ನೀ ದೂರ ಹೋದರೆ ನಾ ಏನು ಮಾಡಲಿ?


Team Udayavani, Mar 20, 2017, 9:38 PM IST

filler-omme-neenu–latha.jpg

ಅಂದು ನಿನ್ನ ಅಮ್ಮ ನನ್ನನ್ನು ಹಿಂದೆ ಬಚ್ಚಿಟ್ಟುಕೊಂಡು ಬಂದು ಪರಿಚಯ ಮಾಡಿದ ದಿನವನ್ನು ನೆನೆಸಿಕೊಂಡರೆ ಇಂದಿಗೂ ರೋಮಾಂಚನವಾಗುತ್ತದೆ. ಮೆಲ್ಲಗೆ ನನ್ನನ್ನು ಕುತೂಹಲದಿಂದ ನೋಡಿದ ಆ ನಿನ್ನ ಕಣ್ಣು ನನಗೆ ಇಂದಿಗೂ ತುಂಬಾ ಇಷ್ಟ.  

ಹೌದು! ನಿನ್ನ ಸ್ನೇಹ ಮಾಡಿದ ದಿನದಿಂದ ನಾನು ತುಂಬಾ ಖುಷಿಯಾಗಿದ್ದೀನಿ. ಯಾಕೆ ಗೊತ್ತಾ? ಅಷ್ಟು ದಿನ ನಾನೊಬ್ಬನೇ ಇದ್ದು ಸಾಕಾಗಿ ಹೋಗಿತ್ತು. ಇಂತಹ ಸಮಯದಲ್ಲಿ ನೀನು ಸಿಗುವಾಗ ಖುಷಿಯಾಗದೆ ಇರುತ್ತಾ ಹೇಳು? ನನಗೆ ನಿನ್ನ ಸನಿಹ ತುಂಬಾ ಹಿತ ನೀಡಿದೆ. ನಿನ್ನ ಮೊದಲ ಸ್ವರ್ಶ ಇಂದಿಗೂ ನನ್ನ ಹೃದಯದಲ್ಲಿ ಬೆಚ್ಚಗೆ ಇದೆ. ಆ ನಿನ್ನ ನಯವಾದ ಪಾದ ನನಗೆ ಇಂದಿಗೂ ಒಳ್ಳೆಯ ಭಾವನೆಯನ್ನು ಕೊಡುತ್ತದೆ. ನೀನು ನನ್ನನ್ನು ಕದ್ದು ಮುಚ್ಚಿ ಪದೇ ಪದೇ ನೋಡುತ್ತಿದ್ದ. ಆ ನೋಟ ನನಗೆ ತುಂಬಾ ಇಷ್ಟ ಅಂತ ಗೊತ್ತಲ್ವ ನಿಂಗೇನೇ. 

ಆದ್ರೆ ಇತ್ತೀಚೆಗೆ ನೀನು ಯಾಕೆ ನನ್ನ ಯಾಕೆ ತುಂಬಾ ದೂರ ಮಾಡ್ತಿದೀಯಾ ಹೇಳು. ಮೊದಮೊದಲು ನಿಂಗೆ ನನ್ನನ್ನು ನೋಡದಿದ್ರೆ ನಿದ್ದೇನೇ ಬರ್ತಾ ಇರ್ಲಿಲ್ಲ ಅಲ್ವಾ? ಯಾಕೆ ಹೇಳು? ನನ್ನನ್ನು ನಾಯಿ ಏನಾದ್ರು ಕಚ್‌ಕೊಂಡು ಹೋಗುತ್ತೆ ಅನ್ನೋ ಭಯದಿಂದ!   

ನಿನ್ನನ್ನು ನಾನು ತುಂಬಾ ಸಲ ಸರಿ ದಾರೀಲಿ ನಡೆಸಿಕೊಂಡು ಹೋಗಿದ್ದೀನಿ. ಆದ್ರೆ ನಿಂಗೆ ಅದೆಲ್ಲ ಎಲ್ಲಿ ನೆನಪಿರುತ್ತೆ ಹೇಳು? ಒಂದೊಂದು ಸಲ ನಿಂಗೆ ಹುಷಾರಿಲ್ಲದೆ ಇರುತ್ತೆ. ಆವಾಗಲೆಲ್ಲಾ ನಾನು ನಿನ್ನ ಜೊತೆಗಿರುತ್ತಿದ್ದೆ. ನಂಗೆ ಹುಷಾರಿಲ್ಲದೆ ಇರುವಾಗ ನೀನು ನನಗೆ ಸರಿ ಶಾಪ ಹಾಕಿ ನನ್ನನ್ನು ಅರ್ಧ ದಾರೀಲಿ ಬಿಟ್ಟು ಹೋಗಿ ಬರುವಾಗ ನನ್ನನ್ನು ಕರೆದುಕೊಂಡು ಬರಿ¤ದ್ದೆ. ಆದ್ರೆ ಒಮ್ಮೆ ಆದ್ರೂ ಯೋಚೆ° ಮಾಡಿದ್ದೀಯಾ, ನೀನು ಬರುವವರೆಗೂ ನಾನು ಒಬ್ಬಂಟಿಯಾಗಿರುತ್ತೀನಿ ಅಂತ? ಆದ್ರೂ ನಾನು ನಿನ್ನನ್ನು ನಗು ನಗುತ್ತಾ ಸ್ವಾಗತಿಸಿ. ಬರಮಾಡಿಕೊಂಡ ದಿನ ನೆನಪಿದೆಯಾ? ನಿನ್ನ ಪಾದ ಸ್ಪರ್ಶ ಸಿಕ್ಕರೆ ಸಾಕು: ನನ್ನ ನೋವನ್ನೆಲ್ಲ ಮರೆತುಬಿಡ್ತಿದ್ದೆ. ಅದಾದರೂ ನಿಂಗೆ ಗೊತ್ತಿದೆ ಅಂದೊRಂಡಿದ್ದೀನಿ.  

ನಿನ್ನನ್ನು ನಾನು ಕೆಟ್ಟ ದಾರಿ ಬಿಟ್ಟು, ಒಳ್ಳೆ ದಾರೀಲಿ ನಡೆಸಿದೀನಿ ಅನ್ನೋ ನಂಬಿಕೆ ನನಗಿದೆ. ಆದ್ರೆ ನನ್ನನ್ನು ಕೂಡ ನೀನೆ ನಡೆಸಿಕೊಂಡು ಹೋಗೋದು ಅನ್ನೋದು ನನಗೆ ಸರಿಯಾಗಿ ನೆನಪಿದೆ. ಆ ಖುಣವನ್ನು ನಾ ಯಾವತ್ತೂ ಮರೆಯೋದಿಯಲ್ಲ.     
     
ಇತೀ ನಿನ್ನವ                       
ಲೂನಾರ್ ಸ್ಲಿಪ್ಪರ್‌  

– ಶಿವರಂಜಿನಿ ಕೊಯಿಲ, ಉಜಿರೆ  

ಟಾಪ್ ನ್ಯೂಸ್

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.