ಹಿರಿಯರು ಬಂದರು ದಾರಿ ಬಿಡಿ


Team Udayavani, Dec 31, 2018, 12:30 AM IST

15.jpg

ಜೀವನದ ಮುಸ್ಸಂಜೆಯಲ್ಲಿರುವ ಹಿರಿಯ ನಾಗರಿಕರಿಗೆ ಬ್ಯಾಂಕಿಂಗ್‌ ಸೌಲಭ್ಯಗಳು ಬಹಳಷ್ಟಿವೆ. ಆದರೆ, ಎಷ್ಟೋ ಜನಕ್ಕೆ ಇದು ತಿಳಿದಿಲ್ಲ. ಮನೆಯಲ್ಲಿ ಕೂತು ಅಕೌಂಟ್‌ ಓಪನ್‌ ಮಾಡುವ, ಉಚಿತ ಚೆಕ್‌ಬುಕ್‌ ನೀಡಿಕೆ- ಹೀಗೆ ಹಲವಾರು ಸೌಲಭ್ಯಗಳು ಇವೆ.  

 ಬ್ಯಾಂಕ್‌ಗಳಲ್ಲಿ  ಹಿರಿಯ ನಾಗರಿಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಅವರಿಗೆ  ಸರಿಯಾದ ಸೇವೆ ದೊರಕುತ್ತಿಲ್ಲ, ಅವರನ್ನು ಯಾರೂ  ಕೇರ್‌ ಮಾಡುವುದಿಲ್ಲ ಎನ್ನುವ  ಆರೋಪ ಲಾಗಾಯ್ತಿನಿಂದ ಇದೆ. ಇದರ ಸತ್ಯಾಸತ್ಯತೆಯೇ ಬೇರೆ.  ಕೆಲವು ಅಪವಾದಗಳು ಇರಬಹುದಾದರೂ, ಬ್ಯಾಂಕುಗಳಲ್ಲಿ ಕೆಲವು ಇನ್ನಿತರ  ಇಲಾಖೆಗಳಿಗಿಂತ ಹಿರಿಯನಾಗರಿಕರನ್ನುಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ ಅನ್ನೋದು ಸುಳ್ಳಲ್ಲ.   ಅವರಿಗೆ ನೀಡುವ ಸೇವೆಯಲ್ಲಿ  ಲೋಪದೋಷಗಳು ಇವೆ ಅನ್ನೋದನ್ನು ತಳ್ಳಿ  ಹಾಕಲಾಗದು. ಅವರು ಬ್ಯಾಂಕ್‌ನಲ್ಲಿ ಇಡುವ ಇಡುಗಂಟಿಗೆ ಇನ್ನಿತರ ಠೇವಣಿ ಧಾರರಿಗಿಂತ ಸ್ವಲ್ಪ ಹೆಚ್ಚು ಬಡ್ಡಿಯನ್ನು ನೀಡಲಾಗುತ್ತದೆ. ಇದು ಶೇ.0.50  ಹೆಚ್ಚಿಗೆ ಇರುತ್ತದೆ. ಕೆಲವು ಬ್ಯಾಂಕುಗಳಲ್ಲಿ  ಅವರಿಗಾಗಿ ಪ್ರತ್ಯೇಕ ಕೌಂಟರ್‌ ಇದೆ.  ಕೆಲವು ಬ್ಯಾಂಕುಗಳಲ್ಲಿ ಇದು ಸಾಧ್ಯವಾಗದಿದ್ದಾಗ, ಅವರಿಗೆ out of que ಸೌಲಭ್ಯವಿದೆ. ಯಾವುದೇ ಶುಲ್ಕವಿಲ್ಲದೆ  25 ಚೆಕ್‌ಬುಕ್‌ ಅನ್ನು  ಉಚಿತವಾಗಿ ಕೊಡಲಾಗುತ್ತದೆ. ಇದಕ್ಕಾಗಿ ಬ್ಯಾಂಕಿಗೆ ಎಡತಾಕುವ ಅವಶ್ಯಕತೆಯೂ ಅವರಿಗಿಲ್ಲ. ಅಂಚೆ ಮೂಲಕ ಕಳಿಸಿಕೊಡು ವ್ಯವಸ್ಥೆ ಇದೆ. 

