ಎಲೆ ಬಿಚ್ಚಾಲಿಯಲಿ ಶುರುವಾಯ್ತು ವೀಳ್ಯದೆಲೆಯ ಹಂಗಾಮ


Team Udayavani, Oct 29, 2018, 4:00 AM IST

vilya.jpg

ವೀಳ್ಯದೆಲೆ ಬೆಳೆಯುವ ಮೂಲಕ ಪ್ರಸಿದ್ಧಿ ಪಡೆದಿದ್ದ ಗ್ರಾಮವೊಂದು ನೆರೆ ಹೊಡೆತಕ್ಕೆ ಸಿಲುಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ತುಂಗಭದ್ರಾ ನದಿ ಪಾತ್ರದ 500ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿದ್ದ ಎಲೆ ತೋಟ ನಾಮವಶೇಷವಾಗಿ ಹೋಗಿತ್ತು. ಅದಾಗಿ ಎರಡು ದಶಕ ಕಳೆದರೂ ಬಾರದ ಬೆಳೆ ಈಚೆಗೆ ಮರುಜೀವ 

ರಾಯಚೂರು ಜಿಲ್ಲೆ ಹೇಳಿ ಕೇಳಿ ನೇಸರ ನಾಡು. ಉರಿ ಬಿಸಿಲಿಗೆ ಹೆಸರಾದ ಈ ಭಾಗದಲ್ಲಿ ತೋಟಗಾರಿಕೆ ಬೆಳೆಗಳು ಹೆಚ್ಚಾಗಿ ಕಾಣಸಿಗುವುದಿಲ್ಲ. ಆದರೆ, ಈ ಮಾತಿಗೆ ಅಪವಾದ ಎನ್ನುವಂತೆ, ರಾಯಚೂರು ತಾಲೂಕಿನ ಒಂದು ಕಾಲದಲ್ಲಿ ಎಲೆಬಿಚ್ಚಾಲಿ ಗ್ರಾಮದ ರೈತರು ವೀಳ್ಯದೆಲೆ ಬೆಳೆಯುವ ಮೂಲಕ ದೊಡ್ಡಮಟ್ಟದ ಪ್ರಸಿದ್ಧಿ ಪಡೆದಿದ್ದರು. ಇಲ್ಲಿ ಬೆಳೆಯುವ ಎಲೆಗಳಿಂದಲೇ ಈ ಊರಿಗೆ ಆ ಹೆಸರು ಬಂತು ಎನ್ನುವ ಪ್ರತೀತಿ ಇದೆ. 

ತುಂಗಭದ್ರಾ ನದಿ ಪಾತ್ರದಲ್ಲಿರುವ ಈ ಊರು 90ರ ದಶಕಕ್ಕೂ ಮುನ್ನ ಸಮೃದ್ಧಿ ಹೊಂದಿತ್ತು. ಈ ಊರಲ್ಲಿ ಕೃಷಿ ಎಂದರೆ ಅದು ವೀಳ್ಯದೆಲೆ ಬೆಳೆಯುವ ಕಾಯಕ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿಯಾಗಿತ್ತು. ಗ್ರಾಮಸ್ಥರಿಗೆ ಜಗಲಿ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯಲು ಕೂಡ ಪುರುಸೊತ್ತಿರಲಿಲ್ಲವಂತೆ. ಅಷ್ಟೊಂದು ಕೆಲಸವಿರುತ್ತಂತೆ. ನಂತರ ಬಂದ ನೆರೆ ಹೊಡೆತಕ್ಕೆ ಗ್ರಾಮದ ಚಿತ್ರಣವೇ ಬದಲಾಗಿ ಹೋಯಿತು.

