ಸಜ್ಜೆಯಿಂದ ಸಿಹಿ ಬಾಳು 


Team Udayavani, Feb 19, 2018, 8:15 AM IST

b-2.jpg

ದಿನದ ಒಂದು ಹೊತ್ತು ಸಜ್ಜೆಯಿಂದ ತಯಾರಿಸಿದ ದೋಸೆ ರೊಟ್ಟಿಯೇ ಇವರ ಆಹಾರ. ಸಜ್ಜೆ ಉಂಡ ಕಾರಣ ಈವರೆಗೆ ಅವರಿಗೆ ಒಂದೇ ಒಂದು ಕಾಯಿಲೆಯೂ ಬಂದಿಲ್ಲ. ನೀರಾವರಿಯ ಸಮಸ್ಯೆಯಿರುವ ಅಲ್ಲಿನ ಒಣಭೂಮಿಯಲ್ಲಿ ಕಬ್ಬು, ಈರುಳ್ಳಿ, ಶೇಂಗಾ ಮುಂತಾದ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ ಎಂದು ಗೊತ್ತಾದಾಗ  ಇವರ ಪೂರ್ವಜರು ಸಿರಿಧಾನ್ಯಗಳನ್ನು ಬೆಳೆಯಲು ಮುಂದಾದರಂತೆ. 

ಸವದತ್ತಿ ತಾಲೂಕಿನ ಯರಗಟ್ಟಿ ಸತ್ತಿಗೇರಿಯ ದೊಂಡಪ್ಪ ಬಾಳಪ್ಪ ಅಜ್ಜನ್ನನವರ್‌, ಒಂದೂವರೆ ಎಕರೆಯಲ್ಲಿ ಸಜ್ಜೆ ಬೆಳೆದು, ಬಳಸುವ ಜೊತೆ ಉಳಿಕೆಯಾಗುವ ನಾಲ್ಕು ಕ್ವಿಂಟಾಲ್‌ ಧಾನ್ಯವನ್ನು ಮಾರಾಟ ಮಾಡುತ್ತಾರೆ. ಮಳೆಗಾಲದ ಪೂರ್ವ ಅಂದರೆ ಮೇ, ಜೂನ್‌ ತಿಂಗಳಲ್ಲಿ ಬಿತ್ತನೆ ಕೆಲಸ ಆರಂಭವಾಗುತ್ತದೆ. ಒಂದೂವರೆ ಎಕರೆಗೆ ಒಂದುವರೆ ಕೆ.ಜಿ. ಬಿತ್ತನೆ ಬೀಜ ಬೇಕು. ಸಜ್ಜೆ ಬೀಜಕ್ಕೆ ಕೆ.ಜಿ.ಗೆ  100.00 ರೂಪಾಯಿ.  ಇವರು ಹಿಂದಿನ ವರ್ಷ ಬೆಳೆದದ್ದನ್ನು ಜೋಪಾನವಾಗಿರಿಸಿ ಉಪಯೋಗಿಸುತ್ತಾರೆ. ಇತರ ಬೆಳೆಗಳಿಗೆ ಹೋಲಿಸಿದರೆ ಇದು ಶೂನ್ಯ ಬಂಡವಾಳದಲ್ಲಿ ನಿರ್ವಹಣೆಯಿಲ್ಲದೆ, ಕಡಿಮೆ ನೀರಾವರಿಯಲ್ಲಿ ಬೆಳೆಯಬಹುದಾದ ಸುಲಭ ಬೆಳೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಉತ್ತಮ ಇಳುವರಿ ಪಡೆಯಬಹುದು. ನೀರಾವರಿ ವ್ಯವಸ್ಥೆಯಿದೆಯೆಂದುಕೊಂಡು ಎರಡನೆ ಬೆಳೆ ಬಿತ್ತಿದರೆ ಅದರಿಂದ ಹೆಚ್ಚಿನ ಇಳುವರಿ ನಿರೀಕ್ಷಿಸುವಂತಿಲ್ಲ. 

