ಈ ಸೀಬೆ ಬೆಳೆದವನೇ ಸಿರಿವಂತ


Team Udayavani, Nov 19, 2018, 6:00 AM IST

img2996b-copy-copy.jpg

ಹುಲ್ಲು ಮತ್ತು ಎಲುಬಿನ ಬೆಳವಣಿಗೆಗೆ ಅಗತ್ಯವಿರುವ ಸುಣ್ಣದ ಅಂಶವನ್ನು, ರಕ್ತ ವರ್ಧಕವಾದ ಕಬ್ಬಿಣದ ಅಂಶವನ್ನು ಹೊಂದಿರುವ ಸೀಬೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಇದೀಗ, ಬೀಜವಿಲ್ಲದ ಸೀಬೆಯ ಹಣ್ಣಿನ ತಳಿಯೊಂದನ್ನು ಬೆಳ್ತಂಗಡಿಯ ರೈತರೊಬ್ಬರು ಬೆಳೆದಿದ್ದಾರೆ…    

ಸೀಬೆ ಅಥವಾ ಪೇರಳೆಹಣ್ಣು ದೋರೆಗಾಯಿಯಾಗಿದ್ದರೂ ಎಳಸಾಗಿದ್ದರೂ ಕಚ್ಚಿ ತಿನ್ನಲು ತುಂಬ ರುಚಿಕರವಾಗಿರುತ್ತದೆ. ಮಾತ್ರವಲ್ಲ, ಅದರೊಳಗೆ ಪುಷ್ಕಳವಾಗಿ ಪೋಷಕಾಂಶಗಳಿವೆ. ಹಲ್ಲು ಮತ್ತು ಎಲುಬಿನ ಬೆಳವಣಿಗೆಗೆ ಅಗತ್ಯವಾದ ಸುಣ್ಣದ ಅಂಶ ಈ ಹಣ್ಣಿನಲ್ಲಿದೆ. ರಕ್ತವರ್ಧಕವಾದ ಕಬ್ಬಿಣಾಂಶವಿದೆ. ಜೀರ್ಣಕಾರಕವಾದ ಸೀಬೆಯನ್ನು ಬೇಯಿಸಿ ಎಳೆಯ ಮಕ್ಕಳಿಗೂ ತಿನ್ನಿಸಬಹುದು.

ಹೀಗಿದ್ದರೂ, ಸೀಬೆಹಣ್ಣಿನೊಳಗೆ ವಿಪುಲವಾಗಿರುವ ಬೀಜಗಳು ಮಾತ್ರ ಹಲ್ಲುಗಳಿಗೆ ಕಿರಿಕಿರಿಯುಂಟು ಮಾಡುತ್ತವೆ, ಜೀರ್ಣವಾಗದ ಬೀಜಗಳು ಸರ್ಜನಾಂಗಗಳಿಗೂ ಬಾಧೆ ತರುತ್ತವೆ. ಆದರೆ ಒಳಗೆ ಒಂದೇ ಒಂದು ಬೀಜವೇ ಇಲ್ಲದ ಅಪರೂಪದ ಸೀಬೆ ತಳಿಯೊಂದನ್ನು ಸಂವರ್ಧಿಸಿದ್ದಾರೆ ರವಿಶಂಕರ ಭಟ್ಟರು. ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಸನಿಹ ಇವರ ಮನೆ ಇದೆ.

