ಊದಲು ಬೆಳೆದು ಉದ್ದಾರವಾದರು !


Team Udayavani, Mar 26, 2018, 5:48 PM IST

2.jpg

ಕಳೆದ ಹತ್ತು ವರ್ಷಗಳ ಹಿಂದೆ ಯಾರಿಗೂ ಬೇಡವಾಗಿದ್ದ ಒಣಭೂಮಿಯದು. ಮಳೆಯನ್ನು ನಂಬಿ ಬೆಳೆದ ಬೆಳೆಗಳು ಕೈಕೊಡುತ್ತಿದ್ದದ್ದೇ ಹೆಚ್ಚು. ಕಬ್ಬು, ತರಕಾರಿ, ಪುಷ್ಪಕೃಷಿ ಹೀಗೆ ಬೇರೆ ಬೇರೆ ಬೆಳೆಗಳ ಪ್ರಯೋಗವನ್ನು ಮಾಡಿ ನೋಡಿದರೂ ಈ ಭೂಮಿಗೆ ಯಾವುದೂ ಸರಿಹೊಂದಲಿಲ್ಲ. ಅಷ್ಟರಲ್ಲಿ ರಾಜನಾರಾಯಣ ಬೆಳಗಾಂವಕರ್‌ ಅವರಿಗೆ ಗೆಳೆಯರೊಬ್ಬರು ಊದಲು ಬೆಳೆಯುವ ಬಗ್ಗೆ ಸಲಹೆ ನೀಡಿದರು. ಒಲ್ಲದ ಮನಸ್ಸಿನಿಂದ ಅದೂ ಗೆಳೆಯನ ಒತ್ತಾಯಕ್ಕೆ, ಬೆಳಗಾಂನ ಬೆಳೆಗಾರರೋರ್ವರಿಂದ ಬಿತ್ತನೆಗೆ ಬೇಕಾದ ಊದಲನ್ನು ಕೆ.ಜಿ.ಗೆ ರೂ. 100ರಂತೆ ಖರೀದಿಸಿ ಬೆಳಗಾಂವಕರ್‌ ತಂದರು. ಜೂನ್‌ ಆರಂಭದಲ್ಲಿ ಎರಡು ಎಕರೆ ಭೂಮಿಯನ್ನು ಉಳುಮೆ ಮಾಡಿ ಅದಕ್ಕೆ ಕೊಟ್ಟಿಗೆಯಲ್ಲಿದ್ದ ಗೊಬ್ಬರವನ್ನೆಲ್ಲಾ ಸುರಿದು ಒಂದು ವಾರಗಳ ಕಾಲ ಹಾಗೇ ಬಿಟ್ಟರು. ನಂತರ ಆ ಜಮೀನಿನಲ್ಲಿ ಎರಡು ಕೆ.ಜಿ. ಊದಲನ್ನು ಬಿತ್ತಿದರು. ಒಂದು ವಾರ ಕಳೆಯುತ್ತಿದ್ದಂತೆಯೇ ಗದ್ದೆ ತುಂಬಾ ಊದಲು ಚಿಗುರಿ ನಿಂತಿತು. ಇಪ್ಪತ್ತು ದಿನಗಳಾಗುತ್ತಿದ್ದಂತೆ ಎಡೆಯೊಡೆಸಿದರು.

