ಹಳೇ ಪೈಪಿನಿಂದ ತರಕಾರಿ ಚಪ್ಪರ


Team Udayavani, Sep 10, 2018, 8:40 PM IST

4.jpg

ಎಡಪಡಿತ್ತಾಯರ ತರಕಾರಿ ಚಪ್ಪರ ಪರಿಸರ ಸ್ನೇಹಿ. ಅದಕ್ಕಾಗಿ ಮರಗಳನ್ನು ಕಡಿಯಬೇಕಾಗಿಲ್ಲ. ಕೂಲಿಗಳ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಚಪ್ಪರ ಸಿದ್ಧವಾಗುತ್ತದೆ. ವರ್ಷಗಳ ಕಾಲ ಮುಕ್ಕಾಗದೆ ಉಳಿದುಕೊಳ್ಳುತ್ತದೆ. ಬೇರೆಡೆಗೂ ಸ್ಥಳಾಂತರಿಸಬಹುದು.

ತೊಂಡೆ, ಹೀರೆ, ಮುಳ್ಳುಸೌತೆ, ಪಡುವಲ ಮೊದಲಾದ ತರಕಾರಿಗಳ ಬಳ್ಳಿ, ನೆಲದಲ್ಲಿ ಹರಡಿದರೆ ಒಳ್ಳೆಯ ಗುಣಮಟ್ಟದ ಕಾಯಿಗಳು ಸಿಗುವುದಿಲ್ಲ, ಎಲೆ, ಕಾಯಿಗಳೆಲ್ಲವೂ ಮುದುಡುತ್ತವೆ. ಬಳ್ಳಿ ಸಲೀಸಾಗಿ ಹರಡಿದರೆ ಮಾತ್ರ ಗುಣಮಟ್ಟದ ಕಾಯಿ ಸಿಗುತ್ತದೆ. ಹೀಗೆ ಹರಡಲು ಅನುಕೂಲವಾದ ಚಪ್ಪರವೊಂದು ಬೇಕೇ ಬೇಕು ಅಲ್ಲವೇ? ಇಲ್ಲಿದೆ ಅದಕ್ಕೆ ಐಡಿಯಾ.  ಹಿಂದಿನ ಕಾಲದಲ್ಲಿ ಇಂತಹ ಚಪ್ಪರ ನಿರ್ಮಿಸಲು ಕಷ್ಟವಿರಲಿಲ್ಲ. ಕಾಡಿಗೆ ಹೋಗಿ ಕಂಬ, ಗೂಟಗಳನ್ನು ಕಡಿದು ತಂದು ಗಟ್ಟಿಯಾದ ಚಪ್ಪರಗಳನ್ನು ಹಾಕಬಹುದಿತ್ತು. ರಬ್ಬರ್‌ ಕೃಷಿ ವಿಸ್ತರಿಸಿದ ಬಳಿಕ ಕಾಡುಗಳು ಮಾಯವಾಗಿವೆ.  ಚಪ್ಪರ ಹಾಕಲು ಬೇಕಾದ ಸಲಕರಣೆಗಳು ಸಿಗುವುದಿಲ್ಲವೆಂಬುದು ತರಕಾರಿ ಬೆಳೆಗಾರರ ಪಾಲಿಗೆ ತಲೆನೋವಾಗಿದೆ. 

    ಇಂಥ ಸಮಸ್ಯೆಗಳಿಗೆ ಬಹು ಸುಲಭವಾಗಿ ಉತ್ತರ ಹುಡುಕಿದ್ದಾರೆ ವೆಂಕಟರಮಣ ಎಡಪಡಿತ್ತಾಯರು. ಶಾಲಾ ಶಿಕ್ಷಕರಾಗಿ ಕೆಲವು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ, ಮಂಗಳೂರು ತಾಲೂಕಿನ ಮೂಡು ಕೊಣಾಜೆಯಲ್ಲಿ ಕೃಷಿ ಜಾಗ ಖರೀದಿಸಿ ಅಡಿಕೆ, ತೆಂಗುಗಳ ಜೊತೆಗೆ ವೈವಿಧ್ಯಮಯವಾದ ತರಕಾರಿಗಳನ್ನೂ ಅವರು ಬೆಳೆಯುತ್ತಿದ್ದಾರೆ. ಬೇಸಗೆಯಲ್ಲಿ ಬೇರೆ, ಮಳೆಗಾಲದಲ್ಲಿ ಬೇರೆ ಬಗೆಯ ತರಕಾರಿಗಳ ಕೃಷಿ ಮಾಡಿ ಮನೆಗೆ ಬೇಕಾದಷ್ಟು ತಾಜಾ ಕಾಯಿಪಲ್ಲೆ ಪಡೆಯುತ್ತಿದ್ದಾರೆ.

