ಹೂಡಿಕೆ ಮಾಡಲು ಭದ್ರತೆಯ ಭಾವನೆ ಇರಬೇಕು


Team Udayavani, Jun 25, 2018, 12:28 PM IST

hoodike.jpg

ತಿಂಗಳು ತಿಂಗಳು ಹಣ ಉಳಿಸಿ; ಉಳಿಸಿದ್ದು ಇನ್ನೊಂದು ರೂಪದಲ್ಲಿ ನಮಗೇ ಲಾಭವಾಗಿ ಬರುತ್ತದೆಯೋ, ಆಗ ನಾವು ಹೆಚ್ಚು ಹೆಚ್ಚು ಉಳಿಸುವುದಕ್ಕೆ ಮುಂದಾಗುತ್ತೇವೆ. ಇದು ಉಳಿತಾಯದ ವೃತ್ತ. ಉಳಿತಾಯವೆಂದರೆ, ಹೂಡಿಕೆ ಎಂದರೆ, ಕೇವಲ ಹಣ, ಹಣ ಎನ್ನುವುದಕ್ಕಿಂತ ಅದೊಂದು ಭದ್ರತೆ.

ಮಗ ಕೆಲಸಕ್ಕೆ ಸೇರಿ ಇನ್ನೂ 3 ತಿಂಗಳು ಕೂಡ ಆಗಲಿಲ್ಲ. ಆಗಲೇ ಅವನಿಗೆ ಒಂದು ನಿವೇಶನ ಹುಡುಕಿ, ಬ್ಯಾಂಕಿನಲ್ಲಿ ಸಾಲ ಮಾಡಿ, ಅವನ ಹೆಸರಿಗೆ ನಿವೇಶನ ನೋಂದಾಯಿಸಿದರು. “ಇವರಿಗೇನು ಅವಸರವಪ್ಪಾ ಈಗಷ್ಟೇ ಕೆಲಸಕ್ಕೆ ಸೇರಿದ್ದಾನೆ ಆಗಲೆ ಇವೆಲ್ಲ ಮಾಡಬೇಕಾ?’ ಅಂತ ಎಲ್ಲರೂ ಅಂದುಕೊಂಡರು. ಅವರು ಇಷ್ಟೆಲ್ಲ ಮಾಡಿದ್ದು ಯಾಕೆ ಗೊತ್ತಾ? ಮಗನ ಕೈಗೆ ಜಾಸ್ತಿ ಹಣ ಸಿಗಬಾರದು. ಯಾವಾಗ ಕೈಗೆ ಜಾಸ್ತಿ ಹಣ ಸಿಗುತ್ತದೆಯೋ ಆಗ ಅವರಿಗೆ ಯಾವುದಕ್ಕೆ ಖರ್ಚು ಮಾಡಬೇಕು. ಯಾವುದಕ್ಕೆ ಮಾಡಬಾರದು ಎನ್ನುವುದೂ ಗೊತ್ತಾಗುವುದಿಲ್ಲ. ಇಷ್ಟಕ್ಕೂ, ಇದೆಲ್ಲ ಮಾಡುತ್ತಿರುವುದು ಮಗನಿಗಾಗಿ ತಾನೆ?

ಅಗತ್ಯಕ್ಕಿಂತ ಹೆಚ್ಚು ಹಣ ಚಿಕ್ಕ ವಯಸ್ಸಿನಲ್ಲಿ ಬಂದಾಗ, ಅದು ವೆಚ್ಚವಾಗುವುದು ಬಟ್ಟೆಗೆ, ಹೋಟೆಲ್‌ಗೆ, ಮನೋರಂಜನೆಗಳಿಗೆ, ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳಿಗೆ. ಅತಿ ಹೆಚ್ಚು ಯುವಕರು ಯಾವ ದೇಶದಲ್ಲಿ ದುಡಿಯುತ್ತಾರೋ, ಆ ದೇಶದಲ್ಲಿ ಇಂತಹ ಉದ್ಯಮ ಅತ್ಯಂತ ಲಾಭದಾಯಕ ಆಗಿರುತ್ತದೆ. ಇದಕ್ಕೆ ನಮ್ಮ ದೇಶವೂ ಹೊರತಾಗಿಲ್ಲ.

ಉಳಿಸಿದ ಹಣವನ್ನು ವ್ಯವಸ್ಥಿತವಾಗಿ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹಾಕಬಹುದು ಎನ್ನುವುದು ಗೊತ್ತಾಯಿತು. ಇಷ್ಟೇ ಅಲ್ಲ. ನಾವೇ ನಮ್ಮ ಫ‌ಂಡ್‌ ನಿರ್ವಹಣೆ ಮಾಡಬಹುದು. ಹಾಗೆಂದರೆ ಷೇರು ಪೇಟೆಯ ಬಗೆಗೆ ಸ್ವಲ್ಪ ತಿಳುವಳಿಕೆ ಇದ್ದವರು ಪ್ರತಿ ತಿಂಗಳೂ ನಿರ್ಧಿಷ್ಟ ಪ್ರಮಾಣದ ಷೇರುಗಳನ್ನು ಕೊಳ್ಳುವುದು ಲೇಸು.

