ಮನೆಯ ಎದುರು ದೊಡ್ಡ ಮರಗಳು ಇರಬೇಕೋ, ಬೇಡವೋ?


Team Udayavani, Feb 26, 2018, 3:50 PM IST

tree.jpg

ಅರಳಿ, ಪಲಾಶ, ಹಲಸು, ಮಾವುಗಳನ್ನು ಮನೆಯ ಸುತ್ತಮುತ್ತ ವಿಸ್ತಾರವಾದ ಜಾಗ ಇದ್ದಲ್ಲಿ ವಾಸ್ತು ಸಲಹೆ ಪಡೆದು ಬೆಳೆಸಿ. ಮನಸ್ಸಿಗೆ ಬಂದಂತೆ, ಗಮನಕ್ಕೆ ಬಾರದೆಯೇ ಗಣೇಶ, ಕೃಷ್ಣ, ದುರ್ಗಾ ಎಂದು ವಿಗ್ರಹಗಳನ್ನು ಮನೆಯ ಆವರಣದಲ್ಲಿ ಸ್ಥಾಪಿಸಲು ಮುಂದಾಗದಿರಿ. ಪ್ರತಿಯೊಂದನ್ನೂ ಸೂಕ್ತವಾದ ಅಳತೆ, ಪರಿಸರ, ವಿಧಾನ ಸ್ಥಾಪನಾ ವಿಧಿಗಳೊಂದಿಗೇ ಕೇಳಿ, ತಿಳಿದು, ಯಥಾರ್ತವಾಗಿ ಮಾಡಿಕೊಳ್ಳಬೇಕು.

ನಿಮ್ಮ ಪರಿಸರ ಪ್ರೀತಿಯನ್ನು ಕೈಬಿಡದಿರಿ. ಮನೆ ಎದುರು ಚಿಕ್ಕಪುಟ್ಟ ಗಿಡಮರ ಬೆಳೆಸಿ. ದೊಡ್ಡ ದೊಡ್ಡ ಮರಗಳನ್ನು ಬೆಳೆಸುವ ವಿಚಾರ ಕೈಬಿಡಿ. ನಿಮ್ಮ ಮನೆಯ ವಾಸ್ತು ಶಕ್ತಿಯ ವಿಚಾರಗಳು ಪಂಚ ಭೂತಗಳ ಸಮೃದ್ಧಿಯೊಂದಿಗೆ ಸೂಕ್ತ ದಿಕ್ಕುಗಳನ್ನು ಬಳಸಿಕೊಂಡು ಬೆಳಕು, ಗಾಳಿ, ಮಣ್ಣು, ಕಾವು ಹಾಗೂ ದೈವ ಸಿದ್ಧಿಗಳನ್ನು ಕೊಡಬೇಕೇ ವಿನಃ ಇವೇ ಪಂಚಭೂತಗಳನ್ನು ಬಳಸಿಕೊಂಡು ಬಲಾಡ್ಯವಾಗಿ ಬೆಳೆಯುವ ಮನೆಯ ತೀರಾ ಸನಿಹದ ಮರಗಳಿಂದ ಸಕಾರಾತ್ಮಕ ಶಕ್ತಿಗೆ ಭಂಗವನ್ನು ತರುವ ಸಂದರ್ಭ ಎದುರಾಗಬಾರದು. ಅಂಗಳದಲ್ಲಿ ಬಣ್ಣದ ಹೂಗಳು ಪುಟ್ಟ ಗಿಡ ಬಳ್ಳಿಗಳು, ಲಾನ್‌ ಬೆಳೆದುಕೊಳ್ಳಲಿ. ಮುಖ್ಯವಾಗಿ ನಿಮ್ಮ ಮನೆಯು ಇಂಥದೇ ದಿಕ್ಕನ್ನು ಬಳಸಿಕೊಳ್ಳುವ ಬಾಗಿಲು ಎಂಬ ಅಂಶದ ಕುರಿತು ಆಧುನಿಕವಾದ ಈ ಕಾಲದಲ್ಲಿ ಗಮನಹರಿಸುವುದು ಕಷ್ಟಕರವಾದ ಸಂಗತಿ. ಹೊಂದಿಬರದ ಬಾಗಿಲುಗಳಿದ್ದರೂ ಮನೆಯಲ್ಲಿ ದೇವರ ಸ್ಥಳ ಎಲ್ಲಿ ಎಂಬುದನ್ನು ಸೂಕ್ತವಾಗಿ ರೂಪಿಸಿಕೊಂಡು, ಮನೆಯೊಳಗಿನ ದೇವರು ಪೂರ್ವದಿಕ್ಕನ್ನು ನೋಡುವಂತೆ ಗಮನ ಹರಿಸಿ, ಆ ದಿಕ್ಕಿಗೆ ದೇವರ ಎದುರಿನ ಪ್ರಧಾನ ದ್ವಾರ, ಮೆಟ್ಟಿಲು ಬರಲಿ.

