ಬೆರಳು ನೋಡಿದ ತಕ್ಷಣ ಅಂಗೈನ ಉದ್ದ ತಿಳೀಬೇಕು


Team Udayavani, Jul 16, 2018, 6:00 AM IST

26.jpg

ಹೂಡಿಕೆಯ ವಿಷಯ ಬಂದಾಗ ನಾವೆಲ್ಲಾ ಬೇರೆಯವರನ್ನೇ ಜಾಸ್ತಿ ನಂಬುತ್ತೇವೆ. ಹಾಗೆ ನಂಬುವ ಮುನ್ನ ಅಲ್ಲಿ ಇರಬಹುದಾದ ಸರಿ-ತಪ್ಪು, ಲಾಭ-ನಷ್ಟವನ್ನು ಪರಿಶೀಲಿಸಿ ಹೆಜ್ಜೆ ಇಡಬೇಕು. 

ಉಳಿತಾಯದ ಬಗೆಗೆ ಎಷ್ಟು ಹೇಳಿದರೂ ಕಡಿಮೆಯೇ. ಉಳಿತಾಯ ಮಾಡುವುದು ಎಂದರೆ ಖರ್ಚು ಕಡಿಮೆ ಮಾಡುವುದು ಎಂದಷ್ಟೇ ಅರ್ಥವಲ್ಲ. ಬ್ಯಾಂಕಿನಲ್ಲಿ ಹಣ ಹೂಡುವುದು ಎಂಬುದಷ್ಟೇ “ಉಳಿತಾಯ’ಕ್ಕೆ ಇರುವ ವಿವರಣೆಯಲ್ಲ.  ಬದಲಾಗಿ, ಯಾವುದಕ್ಕೆ ಖರ್ಚು ಮಾಡಬೇಕು. ಯಾವುದಕ್ಕೆ ಖರ್ಚು ಮಾಡಬಾರದು ಎನ್ನುವುದನ್ನು ಅರಿಯುವುದು. ಉಳಿತಾಯಕ್ಕೂ, ಅಗತ್ಯ- ಅನಗತ್ಯ ಖರ್ಚುಗಳ ನಡುವಿನ ಅಂತರ ಅರಿಯುವುದಕ್ಕೂ ಅತ್ಯಂತ ಕಡಿಮೆ ಅಂತರ ಇದೆ. ಆದರೆ ಇದನ್ನು ಪಾಲಿಸಿದಾಗ ಮಾತ್ರ ಬಹುದೊಡ್ಡ ವ್ಯತ್ಯಾಸವನ್ನು ನಾವು ಕಾಣುತ್ತೇವೆ.

ಹೂಡಿಕೆ ಶುರುವಾಗುವುದೇ ಉಳಿತಾಯದಿಂದ. ಉಳಿತಾಯದ ಬೀಜ ಬಿತ್ತಿದಾಗ, ಅದು ಸಸಿಯಾಗಿ ಬಳೆಯಲು ಹೂಡಿಕೆ ಅಗತ್ಯವಾಗುತ್ತದೆ. ಇದು ಕೇವಲ ದುಡ್ಡು ದುಡಿಸುವ, ದುಡ್ಡು ಬೆಳೆಸುವ ವಿಷಯ ಅಲ್ಲ. ಬದಲಾಗಿ ನಮ್ಮ ಜೀವನವನ್ನು ಪ್ಲಾನ್‌ ಮಾಡುವ ರೀತಿ. ನಮ್ಮ ಜೀವನದಲ್ಲಿ ಎದುರಾಗುವ ಎಷ್ಟೋ ರೀತಿಯ ಜವಾಬ್ಧಾರಿಗಳನ್ನು ಸಮರ್ಪಕವಾಗಿ ನಿಭಾಯಿಸುವ ವಿಧಾನ ಇದು. ಯಾವುದೇ ರೀತಿಯ ಹೂಡಿಕೆಯನ್ನು ಆರಿಸಿಕೊಳ್ಳುವಾಗಲೂ ನಮಗೆ ಸೂಕ್ತವಾದದ್ದನ್ನು ಆರಿಸಕೊಳ್ಳುವುದು ಅತ್ಯಂತ ಮುಖ್ಯ. ಹೂಡಿಕೆಯ ವಿಷಯ ಬಂದಾಗ ನಮಗೆಲ್ಲರಿಗೂ, ನಮಗಿಂತ ಹೆಚ್ಚಾಗಿ ಬೇರೆಯವರ ಮೇಲೆಯೇ ವಿಶ್ವಾಸ. ನಾವು ನಮ್ಮ ಅನುಭವಕ್ಕಾಗಲೀ, ಈ ಹಿಂದೆ ತಿಂದ ಏಟಿಗಾಗಲೀ ಬೆಲೆ ಕೊಡದೇ, ಬೇರೆಯವರು ಹೇಳುವುದನ್ನೇ ಒಪ್ಪಲು ಮುಂದಾಗುತ್ತೇವೆ.  ಅವರ ಪರಿಣಿತಿಯನ್ನು ನಂಬುತ್ತೇವೆ. ನಂಬುವುದು ತಪ್ಪಲ್ಲ. ಆದರೆ ನಂಬುವ ಮೊದಲು ಅದನ್ನು ಒಮ್ಮೆ ಪರಿಶೀಲಿಸುವುದು ಅಗತ್ಯ. ಹಾಗೇ ಪರಿಶೀಲಿಸುವುದಕ್ಕೆ ಜಾಣ್ಮೆಯ ನಡೆ ಬೇಕು.

