ಇದೇ ಅಂತರಂಗ ಶುದ್ಧಿ!


Team Udayavani, Oct 22, 2018, 1:11 PM IST

a.jpg

ನಮಗೆ ಚಳಿಗಾಲ ಇನ್ನೂ ಶುರುವಾಗಿಲ್ಲ. ಆಗಲೇ ನೆಗಡಿ,ಕೆಮ್ಮು, ಜ್ವರದೊಂದಿಗೆ, ಚರ್ಮ ಒಣಗಿ ಬಿರುಕುಬಿಡುವುದು, ತುಟಿ ಒಡೆಯುವುದು… ಹೀಗೆ ಒಂದೊಂದೇ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಈ ಅವಧಿಯಲ್ಲಿ ಮನೆಯ ನಿರ್ವಹಣೆ, ಹಾಗೆಯೇ ಹೊಸದಾಗಿ ಕಟ್ಟುವವರೂ ಕೆಲ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ…

 ಧೂಳು ಏಳದೆ ಮನೆ ಕಟ್ಟುವುದು ಕಷ್ಟವಾದರೂ, ಆದಷ್ಟೂ ಕಡಿಮೆ ಧೂಳು ಹುಟ್ಟುವಂತೆ ಮಾಡುವುದು ಕಷ್ಟವೇನಲ್ಲ. ಸಾಮಾನ್ಯವಾಗಿ ಸುಲಭ ಆಗಲಿ ಎಂದು ಯಾವುದಾದರೂ ಒಂದು ವಸ್ತುವನ್ನು ಮಶೀನ್‌ ಬಳಸಿ ಕಟ್‌ ಮಾಡುವಾಗ ನೀರನ್ನು ಬಳಸುವುದಿಲ್ಲ. ಇದರಿಂದಾಗಿ ಅನಗತ್ಯವಾಗಿ ಧೂಳೇಳುತ್ತದೆ. ಟೈಲ್ಸ್‌ ಇಲ್ಲವೇ ಗ್ರಾನೈಟ್‌ ಕಲ್ಲುಗಳನ್ನು ನೆಲದ ಮೇಲೆ ಕತ್ತರಿಸಬೇಕಾದರೆ, ಕೊಳವೆಯಿಂದ ನೀರನ್ನು ಹರಿಸಿಕೊಳ್ಳುತ್ತಾರಾದರೂ, ಗೋಡೆಗಳ ಮೇಲೆ ಗ್ರೂವ್‌ ಕಟ್ಟಿಂಗ್‌ ಮಾಡಬೇಕಾದರೆ, ನೀರು ಹಾಕದೆ ಡ್ರೆ„ ಕಟ್ಟಿಂಗ್‌ ಮಾಡುತ್ತಾರೆ. ಇದರಿಂದ ಅತಿಯಾಗಿ ಧೂಳು ಉತ್ಪತ್ತಿಯಾಗುತ್ತದೆ. ಸ್ವಲ್ಪ ಕೆಲಸ ಹೆಚ್ಚೆನಿಸಿದರೂ, ಎಲೆಕ್ಟ್ರಿಕ್‌ ಇಲ್ಲ, ಸ್ಯಾನಿಟರಿ ಪೈಪ್‌ ಅಳವಡಿಸಲು ಬೇಕಾದ ಗಾಡಿ ತೋಡಬೇಕಾದರೆ, ಗೋಡೆಗೆ ನಾಲ್ಕಾರು ಬಾರಿ ನೀರು ಚಿಮುಕಿಸಿ, ಅದು ಚೆನ್ನಾಗಿ ಒದ್ದೆಯಾದ ನಂತರ ಗ್ರೂವ್‌ ಕಟ್ಟಿಂಗ್‌ ಮಾಡಿದರೆ, ಧೂಳು ಏಳುವುದು ಕಡಿಮೆ ಆಗುತ್ತದೆ.