ಈ ವಿಶಿಷ್ಟವಾದ ಸೀಬೆಹಣ್ಣು ದೊಡ್ಡ ಗಾತ್ರದ ಸೇಬಿನ ಹಣ್ಣಿನಂತಿದೆ.  ಕನಿಷ್ಠ ಮುನ್ನೂರು ಗ್ರಾಮ್‌ ತೂಕ. ಒಳಗೆ ಕೂಡ ಸೇಬಿನದೇ ಆಕಾರವನ್ನು ಹೊಂದಿದೆ. ಮನ ಸೆಳೆಯುವ ರುಚಿ, ಭಿನ್ನ ಪರಿಮಳಗಳ ಜೊತೆಗೆ ತುಂಬ ಸಿಹಿಯಾಗಿದೆ. ಹಲ್ಲಿಲ್ಲದವರಿಗೂ ತಿನ್ನಲು ಸುಲಭವಾಗಿದೆ. ಜೊತೆಗೆ, ಈ ಹೊಸ ತಳಿ ಬಹು ಮೃದು ಹಣ್ಣು.

ಹತ್ತು ವರ್ಷಗಳ ಹಿಂದೆ ದೂರದ ಸಂಬಂಧಿಗಳ ಮನೆಯಿಂದ ರವಿಶಂಕರ ಭಟ್ಟರು ತಂದು ನೆಟ್ಟ ಮರ ಈಗ ವಿಶಾಲವಾಗಿ ರೆಂಬೆ ಕೊಂಬೆಗಳನ್ನು ಹರಡಿಕೊಂಡು ದೊಡ್ಡದಾಗಿ ಬೆಳೆದಿದೆ. ವರ್ಷದ ಎಲ್ಲ ಋತುಗಳಲ್ಲಿಯೂ ಹಣ್ಣುಗಳನ್ನು ಕೊಡುವುದು ಇದರ ವೈಶಿಷ್ಟ್ಯ. ಹಣ್ಣುಗಳಿಗೆ ಪೇಟೆಯಲ್ಲಿಯೂ ಒಳ್ಳೆಯ ಬೇಡಿಕೆ ಇದೆ. ಒಂದು ಮರ ಸುಮಾರು ಒಂದು ಕ್ವಿಂಟಾಲಿಗಿಂತ ಹೆಚ್ಚು ಹಣ್ಣು ಕೊಡುತ್ತದೆ. ಕಿಲೋಗೆ ನೂರು ರೂ.ದರದಲ್ಲಿ ಮಾರಾಟವಾಗುತ್ತದೆ. ಮೂರು ಹಣ್ಣುಗಳಿದ್ದರೆ ಒಂದು ಕಿಲೋ ತೂಗುತ್ತದೆ. ಹಣ್ಣನ್ನು ಹೀಗೆಯೇ ತಿನ್ನಬಹುದು. ಮಿಲ್ಕ್ಷೇಕ್‌, ಐಸ್‌ಕ್ರೀಮ್‌ ಮೊದಲಾದ ಸಿಹಿಗಳನ್ನು ತಯಾರಿಸಿದರೆ ಅದರ ಸ್ವಾದವೇ ಪ್ರತ್ಯೇಕ ಎನ್ನುತ್ತಾರೆ ಭಟ್ಟರ ಪತ್ನಿ ಜ್ಯೋತಿ.

ಗಿಡ ನೆಟ್ಟ ವರ್ಷ ಬುಡಕ್ಕೆ ನೀರು ಹಾಕಿರುವುದನ್ನು ಬಿಟ್ಟರೆ ಅನಂತರ ನೀರು, ಗೊಬ್ಬರ ಎರಡನ್ನೂ ಕೊಟ್ಟಿಲ್ಲ. ಮಣ್ಣಿನಲ್ಲಿ ಸಹಜವಾಗಿರುವ ಸತ್ತಾ$Ìಂಶವನ್ನೇ ಬಳಸಿಕೊಂಡು ಮರ ಹಣ್ಣುಗಳಿಂದ ಬಾಗುತ್ತದೆ. ಬಾವಲಿಗಳು ಉಗುರುಗಳಿಂದ ಗೀರಿ ಹಾನಿ ಮಾಡುವ ಕಾರಣ ಹೆಚ್ಚು ಹಣ್ಣುಗಳಿರುವಾಗ ತೆಳುವಾದ ಬಲೆ ಹೊದೆಸಬೇಕಾಗುತ್ತದೆಯಂತೆ. ಹೆಚ್ಚು ಬಿಸಿಲಿರುವ ಜಾಗ, ಮಣ್ಣು ಫ‌ಲವತ್ತಾಗಿದ್ದು ಮಳೆಗಾಲದಲ್ಲಿ ಬುಡದಲ್ಲಿ ನೀರು ನಿಲ್ಲದಂತಿದ್ದರೆ ಎಲ್ಲ ಗುಣದ ಮಣ್ಣಿಗೂ ಹೊಂದಿಕೊಳ್ಳುತ್ತದೆ. ಬೇಸಗೆಯಲ್ಲಿ ಅಧಿಕವಾಗಿ ಹಣ್ಣು ಕೊಡುತ್ತದೆ.

