MONEY ಕೀ ಬಾತ್‌


Team Udayavani, Feb 18, 2019, 12:30 AM IST

fr.jpg

ವಿದೇಶಿ ವಿನಿಮಯ ಸಂಗ್ರಹ ದೃಢವಾಗಿದ್ದರೆ, ದೇಶದ  ವಿದೇಶಿ ವಿನಿಮಯ ದರವು ಸ್ಥಿರವಾಗಿ ಇರುತ್ತದೆ. ವಿದೇಶಿ ವಿನಿಮಯಕ್ಕಾಗಿ ಮಾರುಕಟ್ಟೆಯಲ್ಲಿ ಖರೀದಿಸಬೇಕಾದ ಅನಿವಾರ್ಯತೆ   ಇರದೇ, ನಮ್ಮದೇ ಸಂಗ್ರಹವನ್ನು ಬಳಕೆ ಮಾಡುವುದರಿಂದ  ವಿನಿಮಯ ದರದಲ್ಲಿ ಏರು  ಪೇರು ಆಗುವುದಿಲ್ಲ.  ಈ ಹಣವನ್ನು ತುರ್ತು ಸ್ಥಿತಿಯಲ್ಲಿ ಬಳಸಬಹುದು.  

ಒಂದು ದೇಶದ ಆರ್ಥಿಕ ಸ್ಥಿತಿ ಹೇಗಿದೆ ಅನ್ನೋದನ್ನು ತಿಳಿಯುವುದು .ಆ ದೇಶದ ವಿದೇಶಿ ವಿನಿಯಮದಿಂದ. ಇತ್ತೀಚಿನ ರಿಸರ್ವ್‌ ಬ್ಯಾಂಕ್‌ ವರದಿ ಪ್ರಕಾರ  ಫೆಬ್ರವರಿ ಮೊದಲ ವಾರದಲ್ಲಿ ಭಾರತದ  ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣ 400.24 ಬಿಲಿಯನ್‌ ಡಾಲರ್‌.

ವಿದೇಶಿ ವಿನಿಮಯದಿಂದ ನಮಗೇನು ಲಾಭ? ಹೀಗಂತ ಕೇಳಬೇಡಿ. 

ನಮ್ಮ ಬಂಗಾರಕ್ಕೂ, ವಿದೇಶಿ ವಿನಿಮಯಕ್ಕೂ ಸಂಬಂಧ ಇದೆ. ಬಂಗಾರದ  ಬೆಲೆಯಲ್ಲಿ ಏರುಪೇರು ಆಗುವುದಕ್ಕೂ ಈ  ವಿನಿಮಯ ಕಾರಣವಾಗಬಹುದು.  ಈ ವಿದೇಶಿ ವಿನಿಮಯ ಸಂಗ್ರಹವನ್ನು, ವಿನಿಮಯದರ (exchange rate) ಮತ್ತು ಬಂಗಾರದ ದರದ ಏರುಪೇರನ್ನು  ರಿಸರ್ವ್‌ ಬ್ಯಾಂಕ್‌ ಪ್ರತಿ ವಾರವೂ  ಪುನರ್‌ ಮೌಲಿÂàಕರಣ (revaluation) ಮಾಡುತ್ತಿರುತ್ತದೆ. ವಿದೇಶಿ ವಿನಿಮಯದ ವ್ಯವಹಾರ ಮಾಡುವ  ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು, ಏಜೆಂಟರುಗಳು, ಪ್ರತಿ ಹದನೈದು ದಿನಕ್ಕೊಮ್ಮೆ ವ್ಯವಹಾರದ ಒಟ್ಟೂ ಮಾಹಿತಿಯನ್ನು  ಆರ್‌ಬಿಐಗೆ  ಸಲ್ಲಿಸಬೇಕು.  ಈ ಮಾಹಿತಿಯ  ಆಧಾರದ ಮೇಲೆ ರಿಸರ್ವ್‌ ಬ್ಯಾಂಕ್‌ ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣವನ್ನು  ಲೆಕ್ಕ ಹಾಕುವುದು. 

