ಧರೆಗಿಳಿದ ಲಾಭ


Team Udayavani, Nov 5, 2018, 6:00 AM IST

24-bnt-1a.jpg

ಕಿತ್ತೂರರು ಕಬ್ಬಿನ ಬೆಳೆ ಹಾಕಿ ಸುಮ್ಮನೆ ಕೂರಲಿಲ್ಲ. ಅವುಗಳ ಅಂತರ ಜಾಸ್ತಿ ಮಾಡಿ, ಅಲ್ಲಿ ತರಕಾರಿ, ಸೊಪ್ಪುಗಳನ್ನೆಲ್ಲಾ ಬೆಳೆದು ಆದಾಯದ ಹಾದಿ ಹುಡುಕಿಕೊಂಡರು. ಅಂದಹಾಗೇ, ಇವರು ಕಬ್ಬನ್ನು ಯಾವುದೇ ಫ್ಯಾಕ್ಟರಿಗಳಿಗೆ ಹಾಕೋಲ್ಲ. ಬದಲಾಗಿ ಬೀಜ ತಯಾರಿಗೆ ಕೊಡುತ್ತಾರಂತೆ. ಹೀಗಾಗಿ, ಲಾಭವೋ ಲಾಭ. 

ಬಾಗಲಕೋಟೆ ಜಿಲ್ಲೆಯ ತೇರದಾಳದ ಧರೆಪ್ಪ ಕಿತ್ತೂರ ಕಾಲತಿಪ್ಪಿ ಗ್ರಾಮದ ಸಾವಯವ ಕೃಷಿಕ. ಈತನ ವಿಶೇಷತೆ ಎಂದರೆ 18 ಹೆಚ್ಚು ಮಿಶ್ರ ಬೆಳೆಯನ್ನು ಬೆಳೆಯುತ್ತಿರುವುದು.  ಈ ಸಾಧನೆಯ ಬಗ್ಗೆ ಕೇಳಿ, ಅಮೆರಿಕದಿಂದ ಆಗಮಿಸಿದ್ದ ಕೃಷಿ ತಜ್ಞ ಟೈಮೋಥಿ ರೆಬರ್‌ ಧರೆಪ್ಪ ತೋಟಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜಾಪುರದ ಸಿದ್ದೇಶ್ವರ ಶ್ರೀಗಳು ಕೂಡ ಬೆನ್ನುತಟ್ಟಿದ್ದಾರೆ. ಹಾಗಾದರೆ ಧರೆಪ್ಪ ಕಿತ್ತೂರ್‌ ಅಂತದ್ದೇನು ಮಾಡಿದ್ದಾರೆ ಅಂತ ನೋಡಲು ಹೋದಾಗ ಕಂಡದ್ದು ಇಷ್ಟು. 

ಧರೆಪ್ಪನವರದು  ಕಾಲತಿಪ್ಪಿ ರಸ್ತೆಗೆ ಹೊಂದಿಕೊಂಡಂತೆ ಒಂದೂವರೆ ಎಕರೆ ಜಮೀನಿದೆ.  ಅದರಲ್ಲಿ ಕಬ್ಬು ನೆಟ್ಟಿದ್ದಾರೆ. ಇದಕ್ಕೂ ಮೊದಲು ನಾಲ್ಕು ಟನ್‌ನಷ್ಟು ತಿಪ್ಪೆಗೊಬ್ಬರ, ಕುರಿಗೊಬ್ಬರ, ಎರೆಹುಳು ಗೊಬ್ಬರ ಹಾಕಿದರು.  4 ಕ್ವಿಂಟಾಲ್‌ ಬೇವಿನ ಹಿಂಡಿ ಹಾಕಿ, 1110 ತಳಿಯ ಕಬ್ಬನ್ನು ಆರು ಅಡಿಗೆ ಒಂದು ಸಾಲು, ಎರಡು ಅಡಿಗೆ ಒಂದು ಕಣ್ಣಿನಂತೆ ನಾಟಿ ಮಾಡಿದರು.  ಅದರ ಜೊತೆ ಚೆಂಡು ಹೂ, ಈರುಳ್ಳಿ, ಹೂಕೋಸು, ಎಲೆಕೋಸು, ಬದನೆ, ಶೇಂಗಾ, ಟೊಮೆಟೊ, ಬೆಂಡೆಕಾಯಿ, ಮೆಂತ್ಯ, ಚವಳಿ, ಸಬ್ಬಸಗಿ, ಕುಸಬಿ, ಕೊತ್ತಂಬರಿ, ಪಾಲಕ್‌, ಮೂಲಂಗಿ, ಮೆನಸಿನಕಾಯಿ ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆದರು. ತರಕಾರಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಬೇವಿನ ಎಣ್ಣಿ ಸಿಂಪಡಿಸಿ, ವಾರಕ್ಕೆ ಒಮ್ಮೆ ಸರದಿ ಪ್ರಕಾರ ಜೀವಾಮೃತ ನೀಡುತ್ತಿದ್ದಾರೆ.

