ಆದರ್ಶ ಕೃಷಿ


Team Udayavani, Dec 24, 2018, 6:00 AM IST

adarsha-3-copy-copy.jpg

ಕನಕಾಂಬರ ಬೆಳೆದು ಯಶಸ್ಸು ಕಂಡಿರುವುದು ಶ್ರೀರಂಗಪಟ್ಟಣದ ರೈತ ಆದರ್ಶರ ಹೆಗ್ಗಳಿಕೆ. ಸಸಿ ಸಾಯೋ ರೋಗ ಇಲ್ಲದೇ ಹೋದರೆ, ಕನಕಾಂಬರದಿಂದ ಭಾರೀ ಲಾಭ ಪಡೆಯಬಹುದು ಎಂಬುದು ಅವರ ಅನುಭವದ ಮಾತು. 

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರಕ್ಕೆ ಹೊಂದಿಕೊಂಡಂತೆ ಈ ರೈತನ ಜಮೀನಿದೆ. ಅದರ ತುಂಬ ಬರೀ ಕನಕಾಂಬರ.  ಅದೆಷ್ಟೋ ರೈತರು ಕನಕಾಂಬರ ಬೆಳೆಯಲಾರದೇ ಕೈ ಚೆಲ್ಲಿದರೂ, ಈ ಜಮೀನಿನ ಮಾಲೀಕ ಆದರ್ಶ ಛಲ ಬಿಡದೇ ಯಶಸ್ವಿಯಾಗಿ ಕನಕಾಂಬರ ಬೆಳೆದಿದ್ದಾರೆ. ಜೊತೆಗೆ ನರ್ಸರಿ ಕೂಡ ನಡೆಸುತ್ತಿದ್ದಾರೆ.

ಇವರ ಪ್ರಕಾರ, ಕನಕಾಂಬರ ಬೆಳೆ ವಿಫ‌ಲವಾಗಲು ಮುಖ್ಯ ಕಾರಣ : ಸಸಿ ಸಾಯೋ ರೋಗ. ಇದೊಂದು ತೊಂದರೆ ಇರದೇ ಹೋದರೆ ಕನಕಾಂಬರ ನಿಜಕ್ಕೂ ಬಂಗಾರದಂಥ ಬೆಳೆ ಅನ್ನುತ್ತಾರೆ.

ಈ ಸಮಸ್ಯೆ ಪರಿಹಾರಕ್ಕಾಗಿ ಇವರು ಹತ್ತು ಹಲವು ಪ್ರಯತ್ನ ಮಾಡಿದ್ದಾರೆ, ಹಲವಾರು ಅನುಭವಿಗಳನ್ನು, ತೋಟಗಾರಿಕಾ ವಿಜ್ಞಾನಿಗಳನ್ನು ಭೇಟಿಯಾಗಿದ್ದಾರೆ. ಆದರೆ ಎಲ್ಲೂ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಆಮೇಲೆ ಸ್ವತಃ ತಾನೇ ಮದ್ದನ್ನು ಕಂಡು ಹಿಡಿದುಕೊಂಡಿದ್ದಾರೆ.  ಅದು ಹೇಗೆ ಎಂಬುದು ಕುರಿತು ಇಲ್ಲಿದೆ ಮಾಹಿತಿ. 

ಗುಣಿ ಪದ್ದತಿಯಲ್ಲಿ ಸಸಿ ನಾಟಿ ಮಾಡುವುದು, ಮೂರೂವರೆ ಅಡಿ ಅಂತರದ ಸಾಲು ಬಿಟ್ಟು, ಒಂದೂವರೆ ಅಡಿಗೆ ಒಂದು ಗುಣಿ ತೆಗೆಯಬೇಕು. ಗುಣಿಯಿಂದ ಹೊರತಗೆದ ಮಣ್ಣು ಹಾಗೂ ಎರೆಹುಳು ಗೊಬ್ಬರ ಮತ್ತು ಬೇವಿನ ಹಿಂಡಿಯನ್ನು ಮಿಶ್ರಣ ಮಾಡಿ ಗುಣಿ ತುಂಬಬೇಕು. ಗುಣಿ ತುಂಬಿದ ಮೇಲೆ ಮಣ್ಣು ಗುಣಿಯಿಂದ ಅರ್ಧ ಅಡಿಯಷ್ಟಾದರೂ ನೆಲಮಟ್ಟದಿಂದ ಮೇಲೆ ಬಂದಿರಬೇಕು.

ಅಂಥ ಒಂದೊಂದು ಗುಡ್ಡೆಯ ಮೇಲೆ ಎರಡು ಅಥವಾ ಮೂರು ಸಸಿ ನೆಡಬೇಕು. ಕನಕಾಂಬರ ಕೃಷಿಯಲ್ಲಿ  ಹನಿ ನೀರಾವರಿ ಅಳವಡಿಸುವುದು ಉತ್ತಮ ವಿಧಾನ. ಇದರಿಂದ ಖಂಡಿತ ಸಸಿ ಸಾಯುವ ರೋಗ ನಿಯಂತ್ರಿಸಬಹುದು ಎನ್ನುತ್ತಾರೆ ಆದರ್ಶ್‌. 
ಬರಿಗೈಯಲ್ಲಿ ಕನಕಾಂಬರ ಕೃಷಿ ಆರಂಭಿಸಿದ ಆದರ್ಶ್‌ ಅದರಿಂದಲೇ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಇವರ ಪ್ರಕಾರ, ಒಂದು ಸಾವಿರ ಗಿಡದಿಂದ ಐದಾರು ದಿನಕ್ಕೊಮ್ಮೆ ಐದರಿಂದ ಹತ್ತು ಕೆ.ಜಿ ಹೂವು ಕೀಳಬಹುದು. ಸರಾಸರಿ ನಾಲ್ಕು ನೂರು ರುಪಾಯಿಗೆ ಒಂದು ಕೆ.ಜಿ ಹೂ ಮಾರಾಟ ಆಗುತ್ತದೆ ಅಂದುಕೊಂಡರೂ, ವಾರಕ್ಕೆ ಮೂರರಿಂದ ನಾಲ್ಕು ಸಾವಿರ ಆದಾಯ ನಿಶ್ಚಿತ. ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಕೇವಲ ಹತ್ತು ಗುಂಟೆಯಲ್ಲಿ ಒಂದು ಸಂಸಾರ ನಡೆಸುವಷ್ಟು ಆದಾಯ ಕನಕಾಂಬರದಿಂದ ಬರುತ್ತದೆ ಎನ್ನುವುದು ಆದರ್ಶರ ಅನುಭವ ಮಾತು. 

– ಎಸ್‌.ಕೆ. ಪಾಟೀಲ್‌

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.