ಬಿರುಗಾಳಿಗೆ ತಡೆ ಒಡ್ಡಬೇಕು !


Team Udayavani, Jul 23, 2018, 12:35 PM IST

birugali.png

ಮನೆ ವಿನ್ಯಾಸ ಮಾಡುವಾಗ ವಿವಿಧ ಕಾಲದಲ್ಲಿ ಯಾವ ದಿಕ್ಕಿನಿಂದ ಹಾಗೂ ಎಷ್ಟು ಜೋರಾಗಿ ಗಾಳಿ ಬೀಸುತ್ತದೆ ಎಂದು ಪರಿಶೀಲಿಸಿ ನಂತರ ಕಿಟಕಿ ಬಾಗಿಲುಗಳನ್ನು ಇಡುವುದು ಉತ್ತಮ. ನಿಮ್ಮ ಹತ್ತಿರದ ಹವಾಮಾನ ಇಲಾಖೆಯಿಂದ ಗಾಳಿ ಬೀಸುವ ದಿಕ್ಕಿನ ಮಾಹಿತಿ ಪಡೆಯಬಹುದು. ಇಲ್ಲವೇ, ಈಗ ವಿವಿಧ ವೆಬ್‌ ಸೈಟ್‌ಗಳಲ್ಲೂ ಗಾಳಿ ಬೀಸುವ ದಿಕ್ಕಿನ ಮಾಹಿತಿ ದೊರೆಯುತ್ತದೆ. 

ಅತಿಯಾದರೆ ಅಮೃತವೂ ವಿಷವಾಗಿಬಿಡುತ್ತದೆ ಅನ್ನೋದು ಮನೆ ಕಟ್ಟುವ ವಿಚಾರದಲ್ಲಿ ಸುಳ್ಳಲ್ಲ. ಗಾಳಿಯನ್ನೇ ತಗೊಳ್ಳಿ. ಅದಿಲ್ಲದೆ ಜೀವಿಸಲು ಆಗುವುದೇ ಇಲ್ಲ ಎನ್ನುವುದು ನಿಜವಾದರೂ, ಬಿಡುವಿಲ್ಲದೇ ಧೋ ಎಂದು ಬೀಸುವ ಗಾಳಿ ಕೆಲ ನಿಮಿಷಗಳಲ್ಲೇ ಸುಸ್ತು ಹೊಡೆಸುವುದಂತೂ ನಿಜ. ಆಷಾಢದಲ್ಲಿ ನಿಲ್ಲದೆ ಬೀಸುವ ಗಾಳಿ ಕೆಲಕಾಲ ನಿಂತರೂ ನಮಗೆ ಸೆಖೆಯ ಅನುಭವ ಆಗುವುದೂ ಇದ್ದದ್ದೇ! ಹೀಗಾಗಲು ಮುಖ್ಯ ಕಾರಣ- ಈ ಅವಧಿಯಲ್ಲಿ ಮಳೆ ಹೊತ್ತು ಬರುವ ಗಾಳಿಯಲ್ಲಿನ ಅತ್ಯಧಿಕ ತೇವಾಂಶ.  ಹೇಳಿಕೇಳಿ ಇದು ಬೇಸಿಗೆಯ ಮಳೆಗಾಲ.  ಹಾಗಾಗಿ ಬಿಸಿಲಿನಿಂದ ಸಮುದ್ರದ ನೀರು ಆವಿಯಾಗಿ ಮೇಲೆದ್ದು ಗಾಳಿಯಲ್ಲಿನ ತೇವಾಂಶದ ಭಾರ ಹೊರಲಾಗದಿದ್ದಾಗ ಕೆಳಗೆ ಬೀಳುವ ಮಳೆ ನಮಗೆಲ್ಲ ಜೀವದಾಯಕ. ಬಿಟ್ಟೂ ಬಿಡದೆ ಬೀಸುವ ಬಿರುಗಾಳಿಗೆ ನಾವು ಈ ಅವಧಿಯಲ್ಲಿ ಕೆಲ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಂಡರೆ, ಮಳೆಗಾಲದ ಮಾಮೂಲಿ ಸಮಸ್ಯೆಗಳಿಂದ ಪಾರಾಗಬಹುದು.

