ಲಾಭದ ಪಪ್ಪಾಯಿ


Team Udayavani, Nov 12, 2018, 4:00 AM IST

labhada.jpg

ಕೆಲಸಕ್ಕೆ ಹೋಗುವವರಿಗೆಲ್ಲ ದಿನಕ್ಕಷ್ಟು ಎಂದು ಸಂಬಳ ನಿಗದಿಯಾಗುತ್ತದೆ. ತಿಂಗಳ ಕೊನೆಯಲ್ಲಿ, ಇಂತಿಷ್ಟು ದಿನ ದುಡಿದದ್ದಕ್ಕೆ ಇಷ್ಟು ಹಣ ಎಂದು ಸಂಬಳ ನೀಡಲಾಗುತ್ತದೆ. ರೈತರೂ ಹೀಗೆ ತಿಂಗಳ ಸಂಬಳ ಪಡೆಯಲು ಸಾಧ್ಯವಿಲ್ಲವೆ? ಶ್ರದ್ಧೆಯಿಂದ ಪಪ್ಪಾಯ ಬೆಳೆದರೆ, ಪ್ರತಿ ತಿಂಗಳೂ ಕಾಸು ಎಣಿಸಲು ಸಾಧ್ಯವೆಂದು ಶಿವಮೊಗ್ಗದ ರೈತ ಶಂಕರಗೌಡ ತೋರಿಸಿಕೊಟ್ಟಿದ್ದಾರೆ. 

ಶಿವಮೊಗ್ಗ  ಜಿಲ್ಲೆ ಸಾಗರ ತಾಲೂಕಿನ ಸಾಡಗಳಲೆ ಗ್ರಾಮದ ಯುವ ರೈತ ಶಂಕರಗೌಡ ಪಪ್ಪಾಯಿ ಕೃಷಿ ನಡೆಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಗೌತಮಪುರ-ತ್ಯಾಗರ್ತಿ ಗ್ರಾಮ ಸಂಪರ್ಕ ರಸ್ತೆಯಲ್ಲಿರುವ ಇವರ ಜಮೀನು ಖುಷಿ¤ ಭೂಮಿಯಾಗಿದ್ದು ಇಳಿಜಾರಿನಿಂದ ಕೂಡಿದೆ. ಈ ಹೊಲದಲ್ಲಿ ಕೊಳವೆ ಬಾವಿ ತೆಗೆಸಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. 

ಅರ್ಧ ಎಕರೆ ವಿಸ್ತೀರ್ಣದ ಖುಷ್ಕಿ  ಹೊಲದಲ್ಲಿ ರೆಡ್‌ ಲೇಡಿ ತಳಿಯ ಸೀಡ್‌ಲೆಸ್‌ ಪಪ್ಪಾಯ ಸಸಿ ಬೆಳೆಸುತ್ತಿದ್ದಾರೆ. ಇದಕ್ಕಾಗಿ 2018 ರ ಫೆಬ್ರವರಿ ತಿಂಗಳ 2 ನೇ ವಾರದಲ್ಲಿ  ಜಮೀನು ಹದ ಗೊಳಿಸಿ ಪೊಪಾು³ ಸಸಿ ನಾಟಿ ಮಾಡಿದ್ದರು. ಇಲ್ಲಿ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 5 ಅಡಿ ಬರುವಂತೆ 500 ಪಪ್ಪಾಯಿ ಸಸಿ ಬೆಳೆಸಲಾಗಿದೆ. ಒಂದು ಅಡಿ ಆಳ, ಒಂದು ಅಡಿ ಅಗಲದ ಚಚ್ಚೌಕಾದ ಗುಂಡಿ ನಿರ್ಮಿಸಿ ಪಪ್ಪಾಯ ಸಸಿಯ ನಾಟಿ ಮಾಡಿದರು.

