ಹಿತ್ತಲ ಹೊನ್ನು ! ಪೈಪ್‌ ಕಾಂಪೋಸ್ಟ್‌


Team Udayavani, Jul 30, 2018, 12:24 PM IST

pipe.png

ಅಡುಗೆಮನೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತಿತರ ತ್ಯಾಜ್ಯಗಳು, ಮಜ್ಜಿಗೆ ಇದನ್ನೆಲ್ಲ ಪೈಪಿನೊಳಗೆ ತುಂಬಬಹುದು. ಆದರೆ ಗಟ್ಟಿಯಾಗಿರುವ ಚಿಪ್ಪುಗಳು, ಗೆರಟೆ, ಬೆಣ್ಣೆಹಣ್ಣಿನ ಬೀಜ, ಲಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್‌ ಅಂಶವಿರುವ ಹಣ್ಣುಗಳ ತ್ಯಾಜ್ಯ, ಬೇಯಿಸಿದ ಆಹಾರಗಳು, ಸಾಂಬಾರು, ಈರುಳ್ಳಿ ಸಿಪ್ಪೆ ಇದೊಂದನ್ನೂ ತುಂಬಿಸಬಾರದು. 

ಮನೆಯೊಳಗಿನ ತ್ಯಾಜ್ಯಗಳನ್ನು ತಿಪ್ಪೆಗೆ ಎಸೆದರೆ ದುರ್ವಾಸನೆ ಬೀರುತ್ತವೆ. ರೋಗಕಾರಕ ಅಣುಗಳ ಸೃಷ್ಟಿಗೆ ಕಾರಣವಾಗುತ್ತವೆ. ಆದರೆ ಇದೇ ತ್ಯಾಜ್ಯವನ್ನು ಗೊಬ್ಬರವಾಗಿಸಿದರೆ ಹಿತ್ತಲಿನಲ್ಲಿ ಹಸಿರಿನ ಹೊನ್ನು ಬೆಳೆಯಬಹುದು. ಇದರ ಪ್ರತ್ಯಕ್ಷ ನಿದರ್ಶನವೆಂದರೆ ರಾಜಗೋಪಾಲ ಭಟ್ಟರು.

ಗುರುವಾಯನಕೆರೆಯ ಹವ್ಯಕ ಭವನದ ಬಳಿ ಅವರ ಮನೆ, ಸಣ್ಣ ಹಿತ್ತಿಲು, ಒಂದು ಅಂಗಡಿ ಇದೆ. ಕೆಲವು ವರ್ಷಗಳ ಹಿಂದೆಯೇ ಅವರು ಕಸವನ್ನು ರಸವಾಗಿಸುವ ವಿದ್ಯೆಯಲ್ಲಿ ಪರಿಣತರು. ಏನಿದು ಈ ವಿದ್ಯೆಯೆಂದು ತಿಳಿಯಬೇಕಾದರೆ, ಅವರ ಮನೆಯಂಗಳದ ಸುತ್ತಲೂ ಇರುವ ವೈವಿಧ್ಯಮಯ ಗಿಡಗಳ ಸಾಲಿನಲ್ಲೊಮ್ಮೆ ಸುತ್ತಬೇಕು. ಕಣ್ಣಿಗೆ ರಾಚುವ ಹಚ್ಚ ಹಸಿರಿನ ನಡುವೆ ನೆಲದಲ್ಲಿ ಅಲ್ಲಲ್ಲಿ ಹೂಳಿದ ಪಿಸಿ ಪೈಪುಗಳು ಗಮನ ಸೆಳೆಯುತ್ತವೆ.

ಈ ಪೈಪುಗಳಲ್ಲಿದೆ ರಾಜಗೋಪಾಲ ಭಟ್ಟರು ತ್ಯಾಜ್ಯವನ್ನು ಹಸಿರ ಸಿರಿಯ ಚಿನ್ನವಾಗಿಸುವ ಗುಟ್ಟು. ಅದು ಪೈಪು ಕಾಂಪೋಸ್ಟ್‌. ವರ್ಷಗಳ ಹಿಂದೆಯೇ ಗ್ರಾಮ ಪಂಚಾಯಿತಿಗಳಿಗೆ ಇದರ ಪ್ರಯೋಜನದ ಬಗೆಗೆ ಜನರ ಗಮನ ಸೆಳೆಯುವಂತೆ ಆದೇಶಗಳು ಬಂದಿದ್ದರೂ ಅಳವಡಿಸಿದ ಅಧಿಕಾರಿ ವರ್ಗ ಅಪರೂಪ. ಆದರೆ ಭಟ್ಟರು ಅದನ್ನು ಅಳವಡಿಸಿದ್ದಾರೆ. ಹತ್ತು ಮಂದಿ ತಮ್ಮಲ್ಲೂ ಅನುಷ್ಠಾನಗೊಳಿಸಲು ಪ್ರೇರೇಪಿಸಿದ್ದಾರೆ. ಅವರ ಮಡದಿ, ನಿವೃತ್ತ ಶಿಕ್ಷಕಿ ಜಯಶ್ರೀ ಆಸ್ಥೆಯಿಂದ ಅದರ ನಿರ್ವಹಣೆ ಮಾಡುತ್ತಾರೆ.

