ಬಾದಾಮಿ ಲಾಲ್‌ಬಾಗ್‌


Team Udayavani, Dec 17, 2018, 6:00 AM IST

pustpa-krushi-story1.jpg

ಬಾದಾಮಿ ರೈಲ್ವೇ ನಿಲ್ದಾಣದ ಬಳಿ ಸೆಲ್ಪಿ ಸ್ಪಾಟ್‌ ಒಂದಿದೆ. ಅದುವೇ ಈ ಪಾಟೀಲರ ಹೂವಿನ ತೋಟ. ಇಲ್ಲಿ ವರ್ಷ ಪೂರ್ತಿ ಹೂವು ಇರುವುದರಿಂದ ಈ ದಾರಿಯಲ್ಲಿ ಬಂದವರೆಲ್ಲ ಹೂವಿನ ಮಧ್ಯೆ ನಿಂತು ಪೋಟೋ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಇವರ ತೋಟದಲ್ಲಿ ಅಂತರ ಬೆಳೆಯಾಗಿ ತೆಂಗು, ಮಾವು, ನಿಂಬೆಗಳೆಲ್ಲಾ ಇವೆ. ಹೀಗಾಗಿ, ಪಾಟೀಲರಿಗೆ ವರ್ಷ ಪೂರ್ತಿ ಕೈ ತುಂಬಾ ಆದಾಯ. 

ಬಾದಾಮಿ ರೈಲ್ವೇ ನಿಲ್ದಾಣದ ಹತ್ತಿರ ನಿಂತರೆ ಹೂದೋಟ ಕಾಣುತ್ತದೆ. ಕುತೂಹಲದಿಂದಲೇ ಅಲ್ಲಿಗೆ ಹೋದರೆ,  ಒಂದಷ್ಟು ಜನ ಹೂವಿನ ಮಧ್ಯೆ ನಿಂತು ಸೆಲ್ಪಿ ತೆಗೆಸಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲ, ಇನ್ನೊಂದಷ್ಟು ಜನ ಸ್ಫೂರ್ತಿ ಪಡೆದು-ತೋಟ ಮಾಡುವುದು ಹೇಗೆ ಅಂತ ಆ ತೋಟದ ಮಾಲೀಕ, ಯುವ ಕೃಷಿಕ ವೈ. ಆರ್‌. ಪಾಟೀಲರನ್ನು ಕೇಳುತ್ತಿರುತ್ತಾರೆ. ಪ್ರತಿದಿನ ತೋಟದ ಮಧ್ಯೆ ಹೀಗೆ ಫೋಟೋ ಶೂಟ್‌ಗಳು ನಡೆಯುತ್ತಲೇ ಇರುತ್ತವೆ.   ಇದಕ್ಕೆ ಕಾರಣ- ವರ್ಷವಿಡೀ ಇಲ್ಲಿ ಹೂ ದೊರೆಯುವುದು. ಪಾಟೀಲರದ್ದು ಮೂರು ಎಕರೆ ಜಮೀನಿದೆ. ಇದರಲ್ಲಿ ಐದು ಬಗೆಯ ಹೂವುಗಳನ್ನು ಬೆಳೆದು ಕೈತುಂಬ ಹಣ ಸಂಪಾದಿಸುತ್ತಿದ್ದಾರೆ.  ಇದರ ಜೊತೆ  ತೆಂಗು-100 ಗಿಡ, 80 ನಿಂಬೆ ಗಿಡ, 40 ಮಾವು, 4 ಚಿಕ್ಕು, 4 ಸೀತಾಫಲ  ಮತ್ತು 3 ನೆಲ್ಲಿಕಾಯಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ತೆಂಗು ಬಿಟ್ಟು ಉಳಿದ ಬೆಳೆಗಳಿಂದ ಆದಾಯ ಕೈಗೆಟುಕುತ್ತಿದೆ. 