ಕಿತ್ತೂರರಿಗೆ ನೀರಿನ ಸಮಸ್ಯೆ ಇಲ್ಲ. ಬೋರವೆಲ್‌ ಮೂಲಕ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಬ್ಬನ್ನು ಬಿಡಿ ಬಿಡಿಯಾಗಿ ಬೆಳೆಯುವುದರಿಂದ, ಗಾಳಿ ಬೆಳಕು ಹೆಚ್ಚಿಗೆ ಸಿಗುವುದರಿಂದ ಇಳುವರಿ ಹೆಚ್ಚಂತೆ. 

ಅಂತರ ಬೆಳೆಯಾಗಿ ಬೆಳೆದ ಬೆಳೆಗಳಿಂದ ಕೈತುಂಬ ಲಾಭ. ಅದರಲ್ಲಿ ಚೆಂಡು ಹೂವಿನಿಂದ 40 ಸಾವಿರ, ಇತರೆ ಸ್ವೀಟ್‌ಕಾರ್ನ್ 20 ಸಾವಿರ ಹಾಗೂ ಎಲ್ಲ ಕಾಯಿ ಪಲ್ಲೆಗಳಿಂದ 20 ಸಾವಿರ ಜೊತೆಗೆ ಒಂದೂವರೆ ಎಕರೆಯಲ್ಲಿ ಬೆಳೆದ 1110 ತಳಿಯ 80-90 ಟನ್‌ ಕಬ್ಬನ್ನು ಬೀಜಕ್ಕಾಗಿ ಮಾರಾಟ ಮಾಡುವುದರಿಂದ ಎರಡೂವರೆ ಲಕ್ಷ ಆದಾಯ ಕಟ್ಟಿಟ್ಟ ಬುತ್ತಿ.  ಈ ತಳಿಯ ಒಂದು ಕಬ್ಬು ಕನಿಷ್ಠ 2 ಕೆಜಿ ತೂಕ ಬರುತ್ತದೆ. ಆದ್ದರಿಂದ ಈ ಭಾಗದಲ್ಲಿ ಈ ತಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ನಾವು ಕಬ್ಬನ್ನು ಪ್ಯಾಕ್ಟರಿಗೆ ಕಳುಹಿಸದೇ, ಬೀಜಕ್ಕೆ ಮಾರಾಟ ಮಾಡುವುದರಿಂದ ಲಾಭ ಹೆಚ್ಚು ಎನ್ನುತ್ತಾರೆ ಧರೆಪ್ಪ. 

ಅಂತರ ಬೆಳೆಗೆ ಹೂಡಿಕೆ ಮಾಡಿದ್ದು 20 ಸಾವಿರರೂ. ಒಟ್ಟು ಹನ್ನೊಂದು ತಿಂಗಳಲ್ಲಿ ಬೀಜಕ್ಕೆ ಮಾರಾಟ ಮಾಡಿದರೆ ಖರ್ಚು ವೆಚ್ಚಗಳನ್ನು ಕಳೆದರೂ ಅಂದಾಜು 3.20 ಲಕ್ಷ ರೂ. ನಿವ್ವಳ ಲಾಭವಂತೆ. 

ಹೀಗಾಗಿ, ಧಾರವಾಡ, ಬೆಳಗಾವಿ, ವಿಜಾಪುರ, ಬಳ್ಳಾರಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದವರು, ಮಹಾರಾಷ್ಟ್ರ ರಾಜ್ಯದ ಹಲವು ರೈತರು ಭೇಟಿ ನೀಡಿ, ಕಿತ್ತೂರ ಅವರ ಕೃಷಿ ಪದ್ಧತಿಯನ್ನು ಶ್ಲಾಘಿಸಿದ್ದಾರೆ. 

– ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.