ಮಲೆನಾಡು, ಕರಾವಳಿ ಪ್ರಿಯರ “ಅಕ್ಕಿರೊಟ್ಟಿ’ ಹೋಟೆಲ್‌


Team Udayavani, Oct 15, 2018, 6:00 AM IST

5.jpg

ಮಲೆನಾಡು, ಕರಾವಳಿ ಜನರ ಬೆಳಗ್ಗಿನ ಉಪಾಹಾರ ಅಕ್ಕಿರೊಟ್ಟಿ. ಇದರ ಜೊತೆಗೆ ಕಾಯಿ ಚಟ್ನಿ ಇದ್ರೆ ಕೇಳ್ಳೋದೇ ಬೇಡ. ಇಂತಹ ತಿನಿಸಿನಿಂದಲೇ ಹೆಸರಾಗಿರುವ ಒಂದು ಹೋಟೆಲ್‌ ಸಕಲೇಶಪುರದಲ್ಲಿ ಇದೆ. ಮಲೆನಾಡು, ಕರಾವಳಿ ಜನರ ಆಹಾರ ಅಭಿರುಚಿಯನ್ನೇ ಮುಖ್ಯವಾಗಿಟ್ಟುಕೊಂಡು ಪ್ರಾರಂಭಿಸಿರುವ ಈ ಹೋಟೆಲ್‌ನ ವಿಶೇಷ ತಿಂಡಿ ಅಕ್ಕಿರೊಟ್ಟಿ.

ಸಕಲೇಶಪುರ ಪಟ್ಟಣದಿಂದ ಮಂಗಳೂರಿಗೆ ಹೋಗುವ ರಸ್ತೆಯಲ್ಲೇ ಮೂರು ಕಿ.ಮೀ. ಹೋದರೆ ಆನೆ ಮಹಲ್‌ ಸಿಗುತ್ತದೆ. ಅಲ್ಲಿ ಕೆನರಾ ಬ್ಯಾಂಕ್‌ ಇದೆ. ಅದರ ಎದುರು ಇರುವ ಹಂಚಿನ ಮನೆಯಲ್ಲಿ ಈ ಹೋಟೆಲ್‌ ನಡೆಸಲಾಗುತ್ತಿದೆ. 15 ವರ್ಷಗಳ ಹಿಂದೆ ಬಲವಂತ್‌ ಮತ್ತು ಅವರ ಪತ್ನಿ ಗಿರಿಜಾ ಕೇವಲ ಟೀ, ಕಾಫಿ ಮಾರಾಟದ ಉದ್ದೇಶ ಇಟ್ಟುಕೊಂಡು ಕಾಂಡಿಮೆಂಟ್ಸ್‌ ರೀತಿಯಲ್ಲಿ ಸಣ್ಣ ಮಟ್ಟದಲ್ಲಿ ಶಾಪ್‌ ಶುರು ಮಾಡಿದ್ದರು. ಆದರೆ, ಗ್ರಾಹಕರೆಲ್ಲ ಹೆಚ್ಚಾಗಿ ತಿಂಡಿ, ಊಟ ಕೇಳುತ್ತಿದ್ದರಿಂದ ಮೂರು ವರ್ಷಗಳ ನಂತರ ಮಲೆನಾಡಿನ ಮನೆಗಳಲ್ಲಿ ಹೆಚ್ಚಾಗಿ ಮಾಡುವ ಅಕ್ಕಿರೊಟ್ಟಿ, ಕಡುಬು, ಚಿತ್ರಾನ್ನವನ್ನು ನೀಡಲು ಶುರು ಮಾಡಿದರು. ಇದೀಗ ಆ ಅಕ್ಕಿರೊಟ್ಟಿಯೇ ಈ ಹೋಟೆಲ್‌ನ ಗುರುತಿಸುವಂತೆ ಮಾಡಿದೆ. ಅಲ್ಲದೆ, ಗ್ರಾಹಕರಿಗೂ ಈ ರೆಸಿಪಿ ಇಷ್ಟವಾಗಿದೆ. ಬಲವಂತ್‌ ಅವರ ಪತ್ನಿ ಗಿರಿಜಾ ಹೋಟೆಲ್‌ನ ಬೆನ್ನೆಲುಬಾಗಿದ್ದು, ಪುತ್ರ ಪ್ರಶಾಂತ್‌ ಕೂಡ ಕೃಷಿಯ ಜೊತೆ ಹೋಟೆಲ್‌ ನೋಡಿಕೊಳ್ಳುತ್ತಾರೆ. ಇವರಿಗೆ ಪತ್ನಿ ಲಕ್ಷ್ಮೀ ಸಾಥ್‌ ನೀಡುತ್ತಿದ್ದಾರೆ.

ಹೋಟೆಲ್‌ನ ವಿಳಾಸ:
ಸಕಲೇಶಪುರ ಪಟ್ಟಣದಿಂದ ಮೂರು ಕಿ.ಮೀ. ದೂರದ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ಬರುವ ಆನೆ ಮಹಲ್‌ನಲ್ಲಿರುವ ಕೆನರಾ ಬ್ಯಾಂಕ್‌ ಎದುರು ಈ ಹೋಟೆಲ್‌ ಇದೆ.

