ಆತಂಕ, ದುಗುಡ ಯಾಕೆ? ಅಕ್ಟೋಬರ್ ತಿಂಗಳ ನಿಮ್ಮ ಮಾಸ ಭವಿಷ್ಯ ಓದಿ..


Team Udayavani, Oct 2, 2018, 6:37 AM IST

astrology.jpg

ಮುಂದಿನ ತಿಂಗಳು ಏನು ಮಾಡೋದು..ಅಂದುಕೊಂಡ ಕೆಲಸ ಆಗುತ್ತಾ? ಹಣ ಹೊಂದಿಸೋದು ಹೇಗೆ? ಬೇಸಿಗೆ ರಜೆಗೆ ದೂರ ಪ್ರಯಾಣ ಹೊರಡಬೇಕು..ಹೀಗೆ ಹತ್ತು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೇವೆ. ಕಂಡ ಕನಸನ್ನು ನನಸು ಮಾಡಲು ಸಿದ್ಧತೆ ಮಾಡಿಕೊಂಡಿರುತ್ತೇವೆ. ಆದರೆ ಈ ಸಂದರ್ಭದಲ್ಲಿಯೇ ಏನಾದರೂ ಯಡವಟ್ಟು, ತೊಂದರೆ ಕಾಣಿಸಿಬಿಡುತ್ತದೆ. ಹೀಗಾಗಿ ಅಕ್ಟೋಬರ್ ತಿಂಗಳ ಮಾಸ ಭವಿಷ್ಯ ಇಲ್ಲಿದೆ. ಇಲ್ಲಿ ಕೆಲವೊಂದು ನಿಮ್ಮ ಆತಂಕ, ಪ್ರಶ್ನೆಗೆ ಉತ್ತರ ಸಿಗಲಿದೆ…ಓದಿ ನೋಡಿ.

ಮೇಷ: ವ್ಯಾಪಾರಿಗಳಿಗೆ, ಅಧಿಕಾರಿ ವರ್ಗದವರಿಗೆ ಸಂತಸದ ಕಾಲವಿದು. ಹೊಸ ಚಿಂತನೆಗಳು ಕಾರ್ಯಗತವಾಗಲಿದೆ. ಗೃಹ ಅಲಂಕಾರಿಕ ಸಾಮಗ್ರಿಗಳು ನಿಮಗೆ ಸಂತಸ ತರಲಿದೆ. ವಿದ್ಯಾರ್ಥಿಗಳಿಗೆ ವಿದ್ಯೆ ಪ್ರಗತಿಯ ಸಮಯವಿದು. ಆಗಾಗ ನೆಮ್ಮದಿ ಕಡಿಮೆಯಾದರೂ ಆರ್ಥಿಕವಾಗಿ ಚಿಂತೆ ಇರದು. ಕ್ರೀಡಾ ಜಗತ್ತಿನಲ್ಲಿ ಕ್ರೀಡಾಳುಗಳು ಸಂಭ್ರಮಿಸುವಂತಾದೀತು. ಕೃಷಿಕರಿಗೆ ಬಿಡುವಿಲ್ಲದ ಸಮಯ, ಕೊಂಚ ಉತ್ತೇಜನ ಕಂಡು ಬಂದೀತು. ಅವಿವಾಹಿತರಿಗೆ ವೈವಾಹಿಕ ಭಾಗ್ಯದ ಅವಕಾಶ ಒದಗಿ ಬರುವುದು.

