ಸಾಲದ, ಸಾವಿನ ಸುಳಿಯಿಂದ ರೈತರು ಪಾರಾಗಬೇಕಾದರೆ…


Team Udayavani, Jan 6, 2019, 12:25 PM IST

adduru.jpg

ಹಸಿರು ಕ್ರಾಂತಿಯ ಜೊತೆಗೇ ನಮ್ಮ ದೇಶದಲ್ಲಿ ರೈತರ ಬವಣೆಗಳು ಶುರುವಾದವು. ದೇಸಿ ತಳಿಗಳನ್ನು ಮೂಲೆಗುಂಪು ಮಾಡಲಾಯಿತು; ಬದಲಾಗಿ ಹೈಬ್ರಿಡ್‌ ತಳಿಗಳನ್ನು ಬಳಕೆಗೆ ತರಲಾಯಿತು. ಸಾವಯವ ಕೃಷಿಯ ಬದಲಾಗಿ ರಾಸಾಯನಿಕ ಗೊಬ್ಬರ ಮತ್ತು ರಾಸಾಯನಿಕ ಪೀಡೆನಾಶಕ ಆಧಾರಿತ ಕೃಷಿಯನ್ನು ಪ್ರಚಾರ ಮಾಡಲಾಯಿತು. ಇದೆಲ್ಲದರ ದುಷ್ಪರಿಣಾಮಗಳನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಉಗ್ರಾಣಗಳಲ್ಲಿ ಆಹಾರಧಾನ್ಯಗಳ ದಾಸ್ತಾನಿದ್ದರೂ ಲಕ್ಷಗಟ್ಟಲೆ ಬಡವರಿಗೆ ಅವು ಸಿಗುತ್ತಿಲ್ಲ. 

ಮುಂಬೈಯಿಂದ ನೂರು ಕಿಮೀ ದೂರದ ಕಾರ್‌-ಸೊಡ್‌ ಗ್ರಾಮದಲ್ಲಿ (ಪಾಲ್‌-ಘರ್‌ ಜಿಲ್ಲೆ) ಆದಿವಾಸಿ ರೈತರಿಂದ ಮಧ್ಯವರ್ತಿಯೊಬ್ಬ ಬೀನ್ಸ್‌ ಖರೀದಿಸುವುದು ಕಿಲೋಕ್ಕೆ ರೂ.10 ದರದಲ್ಲಿ. ಆತ ಮಂಚವೊಂದರಲ್ಲಿ ಆರಾಮವಾಗಿ ಕುಳಿತಿದ್ದರೆ, ಅವನ ಪಕ್ಕದಲ್ಲಿರುವ ಡೇರೆಯಲ್ಲಿ ಬೀನ್ಸ್‌ ಗುಡ್ಡವೇ ಬೆಳೆಯುತ್ತಿದೆ.

ಅನಂತರ, ಆ ಮಧ್ಯವರ್ತಿ ಅದೇ ಬೀನ್ಸನ್ನು ಕಿಲೋಕ್ಕೆ ರೂ.70 ಅಥವಾ ರೂ.80 ದರದಲ್ಲಿ ಮಾರುತ್ತಾನೆ. ಈತನಿಗೆ ಕುಳಿತಲ್ಲೇ ಲಾಭದ ಕೊಳ್ಳೆ. ಆದರೆ, ತಿಂಗಳುಗಟ್ಟಲೆ ಕಷ್ಟಪಟ್ಟು ಬೀನ್ಸ್‌ ಬೆಳೆಸಿದ ರೈತನಿಗೆ ಬೆಳೆಯ ವೆಚ್ಚವೂ ದಕ್ಕುವುದಿಲ್ಲ.

ಆದ್ದರಿಂದಲೇ ಈಗಷ್ಟೇ ದಾಟಿ ಹೋದ 2018ರಲ್ಲಿ ರೈತರ ಆಕ್ರೋಶ ಸ್ಫೋಟವಾಗಿತ್ತು. ಹಾಲನ್ನು, ತರಕಾರಿಗಳನ್ನು ರಸ್ತೆಗೆ ಸುರಿದು ರೈತರು ಪ್ರತಿಭಟಿಸಿದ್ದರು. ಏಕೆಂದರೆ, ಅವನ್ನು ಮಾರಿದರೆ ಸಿಗುವ ಹಣ, ಮಾರುಕಟ್ಟೆಗೆ ಅವನ್ನು ತಂದ ವಾಹನದ ಬಾಡಿಗೆಗೂ ಸಾಕಾಗುತ್ತಿರಲಿಲ್ಲ. ಇದರ ಅರ್ಥವನ್ನು ಇನ್ನೂ ವಿವರಿಸಿ ಹೇಳಬೇಕಿಲ್ಲ ತಾನೆ? ಈಗ, ಕೃಷಿ ಎಂದರೆ ನಷ್ಟ ಎಂದಾಗಿದೆ!

