ತರಕಾರಿ ಬೆಳೆಯಿಂದ ಕೃಷಿ ವೈವಿಧ್ಯ
Team Udayavani, Sep 24, 2018, 6:00 AM IST
ರಾಜಾಸಾಬ್ ಮುಲ್ಲಾ, ತರಕಾರಿ ಕೃಷಿಯಲ್ಲಿ ಪರಿಣಿತರು. ವರ್ಷಪೂರ್ತಿ ಇವರ ಹೊಲದಲ್ಲಿ ತರಕಾರಿ ಬೆಳೆಯಿರುತ್ತದೆ. ಕಾಯಿಪಲ್ಲೆಗಳ ಬೆಳೆ ವೈವಿಧ್ಯ ಇವರ ಕೃಷಿ ಯಶಸ್ಸಿನ ಗುಟ್ಟು. ಮಾರುಕಟ್ಟೆಯಲ್ಲಿನ ಬೇಡಿಕೆಯಾಧಾರಿತವಾಗಿ ಭೂಮಿಯಲ್ಲಿ ಬೀಜ ಬಿತ್ತುತ್ತಾರೆ. ಉತ್ತಮ ಗಳಿಕೆ ಕಂಡುಕೊಳ್ಳುತ್ತಾರೆ. ರಾಜಾಸಾಬ್ ಮುಲ್ಲಾ ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದವರು.
ಇವರದು ಮೂರು ಎಕರೆ ಜಮೀನು. ಇದು ಇವರ ತರಕಾರಿ ಕೃಷಿ ಪ್ರಯೋಗ ಶಾಲೆ. ಈ ಬಾರಿ ಶ್ರಾವಣ ಮಾಸ ಹಾಗೂ ಗಣೇಶ ಚತುರ್ಥಿ ಹೊತ್ತಿಗೆ ಕಟಾವಿಗೆ ಬರುವಂತೆ ಒಂದು ಎಕರೆಯಲ್ಲಿ ಟೊಮೆಟೊ ಕೃಷಿ ಮಾಡಿದ್ದರು. ಒಂದೂವರೆ ಎಕರೆಯಲ್ಲಿ ಹಾಗಲ ಕಾಯಿ ಬೆಳೆಸಿದ್ದಾರೆ. ಉಳಿದಂತೆ ಬೀನ್ಸ್, ಬದನೆ, ಹೀರೆ, ಬೆಂಡೆ ಮತ್ತಿತರ ತರಕಾರಿಗಳನ್ನು ಬೆಳೆದಿದ್ದಾರೆ.
ಆರು ಸಾವಿರ ಟೊಮೆಟೊ ಗಿಡಗಳನ್ನು ನಾಟಿ ಮಾಡಿದ್ದರು. ಸಾಲಿನ ನಡುವೆ ಮೂರಡಿ, ಗಿಡದ ನಡುವೆ ಎರಡು ಅಡಿ ಅಂತರವಿಟ್ಟಿದ್ದರು. ನಾಟಿ ಮಾಡಿದ ಎರಡು ತಿಂಗಳಿಗೆ ಅಲ್ಲಲ್ಲಿ ಗೂಟ ಹುಗಿದು ತಂತಿ ಎಳೆದು ಗಿಡಗಳು ನೆಲಕ್ಕೆ ಹಬ್ಬದಂತೆ, ಕಾಯಿಗಳು ಮಣ್ಣಿಗೆ ಬೀಳದಂತೆ ಆಧಾರ ಒದಗಿಸಿದ್ದರು. ಮೂರು ತಿಂಗಳಿಗೆ ಕೊಯ್ಲು ಆರಂಭವಾಗಿತ್ತು. ವಾರದಲ್ಲಿ ಎರಡು ಬಾರಿ ಕೊಯ್ಲು ಮಾಡಿದ್ದಾರೆ. ಪ್ರತಿ ಕೊಯ್ಲಿನಲ್ಲಿ 4-5 ಕ್ವಿಂಟಾಲ್ ಇಳುವರಿ ಸಿಕ್ಕಿದೆ. ಟೊಮೆಟೊ ಕಟಾವು ಮುಗಿದಿದೆ. ಈ ಬಾರಿ ನಿರೀಕ್ಷಿಸಿದಷ್ಟು ಬೆಲೆ ಸಿಗದೇ ಇರುವುದು ಇವರ ಬೇಸರಕ್ಕೆ ಕಾರಣವಾಗಿದೆ.
ಒಂದೂವರೆ ಎಕರೆಯಲ್ಲಿರುವ ಹಾಗಲ ಬಳ್ಳಿಗಳು ಇಳುವರಿ ನೀಡಲು ಆರಂಭಿಸಿವೆ. ಸೆಪ್ಟೆಂಬರ್ ಕೊನೆಯವರೆಗೆ ಕಟಾವಿಗೆ ಲಭ್ಯವಾಗಲಿವೆ. ಟೊಮೆಟೊ ಹಾಗೂ ಹಾಗಲದ ಕೊಯ್ಲು ಮುಗಿಯುತ್ತಿದ್ದಂತೆ ಭೂಮಿಯನ್ನು ಉಳುಮೆ ಮಾಡಿ ಬೇರೆ ತರಕಾರಿ ಬೆಳೆಗಳನ್ನು ಬೆಳೆಯಲು ಸಿದ್ದಗೊಳಿಸುತ್ತಾರೆ.
ಮಾರುಕಟ್ಟೆಯಲ್ಲಿ ಯಾವುದಕ್ಕೆ ಉತ್ತಮ ಬೆಲೆ ಸಿಗಬಹುದು ಎನ್ನುವ ಅಂದಾಜು ಲೆಕ್ಕಾಚಾರದ ಮೇಲೆ ಇವರ ಬೆಳೆಯ ಆಯ್ಕೆ ನಿಗದಿಯಾಗುತ್ತದೆ. ಸ್ವಂತ ಕೊಳವೆ ಬಾವಿ ಹೊಂದಿರುವ ಇವರು, ಜೋಳದಂತಹ ಸಾಂಪ್ರದಾಯಿಕ ಬೆಳೆಗಳನ್ನು ನೆಚ್ಚಿಕೊಳ್ಳದೇ ತರಕಾರಿ ವೈವಿಧ್ಯತೆಯಿಂದ ಉತ್ತಮ ಗಳಿಕೆ ಕಂಡುಕೊಂಡಿರುವುದು ಮಾದರಿಯೆನ್ನಿಸುತ್ತದೆ.
ಸಂಪರ್ಕಿಸಲು: 9591161854
* ಕೋಡಕಣಿ ಜೈವಂತ ಪಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