ವೃಷಭ:ಆದಾಯವಿದ್ದರೂ ಅಧಿಕ ವೆಚ್ಚದಿಂದಾಗಿ ಕ್ಲೇಷ ತಂದೀತು. ಆರ್ಥಿಕ ವೇತನದಿಂದಾಗಿ ಕಾರ್ಮಿಕರಿಗೆ ಆನಂದ ಹೆಚ್ಚಲಿದೆ. ದೇವತಾ ಕಾರ್ಯಗಳು ಮನಸ್ಸಿನಂತಾಗಲಾರವು. ತಾತ್ಕಾಲಿಕ ಹುದ್ದೆಯವರಿಗೆ ಮುಂದುವರಿಸಿಕೊಂಡು ಹೋಗುವ ಸಾಧ್ಯತೆ ಇರುತ್ತದೆ. ನೂತನ ಕಾರ್ಯಗಳು ವಿಳಂಬಗತಿ ಪಡೆಯಲಿದೆ. ದೂರ ಸಂಚಾರದ ಅನಿವಾರ್ಯ ಸಾಧನೆಗೆ ಪೂರಕವಾಗಲಿದೆ. ಮಕ್ಕಳ ಪ್ರಗತಿಯಲ್ಲಿ ಮುನ್ನಡೆ ಸಮಾಧಾನ ತರುತ್ತದೆ. ಅವಿವಾಹಿತರಿಗೆ ಆಶಾದಾಯಕ ದಿನಗಳಿವು. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ:ಆಗಾಗ ಸಮಸ್ಯೆಗಳು, ಧನಾಗಮನದಲ್ಲೂ ವಿಳಂಬ. ವಿಘ್ನ ಪರಂಪರೆಯಿಂದ ಹೆಚ್ಚಿದ ಕೆಲಸ ಕಾರ್ಯಗಳು ಸ್ಥಗಿತಗೊಂಡವು. ಕೋರ್ಟ್ ವಾದ, ವಿವಾದಗಳಿಗೆ. ನಿಮ್ಮ ಪರ ಚಾಲನೆ ದೊರಕಿತು. “ಕಾರ್ಯವಾಸಿ ಕತ್ತೆ ಕಾಲು” ಎಂಬಂತೆ ನಿಮ್ಮ ಸ್ವಾಭಿಮಾನವನ್ನು ಬದಿಗೊತ್ತಿ ಕಾರ್ಯಕ್ಕಿಳಿಯಿರಿ. ಕೆಲಸವಾಗುತ್ತದೆ. ಅಧಿಕಾರಿ ವರ್ಗದವರಿಗೆ ವರ್ಗಾವಣೆ ಸಾಧ್ಯತೆ ತೋರಿ ಬಂದರೂ ಅನುಕೂಲಕರವೆನ್ನಬಹುದು. ಮುಖ್ಯವಾಗಿ ಕೌಟುಂಬಿಕ ವಿಚಾರದಲ್ಲಿಯೂ ಹೆಚ್ಚಿನ ಎಚ್ಚರ ವಹಿಸುವುದು ಅವಶ್ಯವೆನ್ನಬಹುದು.

ಕರ್ಕಾಟಕ:ಸಣ್ಣ ಪುಟ್ಟ ಅಡಚಣೆಗಳಿಂದಾಗಿ ಕೈಗೊಂಡ ಕೆಲಸ ಕಾರ್ಯಗಳು ವಿಳಂಬವಾದವು. ಪುಣ್ಯಕಾರ್ಯ, ಶುಭ ಮಂಗಳ ಕಾರ್ಯಗಳಿಗೆ ಸಕಾಲವಿದು. ವ್ಯಾಪಾರ, ವ್ಯವಹಾರಗಳಲ್ಲಿ ಆಗಾಗ ಬೇಡಿಕೆ ಹೆಚ್ಚಳ. ಪೂರೈಕೆಯಲ್ಲಿ ಹೆಣಗಾಟ ತೋರಿ ಬರುತ್ತದೆ. ಸರ್ಕಾರಿ ಅಧಿಕಾರಿವರ್ಗದವರಿಗೆ ದೂರಕ್ಕೆ ವರ್ಗಾವಣೆ, ಬವಣೆ ಬೇರೆ, ಆಗಾಗ ಹಿರಿಯರಿಂದ ಅಸಮಾಧಾನಕರ ವಾತಾವರಣ ತೋರಿ ಬಂದು ಕಾರ್ಯಲೋಪವಾದೀತು. ಯೋಗ್ಯ ವಯಸ್ಕರಿಗೆ ಉತ್ತಮ ಸಂಬಂಧಗಳು ಅನುಕೂಲಕರವಾದವು.