ಹಲವರು ಪೂರ್ವದ ದಿಕ್ಕು, ನಂದಿ ಬಾಗಿಲು, ಮುಳುಗುವ ದಿಕ್ಕು ಎಂದು ಬಹಳಷ್ಟು ಪರದಾಡುತ್ತ, ಅಲೆದಾಡುತ್ತ, ಹಳಹಳಿಸುತ್ತ ಇರುತ್ತಾರೆ. ಮನೆಯ ಪ್ರಧಾನ ಬಾಗಿಲು ದೇವರು ನೋಡುವ ದಿಕ್ಕನ್ನು ಆಧರಿಸಿಕೊಂಡೇ ರೂಪಿಸಿಕೊಂಡಾಗ ದಕ್ಷಿಣದಿಕ್ಕು, ಮುಳುಗುವ ದಿಕ್ಕು ಎಂಬು ತಾಕಲಾಟಗಳು ಮುಖ್ಯವಾದವು. ಆದರೆ ಈ ವ್ಯವಸ್ಥೆ ಆಗಿದ್ದರೂ ಮನೆಯ ಸುತ್ತಮುತ್ತಲೂ ದೊಡ್ಡ ಮರಗಳನ್ನು ಬೆಳೆಸಿದರೆ, ಮನೆಯ  ಸಂಪನ್ನತೆಯನ್ನು ಹಾಳು ಮಾಡುತ್ತವೆ.  ಸುವ್ಯವಸ್ಥಿತವಾದ ಶಕ್ತಿ ಸುಳಿ ಹಾಗೂ ಸುಸಂಬದ್ಧ ಸ್ಪಂದನವಿರುವ ಮನೆಯ ತಳಹದಿಗೆ ಈ ಮರಗಳ ಕಠಿಣ ಬೇರುಗಳ ಶಕ್ತಿ ಘಾತದಿಂದ ಧಕ್ಕೆ ಒದಗದಂತೆ ಜಾಗ್ರತೆ ವಹಿಸಲೇ ಬೇಕು. ಚಿಕ್ಕಪುಟ್ಟ ಶಮೀ, ಔದುಂಬರ, ಉತ್ತರಣಿ ಗಿಡ, ಇರಲಿ, ದಟ್ಟವಾದುದು ಬೇಡ. ಎಕ್ಕದ ಗಿಡವನ್ನು ಕೂಡ ಸೂಕ್ತ ವಾಸ್ತು ಸಲಹೆಯೊಂದಿಗೆ ಬೆಳೆಸಬಹುದು.