    ಹೀಗೆ ಬೆಳೆಯುವ ತರಕಾರಿ ಬಳ್ಳಿಗಳಿಗೆ ಚಪ್ಪರ ಹಾಕಲು ಎಡಪಡಿತ್ತಾಯರಿಗೆ ಸನಿಹದಲ್ಲಿ ಕಾಡು ಇಲ್ಲ. ಕಂಬಗಳನ್ನು ಕಡಿದು ತಂದು ಕೆಲಸ ಮಾಡಲು ಶಕ್ತಿಯೂ ಇಲ್ಲ. ಅದಕ್ಕಾಗಿ ಅವರು ಸುಲಭವಾದ ಒಂದು ಉಪಾಯವನ್ನು ಕಂಡು ಹಿಡಿದಿದ್ದಾರೆ. ಅದು ನಿರರ್ಥಕವೆಂದು ಮೂಲೆಗೆಸೆದ ಪಿಸಿ ಪೈಪುಗಳಿಂದ ಸರಳವಾಗಿ ನಿರ್ಮಿಸುವ ಚಪ್ಪರ. ತುಂಡಾದ ಪೈಪುಗಳು, ಜೋಡಣೆಗಳು, “ಟಿ’ಗಳು ಇದನ್ನೆಲ್ಲ ಬಳಸಿ ಸಿದ್ಧವಾಗುವ ಚಪ್ಪರವದು. ಕಂಬದ ಬದಲಿಗೆ ಸ್ವಲ್ಪ ದಪ್ಪವಿರುವ ಪೈಪುಗಳನ್ನು ನಾಲ್ಕು ಮೂಲೆಗಳಲ್ಲಿ ಹೂಳುತ್ತಾರೆ. ಜೋಡಣೆಗಳನ್ನು ಉಪಯೋಗಿಸಿ ಮೇಲ್ಭಾಗದ ತೋಳುಗಳನ್ನು ಬೆಸೆದಿದ್ದಾರೆ. ಒಂದಿಂಚಿನ ತುಂಡು ಪೈಪುಗಳನ್ನು ಮೇಲೆ ಹರಡಿ ಇದರ ಮೇಲೆ ತೊಂಡೆ, ಹೀರೆ ಮೊದಲಾದ ತರಕಾರಿಗಳ ಬಳ್ಳಿಗಳನ್ನು ಹಬ್ಬಲು ಬಿಡುತ್ತಾರೆ.

    ಎಡಪಡಿತ್ತಾಯರ ತರಕಾರಿ ಚಪ್ಪರ ಪರಿಸರ ಸ್ನೇಹಿ. ಅದಕ್ಕಾಗಿ ಮರಗಳನ್ನು ಕಡಿಯಬೇಕಾಗಿಲ್ಲ. ಕೂಲಿಗಳ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಚಪ್ಪರ ಸಿದ್ಧವಾಗುತ್ತದೆ. ವರ್ಷಗಳ ಕಾಲ ಮುಕ್ಕಾಗದೆ ಉಳಿದುಕೊಳ್ಳುತ್ತದೆ. ಬೇರೆಡೆಗೂ ಸ್ಥಳಾಂತರಿಸಬಹುದು. ತರಕಾರಿ ಬೆಳೆಗಾರರ ಪಾಲಿಗೆ ಖರ್ಚಿಲ್ಲದ ಚಪ್ಪರ ಪೇಟೆಯಲ್ಲಿ ಹಿತ್ತಿಲಿನಲ್ಲಿ ತರಕಾರಿ ಬೆಳೆಯುವವರಿಗೂ ಅನುಕೂಲವಾಗಬಹುದು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.