ಸಿಂಹ:ಕಾರ್ಯರಂಗದಲ್ಲಿ ಹೆಚ್ಚಿನ ಕಾಳಜಿ ವಹಿಸಿರಿ. ಹಿತಶತ್ರುಗಳ ಉದಯ. ಹಿರಿಯೊಡನೆ ಮತಭೇದ, ಬಂಧುಗಳೊಳಗೆ ಭಿನ್ನಾಭಿಪ್ರಾಯವಿದೆ. ಮಾತು ಕಡಿಮೆ ಇರಲಿ. ರಾಜಕೀಯ ರಂಗದಲ್ಲಿ ವ್ಯಾಪಾರ, ವ್ಯವಹಾರಗಳಲ್ಲಿಯೂ ಹಣಾಹಣಿ ಸ್ಪರ್ಧೆಗಿಳಿಯಬೇಕಾದ ಪರಿಸ್ಥಿತಿ ಇರುತ್ತದೆ. ಅಧೈರ್ಯದ ಹೆಜ್ಜೆಯಿಂದ ಕಾರ್ಯಾನುಕೂಲಕ್ಕೆ ಹಿನ್ನಡೆಯಾದೀತು. ವಿದ್ಯಾರ್ಥಿಗಳ ಆಲಸ್ಯ ಪ್ರವೃತ್ತಿಯಿಂದ ವಿದ್ಯಾಭ್ತಾಸಕ್ಕೆ ನಷ್ಟ ತಂದೀತು. ಚುರುಕು ರಾಜಕೀಯ ವೃತ್ತಿಯವರಿಗೆ ಸ್ಥಾನಮಾನ ಪ್ರಾಪ್ತಿಯಾಗುತ್ತದೆ.

ಕನ್ಯಾ:ವೃತ್ತಿರಂಗದಲ್ಲಿ ಶಹಬ್ಬಾಸ್ ಗಿರಿ ಪಡೆದು ಹರ್ಷವಿದ್ದರೂ ಪ್ರಯತ್ನಬಲಕ್ಕೆ ನಿರೀಕ್ಷಿತ ಫಲವಿರದು. ಸಹಧರ್ಮೀಣಿಯ ಸಾರ್ಥಕ ಸಹಯೋಗ, ಸುಖವರ್ಧನೆಗೆ ಪ್ರಚೋದನೆ ನೀಡಲಿದೆ. ವಿದ್ಯಾರ್ಥಿಗಳು ಅಭ್ಯಾಸಬಲವನ್ನು ಹೆಚ್ಚಿಸುವಂತಾದರೆ, ಉತ್ತಮ ಅಂಕವನ್ನು ಪಡೆಯಬಹುದಾಗಿದೆ. ಮಾನಸಿಕ ಉದ್ವೇಗ, ಬೆನ್ನು, ಸೊಂಟ, ರಕ್ತದೊತ್ತಡ ಅನಾರೋಗ್ಯದಂತಹ ಭೀತಿ ತರಲಿದೆಯಾದರೂ ರಾಹು ಬಲ ನಿಮ್ಮನ್ನು ಕಾಪಾಡಲಿದೆ. ಯಾವುದಕ್ಕೂ ದುಡುಕು ನಿರ್ಧಾರಗಳ ಬಗ್ಗೆ ಜಾಗೃತಿ ವಹಿಸಿರಿ. ಸಂಚಾರದಲ್ಲಿ ಜಾಗೃತೆ ಬೇಕು.

ತುಲಾ: ಕೋರ್ಟ್ ಕಚೇರಿ ಸಂಬಂಧ ಕೆಲಸಗಳಲ್ಲಿ ಹೆಚ್ಚಿನ ಧನವ್ಯಯವಾಗಲಿದೆ. ಚರ್ಮವ್ಯಾಧಿ, ಗುಪ್ತರೋಗಗಳ ಬಗ್ಗೆ ಜಾಗೃತೆವಹಿಸಿರಿ. ಕಾರ್ಯರಂಗದಲ್ಲಿ ಹಠಮಾರಿತನ, ವಂಚಿಸಲ್ಪಡುವಿಕೆ. ಪಾಲುಗಾರರೊಡನೆ, ಮಿತ್ರರೊಡನೆ ಕಲಹಕ್ಕೆ ಕಾರಣರಾಗದಿರಿ. ಬಂದ ಕಷ್ಟ ನಷ್ಟಗಳನ್ನು ಸಮರ್ಥವಾಗಿ ಎದುರಿಸುವ ಆತ್ಮ ವಿಶ್ವಾಸವಿರಲಿ. ಉದ್ಯೋಗಿಗಳಿಗೆ ಹೊಸ ವೃತ್ತಿಯ ಹೊಳವು ಉತ್ಸಾಹ ತಂದೀತು. ದೂರ ಸಂಚಾರ ತಂದೀತು. ನೂತನ ವಧುವರರಿಗೆ ಸಂತಾನ ಭಾಗ್ಯವಿದೆ.

