ಹೊನ್ನಿನ ವೀಳ್ಯ


Team Udayavani, Nov 27, 2017, 12:33 PM IST

27-27.jpg

ಬಾಗಲಕೋಟೆ ಜಿಲ್ಲೆಯ ಜಗದಾಳದ ರೈತ ಸದಾಶಿವ ಬಂಗಿ.  ಇತರೆ ರೈತರು ಕಬ್ಬು ಬೆಳೆಯುತ್ತಿದ್ದರೆ ಇವರು ಬಹುವಾರ್ಷಿಕ ಬೆಳೆಯಾದ ವೀಳ್ಯದೆಲೆಯನ್ನು ಬೆಳೆದು ಲಾಭ ಮಾಡುತ್ತಿದ್ದಾರೆ. 

    ವೀಳ್ಯದೆಲೆ 3 ರಿಂದ 4 ತಿಂಗಳಿಗೆ ಇಳುವರಿ ಬರುತ್ತದೆ. 1 ಎಕರೆ ವೀಳ್ಯದೆಲೆ ಬೆಳೆಗೆ ವರ್ಷದಲ್ಲಿ ಮೂರು ಬಾರಿ ತಿಪ್ಪೆಗೊಬ್ಬರ, ಬೇವಿನ ಹಿಂಡಿ, ತಂಬಾಕು ದೂಸು, ಜೊತೆಗೆ 15 ದಿನಕ್ಕೊಮ್ಮೆ ಆಕಳ ಮೂತ್ರವನ್ನು ಸಿಂಪಡಿಸಲಾಗುತ್ತದೆ.  ಕೀಟಬಾಧೆ ತಡೆಗಟ್ಟಲು ಬೇವಿನ ಎಣ್ಣೆ ಮತ್ತು ಸಾವಯವ ಔಷಧ ಸಿಂಪರಣೆ ಮಾಡಲಾಗುತ್ತದೆ. 1 ಎಕರೆ ಪ್ರದೇಶದಲ್ಲಿ ಹನಿ ನೀರಾವರಿಯ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಉತ್ತಮ ಇಳುವರಿ ಪಡೆಯಬಹುದು. ನುಗ್ಗೆ, ಚೊಗಚೆ ಗಿಡಗಳನ್ನೂ ಸದಾಶವಿ ಬೆಳೆಸಿದ್ದಾರೆ. ಅವು ಬಳ್ಳಿಗೆ ಆಸರೆಯಾಗಿವೆ.  ಬಳ್ಳಿಗೆ ಆಸರೆಯಾಗಿವೆ. ಹವಾಮಾನಕ್ಕೆ ತಕ್ಕಂತೆ ಗಿಡಗಳಿಗೆ ಬಿಸಿಲು ನೆರಳು ಬೇಕಾಗುತ್ತದೆ. ಅದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.  

 ಪ್ರತಿ ನಿತ್ಯ 1 ಎಕರೆಗೆ‌ 2ರಿಂದ 3 ಡಾಗ್‌ (ಪೆಂಡಿ) ವೀಳ್ಯದೆಲೆ ಪಡೆಯಬಹುದಾಗಿದ್ದು, 1ಡಾಗ್‌(ಪೆಂಡಿ)ಯಲ್ಲಿ ಸಾಮಾನ್ಯವಾಗಿ 12 ಸಾವಿರ ವೀಳ್ಯದೆಲೆ ಇರುತ್ತವೆ. ಸಂತಿ(ಲೋಕಲ್‌)ಎಲೆ, ಕಳ್ಳಿ ಎಲೆ, ಪಾಪಡ ಎಲೆ ಎಂದು ಇದರಲ್ಲಿ ಮೂರು ವಿಧಗಳಿದ್ದು, ಕಳ್ಳಿ ಎಲೆ ಮತ್ತು ಪಾಪಡ ಎಲೆ ಬೇರೆ ರಾಜ್ಯಗಳಿಗೆ ರಫ್ತಾಗುತ್ತವೆ. ಎಲೆಗಳನ್ನು ಕೊಯ್ಯಲು ಒಂದು ಡಾಗಿಗೆ 300 ರಿಂದ 400ರೂ ಕೂಲಿ ಕೊಡಬೇಕಾಗುತ್ತದೆ ಎನ್ನುತ್ತಾರೆ ಸದಾಶಿವ ಬಂಗಿ.

ಮಾರುಕಟ್ಟೆ 
 ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಗದಾಳ ಗ್ರಾಮದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚಿನ ವೀಳ್ಯದೆಲೆ ಬೆಳೆಗಾರರಿದ್ದು, ಅಂದಾಜು 500 ರಿಂದ 600 ಎಕರೆ ಭೂಮಿಯಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ. ಇಲ್ಲಿಂದ ಪ್ರತಿನಿತ್ಯ ಹೊರರಾಜ್ಯಗಳಿಗೂ ವೀಳೆÂದೆಲೆ ರಪ್ತಾಗುತ್ತಿವೆ. ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಹಾಗೂ ಗುಜರಾತ, ಫ‌ೂಣಾ ಸಾತಾರಾ, ಮುಂಬೈ, ಔರಂಗಾಬಾದ, ಜಾಲನಾ, ಬೀಡ, ನಾಸಿಕ, ಸಾವಂತವಾಡಿ, ಕಳಂಬಾ ಸೇರಿದಂತೆ ಮಹಾರಾಷ್ಟ್ರದ ವಿವಿಧ ಕಡೆ ಜಗದಾಳದಿಂದ ಪ್ರತಿನಿತ್ಯ 150 ರಿಂದ 200 ಡಾಗ್‌(ಪೆಂಡಿ)ಗಳು ಮಾರುಕಟ್ಟೆಗೆ ಹೋಗುತ್ತವೆ.

    ಒಂದು ಎಕರೆ ವೀಳ್ಯದೆಲೆ ಬೆಳೆಯಲು ಅಂದಾಜು 1 ರಿಂದ 1ವರೆ ಲಕ್ಷದವರೆಗೆ ಖರ್ಚು ಬರುತ್ತದೆ.  ನಂತರ ಪ್ರತಿ ತಿಂಗಳು ಲಾಭವನ್ನು ಮಾಡಿಕೊಳ್ಳಬಹುದು. ವರ್ಷದಲ್ಲಿ ಕೆಲವೊಂದು ಸಲ ದರ ಕುಸಿತ ಕಂಡರೂ, ವರ್ಷಕ್ಕೆ 7 ರಿಂದ 8 ಲಕ್ಷ ರೂ. ವರೆಗೆ ಲಾಭ ಬರುತ್ತದಂತೆ. ವೀಳ್ಯದೆಲೆಯ ಜೊತೆಗೆ ಉಪ ಉತ್ಪನ್ನವಾಗಿ ಮೇವು ದೊರೆಯುವುದರಿಂದ ಹೈನುಗಾರಿಕೆಗೆ ಇದು ಅನುಕೂಲವಾಗಿದೆ. 4 ರಿಂದ 5 ದನಗಳಿಗಾಗುವಷ್ಟು ಮೇವು ದೊರೆಯುತ್ತದೆ ಎನ್ನುತ್ತಾರೆ  ಸದಾಶಿವ ಬಂಗಿ.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸದಾಶಿವ ಬಂಗಿ ಮೊ: 9945329829

ಕಿರಣ ಶ್ರೀ ಶೈಲ ಆಳಗಿ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.