 ಸಾಲು ತೆಗೆದು ಬಿತ್ತುವ ವಿಧಾನವನ್ನು ಇವರು ಅನುಸರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ಬಿತ್ತಿದ ಮೊದಲ ವಾರದಲ್ಲಿ ಮಳೆ ಬರುತ್ತಿರುವುದರಿಂದ ಪ್ರತ್ಯೇಕವಾಗಿ ನೀರುಹಾಯಿಸುವ ಕೆಲಸ ಇವರಿಗಿಲ್ಲ. ಎಂಟು ದಿನಗಳಲ್ಲಿ ಮೊಳಕೆ ಬರುತ್ತದೆ. ಇಪ್ಪತ್ತು ದಿನಕ್ಕೊಂದು ಬಾರಿಯಂತೆ ಎರಡು ಸಲ ಎಡೆಯೊಡೆಯುತ್ತಾರೆ. ಮೂರು ತಿಂಗಳಲ್ಲಿ ತೆನೆ ಬಂದು ನಾಲ್ಕನೆ ತಿಂಗಳ ಕೊನೆಗೆ ಬೆಳೆ ಕಟಾವಿಗೆ ಸಿದ್ಧಗೊಳ್ಳುತ್ತದೆ. ಕಳೆದ ವರ್ಷ ಆರು ಕ್ವಿಂಟಾಲ್‌ ಸಜ್ಜೆ ಕೈ ಸೇರಿದೆ. ಕ್ವಿಂಟಾಲ್‌ಗೆ ರೂ. 3000 ರೂ. ನಂತೆ ಮನೆಗೆ ಬಂದು ಖರೀದಿಸುತ್ತಾರೆ. 

   ಆಗಾಗ ಗೊಬ್ಬರ ನೀಡುವ, ಕಳೆ ತೆಗೆಯುವ, ನೀರುಹಾಯಿಸುವ, ಔಷಧ ಸಿಂಪಡಿಸುವ ಕೆಲಸಗಳು ಇಲ್ಲಿಲ್ಲ. ಸಾವಯವದಲ್ಲಿ ಬೆಳೆಯುತ್ತಿರುವುದರಿಂದ ಈವರೆಗೆ ಬೆಳೆಗೆ ರೋಗಗಳು ಬಾಧಿಸಲಿಲ್ಲವಂತೆ. ತೆನೆ ಮುರಿದು ನಂತರ ಒಂದು ತಿಂಗಳುಗಳ ಕಾಲ ಬೈಹುಲ್ಲಿನ ರಾಶಿ ಕಟ್ಟಿದಂತೆ ರಾಶಿಯಲ್ಲಿ ಕೂಡಿಟ್ಟು ಬಿಡುತ್ತಾರೆ. ಹೀಗೆ ಇಡುವುದರಿಂದ ಬೀಜ ತೆನೆಯಿಂದ ಸುಲಭವಾಗಿ ಬೇರ್ಪಡುತ್ತದೆ. ಒಂದು ತಿಂಗಳ ನಂತರ ಒಂದು ಬಾರಿ ತೆನೆಗೆ ಕೋಲಿನಿಂದ ಬಡಿದರೆ ಉಳಿದ ಸಜ್ಜೆ ತೆನೆಯಿಂದ ಸುಲಭವಾಗಿ ಬೇರ್ಪಡುತ್ತದೆ. ತೆನೆ ಎತ್ತುಗಳ ನೆಚ್ಚಿನ ಆಹಾರ. ಸಜ್ಜೆಯನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಗೋಣಿ ಚೀಲಕ್ಕೆ ತುಂಬಿಸಿದರೆ ಅಲ್ಲಿಗೆ ಅದರ ಕೆಲಸ ಮುಗಿಯಿತು. ಎಲ್ಲಾ ಕೆಲಸಗಳನ್ನು ಮನೆ ಮಂದಿಯೆ ಮಾಡಿ ಮುಗಿಸುವುದರಿಂದ ಸಜ್ಜೆ ಬೆಳೆಯಲು ತಗಲುವ ಖರ್ಚು ಶೂನ್ಯವೆಂದೇ ಹೇಳಬಹುದು.

 ಸಿರಿಧಾನ್ಯಗಳನ್ನು ಬೆಳೆಯುವ, ಆ ಮೂಲಕ ಒಣ ಭೂಮಿಯನ್ನು ಹಸಿರಾಗಿಸುವ ಪ್ರಯತ್ನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಒಂದು ಬೃಹತ್‌ ಅಭಿಯಾನವಾಗಿ ನಡೆಯುತ್ತಿದೆ. ಈಗಾಗಲೇ ಸಾವಿರಾರು ಎಕರೆಯಲ್ಲಿ ಸಿರಿಧಾನ್ಯ ಬೆಳೆಯಲಾಗಿದ್ದು ಬೆಳೆಗಾರರಿಂದ ಖರೀದಿಸುವ ವ್ಯವಸ್ಥೆಯೂ ಇಲ್ಲಿದೆ. ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಸಿರಿ ಧಾನ್ಯಗಳಿಂದ ಬಹು ಬಗೆಯ ತಿನಸುಗಳನ್ನು ತಯಾರಿಸುತ್ತಿದೆ.

ಮಾಹಿತಿಗೆ- 7353161257 
 ಚಂದ್ರಹಾಸ ಚಾರ್ಮಾಡಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.