ವೃಶ್ಚಿಕ: ಸ್ವತಂತ್ರ ಉದ್ಯಮದವರಿಗೆ ಮೂಲಧನ ವೃದ್ದಿಯಾಗುತ್ತದೆ. ಆಕಸ್ಮಿಕ ಧನಾಗಮನ ಹಾಗೂ ಷೇರು ವ್ಯವಹಾರಗಳ ಲಾಭಾಂಶ ಏರಿಕೆ. ಗೃಹಿಣಿಯ ಕಿರಿಕಿರಿ. ಅನಾರೋಗ್ಯ. ಸಂಶಯ ಪ್ರವೃತ್ತಿ ಪದೇ ಪದೇ ತೊಂದರೆ ನೀಡಿತು. ರಕ್ತದೊತ್ತಡದಿಂದ ನಿಮಗೂ ಚಿಕಿತ್ಸೆಕಾಲ ಜಾಗೃತೆ ವಹಿಸಿರಿ. ವೃತ್ತಿರಂಗದಲ್ಲಿ ಆಶಾಭಂಗವಿದ್ದರೂ ಕಾರ್ಯ ಸಿದ್ಧಿಯಿಂದ ತುಸು ನೆಮ್ಮದಿ ದೊರಕೀತು. ಹೊಸ ಆದಾಯದ ಮೂಲಗಳು ಗೋಚರಕ್ಕೆ ಬಂದಾವು ಸದುಪಯೋಗಕ್ಕೆ ಇದು ಸವಾಲು.

ಧನು: ಮಹತ್ವದ ಕಾರ್ಯ ಸಾಧನೆಗಾಗಿ ಪರಿಶ್ರಮ. ಬಂಧು ಸಹಕಾರವಿದೆ. ಉದ್ಯೋಗ ಬದಲಾವಣೆ ಸಾಧ್ಯತೆ ಇರುತ್ತದೆ. ನವದಂಪತಿಗಳಿಗೆ ಮಧುಚಂದ್ರ ಭಾಗ್ಯಕ್ಕೆ ದೂರ ಸಂಚಾರ ಒದಗಿ ಬಂದೀತು. ಶೈಕ್ಷಣಿಕ ನ್ಯಾಯದಾನ, ಕೈಗಾರಿಕೆ ಮುಂತಾದ ವೃತ್ತಿಯವರಿಗೆ ಕೈಗೊಂಡ ಕೆಲಸ ಕಾರ್ಯಗಳು ಎಲ್ಲಾ ರೀತಿಯಲ್ಲೂ ಅನುಕೂಲ ಮಾಡಿಕೊಡಲಿವೆ. ಕಟ್ಟಡ ನಿರ್ಮಾಣ, ಕಮಿಷನ್ ವ್ಯವಹಾರಗಳಲ್ಲಿ ನಾನಾ ರೀತಿಯಲ್ಲಿ ಲಾಭಾಂಶವಿರುತ್ತದೆ. ಮಂಗಳ ಕಾರ್ಯಗಳು, ದೇವತಾ ಕಾರ್ಯಗಳು ನಡೆಯಲಿವೆ.

ಮಕರ:ಉಷ್ಣವಾಯು ಪ್ರಕೋಪಗಳಿಂದ ಆರೋಗ್ಯ ಹಾನಿಯಾದೀತು. ಆಗಾಗ ಸಂಚಾರದಿಂದ ಸಂತಸ ತಂದರೂ ದೇಹಾಯಾಸಕ್ಕೆ ಕಾರಣವಾಗದಂತೆ ಕಾಳಜಿ ವಹಿಸಬೇಕು. ಕೋರ್ಟ್ ವಿವಾದಗಳಿಗೆ ನಿಮ್ಮ ಪರವಾಗಿ ಚಾಲನೆ ದೊರಕೀತು. ವ್ಯಾಪಾರ ವ್ಯವಹಾರದಲ್ಲಿ ಹೂಡಿಕೆಗಳು ಲಾಭಕರವಾಗಿ ಮೂಲಧನ ವೃದ್ಧಿಸಲಿದೆ. ಯಾವುದಕ್ಕೂ ದೂರಾಲೋಚನೆಯಿಂದ ಕಾರ್ಯತಂತ್ರ ರೂಪಿಸಿರಿ. ವಿದ್ಯಾರ್ಥಿಗಳ ಪ್ರಯತ್ನಬಲ ಫಲಿತಕ್ಕೆ ಬಂದೀತು. ಯಂತ್ರ ವಾಹನಾದಿ ಸಂಚಾರಿ ವೃತ್ತಿಯವರಿಗೆ ನಿರೀಕ್ಷಿತ ಲಾಭ ತಂದುಕೊಡಲಿದೆ.