ಗಾಳಿಯ ಒಳ ಹರಿವನ್ನು ಕಡಿತಗೊಳಿಸಿ
ಬಾಟಲಿಯೊಳಗೆ ನೇರವಾಗಿ ಊದಲು ಆಗುವುದಿಲ್ಲ, ಏಕೆಂದರೆ ಅದಕ್ಕಿರುವ ಒಂದು ಮಾರ್ಗದಿಂದ ಗಾಳಿ ಒಳಹೊಕ್ಕರೆ ಹೊರಗೆ ಹೋಗಲು ಆಗದಿರುವ ಕಾರಣ, ಎಷ್ಟು ಜೋರಾಗಿ ಊದುತ್ತೀವೋ ಅಷ್ಟೇ ಜೋರಾಗಿ ಅದು ತಡೆಯುವ ಕಾರಣ ನಮ್ಮ ಶ್ರಮ ವ್ಯರ್ಥ ಅಗುತ್ತದೆ. ಅದೇ ರೀತಿಯಲ್ಲಿ ನಿಮ್ಮ ಮನೆಗೆ ಕಿಟಕಿಗಳು ಎದುರು ಬದುರಾಗಿದ್ದರೆ, ಒಂದು ಕಡೆಯಿಂದ ಪ್ರವೇಶಿಸುವ ಗಾಳಿ ಮತ್ತೂಂದು ಕಡೆಯಿಂದ ಸುಲಭದಲ್ಲಿ ರಭಸವಾಗಿ ಹೋಗುವಂತಿದ್ದರೆ, ಜೋರು ಗಾಳಿ ಕಾಲದಲ್ಲಿ ಹಾವಳಿ ಇದ್ದೇ ಇರುತ್ತದೆ. ಆದುದರಿಂದ ಎದುರು ಬದುರು ಇರುವ ಕಿಟಕಿಗಳಲ್ಲಿ ಒಂದನ್ನು ಮುಚ್ಚಿದರೆ, ಸಾಕಷ್ಟು ಶುದ್ಧ ಗಾಳಿಯ ಪ್ರವೇಶ ಸಾಧ್ಯವಾದರೂ ಜೋರು ಗಾಳಿ ಒಳನುಸುಳಲು ಆಗುವುದಿಲ್ಲ. 

ಮನೆ ವಿನ್ಯಾಸ ಮಾಡುವಾಗ ವಿವಿಧ ಕಾಲದಲ್ಲಿ ಯಾವ ದಿಕ್ಕಿನಿಂದ ಹಾಗೂ ಎಷ್ಟು ಜೋರಾಗಿ ಗಾಳಿ ಬೀಸುತ್ತದೆ ಎಂದು ಪರಿಶೀಲಿಸಿ ನಂತರ ಕಿಟಕಿ ಬಾಗಿಲುಗಳನ್ನು ಇಡುವುದು ಉತ್ತಮ. ನಿಮ್ಮ ಹತ್ತಿರದ ಹವಾಮಾನ ಇಲಾಖೆಯಿಂದ ಗಾಳಿ ಬೀಸುವ ದಿಕ್ಕಿನ ಮಾಹಿತಿ ಪಡೆಯಬಹುದು. ಇಲ್ಲವೇ, ಈಗ ವಿವಿಧ ವೆಬ್‌ ಸೈಟ್‌ಗಳಲ್ಲೂ ಗಾಳಿ ಬೀಸುವ ದಿಕ್ಕಿನ ಮಾಹಿತಿ ದೊರೆಯುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಏನೆಂದರೆ- ಬೇಸಿಗೆಯಲ್ಲಿ ಎಷ್ಟು ಬೇಕಾದರೂ ಗಾಳಿ ಬೀಸಿದರೂ ಪರವಾಗಿಲ್ಲ ಎಂದೆನಿಸಿದರೂ, ಇತರೆ ಕಾಲದಲ್ಲಿ ಸ್ವಲ್ಪ ಥಂಡಿ ಅನ್ನಿಸಿದರೂ ಗಾಳಿಯ ಜೋರು ಹರಿವು ಬೇಡವಾಗುತ್ತದೆ. ಬೇಸಿಗೆಯ ಮಳೆ, ಅಂದರೆ ಮುಂಗಾರಿನ ಕಾಲದಲ್ಲಿ ನಮಗೆ ಸ್ವಲ್ಪವಾದರೂ ಗಾಳಿಯ ಒಳಹರಿವು ಬೇಕಾಗುತ್ತದೆ. ಆದುದರಿಂದ ನಾವು ಮನೆಯ ಪ್ಲಾನ್‌ ಮಾಡುವಾಗ ತೆರೆಯಬಹುದಾದ ಕಿಟಕಿಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ, ತಕ್ಕಷ್ಟು ಅಂದರೆ ಒಂದೆರಡು ಇಂಚು ಮಾತ್ರ ತೆರೆದಿಟ್ಟುಕೊಂಡರೆ, ಅಗಲ ಕಡಿಮೆ ಇರುವುದರಿಂದ, ಇಲ್ಲಿ ಪ್ರವೇಶಿಸುವ ಗಾಳಿ ನಮಗೆ ಹೆಚ್ಚು ಉಪಟಳ ಮಾಡುವುದಿಲ್ಲ. ಈ ರೀತಿಯಾಗಿ ನಾವು ಸುಲಭದಲ್ಲಿ ಜೋರು ಗಾಳಿಯಿಂದ ಮುಕ್ತಿ ಪಡೆಯಬಹುದು.