ಮಹಾರಾಷ್ಟ್ರದಲ್ಲಿ ಬ್ಯಾಂಕಿನ ಎದುರು ಪ್ರತಿಭಟಿಸುತ್ತಿದ್ದ ರೈತನೊಬ್ಬ ಅಲ್ಲೇ ಸಾವಿಗೀಡಾದ. ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ನೂರಾರು. ಹತಾಶರಾದ ರೈತರು ಮತ್ತೆಮತ್ತೆ ಮೃತ್ಯುವಿಗೆ ಬಲಿಯಾಗುತ್ತಿದ್ದಾರೆ. ಏಕೆಂದರೆ,  ಅವರಿಗೆ ತಮ್ಮ ನಿರಂತರ ಬವಣೆಯಿಂದ ಪಾರಾಗಲು ಬೇರಾವ ದಾರಿಯೂ ತೋಚುತ್ತಿಲ್ಲ.

ಬವಣೆ ಮತ್ತು ಶೋಷಣೆಯಿಂದ ಪಾರಾಗಲಿಕ್ಕಾಗಿ ದಶಕಗಳ ಕಾಲ ಕಾದಿದ್ದಾರೆ ರೈತರು. ಇನ್ನು ಕಾಯಲಾಗದು ಎಂದು ಆಡಳಿತದ ಸೂತ್ರ ಹಿಡಿದವರಿಗೆ, ಅಧಿಕಾರಿಗಳಿಗೆ ಹಾಗೂ ದೇಶದ ಜನರಿಗೆ 2018ರ ಆರಂಭದಿಂದಲೇ ಸ್ಪಷ್ಟವಾಗಿ ಸೂಚಿಸಿದ್ದಾರೆ. ಮುಂಬೈ ಮತ್ತು ದೆಹಲಿಯಂಥ ಮಹಾನಗರಗಳ ರಸ್ತೆಗಳಲ್ಲಿ ಜಾಥಾ ನಡೆಸಿದ್ದಾರೆ. ದೇಶದ ಉದ್ದಗಲದಲ್ಲಿ ಪ್ರತಿಭಟನಾ ಮೆರವಣಿಗೆ, ಸಭೆಗಳನ್ನು ನಡೆಸಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ ಸಂಸತ್ತಿನ ಪಕ್ಕದಲ್ಲೇ ದೇಶದ ಮೂಲೆಮೂಲೆಗಳಿಂದ ಬಂದು ಜಮಾಯಿಸಿದ 50,000 ರೈತರು ಹಾಗೂ ಕೃಷಿ ಕೆಲಸಗಾರರ ಆಕ್ರೋಶ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಅವರ ಬೇಡಿಕೆಗಳೇನು? ಕಷ್ಟಪಟ್ಟು ಬೆಳೆಸಿದ ಬೆಳೆಗಳ ಫ‌ಸಲಿಗೆ ನ್ಯಾಯಯುತ ಬೆಲೆ, ಕೃಷಿಗೆ ಹಣದ ಅಗತ್ಯವಿದ್ದಾಗ ಸಾಲ, ಕೃಷಿಜಮೀನಿನ ಹಕ್ಕು, ಸುಪ್ರೀಂ ಕೋರ್ಟ್‌ ಆದೇಶಿಸಿರುವ ಗೌರವದ ಬದುಕು ಬಾಳುವ ಹಕ್ಕು.  ಇಷ್ಟನ್ನೇ ರೈತರು ಕೇಳುತ್ತಿದ್ದಾರೆ.