ಇನ್ನು ಪೇರಳೆ ಹಣ್ಣಿಗಿಂತಲೂ ಅದರ ಗಿಡಗಳ ಮಾರಾಟ ಹೆಚ್ಚು ಲಾಭ ತರುತ್ತದೆ ಎನ್ನುತ್ತಾರೆ ಭಟ್ಟರು. ಇದರ ಗಿಡ ತಯಾರಿಸುವುದು ತುಂಬ ಪ್ರಯಾಸಕರವಂತೆ. ಬಲಿತ ಕೊಂಬೆಗಳ ಕೆಳಭಾಗದಲ್ಲಿ ಸಗಣಿ ಗೊಬ್ಬರದ ಹುಡಿ ಮತ್ತು ಸುಡುಮಣ್ಣು ತುಂಬಿದ ಮುದ್ದೆಯನ್ನಿರಿಸಿ ತೆಂಗಿನ ನಾರಿನಿಂದ ಅದಕ್ಕೊಂದು ಆವರಣ ನಿರ್ಮಿಸಬೇಕು. ಹುರಿ ಹಗ್ಗದಿಂದ ಬಿಗಿದು ಕಟ್ಟಬೇಕು. ಕೊಂಬೆಯಿಂದ ಬೇರುಗಳೊಡೆದು ಈ ಆವರಣ ಸೇರಿಕೊಂಡ ಬಳಿಕ ಎಚ್ಚರಿಕೆಯಿಂದ ಕೊಂಬೆಯನ್ನು ಬೇರಿನ ಕೆಳಭಾಗದಿಂದ ಕತ್ತರಿಸಿ ನಾಟಿಗೆ ಬಳಸಬೇಕು. ಹೀಗೆ, ನೂರು ಗಿಡಗಳಿಗೆ ಬೇರು ಬರಿಸುವ ಪ್ರಯತ್ನದಲ್ಲಿ ಹತ್ತು ಗಿಡ ಮಾತ್ರ ಸಿಗುತ್ತದೆ. ಆದಕಾರಣ, ಒಂದು ಗಿಡಕ್ಕೆ ಒಂದರಿಂದ ಒಂದೂವರೆ ಸಾವಿರ ರೂಪಾಯಿ ಬೆಲೆ ಹೇಳುತ್ತೇನೆ. ಆದರೂ ಗಿಡಗಳಿಗೆ ಬೇಡಿಕೆ ಬರುತ್ತಲೇ ಇರುತ್ತದೆ ಎನ್ನುತ್ತಾರೆ ಈ ಕೃಷಿಕರು. ನೂರಕ್ಕಿಂತ ಹೆಚ್ಚು ವರ್ಷ ಬದುಕಿ ಬೆಳೆಸಿದವನ ಪಾಲಿಗೆ ಚಿನ್ನವಾಗುವ ಈ ಹೊಂಬಣ್ಣದ ಹಣ್ಣು ತಿಂದವರ ಮನ ಗೆಲ್ಲುತ್ತದೆ.

– ಪರಾಶರ

ಟಾಪ್ ನ್ಯೂಸ್

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.