ಇದು ಹೇಗೆಂದರೆ, ಒಂದು 50 ಷೇರುಗಳನ್ನು, ಅದೂ ಮುಂಚೂಣಿಯ ಷೇರುಗಳನ್ನು ಆಯ್ಕೆ ಮಾಡಿಕೊಂಡು, ಯಾವ ಷೇರಿನಲ್ಲಿ, ಅದೂ ಯಾವವಲಯದಲ್ಲಿ ಇಳಿಕೆ ಆಗಿದೆ ಎನ್ನುವುದನ್ನು ನೋಡಿ, ಪ್ರತಿ ತಿಂಗಳೂ ಇಂತಿಷ್ಟು ಎಂದು ಖರೀದಿಸುತ್ತ ಹೋಗುವುದು. ಉದಾಹರಣೆಗೆ ನನಗೆ ಗೊತ್ತಿರುವವರು ಒಬ್ಬರು ಮಾಹಿತಿ ತಂತ್ರಜಾnನದ 3 ಕಂಪನಿ, ಬ್ಯಾಂಕ್‌ ನ 2 ಕಂಪನಿ, ಸಿಮೆಂಟ್‌, ಸ್ಟೀಲ್‌ ಹೀಗೆ ಹಲವಾರು ವಲಯದ ಕೆಲವೇ ಕಂಪನಿಗಳನ್ನು ಆರಿಸಿಕೊಂಡು ಆ ಕಂಪನಿಯ ಷೇರುಗಳನ್ನು ಪ್ರತಿ ತಿಂಗಳೂ ಖರೀದಿಸುತ್ತಾರೆ. ಬಿಡುವು ಇರುವವರು, ಆಸಕ್ತಿ ಇರುವವರು, ಜೊತೆಗೆ ಆರ್ಥಿಕ ಶಿಸ್ತು ಇರುವವರು ಇದೇ ದಾರಿಯನ್ನು ಅನುಸರಿಸಬಹುದು.

ಆರ್ಥಿಕ ಶಿಸ್ತಿಗೆ ಯಾಕೆ ಇಷ್ಟು ಒತ್ತುಕೊಡುವುದೆಂದರೆ,  ಅದಿರದಿದ್ದರೆ ಹೂಡಿಕೆ ಮಾಡಲು ವಿಶ್ವಾಸ ಇರುವುದಿಲ್ಲ. ನಮಗೆ ನಮ್ಮ ಬಗೆಗೆ, ನಮ್ಮ ಬಗ್ಗೆ ಇತರರಿಗೆ. ಇದು ಹೇಗೆಂದರೆ ನೀವು ಪ್ರತಿ ತಿಂಗಳೂ ಬಾಡಿಗೆ ಕಟ್ಟಿದಾಗ ಹೇಗೆ ಮನೆಯ ಮಾಲೀಕನಿಗೆ ನಂಬಿಕೆ, ವಿಶ್ವಾಸ ಮೂಡುವುದೋ ಅಷ್ಟೇ ಸಹಜವಾದದ್ದು.

ಒಮ್ಮೆ ತಿಂಗಳು ತಿಂಗಳು ಹಣ ಉಳಿಸಿ; ಉಳಿಸಿದ್ದು ಇನ್ನೊಂದು ರೂಪದಲ್ಲಿ ನಮಗೇ ಲಾಭವಾಗಿ ಬರುತ್ತದೆಯೋ, ಆಗ ನಾವು ಹೆಚ್ಚು ಹೆಚ್ಚು ಉಳಿಸುವುದಕ್ಕೆ ಮುಂದಾಗುತ್ತೇವೆ. ಇದು ಉಳಿತಾಯದ ವೃತ್ತ. ಉಳಿತಾಯವೆಂದರೆ, ಹೂಡಿಕೆ ಎಂದರೆ, ಕೇವಲ ಹಣ, ಹಣ ಎನ್ನುವುದಕ್ಕಿಂತ ಅದೊಂದು ಭದ್ರತೆ, ಸರಳತೆ, ಜೊತೆಗೆ ನಮ್ಮ ಜೀವನಕ್ಕೆ ನಾವು ಹಾಕಿಕೊಂಡ ಚೌಕಟ್ಟು ಆಗಿರುತ್ತದೆ ಎನ್ನುವುದನ್ನು ಮರೆಯಬಾರದು.

– ಸುಧಾಶರ್ಮ ಚವತ್ತಿ

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.