ಗಿಡ ನೆಟ್ಟು ಒಂದು ತಿಂಗಳ ನಂತರ ಪ್ರತಿ ಗಿಡಕ್ಕೆ  19:19 ಕಾಂಪ್ಲೆಕ್ಸ್‌  ಗೊಬ್ಬರ ಸರಾಸರಿ 25 ಗ್ರಾಂ.ನಷ್ಟು ನೀಡಿದರು. ನಂತರ, ಪ್ರತಿ ತಿಂಗಳಿಗೊಮ್ಮೆಯಂತೆ 20:20 ಕಾಂಪ್ಲೆಕ್ಸ್‌ ಗೊಬ್ಬರವನ್ನು ನೀಡಿದ್ದರಿಂದ ಪಪ್ಪಾಯ ಕಾಂಡಕ್ಕೆ ಕೊಳೆ ರೋಗ ಬರಲೇ ಇಲ್ಲ. 3 ತಿಂಗಳಿಗೆ ಗಿಡ ಹೂ ಬಿಡಲು ಆರಂಭಿಸಿತು. ಪ್ರತಿ 20 ದಿನಕ್ಕೆ ಒಮ್ಮೆಯಂತೆ ಮಿಡಿ ಮತ್ತು ಕಾಯಿಗೆ ಔಷಧ ಸಿಂಪಡಿಸಿದರು.

ಜುಲೈ ಕೊನೆಯವಾರದಿಂದ ಪಪ್ಪಾಯ ಫ‌ಸಲು ಮಾರಾಟಕ್ಕೆ ಸಿದ್ಧವಾಯಿತು. ಈಗ  ವಾರಕ್ಕೆ ಒಮ್ಮೆ ಪಪ್ಪಾಯ ಫ‌ಸಲು ಕಟಾವು ಮಾಡುತ್ತಿದ್ದಾರೆ. ಶಿವಮೊಗ್ಗ, ಭದ್ರಾವತಿ, ಧಾರವಾಡ, ಶಿರಸಿಗಳಿಂದ ವ್ಯಾಪಾರಸ್ಥರು ಈ ಭಾಗಕ್ಕೆ ಆಗಮಿಸುತ್ತಾರೆ. ಹೊಲದಲ್ಲಿಯೇ ತೂಕಮಾಡಿ ಹಣ ನೀಡಿ ಕೊಂಡೊಯ್ಯುತ್ತಾರೆ. ಒಂದು ಪಪ್ಪಾಯ ಕಾಯಿ, ಎರಡು ಕಿ.ಲೋ ತೂಕವಿದೆ. ಪ್ರತಿ ಗಿಡದಿಂದ ವಾರಕ್ಕೆ 2 ಕಾಯಿಯಂತೆ, 500 ಗಿಡದಿಂದ ವಾರಕ್ಕೆ ಒಟ್ಟು 20 ಕ್ವಿಂಟಾಲ್‌ ಪಪ್ಪಾಯಿ ಮಾರಾಟವಾಗುತ್ತಿದೆ. 

ಕೆ.ಜಿಗೆ 10ರೂ. ಅಂದರೂ ವಾರಕ್ಕೆ 20 ಸಾವಿರ, ತಿಂಗಳಿಗೆ 80 ಸಾವಿರ ಆದಾಯ ಬರುತ್ತಿದೆ. ಖರ್ಚು 30 ಸಾವಿರ ಅಂತಿಟ್ಟುಕೊಂಡರೂ, ಉಳಿಕೆ 50 ಸಾವಿರ ರುಪಾಯಿ ಲಾಭ. ಈಗ ಇವರ ಪಪ್ಪಾಯಿಗೆ 9 ತಿಂಗಳು. ಇನ್ನೂ ಎರಡು ವರ್ಷ ಇದೇ ರೀತಿ ಲಾಭ ತಂದುಕೊಡುತ್ತದೆ.  
ರೈತರು ಮಂತ್ಲಿ ಇನ್‌ಕಮ್‌ ಮಾಡೋದು ಹೇಗೆ ಅಂತ ಶಂಕರಗೌಡ ತೋರಿಸಿದ್ದಾರೆ. 

* ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.