ವರ್ಷ ವಿಡೀ ಅರಳುವ ಹೂವು
ಹೂವಿನ ದರ ಒಂದು ರೀತಿ  ಶೇರುಪೇಟೆ ವ್ಯವಹಾರದಂತೆ. ಪ್ರತಿದಿನ ಒಂದೇ ಬೆಲೆ ಇರುವುದಿಲ್ಲ. ಹೀಗಾಗಿ ಪಾಟೀಲರು ಋತುಮಾನಕ್ಕೆ ತಕ್ಕಂತೆ ವರ್ಷವಿಡೀ ಹೂವಿನ ಇಳುವರಿ ಬರುವಂತೆ ಯೋಜಿಸಿದ್ದಾರೆ.  ಒಂದು ಎಕರೆಯಲ್ಲಿ ಸುಗಂಧ ರಾಜ (ವರ್ಷವೀಡಿ) ಒಂದು ಎಕರೆ, ಎರಡು ಎಕರೆಯಲ್ಲಿ ದುಂಡು ಮಲ್ಲಿಗೆ ಮತ್ತು ಕಾಕಡ (ಜನವರಿಯಿಂದ ಜೂನ್‌ವರೆಗೆ) ಎರಡು ಎಕರೆ ಕಾಕಡ (ಆಗಸ್ಟ್‌ದಿಂದ ಡಿಸೆಂಬರ್‌), ಚೆಂಡು ಹೂವು (ದೀಪಾವಳಿ ಹಬ್ಬದಲ್ಲಿ), ಗಲಾಟಿ ಹೂವು (ಅಲ್ಪಾವಧಿ ಬೆಳೆ) 25 ಗುಂಟೆಯಲ್ಲಿ ಬೆಳೆದಿದ್ದಾರೆ. ಪಾಟೀಲರು ಆರು ವರ್ಷದಿಂದ ಪುಷ್ಪಕೃಷಿಯಲ್ಲಿ ತೊಡಗಿದ್ದಾರೆ.  ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚುತ್ತಿದ್ದು, ಕೀಟ ಬಾಧೆ ತಡೆಗೆ ವಾರದಲ್ಲಿ 1-2 ಸಲ ಔಷಧಿ ಸಿಂಪಡಿಸುತ್ತಾರೆ. ನೀರಿನ ನಿರ್ವಹಣೆ ಕಷ್ಟವೇನಿಲ್ಲ. ಇದಕ್ಕಾಗಿ ಎರಡು ಬೋರ್‌ವೆಲ್‌ಗ‌ಳಿದ್ದು, ಎಲ್ಲ ಹೂವಿನ ಗಿಡಗಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಇಳುವರಿ ಹೆಚ್ಚಲು ಗಿಡಗಳಿಗೆ ಕೊಟ್ಟಿಗೆ ಮತ್ತು ಬೇವಿನ ಬೀಜದಿಂದ ತಯಾರಿಸಿದ ಗೊಬ್ಬರ ಬಳಸುತ್ತಾರೆ. ಹೂವಿನ ತೋಟದಲ್ಲಿ ಮನೆಯವರೂ ದುಡಿಯುವುದರಿಂದ ಆಳುಗಳ ಸಮಸ್ಯೆ ಇವರಿಗಿಲ್ಲ.