ಬಹುತೇಕ ಮಂದಿ ನದಿಪಾತ್ರದಲ್ಲೇ ತೋಟ ಮಾಡಿಕೊಂಡಿದ್ದರಿಂದ ನೆರೆ ಬಂದಾಗ ತೋಟಗಳೆಲ್ಲ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದವು. ಒಮ್ಮೆ ಬೆಳೆ ಹಾಳಾದರೆ ಏನಂತೆ ಎಂದು ರೈತರು ಮತ್ತೆ ವೀಳ್ಯದೆಲೆ ನಾಟಿ ಮಾಡಲು ಹೋದರೆ ಇಲ್ಲಿ ವೀಳ್ಯದೆಲೆ ನಾಟಲೇ ಇಲ್ಲ. ಒಂದಲ್ಲ ಎರಡಲ್ಲ, ಸತತ ಐದಾರು ವರ್ಷಗಳ ಕಾಲ ಇಲ್ಲಿನ ರೈತರು ವೀಳ್ಯದೆಲೆ ನಾಟಿ ಮಾಡಿ ಕೈ ಸುಟ್ಟುಕೊಂಡರು. ಪುನಃ ಬೆಳೆ ಕೂಡಲೇ ಇಲ್ಲ. ಇದರಿಂದ ವಿಧಿ ಇಲ್ಲದೇ ರೈತರು ಪರ್ಯಾಯ ಬೆಳೆಗಳಿಗೆ ಮೊರೆ ಹೋದರು. ಹೀಗಾಗಿ ಎಲೆಬಿಚ್ಚಾಲಿಗೆ ಹೆಸರೊಂದೇ ಉಳಿಯಿತು. 

ಮತ್ತೆ ಮರುಜೀವ: ಅದಾಗಿ ಎರಡು ದಶಕಗಳ ಬಳಿಕ ಈಗ ಮತ್ತೆ ವೀಳ್ಯದೆಲೆ ಚಿಗುರೊಡೆದಿದೆ. ಗ್ರಾಮದ ಯುವೋತ್ಸಾಹಿ ರೈತ ಕುಮಾರ ಅವರ, ಸತತ ಎರಡು ವರ್ಷಗಳ ಫ‌ಲದಿಂದ ಈಗ ಮತ್ತೆ ವೀಳ್ಯದೆಲೆ ಬೆಳೆ ನಾಟಿದೆ. ಇದು ಇಡೀ ಗ್ರಾಮದ ಜನರಿಗೆ ಅಚ್ಚರಿ ಜೊತೆಗೆ ಹೊಸ ಚೈತನ್ಯ ಮೂಡಿಸಿದೆ. ಈಗಾಗಲೇ ಕುಮಾರ ವೀಳ್ಯದೆಲೆ ಇಳುವರಿ ಪಡೆಯುತ್ತಿರುವ ಕಾರಣ, ಇತರೆ ರೈತರಿಗೂ ವಿಶ್ವಾಸ ಮೂಡಿದೆ. ಇತರೆ ರೈತರು ಕೂಡ ವೀಳ್ಯದೆಲೆ ಬೆಳೆಯುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.

ಉತ್ತಮ ಇಳುವರಿ: ಈಗ ಕುಮಾರ ಎರಡು ಎಕರೆಯಲ್ಲಿ ನೀಳ್ಯದೆಲೆ ನಾಟಿ ಮಾಡಿದ್ದಾರೆ. ಎಕರೆಗೆ ಏನಿಲ್ಲವೆಂದರೂ ವರ್ಷಕ್ಕೆ ಒಂದು ಲಕ್ಷ ರೂ. ಖರ್ಚಾದರೆ, ತಿಂಗಳಿಗೆ ಕನಿಷ್ಠ ಏನಿಲ್ಲವೆಂದರೂ 40ರಿಂದ 50 ಸಾವಿರ ರೂ. ಆದಾಯ ಬರುತ್ತದೆ. ಈಗ ಇಳುವರಿ ಕೂಡ ಉತ್ತಮವಾಗಿ ಬರುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ವೀಳ್ಯದೆಲೆ ಬಳ್ಳಿಗೆ ಆಸರೆಗೆಂದು ನುಗ್ಗೆ ಗಿಡಗಳನ್ನು ನೆಡಲಾಗುತ್ತದೆ. ನಾಲ್ಕು ದಿನಕ್ಕೊಮ್ಮೆ ನೀರು ಹಾಯಿಸಿದರೆ ಸಾಕು.