ಪೇಟೆ-ಪಟ್ಟಣಗಳಲ್ಲಿರುವವರು ಕೂಡ ಪೈಪು ಕಾಂಪೋಸ್ಟಿನ ಲಾಭ ಹೊಂದಬಹುದೆಂದು ಹೇಳುತ್ತಾರೆ. ನಾಲ್ಕು ಮಿಲಿ ಲೀಟರ್‌ ದಪ್ಪವಿರುವ ಉತ್ತಮ ಗುಣಮಟ್ಟದ ಬಲವಾದ ಪಿವಿಸಿ ಪೈಪು ಆಯ್ದುಕೊಳ್ಳಬೇಕು. ಹತ್ತು ಇಂಚು ಅಗಲವಾದ ಬಾಯಿ ಇದ್ದರೆ ಉತ್ತಮ. ಒಂದೂವರೆ ಮೀಟರ್‌ ಉದ್ದದ ಪೈಪಿನ ಕಾಲುಭಾಗವನ್ನು ಮಣ್ಣಿನ ಗುಂಡಿ ತೋಡಿ ಹೂಳಬೇಕು. ಗ್ರಾನೈಟ್‌ ತುಂಡು ಮತ್ತು ಮರಳು ಬಳಸಿ ಬುಡವನ್ನು ಗಟ್ಟಿ ಮಾಡಿದರೆ ಒಳ್ಳೆಯದು. ಇಲ್ಲವಾದರೆ ಒಳಗೆ ಎರೆಹುಳಗಳಿದ್ದರೆ ಬುಡದಲ್ಲಿ ಇಲಿಗಳು ಕೊರೆದು ಹಾನಿ ಮಾಡುತ್ತವೆ.

ಅಡುಗೆಮನೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತಿತರ ತ್ಯಾಜ್ಯಗಳು, ಮಜ್ಜಿಗೆ ಇದನ್ನೆಲ್ಲ ಪೈಪಿನೊಳಗೆ ತುಂಬಬಹುದು. ಆದರೆ ಗಟ್ಟಿಯಾಗಿರುವ ಚಿಪ್ಪುಗಳು, ಗೆರಟೆ, ಬೆಣ್ಣೆಹಣ್ಣಿನ ಬೀಜ, ಲಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್‌ ಅಂಶವಿರುವ ಹಣ್ಣುಗಳ ತ್ಯಾಜ್ಯ, ಬೇಯಿಸಿದ ಆಹಾರಗಳು, ಸಾಂಬಾರು, ಈರುಳ್ಳಿ ಸಿಪ್ಪೆ ಇದೊಂದನ್ನೂ ತುಂಬಿಸಬಾರದು. ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಜೀವಾಣುಗಳಿಗೆ ಇದೆಲ್ಲವೂ ಹಾನಿ ಮಾಡುತ್ತವೆಯಂತೆ. ನೀರಿನಂಶ ಶೇ. 50ಕ್ಕಿಂತ ಹೆಚ್ಚಿದ್ದರೂ ಗೊಬ್ಬರ ಚೆನ್ನಾಗಿರುವುದಿಲ್ಲ. ಪೈಪು ಭರ್ತಿಯಾದ ಬಳಿಕ ಲಭ್ಯವಿದ್ದರೆ ಎರೆಹುಳಗಳ ಮರಿಗಳನ್ನು ಒಳಗೆ ಬಿಡಬಹುದು. ಬಳಿಕ ಮುಚ್ಚಳ ಹಾಕಬೇಕು. ಆದರೆ ಭದ್ರವಾಗಿ ಮುಚ್ಚಳ ಹಾಕಬಾರದು. ಒಳಗೆ ಗಾಳಿಯಾಡಲು ಅವಕಾಶ ಬೇಕು. ಇದರಿಂದ ತುಂಬಿದ ತ್ಯಾಜ್ಯವನ್ನು ನಾವು ಕಲಸುವ ಪ್ರಕ್ರಿಯೆ ಅಗತ್ಯ ಬೀಳುವುದಿಲ್ಲ. ಗಾಳಿಯೇ ಆ ಕ್ರಿಯೆಯನ್ನು ನಡೆಸಿ ಮೂರು ತಿಂಗಳಲ್ಲಿ ಹದನಾದ ಗೊಬ್ಬರವಾಗಿ ಮಾರ್ಪಡಿಸುತ್ತದೆಂಬುದು ಭಟ್ಟರು ಹೇಳುವ ವಿವರಣೆ.