ಮಾರ್ಚ್‌ 2018ರಲ್ಲಿ ನಾಸಿಕ್‌ನಿಂದ ಮುಂಬಯಿಯ ಆಜಾದ್‌ ಮೈದಾನಕ್ಕೆ ಮತ್ತು ನವಂಬರ್‌ 2018ರಲ್ಲಿ ದೇಶದ ಮೂಲೆಮೂಲೆಗಳಿಂದ ದೆಹಲಿಯ ಸಂಸತ್‌ ರಸ್ತೆಗೆ ಸಾಗಿಬಂದ ರೈತರ, ಕೃಷಿಕೆಲಸಗಾರರ ಮತ್ತು ಬುಡಕಟ್ಟು ಜನರ ಜಾಥಾಗಳು ಮತ್ತು ಮಹಾ ಪ್ರತಿಭಟನಾ ಸಭೆಗಳ ಒಂದು ಪರಿಣಾಮ: ರೈತರ ಬದುಕು ಬವಣೆಗಳ ಬಗ್ಗೆ ತಮಗೇನೂ ಸಂಬಂಧವಿಲ್ಲ ಎಂಬಂತಿದ್ದ ನಗರವಾಸಿಗಳೊಮ್ಮೆ ಬೆಚ್ಚಿಬಿದ್ದದ್ದು. ನೂರಾರು ಕಿಲೋಮೀಟರ್‌ ನಡೆದು ಕಾಲುಗಳಲ್ಲಿ ಬೊಬ್ಬೆ ಬಂದಿದ್ದ, ಸುಡುಬಿಸಿಲಿಗೆ ಮುಖದ ಚರ್ಮವೇ ಸುಟ್ಟು ಹೋಗಿದ್ದ, ಹೊತ್ತುಹೊತ್ತಿಗೆ ಊಟತಿಂಡಿ ಸಿಕ್ಕದೆ ಹಸಿದಿದ್ದ, ದಣಿದು ಬಸವಳಿದಿದ್ದ ಅನ್ನದಾತರನ್ನು ಕಣ್ಣಾರೆ ಕಂಡು. ಆ ಕ್ಷಣದಲ್ಲಿ, ಇವರೆಲ್ಲ ಬೆಳೆ ಬೆಳೆಸದಿದ್ದರೆ ತಮ್ಮ ಊಟದ ತಟ್ಟೆ ಬರಿದೋ ಬರಿದು ಎಂಬ ಸತ್ಯದರ್ಶನವಾಯಿತು ನಗರವಾಸಿಗಳಿಗೆ.

ಹಸಿರು ಕ್ರಾಂತಿಯ ಜೊತೆಗೇ ನಮ್ಮ ದೇಶದಲ್ಲಿ ರೈತರ ಬವಣೆಗಳು ಶುರುವಾದವು. ದೇಸಿ ತಳಿಗಳನ್ನು ಮೂಲೆಗುಂಪು ಮಾಡಲಾಯಿತು; ಬದಲಾಗಿ ಹೈಬ್ರಿಡ್‌ ತಳಿಗಳನ್ನು ಬಳಕೆಗೆ ತರಲಾಯಿತು. ಸಾವಯವ ಕೃಷಿಯ ಬದಲಾಗಿ ರಾಸಾಯನಿಕ ಗೊಬ್ಬರ ಮತ್ತು ರಾಸಾಯನಿಕ ಪೀಡೆನಾಶಕ ಆಧಾರಿತ ಕೃಷಿಯನ್ನು ಪ್ರಚಾರ ಮಾಡಲಾಯಿತು. ಇದೆಲ್ಲದರ ದುಷ್ಪರಿಣಾಮಗಳನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಉಗ್ರಾಣಗಳಲ್ಲಿ ಆಹಾರಧಾನ್ಯಗಳ ದಾಸ್ತಾನಿದ್ದರೂ ಲಕ್ಷಗಟ್ಟಲೆ ಬಡವರಿಗೆ ಅವು ಸಿಗುತ್ತಿಲ್ಲ. ಪಡಿತರ ವ್ಯವಸ್ಥೆಗೆ ನೀಡಲಾಗುವ ದೊಡ್ಡಪ್ರಮಾಣದ ಆಹಾರಧಾನ್ಯಗಳು ಕಳ್ಳಸಂತೆಕೋರರ ಪಾಲಾಗುತ್ತಿವೆ. ಪಂಜಾಬ್‌ ಸಹಿತ ಹಲವಾರು ರಾಜ್ಯಗಳಲ್ಲಿ ಮಣ್ಣು ಫ‌ಲವತ್ತತೆ ಕಳೆದುಕೊಂಡಿದೆ; ಇದರಿಂದಾಗಿ ಎಕರೆವಾರು ಇಳುವರಿ ಕುಸಿಯುತ್ತಿದೆ. ಸಾಧಾರಣ ಮಟ್ಟದ ಫ‌ಸಲು ಪಡೆಯಬೇಕಾದರೂ ಮಣ್ಣಿಗೆ ಹೆಚ್ಚೆಚ್ಚು ರಾಸಾಯನಿಕ ಗೊಬ್ಬರ ಸುರಿಯಬೇಕಾಗಿದೆ. ದೇಸಿ ಬೀಜಗಳು ಕಣ್ಮರೆಯಾಗಿ, ರೈತರು ಬೀಜಗಳಿಗಾಗಿ ಬಹುರಾಷ್ಟ್ರೀಯ ಮತ್ತು ಸ್ಥಳೀಯ ಕಂಪೆನಿಗಳನ್ನು ಅವಲಂಬಿಸಬೇಕಾಗಿದೆ. ಇದೆಲ್ಲದರ ಪರಿಣಾಮವಾಗಿ, ವರ್ಷದಿಂದ ವರ್ಷಕ್ಕೆ ಕೃಷಿಯ ವೆಚ್ಚ ಏರುತ್ತಿದೆ. ಆದರೆ, ರೈತರ ಕೃಷಿ ಆದಾಯ ಕುಸಿಯುತ್ತಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಘಟನೆ 2015ರಲ್ಲಿ ಭಾರತದ ಪರಿಸ್ಥಿತಿ ಬಗ್ಗೆ ಹೀಗೆಂದು ವರದಿ ಮಾಡಿದೆ: ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಮತ್ತು ಕೃಷಿ ಉತ್ಪನ್ನಗಳ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದರೂ, ಭಾರತವು ಅತ್ಯಂತ ಜಾಸ್ತಿ ಪೋಷಕಾಂಶ-ಕೊರತೆಯ ಜನರು (194.6 ದಶಲಕ್ಷ$) ಇರುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ.