ತುಂಗಭದ್ರಾ ನದಿ ಸಮೀಪವಿರುವ ಕಾರಣ ಪೈಪ್‌ಲೈನ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೆಲವರು ಬೋರ್‌ಗಳನ್ನು ಹಾಕಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ವೀಳ್ಯದೆಲೆಗೆ ಮಾತ್ರ ಯಾವುದೇ ರಾಸಾಯನಿಕ ಸಿಂಪರಣೆ ಬೇಕಿಲ್ಲ. ಒಮ್ಮೆ ನಾಟಿ ಮಾಡಿದರೆ ಎರಡು ವರ್ಷದವರೆಗೆ ಇಳುವರಿ ಬರುತ್ತಲೇ ಇರುತ್ತದೆ. ನಿತ್ಯ ಎಲೆಗಳನ್ನು ಬಿಡಿಸಿ ಮಾರುಕಟ್ಟೆಗೆ ಕಳುಹಿಸುವುದಷ್ಟೇ ನಮ್ಮ ಕೆಲಸ ಎನ್ನುತ್ತಾರೆ ಕುಮಾರ. 

ಹಣದ ಬೆಳೆ: ಒಂದು ಕಾಲಕ್ಕೆ ಈ ಗ್ರಾಮದ ರೈತರಲ್ಲಿ ಬಡತನ ಕಂಡವರು ವಿರಳಾತಿವಿರಳ. ಎಲ್ಲರಿಗೂ ವೀಳ್ಯದೆಲೆಯೇ ಕೃಷಿ. ಏಕೆಂದರೆ ಇದು ನಿತ್ಯ ಆದಾಯ ನೀಡುವ ಬೆಳೆ. ಅಲ್ಲದೇ, ಎಕರೆಗೆ ಮಾಸಿಕವಾಗಿಯೇ 20ರಿಂದ 30 ಸಾವಿರ ರೂ. ಆದಾಯ ಸಿಗುತ್ತದೆ. ದರ ಚನ್ನಾಗಿ ಸಿಕ್ಕರೆ ಇನ್ನೂ ಹೆಚ್ಚು ಲಾಭ ಸಿಗಲಿದೆ. ಹೀಗಾಗಿ, ಇದನ್ನು ಲಾಭದಾಯಕ ಕೃಷಿ ಎಂದೇ ಕರೆಯಬಹುದು. ಆದರೆ, ಸಾಕಷ್ಟು ಅಂತರ ಸೃಷ್ಟಿಯಾದ ಕಾರಣ ಈಗ ರೈತರಿಗೆ ಮಾರುಕಟ್ಟೆಯ ಹಳೆಯ ಸಂಪರ್ಕಗಳೇ ಕಳೆದು ಹೋಗಿವೆ.

ಈಗ ವಿಜಯವಾಡ, ಗುಂಟೂರು, ಗೋದಾವರಿ ಭಾಗದಲ್ಲಿ ಹೆಚ್ಚಾಗಿ ವೀಳ್ಯದೆಲೆ ಮಾರಾಟವಾಗುತ್ತಿದೆ. ಇದರಿಂದ ಎಲೆಬಿಚ್ಚಾಲಿ ರೈತರಿಗೆ ಮಾರುಕಟ್ಟೆ ಸವಾಲು ಸಮಸ್ಯೆಯಾಗಿ ಪರಿಣಮಿಸಿದೆ. ಈ ಬೆಳೆಯಿಂದ ನಷ್ಟವಂತೂ ಇಲ್ಲ. ಮೊದಲು ಸಿಗುತ್ತಿದ್ದ ದರಕ್ಕಲ್ಲದಿದ್ದರೂ ಕೊಂಚ ಕಡಿಮೆ ದರಕ್ಕೆ ಮಾರಾಟವಾಗುತ್ತದೆ. ನಮಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚಿನ ವೀಳ್ಯದೆಲೆ ಬೆಳೆಯಲು ಮುಂದಾಗಬಹುದು ಎನ್ನುವುದು ವೀಳ್ಯದೆಲೆ ಬೆಳೆಗಾರರ ಅನಿಸಿಕೆ.

* ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.