ಹೋಟೆಲ್‌ ಸಮಯ:
ಬೆಳಗ್ಗೆ 7ರಿಂದ ಸಂಜೆ 4 ಗಂಟೆಯವರೆಗೆ ತೆರೆದಿರುತ್ತದೆ. ಕೆಲಸವಿದ್ರೆ ಮಾತ್ರ ಭಾನುವಾರ, ಹಬ್ಬಗಳಲ್ಲಿ ರಜೆ ಮಾಡ್ತಾರೆ, ಇಲ್ಲ ಅಂದ್ರೆ ವರ್ಷಪೂರ್ತಿ ಹೋಟೆಲ್‌ ಇರುತ್ತದೆ.

ತಿಂಡಿಗೆ 30 ರೂ.:
ಬೆಳಗ್ಗೆ 7ರಿಂದ 11ಗಂಟೆವರೆಗೆ ತಿಂಡಿ ಸಿಗುತ್ತದೆ. ಮಲೆನಾಡಿಗರ ಮನೆ ತಿಂಡಿಯಾದ ಅಕ್ಕಿರೊಟ್ಟಿ, ಕಡುಬು, ಚಿತ್ರಾನ್ನ, ಪಲಾವ್‌, ತಟ್ಟೆ ಇಡ್ಲಿ ಸಿಗುತ್ತದೆ. ತಿಂಡಿಗೆ 30 ರುಪಾಯಿ. ಇದರ ಜೊತೆಗೆ ತರಕಾರಿ ಸಾಗು, ಖಾರ ಚಟ್ನಿ, ತೆಂಗಿನಕಾಯಿ ಚಟ್ನಿ, ಹುರಿಗಡ್ಲೆ ಚಟ್ನಿ ಕೊಡಲಾಗುತ್ತದೆ.

ಊಟ 50 ರೂ.: 
ಮಲೆನಾಡಷ್ಟೇ ಅಲ್ಲ, ಬಯಲುಸೀಮೆ ಜನರ ಪ್ರಮುಖ ಆಹಾರವಾದ ಮುದ್ದೆ ಕೂಡ ಇಲ್ಲಿ ದೊರೆಯುತ್ತದೆ. 11ಗಂಟೆಯಿಂದ ಸಂಜೆ 4ರವರೆಗೆ ಎರಡು ಬಗೆಯ ಊಟ ಸಿಗುತ್ತದೆ. ಒಂದು ಮುದ್ದೆ ಊಟ. ಇದಕ್ಕೆ ಪಲ್ಯ, ಹಪ್ಪಳ, ರಸಂ, ಉಪ್ಪಿನ ಕಾಯಿ, ಸಾಂಬಾರು, ಮೊಸರು, ಮಜ್ಜಿಗೆ ನೀಡಲಾಗುತ್ತದೆ. ಮತ್ತೂಂದು ರೊಟ್ಟಿ ಊಟ. ವೈಟ್‌ರೈಸು, ಸಾಂಬಾರ್‌, ಖಾರಾ ಚಟ್ನಿ, ಕಾಯಿ ಚಟ್ನಿ, ಪಲ್ಯ, ಮೊಸರು, ಮಜ್ಜಿಗೆ ಕೊಡಲಾಗುತ್ತದೆ.

 ಚಿತ್ರನಟರು, ರಾಜಕಾರಣಿಗಳು ಭೇಟಿ:
ಸಕಲೇಶಪುರಕ್ಕೆ ಶೂಟಿಂಗ್‌ಗೆ ಬಂದಾಗ ಹಿರಿಯ ನಟ ದೊಡ್ಡಣ್ಣ, ನಾಯಕ ನಟ ಯಶ್‌, ಜೈಜಗದೀಶ್‌, ಶಿವಧ್ವಜ್‌, ಮತ್ತಿತರೆ ನಟರು, ಪ್ರವಾಸಿಗರಿಗೆ ಇಲ್ಲಿನ ಅಕ್ಕಿರೊಟ್ಟಿ, ರಸಂ ಅಚ್ಚುಮೆಚ್ಚು. ಹೋಟೆಲ್‌ಗೆ ಭೇಟಿ ನೀಡುತ್ತಾರೆ.  ಅಡುಗೆಯನ್ನು ನಾವೇ ಮಾಡ್ತೇವೆ. 8 ಜನ ಸಹಾಯಕರಿದ್ದಾರೆ. ಈಗಲೂ ನಾವು ಕಟ್ಟಿಗೆ ಒಲೆಯಲ್ಲೇ ಆಹಾರ ಬೇಯಿಸುತ್ತೇವೆ. ಫ್ರಿಡ್ಜ್ , ಮತ್ತೂಂದು ಮಗದೊಂದು ಬಳಸಲ್ಲ. ಹಳ್ಳಿಯ ಮಾದರಿಯಲ್ಲಿ ಹೋಟೆಲ್‌ ನಡೆಸುತ್ತಿದ್ದೇವೆ ಎನ್ನುತ್ತಾರೆ ಈ ಹೋಟೆಲ್‌ನ ಈಗಿನ ಮಾಲೀಕ ಪ್ರಶಾಂತ್‌.

ಭೋಗೇಶ್‌ ಆರ್‌. ಮೇಲುಕುಂಟೆ

ಟಾಪ್ ನ್ಯೂಸ್

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.