ಜೋರು ಗಾಳಿಗೆ ಗಾಜುಗಳ ಒಡೆತ
ಗಾಜು ಹಾಕಿದ ಕಿಟಕಿಗಳನ್ನು ನಿಲ್ಲಿಸುವ ಅಥವ ಸ್ತಬ್ಧವಾಗಿಸುವ ಹಿಡಿಗಳನ್ನು ಅಳವಡಿಸುವ ಮೂಲಕ ನಮಗೆ ಬೇಕಾದಷ್ಟು ಮಾತ್ರ ತೆರೆದುಕೊಂಡು ಅಲ್ಲೇ ಇರುವಂತೆ ಮಾಡಬೇಕು. ಇಲ್ಲದಿದ್ದರೆ ತೆರೆದ ಕಿಟಕಿಗಳು ಗಾಳಿ ಜೋರಾಗಿ ಬೀಸಿದರೆ, ಕಿಟಕಿ ಬಾಗಿಲು ಟಪಾರ್‌ ಎಂದು ಮುಚ್ಚಿಕೊಂಡರೆ ಅದಕ್ಕೆ ಹಾಕಿದ ಗಾಜು ಒಡೆಯಬಹುದು. ಕಿಟಕಿಗಳು ಮರದ್ದೇ ಇರಲಿ ಇಲ್ಲವೇ ಸ್ಟೀಲ್‌ನವೇ ಆಗಿರಲಿ, ಅದಕ್ಕೆ ವಿವಿಧ ಕೋನಗಳಲ್ಲಿ ಕಿಟಕಿಯನ್ನು ತೆರೆದಿಡಬಹುದಾದ, “ಬಾಗಿಲುಗಳು’ ನಿರ್ದಿಷ್ಟ ಕೋನದಲ್ಲಿ ಫಿಕ್ಸ್‌ ಆಗುವಂತೆ ಸ್ಟೇಗಳನ್ನು ಹಾಕುವುದು ಅತ್ಯಗತ್ಯ. ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಯುಪಿಸಿ- ಪ್ಲಾಸ್ಟಿಕ್‌ ಹಾಗೂ ಅಲ್ಯುಮೀನಿಯಂ ಕಿಟಕಿಗಳಲ್ಲಿ ಸುಧಾರಿತ ಕೀಲು ವ್ಯವಸ್ಥೆ ಇರುವುದರಿಂದ, ಈ ಮಾದರಿಯವನ್ನು ಯಾವ ಕೋನದಲ್ಲಿ ಬೇಕಾದರೂ ಸುಲಭದಲ್ಲಿ ನಿಲ್ಲಿಸಬಹುದು ಹಾಗೂ ಇವು ಗಾಳಿಗೆ    ಜೋರಾಗಿ ಹೊಡೆದುಕೊಳ್ಳುವುದೂ ಇಲ್ಲ!