ಕುಂಭ: ಕೋರ್ಟ್ ಕಚೇರಿ ಸಂಬಂಧ ಕೆಲಸಗಳಲ್ಲಿ ಹೆಚ್ಚಿನ ಧನ ವ್ಯಯವಾಗಲಿದೆ. ಕ್ರೀಡಾ ಮನೋಭಾವದವರಿಗೆ ಸಾಧನೆಯಲ್ಲಿ ನಿರೀಕ್ಷಿತ ಯಶಸ್ಸು. ಆರ್ಥಿಕ ವ್ಯವಹಾರಗಳಲ್ಲಿ ಚುರುಕು ಕಂಡೀತು. ಯೋಗ್ಯ ವಯಸ್ಕರಿಗೆ ಆಗಾಗ ಕಹಿ ಅನುಭವವಿರುತ್ತದೆ. ಸಾಂಸಾರಿಕ ಭಿನ್ನಾಭಿಪ್ರಾಯ ಕಲಹಕ್ಕೆ ಕಾರಣವಾದೀತು. ತಾಳ್ಮೆ, ಸಮಾಧಾನವಿರಲಿ. ತಾಂತ್ರಿಕ ವೃತ್ತಿಯವರಿಗೆ ಮುನ್ನಡೆ. ಆರ್ಥಿಕ ಲಾಭ ಒದಗಿಸಿಕೊಡಲಿದೆ. ವೃತ್ತಿರಂಗದಲ್ಲಿ ಅಧಿಕಾರಿಗಳ ಉಪಟಳ, ಸ್ಥಾನಚಲನೆಯ ಭೀತಿ, ಕ್ಲೇಶವೂ ಇದ್ದೀತು.

ಮೀನ:ಬಹುದಿನಗಳ ಬಳಿಕ ಬರಬೇಕಾಗಿದ್ದ ಬಾಕಿ ವಸೂಲಿಯಾಗಲಿದೆ. ಆಪ್ತೇಷ್ಟರ ಸಹಕಾರದಿಂದ ಕಾರ್ಯಸಾಧನೆಗೆ ಅನುಕೂಲ ತೋರಿ ಬಂದೀತು. ಹಿರಿಯರಿಗೆ ದೀರ್ಘಾವಧಿ ಉಪದ್ರವ ಕೊಡುವ ಅನಾರೋಗ್ಯ ತಂದೀತು. ಉದಾಸೀನತೆಯಿಂದಲೇ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಹಿನ್ನಡೆ ಕಾರಣವಾಗುತ್ತದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಬೆರೆಯಿರಿ. ಕಾರ್ಯಾನುಕೂಲವಾಗುತ್ತದೆ. ಒಮ್ಮೊಮ್ಮೆ ಖರ್ಚಿನ ಜೊತೆಗೆ ಅಶಾಂತಿ ಬೇರೆ. ಆದಾಯಕ್ಕೆ ಎಗ್ಗಿಲ್ಲ. ಸ್ವಯಂಕೃತಾಪಾರಾಧಕ್ಕೆ ಪಶ್ಚಾತ್ತಾಪ ಪಡಲಿರುವಿರಿ.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ugadi astrology 20204: ನಿಮ್ಮ ರಾಶಿ ಭವಿಷ್ಯ‌-ಯಾವ ರಾಶಿಗೆ ಕೇಡು, ಯಾವ ರಾಶಿಗೆ ಒಳಿತು!

Ugadi astrology 20204: ನಿಮ್ಮ ರಾಶಿ ಭವಿಷ್ಯ‌-ಯಾವ ರಾಶಿಗೆ ಕೇಡು, ಯಾವ ರಾಶಿಗೆ ಒಳಿತು!

astrology

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

raashi

ಶುಭಮಂಗಲ ಕಾರ್ಯಗಳಿಗೆ ಉತ್ತಮ ಸಮಯ; ಸರಕಾರಿ ನೌಕರರಿಗೆ ಲಾಭ: ಹೇಗಿದೆ ಇಂದಿನ ಗ್ರಹಬಲ ?

ಜಾತಕ ಫ‌ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.