ವಿದೇಶಿ ವಿನಿಮಯ ಸಂಗ್ರಹ  ಎಂದರೇನು?
ದೇಶದ  ಮಧ್ಯವರ್ತಿ ಅಥವಾ ಸೆಂಟ್ರಲ್‌ ಬ್ಯಾಂಕ್‌ (ಭಾರತದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ)ಹೊಂದಿರುವ  ಒಟ್ಟೂ ವಿದೇಶಿ  ಕರೆನ್ಸಿ ಮೌಲ್ಯವನ್ನು ವಿದೇಶಿ ವಿನಿಮಯ ಸಂಗ್ರಹ ಎನ್ನುತ್ತಾರೆ.  ಈ ಸಂಗ್ರಹದಲ್ಲಿ ವಿದೇಶಿಬ್ಯಾಂಕ್‌ಗಳ ನೋಟುಗಳು, ಬಾಂಡ್‌, ಠೇವಣಿ, ಸರ್ಕಾರಿ ಸೆಕ್ಯುರಿಟಿ, ಟ್ರೆಜರಿ ಬಿಲ್‌ಗಳು, ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿರುವ ಠೇವಣಿ, ಬಂಗಾರದ ದಾಸ್ತಾನು ಮತ್ತು  ಅಂತಾರಾಷ್ಟ್ರೀಯ ಹಣಕಾಸು ನಿಧಿ ನೀಡುವ special drawing  rights  ಎಲ್ಲವೂ ಸೇರಿರುತ್ತದೆ.  ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ 373.43 ಬಿಲಿಯನ್‌ ಡಾಲರ್‌ ವಿದೇಶಿ  ಕರೆನ್ಸಿ  ಸ್ವತ್ತುಗಳು (assets), ಬಂಗಾರ 22.68 ಬಿಲಿಯನ್‌ ಡಾಲರ್‌ಗಳು, ಸ್ಪೆಷಲ್‌ ಡ್ರಾಯಿಂಗ್‌ ರೈಟ್ಸ್‌ 1.47 ಬಿಲಿಯನ್‌ ಡಾಲರ್‌  ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ  2,65 ಬಿಲಿಯನ್‌  ಡಾಲರ್‌ಗಳು ಇವೆ.  ಅತಿ ಹೆಚ್ಚು ವಿದೇಶಿ ವಿನಿಮಯ ಸಂಗ್ರಹದಲ್ಲಿ ಭಾರತ,  ಮೊದಲ ಹತ್ತು ಸ್ಥಾನಗಳಲ್ಲಿ  7ನೇ  ಕ್ರಮಾಂಕದಲ್ಲಿ ಇದ್ದರೆ, 3,210 ಬಿಲಿಯನ್‌ ಡಾಲರ್‌ ಸಂಗ್ರಹ ಇರುವ  ಚೀನಾ  ದೇಶ  ಮೊದಲನೇ ಸ್ಥಾನದಲ್ಲಿ ಇದೆ. ಜಪಾನ್‌ ( 1259 ಬಿಲಿಯಲನ್‌ ಡಾಲರ್‌) ಎರಡನೇ ಸ್ಥಾನ, 804 ಬಿಲಿಯನ್‌  ಡಾಲರ್‌ ಇರುವ  ಸ್ವಿಟ್ಜರ್‌ಲ್ಯಾಂಡ್‌ ಮೂರನೇ ಸ್ಥಾನದಲ್ಲಿ ಇದೆ.

ವಿದೇಶಿ ವಿನಿಮಯ ಸಂಗ್ರಹದ ಮೂಲ ಯಾವುದು?
ಪ್ರಪಂಚದಲ್ಲಿ ಯಾವ ದೇಶವೂ ಸ್ವಾವಲಂಬಿಯಲ್ಲ. ಹಾಗಾಗಿ, ಅವುಗಳ ಬೇಡಿಕೆಗೆ ಅನುಗುಣವಾಗಿ ಆಮದು, ರಫ್ತು ವ್ಯವಹಾರಗಳು ನಡೆಯುತ್ತಿರುತ್ತವೆ.  ಡಾಲರ್‌, ಪೌಂಡ್‌, ಯುರೋ, ಯೆನ್‌ ಹೀಗೆ ಜಾಗತಿಕ ಕರೆನ್ಸಿಗಳಲ್ಲಿ ಚಾಲ್ತಿಯಲ್ಲಿವೆ. ನಮ್ಮ ಕರೆನ್ಸಿ ಭಾರತವನ್ನು ಬಿಟ್ಟರೆ, ನೇಪಾಳದಲ್ಲಿ ಮಾತ್ರ  ಚಾಲನೆಯಲ್ಲಿದೆ.  ಯಾವ ದೇಶವು  ಆಯಾತಕ್ಕಿಂತ, ನಿರ್ಯಾತ ಮಾಡುತ್ತದೆಯೋ, ಆ ದೇಶದ ಬಳಿ ಹೆಚ್ಚಿಗೆ ವಿದೇಶಿ ವಿನಿಮಯ ಇರುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ,  ಅಂತಾರಾಷ್ಟ್ರೀಯ  ವ್ಯಾಪಾರದಲ್ಲಿ ಭಾರತವು  ಕೊರತೆ ವ್ಯಾಪಾರ (Trade Deficit)  ಅನುಭವಿಸುತ್ತಿದೆ.   ಸುಮಾರು 11 ಮಿಲಿಯನ್‌ ಭಾರತೀಯರು ವಿದೇಶಗಳಲ್ಲಿ ದುಡಿಯುತ್ತಿದ್ದು, ಅವರು ಸುಮಾರು  80 ಬಿಲಿಯನ್‌ ಡಾಲರ್‌ ಹಣವನ್ನು ಭಾರತಕ್ಕೆ ಕಳುಹಿಸುತ್ತಿದ್ದಾರೆ.  ಇದು, ದೇಶದ ವಿದೇಶಿ ವಿನಿಮಯ ಸಂಗ್ರಹ ಸಮಾಧಾನಕರವಾಗಿರುವಂತೆ  ಮಾಡಿದೆ.  ಅತಿಹೆಚ್ಚು ವಿದೇಶಿ remittance ಬರುವ ದೇಶಗಳಲ್ಲಿ ಭಾರತ  ಮೊದಲನೇ  ಸ್ಥಾನದಲ್ಲಿ ಇದೆ.  ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಕೂಡಾ ಈ ನಿಟ್ಟಿನಲ್ಲಿ ಸುಮಾರು 60 ಬಿಲಿಯನ್‌ ಡಾಲರ್‌ ಕೂಡಿಸಿದೆ.  ಅಂತಾರಾಷ್ಟ್ರೀಯ  ಮಟ್ಟದಲ್ಲಿ ಈವರೆಗೆ  ವಿದೇಶಿ ನೇರ ಬಂಡವಾಳ ಹೂಡಿಕೆಗೆ ಚೀನಾ ಅಧ್ಯತೆ ಯಾಗಿದ್ದರೆ, ಈಗ  ಭಾರತ ಮೊದಲ ಸ್ಥಾನದಲ್ಲಿದೆ.  ದೇಶದ ವಿದೇಶಿ ವಿನಿಮಯ ಸಂಗ್ರಹಕ್ಕೆ  ಪ್ರವಾಸೋದ್ಯಮದ  ಕೊಡುಗೆಯೂ ಗಮನಾರ್ಹವಾಗಿರುತ್ತದೆ. 