ಷೇರು ಪೇಟೆಯ ಬಗೆಗೆ ಒಂದು ಮಾತಿದೆ; ನಾವು ಇವತ್ತು ಮಾಡಬೇಕು ಅಂದೊRಂಡಿರೋದನ್ನ ಷೇರು ಪೇಟೆ ನಿನ್ನೆಯೇ ಮಾಡಿ ಮುಗಿಸಿರುತ್ತದೆ. ಅಂದರೆ, ಷೇರು ಪೇಟೆಯಲ್ಲಿರುವವರು ಯಾವುದೇ ವಿಷಯವನ್ನೂ ತುಂಬಾ ತ್ವರಿತವಾಗಿ ಯೋಚಿಸುತ್ತಾರೆ. ಅವರ ಕೆಲಸ ಮತ್ತು ಯೋಜನೆಗಳು ಯಾವತ್ತೂ ಫಾಸ್ಟ್‌ ಆಗಿರುತ್ತವೆ.  ಉದಾಹರಣೆಗೆ, ಈ ವರ್ಷ ಉತ್ತಮ ಮಳೆ ಇದೆ ಅಂದ ತಕ್ಷಣ, ಮಳೆ ಆಧರಿಸಿದ ವಲಯ ಅಂದರೆ ಕೃಷಿ, ಕೃಷಿಗೆ ಪೂರಕವಾದ ವಲಯ ಅಂದರೆ ರಸಗೊಬ್ಬರ, ಔಷಧಿ, ಕೃಷಿ ಉಪಕರಣ, ಸಲಕರಣೆ ಇಷ್ಟೇ ಅಲ್ಲ; ಉತ್ತಮ ಬೆಳೆ ಬಂದರೆ ರೈತರ ಖರೀದಿ ಸಾಮರ್ಥ್ಯ ಹೆಚ್ಚುತ್ತದೆ. ಅದು ವಾಹನ ಇರಬಹುದು, ಬಟ್ಟೆ ಇರಬಹುದು, ಟಿವಿ/ಪ್ರಿಜ್‌ ನಂತಹ ಉತ್ಪನ್ನಗಳಿರಬಹುದು… ಹೀಗೆ ಈ ಎಲ್ಲ ವಲಯಗಳ ಷೇರುಗಳಲ್ಲೂ ಏರಿಕೆ ಕಾಣುತ್ತದೆ. ಇದು ಹೇಗೆ ಅಂದರೆ ಬೆರಳು ನೋಡಿಯೇ ಮುಂಗೈ ಅಳೆಯುವುದು ಅನ್ನುತ್ತಾರಲ್ಲ ; ಹಾಗೆ !

ಮುಗಿಸುವ ಮುನ್ನ
ಇತ್ತೀಚಿನ ದಿನಗಳಲ್ಲಿ, ಔಷಧ ವಲಯದ ಕಂಪನಿಗಳಲ್ಲಿ ತೀವ್ರ ಏರಿಕೆ ಕಾಣಬಹುದು ಎನ್ನುವ ಮಾತು ಇತ್ತು. ಕಳೆದ ಮೂರು ವರ್ಷಗಳಿಂದ ಇಳಿಕೆ ತೋರಿದ್ದ ಈ ವಲಯದಲ್ಲಿ ಏರಿಕೆ ಸಹಜವಾಗಿ ಇರಬಹುದು. ಷೇರುಗಳಲ್ಲಿ ಹಣ ತೊಡಗಿಸುವ ಕೆಲವು ಪಂಟರ್‌ಗಳಿರುತ್ತಾರೆ.  ಅವರು, ಈ ಬೆಳವಣಿಗೆಯನ್ನು ಮೊದಲೇ ಗಮನಿಸಿ, ಔಷಧ ವಲಯದ ಮ್ಯೂಚುವಲ್‌ ಫ‌ಂಡ್‌ ನಲ್ಲಿ ಹಣ ತೊಡಗಿಸಿ ರಿಸ್ಕ್ ಕಡಿಮೆ ಮಾಡಿಕೊಂಡರು. ಇದೇ ಜಾಣತನ. ಹಣ ಹೂಡಿಕೆಯ ಹಿಂದಿನ ಚುರುಕು ಗ್ರಹಿಕೆಗೆ ಉದಾಹರಣೆ ಇದು.

ಸುಧಾಶರ್ಮ ಚವತ್ತಿ

ಟಾಪ್ ನ್ಯೂಸ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.