ಅವೆಂಜರ್‌ ಚೇಂಜ್‌


Team Udayavani, Jan 22, 2018, 1:01 PM IST

avenzer.jpg

ಬಜಾಜ್‌ (ಅವೆಂಜರ್‌) ಬದಲಾಗಿದೆ! ಕ್ರೂಸರ್‌ ಸೆಗ್ಮೆಂಟ್‌ನಲ್ಲಿ ಬ್ರ್ಯಾಂಡ್‌ ಆಗಿರುವ ಬೈಕ್‌ಗಳ ಸಾಲಿನಲ್ಲಿ ಬಜಾಜ್‌ ಕಂಪನಿಗೆ ವಿಶೇಷವಾದ ಹೆಸರಿದೆ. ಆಗಾಗ ಈ ಮೂಲಕ ದ್ವಿಚಕ್ರ ಮಾರುಕಟ್ಟೆಯಲ್ಲಿ ಸುದ್ದಿ ಮಾಡುತ್ತಲೇ ಇರುತ್ತದೆ. ಈಗ ತನ್ನ ಜನಪ್ರಿಯ ಬೈಕ್‌ಗಳಲ್ಲಿ ಒಂದಾದ ಅವೆಂಜರ್‌ನಲ್ಲಿ ಕೆಲವೊಂದು ಬದಲಾವಣೆ ಮಾಡಿ ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ.

ಗ್ರಾಹಕನ ಬೇಡಿಕೆ ಹಾಗೂ ದೂರುಗಳನ್ನು ಆಧರಿಸಿಯೇ ಒಂದಿಷ್ಟು ಬದಲಾವಣೆ ಮಾಡಿಕೊಂಡಿರುವ ಬಜಾಜ್‌ ಕ್ರೂಸ್‌ 220 ಹಾಗೂ ಸ್ಟ್ರೀಟ್‌ 220 ಬೈಕ್‌ಗಳನ್ನು ಪರಿಚಯಿಸಿದೆ. ಈ ಎರಡೂ ಶ್ರೇಣಿಯ ಬೈಕ್‌ಗಳೂ ಅವೆಂಜರ್‌ ಬ್ರ್ಯಾಂಡ್‌ ಮೌಲ್ಯವನ್ನು ಇನ್ನಷ್ಟು ಹೆಚ್ಚಸಲಿವೆ ಎನ್ನುವ ಲೆಕ್ಕಾಚಾರದಲ್ಲಿ ಕಂಪನಿ ಇದೆ.

ದ್ವಿಚಕ್ರ ವಾಹನ ಮಾರುಕಟ್ಟೆಂಲ್ಲಿ ಈಗಾಗಲೇ ಹೊಸ ಟ್ರೆಂಡ್‌ ಸೃಷ್ಟಿಸಿರುವ ಬಜಾಜ್‌, ಈ ಎರಡು ಬೈಕ್‌ಗಳ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಿ, ವಿನ್ಯಾಸದಲ್ಲೂ ಕೆಲವೊಂದು ಸಣ್ಣ-ಪುಟ್ಟ ಬದಲಾವಣೆ ಮಾಡಿದೆ. ಪರಿಚಯಿಸಿದೆ. ಗುರುತಿಸಬೇಕಾದ ಇನ್ನೊಂದು ಅಂಶ ಏನೆಂದರೆ ಈ ಎರಡು ಬೈಕ್‌ಗಳಲ್ಲಿ ಹಿಂಬದಿ ಸವಾರನಿಗೂ ಪ್ರಯಾಣ ಆರಾಮದಾಯಕ ಆಗಿರುವಂತೆ ಕೆಲವೊಂದು ಬದಲಾವಣೆ ಮಾಡಲಾಗಿದೆ ಎನ್ನುವುದು ಕಂಪನಿ ಅಂಬೋಣ.

ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ: ಹೊಸ ಅವೆಂಜರ್‌ ಸರಣಿ ಬೈಕ್‌ಗಳಲ್ಲಿ, ಇದೀಗ ಕಾರುಗಳಲ್ಲಿ ಅಳವಡಿಸಲಾಗುವ ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಪರಿಚಯಿಸಲಾಗುತ್ತಿದೆ. ಡಿಜಿಟಲ್‌ ಡಿಸ್ಪೆನಲ್ಲಿ ಬೈಕ್‌ನ ಕಾರ್ಯಕ್ಷಮತೆಯ ಎಲ್ಲಾ ಮಾಹಿತಿಗಳೂ ಲಭ್ಯ.