ಲಭ್ಯವಿದ್ದರೆ ವಾರಕೊಮ್ಮೆ ಸೆಗಣಿಯನ್ನು ಕರಗಿಸಿ ಪೈಪಿನೊಳಗೆ ಹಾಕಬಹುದು. ಇನ್ನು ಇದರೊಳಗಿಂದ ದುರ್ವಾಸನೆ ಬರತೊಡಗಿದರೆ ಒಳಗೆ ಕೊಳೆಯುವ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿಲ್ಲ ಎಂದರ್ಥವಂತೆ. ಚಳಿಗಾಲದಲ್ಲಿ ಗೊಬ್ಬರವಾಗಲು ಸ್ವಲ್ಪ ಹೆಚ್ಚು ಅವಧಿ ಬೇಕು.  ಬೇಸಿಗೆಯಲ್ಲಿ ಬೇಗನೆ ಆಗುತ್ತದೆ. ಹಲಸಿನಂತಹ ಮರಗಳು ಪೈಪಿನ ಬಳಿ ಇದ್ದರೆ ಅದರ ಬೇರುಗಳು ಒಳಗೆ ಪ್ರವೇಶಿಸಿ ಗೊಬ್ಬರವನ್ನು ಮೊದಲೇ ತಿಂದುಬಿಡುತ್ತವೆ. ಹೀಗಾಗಿ ಸ್ಥಳದ ಆಯ್ಕೆ ಎಚ್ಚರಿಕೆಯಿಂದ ಮಾಡಬೇಕು.

ಜಾಗವಿದ್ದರೆ, ಹೆಚ್ಚು ತ್ಯಾಜ್ಯ ಸಿಗುವುದಾದರೆ ಒಂದಕ್ಕಿಂತ ಹೆಚ್ಚು ಪೈಪುಗಳ ಮೂಲಕ ಗೊಬ್ಬರ ತಯಾರಿಸಬಹುದೆಂಬುದು ಭಟ್ಟರ ಹಿತ್ತಿಲಿನಲ್ಲಿರುವ ಪೈಪುಗಳನ್ನು ನೋಡಿದರೆ ತಿಳಿಯುತ್ತದೆ.

ಒಂದು ಪೈಪಿನಲ್ಲಿ ಒಂದು ಅಡಿ ವ್ಯಾಸದಷ್ಟು ಹುಡಿ ಗೊಬ್ಬರ ಸಿಗುತ್ತದೆ. ಭಟ್ಟರು ರಾಸಾಯನಿಕ ಬಳಸದೆ ಇದೇ ಗೊಬ್ಬರ ಮಾತ್ರ ಬಳಸಿ ತೊಂಡೆ, ಬೆಂಡೆ, ಬಸಳೆಯಂತಹ ತರಕಾರಿಗಳು, ಬಾಳೆ, ವಿಧವಿಧದ ಹೂಗಿಡಗಳನ್ನು ಬೆಳೆಯಬಹುದೆಂಬುದನ್ನು ಸುಂದರವಾದ ತಮ್ಮ ಹಿತ್ತಿಲಿನ ಗಿಡಗಳ ಸಾಕ್ಷ್ಯದ ಮೂಲಕ ತೋರಿಸುತ್ತಾರೆ. ಈ ಸಾವಯವ ಸಣ್ತೀವನ್ನುಂಡ ತರಕಾರಿಗಳಿಗೆ ಒಳ್ಳೆಯ ಬಣ್ಣ, ಮೃದುವಾಗಿ ಬೇಯುವ ಗುಣ, ಪರಿಮಳ, ರುಚಿಗಳ ಹಿರಿಮೆ ಇದೆ. ಒಂದು ಸ್ಥಾವರಕ್ಕೆ ಸುಮಾರು ಎರಡು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೂ ಅದರಿಂದ ಪರಿಸರವೂ ಸ್ವತ್ಛವಾಗುತ್ತದೆ. ಕೃಷಿಗೂ ಲಾಭವಾಗುತ್ತದೆಂಬ ಲೆಕ್ಕಾಚಾರ ಭಟ್ಟರದು. 
ಎಲ್ಲರ ಮನೆಯ ಹಿತ್ತಿಲಲ್ಲೂ ಇದರ ಅಳವಡಿಕೆ ಬಲು ಸುಲಭ.

– ಪ. ರಾಮಕೃಷ್ಣ ಶಾಸ್ತ್ರೀ

ಟಾಪ್ ನ್ಯೂಸ್

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.