ಮನೆಯ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆ ಹಾಗೂ ನಿರ್ವಹಣೆಯಲ್ಲಿ ಒಂದಷ್ಟು ಶ್ರಮವಹಿಸಿದರೆ, ಈ ಕಾಲಮಾನದ ವೈಪರಿತ್ಯದಿಂದ ನಿರಾಯಾಸವಾಗಿ ಪಾರಾಗಬಹುದು. ಹೀಗಾಗಿ ಕಿಟಕಿಗಳು ಕೋಣೆಯ ಹೊರಗೆ ಚಾಚಿದಂತೆ ಇರುವ ವಿಶೇಷ ವಿನ್ಯಾಸಕ್ಕೆ “ಬೇಂಡೊ’ ಎಂದು ಹೇಳಲಾಗುತ್ತದೆ. ಹೀಗೆ ಹೆಚ್ಚುವರಿಯಾಗಿ ಸಿಗುವ ಜಾಗದಲ್ಲಿ ಸಣ್ಣದಾದ ನಾಲ್ಕಾರು ಹೂಕುಂಡಗಳನ್ನು ಇಟ್ಟರೂ, ಮನೆಯ ಒಳಾಂಗಣದ ಒಟ್ಟಾರೆ ವಾತಾವರಣ ಉತ್ತಮವಾಗುತ್ತದೆ. ಅದರಲ್ಲೂ ಸೆನ್ಸೆವೇರಿಯ ಜಾತಿಯ ಗಿಡಗಳು ಕಲುಷಿತ ವಾತಾವರಣದಲ್ಲಿನ ಹಾನಿಕಾರಕ ಅನಿಲಗಳನ್ನು ಶುದ್ಧಗೊಳಿಸುವ ಗುಣ ಹೊಂದಿರುತ್ತದೆ. ಒಂದು ಅಧ್ಯಯನದ ಪ್ರಕಾರ, ಮನೆಯಲ್ಲಿ ಒಬ್ಬರಿಗೆ ಒಂದರಂತೆ ಈ ಜಾತಿಯ ಗಿಡಗಳನ್ನು ಇಟ್ಟರೂ ಸಾಕಂತೆ.

ಜೋಕೇ, ಅದು ಈಶಾನ್ಯದ ಶೀತಗಾಳಿ!
ಮನೆ ಪ್ಲಾನ್‌ ಮಾಡುವಾಗ ಸಾಮಾನ್ಯವಾಗಿ ಈಶಾನ್ಯದಿಂದ ಬೀಸುವ ಶೀತಗಾಳಿಯ ಬಗ್ಗೆ ಸಾಕಷ್ಟು ಎಚ್ಚರವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಮನೆಗೆ ಚಳಿಗಾಲ ಇನ್ನಿಲ್ಲದಂತೆ ಕಾಡುತ್ತದೆ. ಹಾಗೆಯೇ ಮನೆ ತುಂಬ ಧೂಳು ತುಂಬಿಕೊಂಡು ಒಣವಾತಾವರಣದ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ. ಈಶಾನ್ಯದಲ್ಲಿರುವ ಕೋಣೆಗಳಿಗೆ ಈ ಅವಧಿಯಲ್ಲಿ ಗಾಳಿ ಒಳಾಂಗಣದಲ್ಲಿ ಅಡ್ಡಹಾಯದಂತೆ ಎಚ್ಚರ ವಹಿಸಬೇಕು. ಇದನ್ನು ಮಾಡುವುದು ಕಷ್ಟವೇನಲ್ಲ. ಸಾಮಾನ್ಯವಾಗಿ ಎರಡು ಅಕ್ಕಪಕ್ಕದ ಗೋಡೆಗಳಿಗೆ ಕಿಟಕಿಗಳನ್ನು ಇಟ್ಟು ಕ್ರಾಸ್‌ ವೆಂಟಿಲೇಷನ್‌ ಮಾಡುವುದು ಮಾಮೂಲಿಯಾಗಿದ್ದು, ಚಳಿಗಾಲದಲ್ಲಿ, ಒಂದು ಕಡೆಯದನ್ನು ಮಾತ್ರ ತೆಗೆದುಕೊಂಡು ಮತ್ತೂಂದನ್ನು ಮುಚ್ಚುವಂತೆ ಮಾಡಿಕೊಂಡರೆ, ಕೋಣೆಯೊಳಗೆ ತಣ್ಣನೆಯ ಗಾಳಿ ನೇರವಾಗಿ ಪ್ರವೇಶಿಸುವುದನ್ನು ತಡೆಯಬಹುದು. ಇದರೊಂದಿಗೆ ಸಾಕಷ್ಟು ಧೂಳು ಹಾಗೂ ಒಣಹವೆಯನ್ನು ತಡೆದಂತೆಯೂ ಆಗುತ್ತದೆ.