ವ್ಯಾಪಾರಸ್ಥರೊಂದಿಗೆ ಒಪ್ಪಂದ
ಪಾಟೀಲರು ಬಾದಾಮಿ-ಬನಶಂಕರಿ ಮಾರುಕಟ್ಟೆಯ ನಿಗದಿತ ವ್ಯಾಪಾರಸ್ಥರೊಂದಿಗೆ ಮೌಖೀಕ ಒಪ್ಪಂದ ಮಾಡಿಕೊಂಡಿದ್ದಾರೆ . ಕೆ.ಜಿ. ಸುಗಂಧ ರಾಜಕ್ಕೆ 60ರೂ., ಕೆ.ಜಿ. ದುಂಡು ಮಲ್ಲಿಗೆ 200 ರೂ, ಕೆ.ಜಿ. ಕಾಕಡ 200 ರೂ. ಹೀಗೆ ಮೊದಲೇ ಮಾತುಕತೆಯಾಗಿರುತ್ತದೆ.  ಹೀಗಾಗಿ, ಇವರಿಗೆ ಮಧ್ಯವರ್ತಿಗಳ ಹಾವಳಿ ಇಲ್ಲ. ಇಳುವರಿ ಹೆಚ್ಚಿದ ಸಂದರ್ಭದಲ್ಲಿ ಅದನ್ನು ಬಾಗಲಕೋಟೆ ಮಾರುಕಟ್ಟೆಗೆ ಕಳುಹಿಸುತ್ತಾರೆ. ವಾರ್ಷಿಕವಾಗಿ ದುಂಡು ಮಲ್ಲಿಗೆಯಿಂದ 8 ಲಕ್ಷ , ಕಾಕಡ 7 ಲಕ್ಷ ರೂ., ಸುಗಂಧ ರಾಜ 40 ಸಾವಿರ ರೂ. (ತಿಂಗಳಿಗೆ) ಆದಾಯ ಗಳಿಸುತ್ತಿದ್ದಾರೆ. ಇದಲ್ಲದೇ, ಸುಗಂಧ ರಾಜದ ಗೆಡ್ಡೆ (ಬೇರೆಡೆ ನಾಟಿ ಮಾಡಲು) ಮಾರಾಟದಿಂದಲೇ 2.5 ಲಕ್ಷ ರೂ. ಸಂಪಾದನೆ ಇದೆ.  ವೈ.ಆರ್‌. ಪಾಟೀಲರ ಈ ಕ್ರಿಯಾಶೀಲ ಪ್ರಯತ್ನವನ್ನು ನೋಡಿದ ಧಾರವಾಡ ಕೃಷಿ ವಿವಿ, 2017ರಲ್ಲಿ ಅವರಿಗೆ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ನೆಮ್ಮದಿ ಬದುಕು
ವೈ.ಆರ್‌. ಪಾಟೀಲ ಅವರದ್ದು 10 ಜನ ಗಂಡು, 6 ಜನ ಹೆಣ್ಣು ಮಕ್ಕಳಿರುವ ಅವಿಭಕ್ತ ಕುಟುಂಬ. ಒಟ್ಟು ಐದು ಎಕರೆ ಭೂಮಿಯಲ್ಲಿ 3 ಎಕರೆಯಲ್ಲಿ ಪುಷ್ಪಕೃಷಿ (ತೋಟ), ಎರಡು ಎಕರೆಯಲ್ಲಿ ದವಸ ಧಾನ್ಯ ಮತ್ತು 10 ಎಕರೆ ಲಾವಣಿ ಪಡೆದು ಸಜ್ಜೆ, ಮೆಕ್ಕಜೋಳ, ಬಿಳಿಜೋಳ, ಕಡಲೆ ಶೇಂಗಾ ಬೆಳೆಯುತ್ತಿದ್ದಾರೆ. ಇದರ ಜೊತೆಗೆ 70 ಕುರಿ, 50 ಕೋಳಿ, 5 ಆಕಳು, 2 ಎಮ್ಮೆ, 2 ಎತ್ತುಗಳನ್ನು ಸಾಕಿದ್ದಾರೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಈ ಅವಿಭಕ್ತ ಕುಟುಂಬ ಕೃಷಿಯಲ್ಲಿಯೇ ನೆಮ್ಮದಿ ಕಂಡುಕೊಂಡಿದೆ.
ಮಾಹಿತಿಗೆ: 9448580714 

– ಶರಣು ಹುಬ್ಬಳ್ಳಿ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.