ಉಳಿಕೆಯೇ ಗಳಿಕೆ ಶಾಂತಿಯೇ ಸಂಪತ್ತು


Team Udayavani, Oct 29, 2018, 4:00 AM IST

ulikeye.jpg

ಹಣ ಅಥವಾ ಸಂಪತ್ತನ್ನು ಗಳಿಸುವುದಷ್ಟೇ ಬಾಳಿನ ಗುರಿಯಲ್ಲ. ಗಳಿಸಿದ್ದನ್ನು ಉಳಿಸಬೇಕು. ಉಳಿಸಿದ್ದನ್ನು ಬೆಳೆಸಬೇಕು, ಅಗತ್ಯ ಬಂದಾಗ ಬಳಸಬೇಕು. ಸಂಪತ್ತೆಂಬುದು ಕಷ್ಟಕ್ಕೆ ಆಗಲಿಲ್ಲ ಅಂದರೆ, ಅದು ಎಷ್ಟಿದ್ದರೂ ವ್ಯರ್ಥ. ಹಾಗಾಗಿ, ವೈಯಕ್ತಿಕ ಹಾಗೂ ವ್ಯಾವಹಾರಿಕ ಬದುಕಿಗೆ ನಮ್ಮ ಉಳಿತಾಯದಿಂದ ಅನುಕೂಲವಾಗುವಂತೆ ಜೀವನ ವಿಧಾನವನ್ನು ರೂಪಿಸಿಕೊಳ್ಳಬೇಕು. 

ಹನಿ ಹನಿ ಎನ್ನುವುದು ಬಹಳ ಮುಖ್ಯ. ನಮ್ಮ ಜೀವನದ ಗುಣಮಟ್ಟ ಸಣ್ಣ ಸಣ್ಣ ಖುಷಿಗಳಲ್ಲಿ ಅಡಗಿದೆ. ದೀರ್ಘ‌ ನಡಿಗೆ ಒಂದೊಂದೆ ಹೆಜ್ಜೆಯಲ್ಲಿ ಕುಳಿತಿದೆ. ನಮ್ಮ ಜೀವನ ಒಂದೊಂದೇ ದಿನವಾಗಿ ಕಳೆಯುತ್ತದೆ. ಹಾಗೆಯೇ, ನಮ್ಮ ಹಣಕಾಸಿನ ಯೋಜನೆಗಳೂ ಸಣ್ಣ ಸಣ್ಣ ಉಳಿತಾಯದಿಂದಲೇ ಆರಂಭ ಆಗಬೇಕು. ಉಳಿಸಿದೆ ಎನ್ನುವುದು ಕೇವಲ ಒಬ್ಬರ ಕೆಲಸವಾಗಲಿ, ಅಗತ್ಯವಾಗಲಿ ಅಲ್ಲ. ಅದು ಮನೋಭಾವ ಆಗಬೇಕು.

ಇದು ಮನೋಭಾವ ಆದಾಗ ಇದನ್ನು ಬೇರೆಯವರೂ ಅಷ್ಟೇ ಸುಲಭವಾಗಿ ಅಳವಡಿಸಿಕೊಳ್ಳುತ್ತಾರೆ. ಇದನ್ನು ಹೇರಲು ಬರುವುದಿಲ್ಲ. ಬದಲಾಗಿ, ನೋಡಿಯಾದರೂ ಕಲಿಯುತ್ತಾರೆ. ಇಂದಿನ ಮಕ್ಕಳೆದರು ಹಣವನ್ನು ನಿರ್ವಹಿಸುವುದು ಬಹುದೊಡ್ಡ ಸವಾಲಾಗಿದೆ. ಆದರೆ ಅವರಿಗೆ ಅದು ಗೊತ್ತಿಲ್ಲ. ನಾವು ಬಡತನವನ್ನು ನಿರ್ವಹಿಸುವುದನ್ನು ಕಲಿಯುತ್ತ ಬಂದ ತಲೆಮಾರಿನವರು. ಹಾಗಾಗಿ, ನಮ್ಮ ಪೀಳಿಗೆಗೆ ಉಳಿತಾಯ ಸಹಜವಾಗಿತ್ತು.