ಅಕ್ಕ ಪಕ್ಕ ಕಿಟಕಿಗಳಿದ್ದರೆ
ಮನೆಗಳಿಗೆ ಸಾಮಾನ್ಯವಾ ಕ್ರಾಸ್‌ ವೆಂಟಿಲೇಷನ್‌ ಇರಲಿ ಎಂದು ಅಕ್ಕಪಕ್ಕದ ಗೋಡೆಗಳಿಗೆ ಕಿಟಕಿಗಳನ್ನು ಅಳವಡಿಸಲಾಗುತ್ತದೆ. ಒಂದು ಕಿಟಕಿ ದಕ್ಷಿಣಕ್ಕೆ ಇದ್ದು ಮತ್ತೂಂದು ಪೂರ್ವಕ್ಕೆ ಇದ್ದರೆ- ಈ ಕಾಲದಲ್ಲಿ ಬೀಸುವ ಜೋರು ಗಾಳಿ ದಕ್ಷಿಣದಿಂದ ಹೊಕ್ಕು ಪೂರ್ವದ ಕಡೆಗೆ ಹೊರಳುವಾಗ ಮನೆಯೊಳಗಿನ ವಸ್ತುಗಳನ್ನು ತಳ್ಳಲೂ ಬಹುದು. ಆದುದರಿಂದ ಈ ಅವಧಿಯಲ್ಲಿ ಪೂರ್ವದ ಕಿಟಕಿಯನ್ನು ತೆರೆದಿಟ್ಟರೆ ಪ್ಯಾಸೀವ್‌ ವೆಂಟಿಲೇಷನ್‌- ತಂತಾನೇ ಆಗುವ ಗಾಳಿಯ ಹರಿವಾಗಿ ಜೋರು ಗಾಳಿಯಿಂದ ರಕ್ಷಣೆ ಪಡೆಯಬಹುದು. ಜೋರು ಗಾಳಿ ಬೀಸುವ ಕಿಟಕಿಯನ್ನು ಈ ಅವಧಿಯಲ್ಲಿ ಮುಚ್ಚಿಟ್ಟರೆ ಅನುಕೂಲಕರ. ಬಿರುಬೇಸಿಗೆಯಲ್ಲೂ ನಮಗೆ ದಕ್ಷಿಣದಿಂದ ಗಾಳಿ ಬೀಸುವ ಕಾರಣ, ಆ ಅವಧಿಯಲ್ಲಿ ಈ ದಿಕ್ಕಿನ ಕಿಟಕಿಗಳನ್ನು ಧಾರಾಳವಾಗಿ ತೆರೆದಿಟ್ಟುಕೊಳ್ಳಬಹುದು.

ಕಲಾತ್ಮಕ ಕಿಟಕಿಗಳು
ಇತ್ತೀಚಿನ ದಿನಗಳಲ್ಲಿ ಕಿಟಕಿಗಳನ್ನು ವಿವಿಧ ನಮೂನೆಗಳಲ್ಲಿ ಹಾಗೂ ಸುಂದರವಾಗಿ ವಿನ್ಯಾಸ ಮಾಡಲಾಗುತ್ತದೆ. ಕಂಪ್ಯೂಟರ್‌ ಕಟ್ಟಿಂಗ್‌ ಬಂದಮೇಲಂತೂ ನಮಗಿಷ್ಟವಾದ ರೀತಿಯಲ್ಲಿ ವಿವಿಧ ವಸ್ತುಗಳನ್ನು ಕಲಾತ್ಮಕವಾಗಿ 
ಕತ್ತರಿಸುವುದು ಸ್ವಲ್ಪ ದುಬಾರಿ ಆದರೂ ಶೀಘ್ರವಾಗಿ ಆಗುವುದರಿಂದ ವಿನ್ಯಾಸಗಳ ವೈವಿಧ್ಯತೆ ಹೆಚ್ಚಿದೆ. ಮಾಮೂಲಿ ಕಿಟಕಿಗಳ ಬದಲಾಗಿ ಜಾಲಿ – ಮಾದರಿಯಲ್ಲಿ ಕೊರೆದ ಪದರಗಳನ್ನು ಅಳವಡಿಸುವುದು ಜನಪ್ರಿಯವಾಗುತ್ತಿದೆ. ಕಿಟಕಿಗಳನ್ನು ಸಂಪೂರ್ಣವಾಗಿ ತೆರೆದಿಡುವ ಬದಲು ಒಂದು ಭಾಗದಲ್ಲಿ ಜಾಲಿ ವರ್ಕ್‌ ಮಾಡಿಸಿದರೆ, ನಮಗೆ ಸಾಕಷ್ಟು ಖಾಸಗೀತನ ಒದಗಿಸುವುದರ ಜೊತೆಗೆ ಜೋರು ಗಾಳಿಯ ಹೊಡೆತವನ್ನೂ ಇವು ತಡೆಯಬಲ್ಲವು.