 ಆ ನಂತರದ ಕತೆ ಕೇಳಿ; ಗೆಳೆಯ ಒತ್ತಾಯಕ್ಕೆಂದು ಬಿತ್ತನೆ ಮಾಡಿದ ನಂತರ ಎರಡು ಮೂರು ಮಳೆಯಾಗಿದೆ. ನಂತರ ನೀರು ಹಾಯಿಸುವ ಕೆಲಸಕ್ಕೆ ಇವರು ಹೋಗಲಿಲ್ಲ. ಮೂರು ತಿಂಗಳಲ್ಲಿ ಚೆನ್ನಾಗಿ ತೆನೆ ಬಂದು ಐದನೆ ತಿಂಗಳು ಕಟಾವಿಗೆ ಸಿದ್ಧಗೊಂಡಿತು. ಎರಡು ಎಕರೆಯಲ್ಲಿ ದೊರೆತ ಸುಮಾರು ಎಂಟು ಕ್ವಿಂಟಾಲ್‌ ಊದಲಿನಲ್ಲಿ ಒಂದು ಕ್ವಿಂಟಾಲನ್ನು ಮನೆ ಬಳಕೆಗೆ ಇರಿಸಿಕೊಂಡು ಉಳಿದದ್ದನ್ನು ಬೆಳಗಾಂ ಮಾರುಕಟ್ಟೆಯಲ್ಲಿ ಮಾರಿದರು. ಕ್ವಿಂಟಾಲ್‌ಗೆ ರೂ. 2500ರ‌ಂತೆ ದೊರೆಯಿತು. ಕ್ರಮೇಣ  ಇತರರಿಂದ ಮಾಹಿತಿ ಪಡೆದು ಊದಲಿನಿಂದ ತಿಂಡಿ, ದೋಸೆ ತಯಾರಿಸಿದರು. 

    ಈಗ, ಎರಡು ಎಕರೆ ಜಮೀನಿನಲ್ಲಿ ಊದಲು ನಳನಳಿಸುತ್ತದೆ. ಈ ಬೆಳೆಯಿಂದಲೇ ಬೆಳಗಾಂವಕರ ಸುಂದರ ಬದುಕನ್ನು ಕಂಡುಕೊಂಡಿದ್ದಾರೆ. ಬೆಳೆಯುವ ಜೊತೆಗೆ ಬಳಸುವ ಕುರಿತು ಇವರು ತರಬೇತಿ, ಮಾಹಿತಿಯನ್ನು ನೀಡುತ್ತಾರೆ. ಒಣಭೂಮಿಯಲ್ಲಿ ಕಡಿಮೆ ಖರ್ಚಿನಲ್ಲಿ, ಕಡಿಮೆ ನೀರಾವರಿಯಲ್ಲಿ ಬೆಳೆಯಬಹುದಾದ ಬೆಳೆ ಇದು ಎನ್ನುವುದು ಇವರ ಅನುಭವದ ಮಾತು. ವರ್ಷದಿಂದ ವರ್ಷಕ್ಕೆ ಈ ಬೆಳೆಗೆ ಬೇಡಿಕೆ ಹೆಚ್ಚುತ್ತಿದೆ. ಪರಿಣಾಮವಾಗಿ ಬೆಳೆಗಾರರ ಸಂಖ್ಯೆಯೂ ಹೆಚ್ಚುತ್ತಿದ್ದು ಊದಲಿಗೆ ಸರ್ವಋತುಗಳಲ್ಲೂ ಬಹುಬೇಡಿಕೆಯಿದೆ.

  ಸಿರಿಧಾನ್ಯಗಳು ಒಣ ಭೂಮಿಗೆ ಸೂಕ್ತವಾದ ಬೆಳೆಗಳಾಗಿದ್ದು ನಿರ್ವಹಣೆ ವೆಚ್ಚವೂ ಕಡಿಮೆ. ಇದನ್ನು ಬಿತ್ತುವ, ಬೆಳೆಯುವ ಬಗ್ಗೆ ಹೆಚ್ಚಿನ ಮಾಹಿತಿಯೂ ಬೇಕಾಗಿಲ್ಲ. ಅದಕ್ಕಿಂತ ಮಿಗಿಲಾಗಿ ಕೂಲಿಯಾಳುಗಳ ಹೆಚ್ಚಿನ ಅಗತ್ಯವೂ ಇಲ್ಲಿಲ್ಲ. ಇತರರು ಬೆಳೆಯುವತ್ತ ಪ್ರಯತ್ನಿಸಬಹುದು.

 ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ರಾತ್ರಿ ಗಂಟೆ 7ರಿಂದ 7.30ರ ಒಳಗೆ ಬೆಳೆಗಾರ ರಾಜನಾರಾಯಣರವರಿಗೆ ಕರೆ ಮಾಡಬಹುದು. ಅವರ ದೂರವಾಣಿ ಸಂಖ್ಯೆ : 9480629886.

 ಚಂದ್ರಹಾಸ ಚಾರ್ಮಾಡಿ

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.