 ಬ್ಯಾಂಕ್‌ ದಾಖಲೆಯಲ್ಲಿ  ದೊರಕುವ ಜನ್ಮ ದಿನಾಂಕದ ಆಧಾರದ ಮೇಲೆಯೇ ಅವರಖಾತೆಗಳು (ಹೊಸ KYC ದಾಖಲೆಗಳನ್ನು ನೀಡದೇಯೆ)  Senior Citizen Account ಆಗಿ, ಪರಿವರ್ತಿತವಾಗುತ್ತವೆ.  ವರ್ಷಕ್ಕೊಮ್ಮೆ ನೀಡುವ Life Certifi cate ಅನ್ನು ( 70 ವರ್ಷಮೀರಿದ್ದರೆ) ಅವರ ಮನೆಗೆ ಹೋಗಿ  ತೆಗೆದು ಕೊಳ್ಳುವ ಸೌಲಭ್ಯವಿದೆ. 

  ಬ್ಯಾಂಕ್‌ ಡಿಪಾಸಿಟ್  ಮೇಲೆ  ಅವರು ಗಳಿಸುವ ಆದಾಯದ    ಮೇಲೆ  ಖಈಖ  ಮಿತಿಯನ್ನು 50,000ರೂ.ಗೆ ಏರಿಸಲಾಗಿದೆ. ಆದಾಯಕರ  ಮಿತಿ ಅವರಿಗೆ  ಈಗಾಗಲೇ ಉಳಿದವರಿಗಿಂತ 50,000 ರೂ. ಹೆಚ್ಚಿಗೆ ಇದೆ.  ಹಿರಿಯ ನಾಗರಿಕರಿಗೆ ಬ್ಯಾಂಕುಗಳಲ್ಲಿ ಸರಿಯಾದ ಸ್ಪಂದನೆ ಮತ್ತು ಸೇವೆ ದೊರಕದಿದ್ದರೆ,  ಅವರು ಸಂಬಂಧಪಟ್ಟ ಬ್ಯಾಂಕುಗಳಲ್ಲೇ ದೂರುನೀಡಬಹುದು. 30 ದಿನಗಳೊಳಗಾಗಿ ಪರಿಹಾರ ದೊಕದಿದ್ದರೆ, ಹಿರಿಯನಾಗರಿಕರು ಆ  ಪ್ರದೇಶದ  ಬ್ಯಾಂಕಿಂಗ್‌ಒಂಬುಡ್ಸಮನ್‌ರ ಮೊರೆ ಹೋಗಬಹುದು. 

 ಇತ್ತೀಚೆಗೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ, ಹಿರಿಯ ನಾಗರಿಕರಿಗೆ  ಹೆಚ್ಚಿನ ಗುಣಮಟ್ಟದ ಸೇವೆ ನೀಡಲು  ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ.  ಎಪ್ಪತ್ತು  ವರ್ಷ ದಾಟಿದ ಹಿರಿಯನಾಗರಿಕರಿಗೆ , ಅಂಗವಿಕಲರಾದ ಮತ್ತು ದೈಹಿಕ ಆರೋಗ್ಯ ಸರಿಯಲ್ಲದ  ಹಿರಿಯ ನಾಗರಿಕರಿಗೆ ಅವರ ಮನೆ ಬಾಗಿಲಿನಲ್ಲಿಯೇ   ಬ್ಯಾಂಕಿಂಗ್‌ ಸೇವೆ  ನೀಡಬೇಕೆಂದು ಆರ್‌ಬಿಐ ಎಲ್ಲಾ  ಬ್ಯಾಂಕುಗಳಿಗೆ ನಿರ್ದೇಶಿಸಿದೆ. 