ಅರಳಿ, ಪಲಾಶ, ಹಲಸು, ಮಾವುಗಳನ್ನು ಮನೆಯ ಸುತ್ತಮುತ್ತ ವಿಸ್ತಾರವಾದ ಜಾಗ ಇದ್ದಲ್ಲಿ ವಾಸ್ತು ಸಲಹೆ ಪಡೆದು ಬೆಳೆಸಿ. ಮನಸ್ಸಿಗೆ ಬಂದಂತೆ, ಗಮನಕ್ಕೆ ಬಾರದೆಯೇ ಗಣೇಶ, ಕೃಷ್ಣ, ದುರ್ಗಾ ಎಂದು ವಿಗ್ರಹಗಳನ್ನು ಮನೆಯ ಆವರಣದಲ್ಲಿ ಸ್ಥಾಪಿಸಲು ಮುಂದಾಗದಿರಿ. ಪ್ರತಿಯೊಂದನ್ನೂ ಸೂಕ್ತವಾದ ಅಳತೆ, ಪರಿಸರ, ವಿಧಾನ ಸ್ಥಾಪನಾ ವಿಧಿಗಳೊಂದಿಗೇ ಕೇಳಿ, ತಿಳಿದು, ಯಥಾರ್ತವಾಗಿ ಮಾಡಿಕೊಳ್ಳಬೇಕು. ಈ ಕಾರಣಕ್ಕಾಗಿಯೇ ಕುಲ ದೇವರು, ಗ್ರಾಮ ದೇವರು, ಊರ ದೇವರು ಎಂದು ಸಮುಷ್ಟಿಯ ಒಳಿತುಗಳನ್ನು ಗಮನದಲ್ಲಿ ಇಟ್ಟುಕೊಂಡ ದೇವ ಮಂದಿರ, ಗುಡಿ, ದೇವಸ್ಥಾನಗಳ ರಚನೆ ಮಾಡುತ್ತಾರೆಯೇ ವಿನಃ ಮನೆ ಮನೆಯ ಅಂಗಳದಲ್ಲಿ ಮಾಡುವುದು ಸೂಕ್ತವೆನಿಸದು. ಮೂಲದಲ್ಲಿ ಜಲಾಶಯ, ಕೆರೆ, ತೂಬುಗಳಿರುವ, ಮೋರಿಗಳಿರುವ ಜಾಗದಲ್ಲಿ ಮನೆ ಕಟ್ಟದಿರಿ. ಹೊರ ವಲಯಗಳು ಎಂದು ಗುರುತಿಸಿಕೊಂಡ ಜಾಗಗಳಲ್ಲಿ ಮನೆ ಕಟ್ಟಲು ಮುಂದಾಗದಿರಿ. ಕೆಲವು ಮನೋ ವಿಪ್ಲವಗಳನ್ನು, ಅಶಾಂತಿಗಳನ್ನು ಇದು ಸೃಷ್ಟಿಸಬಹುದು. ಇಂದು ನಗರಗಳಲ್ಲಿ ಪ್ರತಿಷ್ಠಿತ ಬಡಾವಣೆಗಳು ಎಂಬಲ್ಲಿ ಕೂಡ ಸ್ಥಿತಿವಂತರಾಗಿದ್ದೂ ಮನಃ ಶಾಂತಿ ಕಳಕೊಂಡ ಸಾವಿರಾರು ಕುಟುಂಬಗಳು ಇರುತ್ತವೆ. ನಿಷಿದ್ಧ ಸ್ಥಳಗಳು ನವೀಕರಣದ ಭರಾಟೆಯಲ್ಲಿ ಬಹು ಬೆಲೆ ಬಾಳುವ ನಿವೇಶನಗಳ ಕಾಲನಿಗಳಾಗಿ, ಲೇಔಟ್‌ಗಳಾಗಿ ಪರಿವರ್ತನೆಗೊಂಡಿರುತ್ತವೆ. ಆದರೆ ನಿರ್ದಿಷ್ಟ ನಿಷೇಧಿತ ಗುಣಧರ್ಮಗಳ ಕ್ರೂಢೀಕರಣದ ಪರಿಣಾಮಗಳನ್ನು ತಿಳಿಯಲಾರದೆ, ನಿಷಿದ್ಧ ( ಅನ್ಯ ಕಾರಣಗಳಿಗಾಗಿ ಬಹುಕಾಲದಿಂದ, ಹಿಂದಿನ ಏನೋ ಒಂದು ಅನಿಷ್ಟ ಜಾಗವೆಂದು ಪರಿಗಣಿಸಲ್ಪಟ್ಟ ಸ್ಥಳಗಳಲ್ಲಿ) ಜಾಗಗಳಲ್ಲಿ ಇ ಮಾರತುಗಳು, ಸೌಧಗಳು, ವಿಲ್ಲಾಗಳು ತಲೆ ಎತ್ತಿ ನಿಲ್ಲುತ್ತವೆ. ಆದರೆ ವಾಸಿಸುವ ಜನಕ್ಕೆ ಸುಖ ಮರೀಚಿಕೆ ಆಗಿ ಹೋಗುತ್ತದೆ.

ವಾಸ್ತು ಸಂಬಂಧಿತ ಗುಣಧರ್ಮದ ಅಳತೆಗೋಲಿನೊಂದಿಗೆ ಮನೆ ಕಟ್ಟಿದರೂ, ಜಾಗಕ್ಕೆ ಒಂದು ಸುಸಂಬದ್ಧ, ವಾಸ್ತವ, ಪಾಸಿಟಿವ್‌ ವೈಬ್ರೇಶನ್‌ ಇರದೇ ಹೋದರೆ, ಎಲ್ಲವೂ ಇದ್ದಾಗಲೂ ಸಮಾಧಾನದ ಕೊರತೆ ಇದ್ದೇ ಇರುತ್ತದೆ.  

– ಅನಂತಶಾಸ್ತ್ರಿ

ಟಾಪ್ ನ್ಯೂಸ್

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

Online Bitcoin Gambling Enterprises: An Overview to Betting with Cryptocurrency

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.