ಅರ್ಥವಾಗದ ಭಾಷೆ ನೀನು


Team Udayavani, Mar 21, 2017, 3:45 AM IST

PicsArt_1470330124061.jpg

ನಿನ್ನ ಪ್ರೀತಿಯಿಂದ ಸಿಕ್ಕ ಸಂತೋಷದ ಮುಂದೆ ನಿನ್ನ ವಿದಾಯದ ನೋವು ಏನೇನೂ ಅಲ್ಲ! ಮೊದಲ ಪ್ರೀತಿಯೇ ನನ್ನನ್ನು ಸೋಲಿಸುತ್ತದೆ ಎಂದು ನಾನು ಎಣಿಸಿರಲಿಲ್ಲ. ಅದು ನೀಡುವ ಎಲ್ಲಾ ಅನುಭೂತಿ, ವರ್ಣನೆಗೆ ಸಿಗದ ಸಂಭ್ರಮ ಎಲ್ಲವನ್ನು ಬಾಚಿ ತಬ್ಬಿಕೊಂಡಿದ್ದೇನೆ. 

ಇದಕ್ಕೆ ಒಲವಿನ ಓಲೆ ಅಂತೀಯೋ, ವಿರಹ ವೇದನೆ ಅಂತೀಯೋ ನಿನಗೆ ಬಿಟ್ಟದ್ದು. ಚೆಲುವಿಗೇ ಛಂದಸ್ಸು, ಸೌಂದರ್ಯಕ್ಕೆ ತೇಜಸ್ಸಿನಂತಿರುವ ನಿನ್ನ ಬಗ್ಗೆ ಅಕ್ಷರ ಜೋಡಿಸಬೇಕಾದರೆ ಭಾಷೆಯನ್ನು ಕತ್ತೆಯ ಥರ ದುಡಿಸಿಕೊಳ್ಳುವವನು ಕೂಡ ಒಂದರೆಕ್ಷಣ ನಿರುದ್ಯೋಗಿಯಾಗಿ ಬಿಡುತ್ತಾನೆ. ಇನ್ನು ನಾನೆಷ್ಟರವನು?

ಅದು ಹುಚ್ಚು ಕೋಡಿ ಮನಸ್ಸಿನ ವಯಸ್ಸು. ಪ್ರೀತಿಸಿದ ಜೀವ ಕೈ ಬಿಟ್ಟು ಹೋದಾಗ ಈ ಭೂಮಿ ಮೇಲೆ ನನಗೆ ಇವಳು ಬಿಟ್ರೆ ಬೇರೆ ಯಾರೂ ಇಲ್ಲ ಅಂತ ಅನಿಸಿದ್ದು ನೆನೆದ ತಲೆಯನ್ನು ಅವ್ವ ಒರೆಸಿದಾಗಲೇನೇ. ನೀ ಕಂಡಾಗ, ಒಂದೇ ಸಮನೆ ಬಡಿದುಕೊಂಡು ಕಾರಣ ಹೇಳದೆ ಕಂಗೆಡಿಸುವ ನನ್ನ ಹೃದಯ, ಪ್ರೀತಿ ಎಂಬ ವಿಐಪಿಯನ್ನು ಪರಿಚಯ ಮಾಡಿಕೊಳ್ಳಬೇಕಾದರೆ “ನನ್ನ ಒಪ್ಪಿಗೆ ಪಡೆಯೋ ಮೂರ್ಖ’ ಎನ್ನುವ ಕಣ್ಣುಗಳು. ಇದಕ್ಕೆಲ್ಲ ಏನು ಹೇಳುವುದೊ…? ಇಂದಿಗೂ ನನ್ನಲ್ಲಿ ಉತ್ತರವಿಲ್ಲ. ನಿನ್ನ ನೋಟಕ್ಕೆ ಹುಚ್ಚನಂತೆ ಕಾದಿದ್ದೆ. ಆದರೆ ಒಂದು ಮುಸ್ಸಂಜೆ ನೀ ನನ್ನ ನೋಡಿ ಅರ್ಥವಿಲ್ಲದ ನಗೆ ನಕ್ಕಾಗ ನನ್ನೊಳಗಿನ ಪ್ರೇಮಿ ಸಂಭ್ರಮ ಪಟ್ಟ ಪರಿಯಿದೆಯಲ್ಲ, ಅದು ಎಲ್ಲಾ ಹುಡುಗರಿಗೂ ಜೀವನದಲ್ಲಿ ಒಮ್ಮೆ ಮಾತ್ರ ದಕ್ಕುವ ಸುಖ. 

ಒಂದು ಗುಲಾಬಿ ಹೂ ಕೂಡ ಕೊಡದೇ ಕಣ್ಣಿನಿಂದಲೇ ನಿನ್ನ ಪ್ರೀತಿಸುತ್ತಾ ಒಂದಿಡೀ ಮಳೆಗಾಲವನ್ನು ಕಳೆದ ಪರಿ ನೆನೆದು ನನ್ನೆದೆ ಆ ಎಲ್ಲಾ ಪ್ರೇಮಿಗಳಿಗಿಂತ ಖುಷಿಪಡುತಿತ್ತು. ನೂರು ಜನ್ಮಕಾಗುವಷ್ಟು ಧನ್ಯತೆ, ಉಲ್ಲಾಸ, ಜೀವನಪ್ರೀತಿಯನ್ನು ನನಗೆ ಕೊಟ್ಟಿದೆ ನನ್ನ ಪ್ರೇಮ. ಇದಕ್ಕೆಲ್ಲ ಕಾರಣ ನೀನು. ನಾನು ನಿನ್ನ ಪ್ರೀತಿಯ ಅಮಲಲ್ಲಿ ತೇಲಾಡುತ್ತಿದ್ದಾಗಲೇ ನೀನು ಇನ್ನೊಬ್ಬನನ್ನು ವ್ಯಾಮೋಹಿಸುತ್ತಿದ್ದೀಯ ಅಂತ ಗೊತ್ತಾದಾಗ ವಿಚಲಿತವಾಗಿದ್ದೆ. ಆದರೆ ನನಗೆ ಗೊತ್ತಾಗಿತ್ತು ನನ್ನ ಹೃದಯ ನಿನ್ನ ಭಾಷೆಯನ್ನು ತಪ್ಪಾಗಿ ಅರ್ಥೈಸಿತ್ತೆಂದು. ಇವಾಗಲಾದರೂ ಅನುವಾದ ಮಾಡುತ್ತಿಯಾ? ನವಜಾತ ಶಿಶು ನಾನು…

ನಿನ್ನ ಪ್ರೀತಿಯಿಂದ ಸಿಕ್ಕ ಸಂತೋಷದ ಮುಂದೆ ನಿನ್ನ ವಿದಾಯದ ನೋವು ಏನೇನೂ ಅಲ್ಲ! ಮೊದಲ ಪ್ರೀತಿಯೇ ನನ್ನನ್ನು ಸೋಲಿಸುತ್ತದೆ ಎಂದು ನಾನು ಎಣಿಸಿರಲಿಲ್ಲ. ಅದು ನೀಡುವ ಎಲ್ಲಾ ಅನುಭೂತಿ, ವರ್ಣನೆಗೆ ಸಿಗದ ಸಂಭ್ರಮ ಎಲ್ಲವನ್ನು ಬಾಚಿ ತಬ್ಬಿಕೊಂಡಿದ್ದೇನೆ. ಅದರ ನೆನಪುಗಳೇ ಸಾಕು…

– ಅಭಿಷೇಕ ಪಾಟೀಲ್‌, ಧಾರವಾಡ

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.