ್ಡದಾದ ಎಲ್ಟಿಇ ಪ್ರಸಾರವ್ಯಾಪ್ತಿಯನ್ನು ಹೊಂದಿದೆ. ಜಿಯೋ ಜಾಲ ಭಾರತದ ಶೇ.99 ಜನಸಂಖ್ಯೆಯನ್ನು ಸಂಪರ್ಕಿಸಿದೆ. ಭಾರತದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ರೂಪಿಸಲಾಗಿರುವ 2ಜಿ ಪ್ರಸಾರವ್ಯಾಪ್ತಿಗಿಂತ ದೊಡ್ಡದಾದ 4ಜಿ ವ್ಯಾಪ್ತಿಯನ್ನು ಪಡೆಯುವುದು ಜಿಯೋ ದೆಸೆಯಿಂದ ಇಷ್ಟರಲ್ಲೇ ಸಾಧ್ಯವಾಗಲಿದೆ.

2.    ಡೇಟಾ ಬಳಸುವ ರಾಷ್ಟ್ರಗಳ ಸಾಲಿನಲ್ಲಿ 155ನೇ ಸ್ಥಾನದಲ್ಲಿದ್ದ ಭಾರತ ಈಗ ಮೊದಲ ಸ್ಥಾನಕ್ಕೆ ತಲುಪಿದೆ. ನಮ್ಮಲ್ಲಿ ಮೊಬೈಲ… ಡೇಟಾ ಬಳಕೆ ತಿಂಗಳಿಗೆ 20 ಕೋಟಿ ಜಿಬಿಯಿಂದ 150 ಕೋಟಿ ಜಿಬಿಗೆ ಜಿಗಿದಿದೆ.  ಈ ಪೈಕಿ ಜಿಯೋ ಗ್ರಾಹಕರೇ 125 ಕೋಟಿ ಜಿಬಿ ಡೇಟಾ ಬಳಸುತ್ತಿದ್ದಾರೆ.

3.  ಪ್ರತಿ ತಿಂಗಳೂ 100 ಕೋಟಿ ಜಿಬಿ ಡೇಟಾ ನಿರ್ವಹಿಸುವ ಜಿಯೋ, ವಿಶ್ವದ ಮೊದಲ ಹಾಗೂ ಏಕೈಕ ಎಕ್ಸಾಬೈಟ… ಟೆಲಿಕಾಂ ಜಾಲ. ಭಾರತದಲ್ಲಿರುವ ಇತರ ಎಲ್ಲ ಟೆಲಿಕಾಂ ಸಂಸ್ಥೆಗಳ ಒಟ್ಟಾರೆ ಹೋಲಿಕೆಯಲ್ಲಿ ಜಿಯೋ ಈಗಾಗಲೇ ಐದು ಪಟ್ಟು ಹೆಚ್ಚಿನ ಡೇಟಾ ನಿರ್ವಹಿಸುತ್ತಿದೆ.

4         ಪ್ರತಿ ತಿಂಗಳೂ 165 ಕೋಟಿ ಗಂಟೆಗಳಿಗಿಂತ ಹೆಚ್ಚು ಪ್ರಮಾಣದ ವೀಡಿಯೋ ಸ್ಟ್ರೀಮಿಂಗ್‌ ಮಾಡಲಾಗುತ್ತಿದೆ.

5.    ಪ್ರತಿದಿನವೂ 250 ಕೋಟಿ ನಿಮಿಷಗಳಿಗಿಂತ ಹೆಚ್ಚು ಪ್ರಮಾಣದ ವಾಯ್ಸ… ಟ್ರಾಫಿಕ್‌ ಅನ್ನು ನಿಭಾಯಿಸಲಾಗುತ್ತಿದೆ.

6.     ಪ್ರತಿ ವಾರವೂ ಮೊಬೈಲಿನೊಡನೆ ಕಳೆಯುವ ಸಮಯ, ಟೀವಿ ಮುಂದೆ ಕಳೆಯುವ ಸಮಯಕ್ಕಿಂತ 7 ಪಟ್ಟು ಹೆಚ್ಚು.

7.    ಪ್ರತಿ ಸೆಕೆಂಡಿಗೆ 7 ಗ್ರಾಹಕರಂತೆ ಕೇವಲ 170 ದಿನಗಳಲ್ಲಿ 100 ಮಿಲಿಯನ್‌ ಗ್ರಾಹಕರನ್ನು ಸೇರಿಸಿಕೊಂಡ ವಿಕ್ರಮ. ವಿಶ್ವದ ಯಾವುದೇ ಭಾಗದಲ್ಲಿ ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳಲಾದ ತಂತ್ರಜ್ಞಾನ ಸೇವೆ ಎಂಬ ಹೆಗ್ಗಳಿಕೆಯನ್ನು ಜಿಯೋಗೆ ತಂದುಕೊಟ್ಟಿತು. ಸದ್ಯ ಜಿಯೋ ಜಾಲದಲ್ಲಿ 130 ಮಿಲಿಯನ್‌ಗಿಂತ ಹೆಚ್ಚು ಗ್ರಾಹಕರಿದ್ದಾರೆ

8      ಜಿಯೋ ಬರುವ ಮೊದಲು ಮಾರುಕಟ್ಟೆಯಲ್ಲಿದ್ದ ಸುಮಾರು 16,000 ಪ್ಲಾನುಗಳು ಗ್ರಾಹಕರಲ್ಲಿ ಗೊಂದಲ ಮೂಡಿಸುತ್ತಿದ್ದವು. ಜಿಯೋ ಬಂದ ನಂತರ ಪ್ಲಾನುಗಳ ಸಂಖ್ಯೆ ಕಡಿಮೆಯಾಗುತ್ತಿವೆ.  

9.   ಫೇಸ್‌ಬುಕ್‌, ಯೂಟ್ಯೂಬ… ಸೇರಿದಂತೆ ಎಲ್ಲ ಪ್ರಮುಖ ಸೋಷಿಯಲ… ಮೀಡಿಯಾ ಅಪ್ಲಿಕೇಶನ್‌ಗಳು ಹಾಗೂ ಕಂಟೆಂಟ… ಪೊ›ವೈಡರ್‌ಗಳು ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿವೆ. ಜಿಯೋ ಬಂದ ನಂತರ 70 ಮಿಲಿಯನ್‌  ಹೊಸ ಬಳಕೆದಾರರನ್ನು ಪಡೆದಿರುವ ಗೂಗಲ… ಹಾಗೂ ಫೇಸ್‌ಬುಕ್‌ಗಳ ಪಾಲಿಗೆ ಭಾರತ ಅತ್ಯಂತ ಸಕ್ರಿಯ ಮಾರುಕಟ್ಟೆಯಾಗಿ ಪರಿಣಮಿಸಿದೆ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.