ಬಳಕೆ ಹೇಗೆ?
ವಿದೇಶಿ ವಿನಿಮಯ ಸಂಗ್ರಹದ  ಹೆಚ್ಚಿನ  ಪ್ರಮಾಣ ವಿದೇಶಗಳಿಂದ ಆಯಾತ ಮಾಡಿಕೊಳ್ಳುವುದಕ್ಕೆ ಬಳಕೆಯಾಗುತ್ತದೆ. ಕಳೆದ ವರ್ಷದ  ಸೆಪ್ಟೆಂಬರ್‌ ಹೊತ್ತಿಗೆ  ಆಯಾತದ ಪ್ರಮಾಣ ವಿದೇಶಿ  ವಿನಿಮಯ ಸಂಗ್ರಹಕ್ಕೆ ಹತ್ತಿರವಿತ್ತಂತೆ. ಭಾರತದಲ್ಲಿ  ತೈಲ ಅವಶ್ಯಕತೆಯ ಒಟ್ಟು ಪ್ರಮಾಣದಲ್ಲಿ ಶೇ. 80ರಷ್ಟು  ವಿದೇಶದಿಂದ  ಬರುತ್ತಿದ್ದು, ನಮ್ಮ  ಅಪಾರ ವಿದೇಶಿ ವಿನಿಮಯ ತೈಲ  ಆಯಾತಕ್ಕೆ ಬಳಕೆಯಾಗುತ್ತದೆ. ಹಾಗೆಯೇ, ಪ್ರವಾಸೋದ್ಯಮ ಮತ್ತು ವಿದೇಶಿ ಶಿಕ್ಷಣಕ್ಕೆ ಕೂಡಾ  ಸಾಕಷ್ಟು ಬಳಕೆಯಾಗುತ್ತದೆ. ಕಳೆದ ವರ್ಷ  ಭಾರತೀಯರು  ವಿದೇಶಿ ಶಿಕ್ಷಣಕ್ಕಾಗಿ  8.17 ಬಿಲಿಯನ್‌ ಡಾಲರ್‌, ವಿದೇಶ ಪ್ರವಾಸಕ್ಕಾಗಿ  25 ಬಿಲಿಯನ್‌ ಡಾಲರ್‌ ಖರ್ಚು ಮಾಡಿದ್ದಾರೆ. ವಿದೇಶಿ ಪ್ರವಾಸೋದ್ಯಮದಲ್ಲಿ  ಜಗತ್ತಿನಲ್ಲಿ  ಭಾರತೀಯರ ಸಂಖ್ಯೆಯೇ ಹೆಚ್ಚು.  ವಿದೇಶಿಯರು  ನಮ್ಮ ದೇಶದಲ್ಲಿ ಹೂಡಿಕೆ ಮಾಡಿದಂತೆ, ಭಾರತೀಯರೂ ವಿದೇಶದಲ್ಲಿ ಹೂಡಿಕೆ ಮಾಡುತ್ತಾರೆ. ಭಾರತೀಯರು ವಿದೇಶದಲ್ಲಿ  ರಿಯಲ್‌ ಎಸ್ಟೇಟ್‌ನಲ್ಲಿ , ಈಕ್ವಿಟಿ ಕ್ಯಾಪಿಟಲ್‌ ನಲ್ಲಿ  ಹೂಡಬಹುದು. ಒಬ್ಬರು ಗರಿಷ್ಠ 25,0000 ಡಾಲರ್‌ ಹೂಡಿಕೆ ಮಾಡಬಹುದು. 2017-18 ರಲ್ಲಿ ಭಾರತೀಯರು 11.33 ಬಿಲಿಯನ್‌ ಡಾಲರ್‌ ಹೂಡಿದ್ದರೆ, ಈ ವರ್ಷ  ಈವರೆಗೆ 10. 96 ಬಿಲಿಯನ್‌ ಡಾಲರ ಹೂಡಿಕೆ ಮಾಡಿ¨ªಾರೆ. 