 ಪೂರ್ವ ಹಾಗೂ ಉತ್ತರದಲ್ಲಿ ಸಣ್ಣದೊಂದು ಕೈತೋಟ ಇಲ್ಲವೇ ಹತ್ತಾರು ಹೂಕುಂಡಗಳನ್ನು ಇಡುವಷ್ಟು ಜಾಗವನ್ನಾದರೂ ಬಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ನಮಗೆ ಧೂಳನ್ನು ಆಕರ್ಷಿಸಿ ಸೆಳೆದಿಟ್ಟುಕೊಳ್ಳುವ ಎಲೆಗಳ ಹಸಿರು ರಾಶಿ ಸಿಗುವುದರೊಂದಿಗೆ ನಾವು ಗಿಡಕ್ಕೆ ನೀರು ಹಾಕುವಾಗ ಹಾಗೂ ನಂತರವೂ ಗಿಡಗಳಿಂದ ನೀರು ಆವಿಯಾಗಿ ಹೋಗುವಾಗ, ಸುತ್ತಲೂ ತೇವಾಂಶವನ್ನು ಹಿಗ್ಗಿಸುತ್ತದೆ. ಇದರಿಂದಾಗಿ ನಮಗೆ ಕಡಿಮೆ ಧೂಳಿನಿಂದ ಕೂಡಿದ ವಾತಾವರಣ ಸಿಗುವುದರೊಂದಿಗೆ, ಈ ಅವಧಿಯ ಒಣಗಾಳಿಯ ಹಾವಳಿಯೂ ಸಾಕಷ್ಟು ತಗ್ಗಿದಂತೆ ಆಗುತ್ತದೆ. ಒಮ್ಮೆ ತೇವಾಂಶ ಹೆಚ್ಚಿದರೆ, ನಮ್ಮ ಚರ್ಮದಿಂದ ತೇವಾಂಶ ಆವಿಯಾಗುವುದು ಕಡಿಮೆಯಾಗಿ, ಹೆಚ್ಚು ಚಳಿ ಎಂದು ಅನಿಸುವುದೂ ಇಲ್ಲ. ಜೊತೆಗೆ ಚರ್ಮ ಹಾಗೂ ಶ್ವಾಸಕಾಂಗಗಳಿಗೂ ಇದು ಆರಾಮದಾಯಕ.
ಈ ಬಗ್ಗೆ ಎಚ್ಚರವಿರಲಿ.

ಮನೆಯಿಂದ ಹೊರಗೆ ಚಾಚಿದಂತಿರುವ ಭಾಗಗಳ ಅತಿಯಾದ ಧೂಳು ಇರುತ್ತದೆ. ಚಳಿಗಾಲದಲ್ಲಿ ಇನ್ನೂ ಹೆಚ್ಚು ಶೇಖರಣೆಗೊಳ್ಳುತ್ತದೆ. ಇದು ಗಾಳಿ ಸ್ವಲ್ಪ ಜೋರಾಗಿ ಬೀಸಿದಾಗ ಮನೆಯೊಳಗೆ ಪ್ರವೇಶಿಸುತ್ತದೆ. ಹೀಗಾಗಿ, ಬಾಲ್ಕನಿಗಳ ಮೇಲೆ ಧೂಳು ಶೇಖರಣೆ ಕಡಿಮೆಮಾಡಲು, ಅಲ್ಲಿ ನಾಲ್ಕಾರು ಹೂಕುಂಡಗಳನ್ನು ಇಡಲು ಮನೆಯ ವಿನ್ಯಾಸ ಮಾಡುವಾಗಲೇ ಪ್ಲಾನ್‌ ಮಾಡಿಟ್ಟರೆ, ನಂತರ ನಮಗೆ ಸಣ್ಣದೊಂದು ಕೈತೋಟ ಸೃಷ್ಟಿಯಾಗಿ, ವಾತಾವರಣದ ವೈಪರಿತ್ಯಗಳನ್ನು ಸರಿದೂಗಿಸಿಕೊಂಡು ಹೋಗಲು ನೆರವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಸಜ್ಜಾ ಪೋರ್ಟಿಕೋಗಳಿಗೆ ಧೂಳು ಮತ್ತೂಂದು ಶೇಖರಣೆ ಆಗದಿರಲಿ ಎಂದು ಬಾಕ್ಸ್‌ ಮಾದರಿಯ ವಿನ್ಯಾಸವನ್ನು ಮಾಡುವುದಿಲ್ಲ. ಸಜ್ಜಾಗಳಿಗೆ ಸ್ವಲ್ಪ ಇಳಿಜಾರು ಕೊಟ್ಟರೆ, ನೀರು ಸರಾಗವಾಗಿ ಹೋಗುವುದರೊಂದಿಗೆ, ಧೂಳೂ ಹೆಚ್ಚು ಶೇಖರಣೆ ಆಗಲು ಆಸ್ಪದವಿರುವುದಿಲ್ಲ. ಇದೇ ರೀತಿಯಲ್ಲಿ, ಕಿಟಕಿಯ ಕೆಳಗೆ ಬರುವ ಸಿಲ್‌ ಅನ್ನು ಸ್ವಲ್ಪ ಇಳಿಜಾರಾಗಿ ಮಾಡಿಕೊಂಡರೆ, ಅಲ್ಲೂ ಧೂಳು ಶೇಖರಣೆಗೊಂಡು, ಕಿಟಕಿಯ ಮೂಲಕ ಮನೆಯನ್ನು ಪ್ರವೇಶಿಸುವುದು ತಪ್ಪುತ್ತದೆ. ಹೆಚ್ಚಿನ ಮಾಹಿತಿಗೆ ಮೊ. 98441 32826.

ಆರ್ಕಿಟೆಕ್ಟ್ ಕೆ. ಜಯರಾಮ್‌

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.