ನಮ್ಮ ದೇಶದ ರೈತರ ಸರಾಸರಿ ಮಾಸಿಕ ಆದಾಯ ಸುಮಾರು ರೂ.6,000. ಹತ್ತು ವರ್ಷ ಮುಂಚೆ ಇದು ರೂ.2,000 ಆಗಿತ್ತು (ರಾಷ್ಟ್ರೀಯ ಸ್ಯಾಂಪಲ್‌ ಸರ್ವೆ ಮಾಹಿತಿ). ಆದರೆ, 2003ರಲ್ಲಿ ಶೇ.48.6 ಕೃಷಿಕುಟುಂಬಗಳು ಸಾಲ ಮಾಡಿದ್ದರೆ, 2013ರಲ್ಲಿ ಶೇ.52 ಕೃಷಿಕುಟುಂಬಗಳು ಸಾಲದಲ್ಲಿವೆ. ಇದು ಕೃಷಿ ಆದಾಯದಿಂದ ಕೃಷಿವೆಚ್ಚ ಸರಿದೂಗಿಸಲು ಆಗುತ್ತಿಲ್ಲ ಎಂಬುದರ ಪ್ರಬಲ ಪುರಾವೆ. ಆದ್ದರಿಂದಲೇ, 2001-11ರ ಅವಧಿಯಲ್ಲಿ 9 ದಶಲಕ್ಷ$ ಕೃಷಿಕರು ಕೃಷಿ ತೊರೆದಿದ್ದಾರೆ (ಮಹಾ ಜನಗಣತಿಯ ಮಾಹಿತಿ).

ಇಂಥ ಸನ್ನಿವೇಶದಲ್ಲಿ, ರೈತರ ಆತ್ಮಹತ್ಯೆಗಳು ಸುದ್ದಿಯಾಗುವುದೇ ಇಲ್ಲ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ (ಎನ್‌.ಸಿ.ಆರ್‌.ಬಿ.) ಪ್ರಕಟಣೆ ಪ್ರಕಾರ, 1995ರಿಂದ 2015ರ ಇಪ್ಪತ್ತು ವರುಷಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 3,21,428. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಮಾಡುತ್ತಿವೆ? ಗಮನಿಸಿ: 2015ರ ನಂತರ ಎನ್‌.ಸಿ.ಆರ್‌.ಬಿ. ರೈತರ ಆತ್ಮಹತ್ಯೆಗಳ ಬಗ್ಗೆ ವಾರ್ಷಿಕ ಅಂಕಿಸಂಖ್ಯೆ ಪ್ರಕಟಿಸುತ್ತಿಲ್ಲ! ಕೆಲವು ರಾಜ್ಯ ಸರಕಾರಗಳು ರೈತ ಪದದ ವಿವರಣೆಯನ್ನೇ ತಿರುಚಿ, ನಮ್ಮ ರಾಜ್ಯದಲ್ಲಿ ಕಳೆದ ವರ್ಷ ಯಾವನೇ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಘೋಷಿಸುತ್ತಿವೆ!