 ಹಿರಿಯನಾಗರಿಕರ  ಮನೆಯಿಂದ  ನಗದು ಪಡೆದು ಅವರ ಖಾತೆಗೆ ಜಮಾ ಮಾಡುವುದು, ಅವರಿಂದ  ಚೆಕ್‌, ಡ್ರಾಫ್ಟ್ ಮುಂತಾದವುಗಳನ್ನು ಕಲೆಕ್ಟ್  ಮಾಡುವುದು, ಅವರ ಖಾತೆಯಿಂದ  ಹಣ ಡ್ರಾ ಮಾಡಿ ಅವರಿಗೆ ತಲುಪಿಸುವುದು, ಬ್ಯಾಂಕ್‌ ಸ್ಟೇಟ್‌ ಮೆಂಟ್‌, ಚೆಕ್‌ಬುಕ್‌  ಮತ್ತು ಪಾಸ್‌ಬುಕ್‌ಗಳನ್ನು  ಅವರ ಮನೆಗೆ  ತಲುಪಿಸುವುದು ಮುಂತಾದ  ಬೇಸಿಕ್‌ ಬ್ಯಾಂಕಿಂಗ್‌ ಸೇವೆಯನ್ನು ಅವರ  ಮನೆಗೇ ತಲುಪಿಸುವ ವ್ಯವಸ್ಥೆಯೂ ಇದೆ. 

ಈ ಸೇವೆ ಪಟ್ಟಣ- ನಗರಗಳಿಗೆ  ಸೀಮಿತವೋ ಅಥವಾ  ಗ್ರಾಮಾಂತರ ಪ್ರದೇಶಗಳಲ್ಲೂ  ಲಭ್ಯವಿದೆಯೋ ಅನ್ನೋದು ಖಚಿತವಾಗಿಲ್ಲ. ಮೈಲಿಗೊಂದು  ಮನೆ ಇರುವ  ಹಳ್ಳಿಗಳಲ್ಲಿ ಇದು ಸಾಧ್ಯವೇ? ಬ್ಯಾಂಕುಗಳಲ್ಲಿ  ಹಿರಿಯ  ನಾಗರಿಕರ ಸಂಖ್ಯೆ ಗಣನೀಯವಾಗಿಲ್ಲ .ದಿನಕ್ಕೆ  ಒಂದಿಬ್ಬರಿಗೆ ಇಂಥ ಸೇವೆ ಕೊಡ ಹೊರಟರೂ , ಬ್ಯಾಂಕಿನ  ಕೆಲಸಗಳಿಗೆ ಅಡಚಣೆ ಯಾಗಬಹುದು ಎನ್ನುವ  ಮಾತು ಬ್ಯಾಂಕಿಂಗ್‌ ವಲಯದಲ್ಲಿ  ಕೇಳಿಬರುತ್ತಿದೆ.

ಇಷ್ಟಾದರೂ, ಬ್ಯಾಂಕ್‌ ಸಿಬ್ಬಂದಿ ಹಿರಿಯನಾಗರಿಕರ ವಿಚಾರವಾಗಿ ಆರ್‌ಬಿಐ ನಿರ್ದೇಶನವನ್ನು ಪಾಲಿಸುತ್ತಿದ್ದಾರೆ.   ಹಿರಿಯನಾಗರಿಕರು  ಕೂಡ ಈ ಸೇವೆಯನ್ನು  ದೊಡ್ಡಪ್ರಮಾಣದಲ್ಲಿ ಬಳಸಲು  ಶುರು ಮಾಡಿದಾಗ, ಸಮಸ್ಯೆಯ ಆಳ, ಉದ್ದ ಮತ್ತು ಅಗಲದ ವ್ಯಾಪ್ತಿ ಗೊತ್ತಾಗುತ್ತದೆ. 

ರಮಾನಂದ ಶರ್ಮಾ 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.