ಜೊತೆಗೆ ಕ್ರೂಸ್‌ 220 ಹಾಗೂ ಸ್ಟ್ರೀಟ್‌ 220 ಬೈಕ್‌ಗಳಲ್ಲಿ ಆಯಿಲ್‌ ಕೂಲರ್‌ ಅಳವಡಿಸಲಾಗಿದೆ. ಯಾವುದೇ ಪ್ರಕಾರದ ಹವಾಮಾನದಲ್ಲಿಯೂ ಸಲೀಸಾಗಿ ಎಂಜಿನ್‌ ಚಲಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹಿಂಡ್‌ ಶೀಲ್ಡ್‌ನ ವಿನ್ಯಾಸವನ್ನು ಇನ್ನಷ್ಟು ಸುಂದರಗೊಳಿಸಲಾಗಿದೆ. ಒಟ್ಟಾರೆ, ಎಲ್‌ಇಡಿ ಡಿಆರ್‌ಎಲ್‌ ಹೆಡ್‌ಲ್ಯಾಂಪ್‌ನೊಂದಿಗೆ ಹೊಸತನ ಪಡೆದುಕೊಂಡಿದೆ ಎನ್ನಲಡ್ಡಿ ಇಲ್ಲ.

ಇನ್ನಷ್ಟು ಸಾಮರ್ಥ್ಯದ ಎಂಜಿನ್‌: ಹೌದು, ಅವೆಂಜರ್‌ನ ಎಂಜಿನ್‌ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿರುವ ಬಜಾಜ್‌ ಕಂಪನಿ, ತನಗೆ ಬಂದ ದೂರುಗಳನ್ನಾಧರಿಸಿ ಗುಣಮಟ್ಟವನ್ನು ಹೆಚ್ಚಿಸಿದ್ದಾಗಿ ಹೇಳಿಕೊಂಡಿದೆ. 220 ಸಿಸಿ ಸಾಮರ್ಥ್ಯ ಹೊಂದಿರುವ ಕ್ರೂಸ್‌ ಹಾಗೂ ಸ್ಟ್ರೀಟ್‌ ಬೈಕ್‌ಗಳಲ್ಲೂ ಡಿಟಿಎಸ್‌-ಐ ಎಂಜಿನ್‌ ಬಳಕೆ ಮಾಡಿದೆ. 19ಪಿಎಸ್‌ ಪವರ್‌ ಸಾಮಥ್ಯದೊಂದಿಗೆ 17.5ಎನ್‌ಎಂ ಟಾರ್ಕ್‌ ಒಳಗೊಂಡಿದೆ. ಇದುವರೆಗಿನ ಹೆಚ್ಚಿನ ಕ್ರೂಸರ್‌ ಬೈಕ್‌ಗಳಿಗೆ ಪ್ರಬಲ ಪೈಪೋಟಿ ನೀಡಬಲ್ಲ ಶಕ್ತಿ ಈ ಬೈಕ್‌ಗಳದ್ದಾಗಿದೆ.

ಯಾವೆಲ್ಲಾ ಬಣ್ಣಗಳಲ್ಲಿ ಲಭ್ಯ?: ಕ್ರೂಸ್‌220 ಔಬರ್ನ್ ಬ್ಯಾಕ್‌ ಹಾಗೂ ಮೂನ್‌ ವೈಟ್‌ಗಳಲ್ಲಿ ಲಭ್ಯ. ಸ್ಟ್ರೀಟ್‌220 ಮ್ಯಾಟ್‌ ಬ್ಲ್ಯಾಕ್‌ ಮತ್ತು ವೈಟ್‌ಗಳಲ್ಲಿ ಲಭ್ಯವಿದೆ.

* ಬೆಂಗಳೂರಿನಲ್ಲಿ ಎಕ್ಸ್‌ ಶೋ ರೂಂ ಬೆಲೆ 93,000 ರೂ.
* ಪ್ರತಿ ಲೀಟರ್‌ಗೆ 45ಕಿ.ಮೀ. ಮೈಲೇಜ್‌

ಸ್ಪೆಸಿಫಿಕೇಷನ್‌ ಏನೇನು?
– ಐದು ಸ್ಪೀಡ್‌ ಗೇರ್‌ಬಾಕ್ಸ್‌
– 2210 ಮಿ.ಮೀ. ಉದ್ದ, 806ಮಿ.ಮೀ. ಅಗಲ
– 16ಮೀ. ಮೀ. ಗ್ರೌಂಡ್‌ ಕ್ಲಿಯರೆನ್ಸ್‌
– ಇಂಧನ ಶೇಖರಣೆ ಸಾಮರ್ಥ್ಯ 13 ಲೀಟರ್‌
– ಮುಂಭಾಗದಲ್ಲಿ 260ು.ಮೀ ಡಿಸ್ಕ್ ಬ್ರೇಕ್‌, ಹಿಂಭಾಗದಲ್ಲಿ 130ಮಿ.ಮೀ. ಡ್ರಮ್‌ ಬ್ರೇಕ್‌

* ರೈಡರ್ ಅಗ್ನಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.