ಇದೆಲ್ಲದರ ಬದಲಾಗಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಡಾ.ಎಂ.ಎಸ್‌. ಸ್ವಾಮಿನಾಥನ್‌ ನೇತೃತ್ವದ ರಾಷ್ಟ್ರೀಯ ಕೃಷಿಕರ ಕಮಿಷನಿನ ಶಿಫಾರಸುಗಳನ್ನು ಜಾರಿ ಮಾಡಬೇಕಾಗಿತ್ತು. ಮುಖ್ಯವಾಗಿ, ಬೆಳೆ ಬೆಳೆಯುವ ವೆಚ್ಚದ ಶೇ.150ಅನ್ನು ಕನಿಷ್ಠ ಬೆಂಬಲ ಬೆಲೆಯಾಗಿ ರೈತರಿಗೆ ಪಾವತಿಸ ಬೇಕಾಗಿತ್ತು. ಕೇವಲ ಸಾಲಮನ್ನಾ ಮಾಡಿ, ರೈತರನ್ನು ಸಾಲ ಮತ್ತು ಸಾವಿನ ಸುಳಿಯಿಂದ ಪಾರು ಮಾಡಲು ಸಾಧ್ಯವಿಲ್ಲ ಎಂಬುದು ಮತ್ತೆಮತ್ತೆ ಸಾಬೀತಾಗಿದೆ.

ಅದಲ್ಲದೆ, ಗ್ರಾಹಕರೂ ತಮ್ಮ ಧೋರಣೆ ಬದಲಾಯಿಸಿಕೊಳ್ಳಬೇಕಾಗಿದೆ. ರೈತರಿಂದಲೇ ನೇರವಾಗಿ ಖರೀದಿಸುವ ವ್ಯವಸ್ಥೆಗಳನ್ನು ಹೆಚ್ಚಿಸಿಕೊಳ್ಳಬೇಕು. ಈಗ ಮಧ್ಯವರ್ತಿಗಳ ಜೇಬು ಸೇರುತ್ತಿರುವ (ಗ್ರಾಹಕ ಪಾವತಿಸುವ) ಖರೀದಿ ಬೆಲೆಯ ಪಾಲು ಶೇ.40ರಿಂದ ಶೇ.60. ಇದು ರೈತರ ಕೈಸೇರಿದರೆ, ಅವರ ಆದಾಯ ಖಂಡಿತ ಹೆಚ್ಚುತ್ತದೆ. ಮಂಗಳೂರಿನಲ್ಲಿ 2013ರಿಂದ ನಮ್ಮ ಸಾವಯವ ಕೃಷಿಕ ಗ್ರಾಹಕ ಬಳಗ ಇಂಥ ವ್ಯವಸ್ಥೆ ನಡೆಸಿಕೊಂಡು ಬಂದಿದೆ. ಪ್ರತಿ ಭಾನುವಾರ ಬೆಳಗ್ಗೆ 7ರಿಂದ 10.30 ಗಂಟೆ ತನಕ ನಾವು ಜರುಗಿಸುವ ಸಾವಯವ ಹಣ್ಣು  ತರಕಾರಿ  ಧಾನ್ಯ ಸಂತೆಯಲ್ಲಿ ಸುಮಾರು 1,000 ಗ್ರಾಹಕರು ರೈತರಿಂದಲೇ ನೇರವಾಗಿ ಖರೀದಿಸುತ್ತಿ¨ªಾರೆ. ನಮ್ಮಲ್ಲಿ ಇಂಥ ವ್ಯವಸ್ಥೆಗಳು ಹೆಚ್ಚೆಚ್ಚು ಆಗಬೇಕು. ಎಲ್ಲರನ್ನೂ ತಲುಪಬೇಕು. 

-ಅಡ್ಡೂರು ಕೃಷ್ಣ ರಾವ್‌

ಟಾಪ್ ನ್ಯೂಸ್

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.