ಅರ್ಥಿಕತೆಗೆ ಹೇಗೆ  ಬಲ ನೀಡುತ್ತದೆ?
ವಿದೇಶಿ ವಿನಿಮಯ ಸಂಗ್ರಹ ದೃಢವಾಗಿದ್ದರೆ, ದೇಶದ  ವಿದೇಶಿ ವಿನಿಮಯ ದರವು ಸ್ಥಿರವಾಗಿ ಇರುತ್ತದೆ. ವಿದೇಶಿ ವಿನಿಮಯಕ್ಕಾಗಿ ಮಾರುಕಟ್ಟೆಯಲ್ಲಿ ಖರೀದಿಸಬೇಕಾದ ಅನಿವಾರ್ಯತೆ   ಇರದೇ, ನಮ್ಮದೇ ಸಂಗ್ರಹವನ್ನು ಬಳಕೆ ಮಾಡುವುದರಿಂದ  ವಿನಿಮಯ ದರದಲ್ಲಿ ಏರು  ಪೇರು ಆಗುವುದಿಲ್ಲ.  ಈ ಹಣವನ್ನು ತುರ್ತು ಸ್ಥಿತಿಯಲ್ಲಿ ಬಳಸಬಹುದು.  ಸಾಕಷ್ಟು ವಿದೇಶಿ ವಿನಿಮಯ  ಸಂಗ್ರಹವಿದ್ದರೆ, ವಿದೇಶಿ  ಹೂಡಿಕೆದಾರರಿಗೆ  ತಮ್ಮ ಹೂಡಿಕೆ ಬಗೆಗೆ  ಭರವಸೆ ಬರುತ್ತದೆ.

ಪ್ರಮಾಣ  ಎಷ್ಟಿರಬೇಕು?
ಈ ಸಂಗ್ರಹ ಎಷ್ಟಿರಬೇಕು ಎನ್ನುವುದರ ಬಗೆಗೆ ಯಾವುದೇ ಸ್ಪಷ್ಟ   ನೀತಿ ನಿಯಮಗಳಿಲ್ಲ. ವಿದೇಶಿ ವಿನಿಮಯ ಸಂಗ್ರಹ ಹೆಚ್ಚು ಇರುವಷ್ಟು ದೇಶದ ಅರ್ಥಿಕತೆಗೆ  ಒಳ್ಳೆಯದು ಎನ್ನುವ ಭಾವನೆ ಮಾತ್ರ  ಇದೆ.  1993 ರಲ್ಲಿ ರಂಗರಾಜನ್‌ ಸಮಿತಿಯು, ಈ ಪ್ರಮಾಣ ಮೂರು ತಿಂಗಳ  ಆಮದು ಬಿಲ…ಅನ್ನು ( Import Bill) ಪಾವತಿಸುವಷ್ಟು  ಇದ್ದರೆ ಸಾಕು ಎಂದು ಅಭಿಪ್ರಾಯ ಪಟ್ಟಿದೆ.   ಹೊರಗಿನ ಋಣಭಾರ- ಹೊರೆಯನ್ನು ಇರಿಸಿಕೊಂಡು, ಅದಕ್ಕೆ ಬಡ್ಡಿ ತೆರುತ್ತಾ ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸಿಕೊಳ್ಳುವುದನ್ನು ಹಣಕಾಸು ಸ್ಥಿತಿಯ  ಒಳ್ಳೆಯ ನಿರ್ವಹಣೆ ಎನ್ನಲಾಗದು.

– ರಮಾನಂದ ಶರ್ಮಾ

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.