ಈಗಾಗಲೇ ಮನೆ ಕಟ್ಟಿದ್ದರೆ
ಜೋರುಗಾಳಿ ಯಾವ ದಿಕ್ಕಿನಿಂದ ಬೀಸಿ ಉಪಟಳ ಉಂಟುಮಾಡುತ್ತಿದೆ ಎಂದು ಗುರುತಿಸಿ, ಕೆಲವೊಮ್ಮೆ ಮನೆಯ ಅಕ್ಕ ಪಕ್ಕ ಇರುವ ತೆರೆದ ಸ್ಥಳಗಳಲ್ಲಿ – ಟನಲ್ಲಿಂಗ್‌ ಅಂದರೆ ಗಣಿಯ ಕೊಳವೆಯಲ್ಲಿ ಪ್ರವೇಶಿಸುವಂತೆ ಗಾಳಿ ಒಳಹೊಕ್ಕು ನಂತರ ಕಿಟಕಿಗಳ ಮೂಲಕ ಮನೆಯನ್ನು ಪ್ರವೇಶಿಸಿ ನಂತರ ಅಡ್ಡಾದಿಡ್ಡಿಯಾಗಿ ಸುಂಟರ ಗಾಳಿಯಂತೆ  ತಿರುಗಿ ಉಪಟಳ ಮಾಡಬಹುದು. ಇಂಥ ಸಂದರ್ಭದಲ್ಲಿ ಹೆಚ್ಚು ಗಾಳಿ ಪ್ರವೇಶಿಸುವ ಕಿಟಕಿಗೆ ಒಂದು ಕಲಾತ್ಮಕವಾಗಿ ಕಡೆದ ಉಕ್ಕಿನ ಇಲ್ಲವೆ ಸ್ಟೈನ್‌ಲೆಸ್‌ ಸ್ಟೀಲಿನ ಸ್ಕ್ರೀನ್‌ ಅನ್ನು ಅಳವಡಿಸುವುದರ ಮೂಲಕ ಗಾಳಿಯ ಒಳಹರಿವಿಗೆ ನಿಯಂತ್ರಣ ಒಡ್ಡಿ ಎಷ್ಟು ಬೇಕೋ ಅಷ್ಟು ಮಾತ್ರ ಗಾಳಿಯನ್ನು ಒಳಬಿಟ್ಟುಕೊಳ್ಳಬಹುದು. ಈ ಮಾದರಿಯ ಕಲಾತ್ಮಕ ಸ್ಕ್ರೀನುಗಳು ನೋಡಲು ಸುಂದರವಾಗಿ ಕಾಣುವುದರ ಜೊತೆಗೆ ಜೋರು ಗಾಳಿಗೆ ಒಂದು ಮಾದರಿಯ ಸ್ಪೀಡ್‌ ಬ್ರೇಕರ್ ರೀತಿ ಕಾರ್ಯ ನಿರ್ವಹಿಸುತ್ತವೆ.

ಹೆಚ್ಚಿನ ಮಾಹಿತಿಗೆ: 98441 32826

– ಆರ್ಕಿಟೆಕ್ಟ್ ಕೆ ಜಯರಾಮ್‌

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.