ಈ ಕಾಲದ ಹೊರ ಆಕರ್ಷಣೆಗಳ ಹಿನ್ನೆಲೆಯಲ್ಲಿ ಉಳಿತಾಯಕ್ಕೆ ದೃಡ ಸಂಕಲ್ಪ ಇರಬೇಕು. ಇಂತಹ ಸಂಕಲ್ಪ ಇದ್ದಾಗ ಮಾತ್ರವೇ ಉಳಿತಾಯ ಸಾಧ್ಯ ಆಗುತ್ತದೆ. ಹಣ ಉಳಿಸುವ ವಿಚಾರ ಬಂದಾಗ, ಸರಳತೆ ನಮ್ಮ ಜೀವನದ ಭಾಗವಾಗುತ್ತದೆ. ಸರಳತೆ ಇದ್ದಾಗ ಸಂತೋಷ ಇರುತ್ತದೆ. ಎಷ್ಟೇ ವಸ್ತುಗಳನ್ನು ಕೊಂಡರೂ ಸಿಗದ ಸಂತೋಷ, ಸರಳತೆಯಿಂದ ಬದುಕುವುದರಲ್ಲಿ ಇದೆ. ನಿಧಾನವಾಗಿ ಯಾವುದೇ ಧಾವಂತವೂ ಇರದ ಜೀವನ ನಮ್ಮನ್ನು ಖಾಯಿಲೆಯಿಂದ ದೂರ ಇಡುವುದಕ್ಕೆ ಸಹಕಾರಿ. ಎಲ್ಲಿಂದೆಲ್ಲಿಯ ಸಂಬಂಧ.

ಕೇವಲ ಉಳಿಸಿದರೆ ಆಗಲಿಲ್ಲ. ಗಳಿಸಿ, ಉಳಿಸಿ ಜೊತೆಗೆ ಬೆಳೆಸಿ. ಏನೆಲ್ಲ ಶ್ರಮಪಟ್ಟು ದುಡಿದರೂ ಹಗಲಿರುಳು ಬೆವರು ಸುರಿಸಿದರೂ  ಇದು ಧ್ಯೇಯ.  ಗಳಿಸುವ ವಿಷಯದಲ್ಲಿ ಈಗ ಮಹಿಳೆ-ಪುರುಷ ಎನ್ನುವ ವ್ಯತ್ಯಾಸ ಇಲ್ಲ. ಗಳಿಸಿದ್ದನ್ನು ಉಳಿಸದಿದ್ದರೆ ಏನೆಲ್ಲ ಶ್ರಮಪಟ್ಟು ಡುದಿದರೂ, ಹಗಲಿರುಳು ಬೆವರು ಸುರಿಸಿದರೂ ಗಳಿಸಿಯೂ ಪ್ರಯೋಜನ ಇಲ್ಲ. ಉಳಿಸಿದ್ದು ಬೆಳೆಸದಿದ್ದರೆ ಉಳಿಸಿಯೂ ಪ್ರಯೋಜನ ಇಲ್ಲ.

ಹೀಗೆ ಒಂದು ಸರಪಳಿಯಂತೆ ನಮ್ಮ ಬದುಕನ್ನು ಆವರಿಸಿಕೊಂಡಿರುವ ಉಳಿತಾಯ ಸೂತ್ರದ ಮೊದಲ ಪಾಠವೇ ಅಗತ್ಯ ಇರುವಷ್ಟು ಮಾತ್ರ ಖರ್ಚು ಮಾಡಬೇಕು ಎನ್ನುವುದು. ಅಗತ್ಯವನ್ನು ಅರಿಯಲು ಸರಳವಾಗುವುದು. ಇನ್ನೊಬ್ಬರನ್ನು ಹೋಲಿಸಿಕೊಂಡು ನೋಡಿ ತನಗಿಲ್ಲ ಎಂದು ಕೊರಗುವುದೇ ಇವತ್ತಿನ ಎಲ್ಲ ಅಸಹನೆಯ ಮೂಲ. ಅಸಹನೆಯೇ ಅಶಾಂತಿಯ ಬೀಜ. ವೈಯಕ್ತಿಕ ಬದುಕಿನಲ್ಲೂ, ವ್ಯಾವಹಾರಿಕ ಬದುಕಿನಲ್ಲೂ ಶಾಂತಿಯೇ ಸಂಪತ್ತು. ಇನ್ನು ನಾವು ಬೆಳೆಸಬೇಕಾದ ಸಂಪತ್ತು ಯಾವುದು? ಇದು ಅವರವರೇ ಕಂಡುಕೊಳ್ಳಬೇಕಾದದ್ದು.

(ಇದು, ಸೇವಿಂಗ್ಸ್‌ ಅಕೌಂಟ್‌ ಅಂಕಣದ ಕೊನೆಯ ಕಂತು. ಉಳಿತಾಯದ ಕುರಿತು, ಕಳೆದ ಆರು ತಿಂಗಳಿಂದ ಅಂಕಣದ ಮೂಲಕ ಹಲವು ಮಾಹಿತಿ ನೀಡಿದ ಲೇಖಕಿಗೆ ಕೃತಜ್ಞತೆಗಳು)

* ಸುಧಾಶರ್ಮ ಚವತ್ತಿ

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.