ಪ್ಲೀಸ್‌, ಹಿಮಾಲಯದಂತೆ  ತಣ್ಣಗಾಗು ಮಾರಾಯ…


Team Udayavani, Apr 11, 2017, 3:50 AM IST

10-josh-7.jpg

ಪ್ರೀತಿಯ ಹುಡ್ಗ,
ಏನ್‌ ಬಹಳ ಬ್ಯುಸಿ ಆಗ್ಬಿಟ್ಟಿದ್ದೀ. ಕೊಬ್ಬು ಕಣಾ ನಿಂಗೆ. ಅಷ್ಟೆಲ್ಲಾ ಬೈದ್ರೂ ನಾನೇ ಪೋನ್‌ ಮಾಡ್ತೀನಿ, ಸಾರಿ ಕೇಳ್ತಿನಿ. ಇವ್ಳು ಬಿಟ್‌ ಹೋಗಲ್ಲ ಅಂತ ಆಟ ಆಡಿಸ್ತೀಯ ಅಲ್ವಾ? ಅಷ್ಟಕ್ಕೂ ನೀನ್ಯಾಕೆ ಬೈಯೋದು ನಂಗೆ? ನಾನು ನಿನ್ನ ಅರ್ಥ ಮಾಡ್ಕೊಳ್ಳೋದಿಲ್ಲ ಅಂತಾನಾ? ನಿನ್ನನ್ನು ಅಪಾರ್ಥ ಮಾಡ್ಕೊಂಡು, ತಪ್ಪಾಗಿ ತಿಳಿದು, ನೀನೊಬ್ಬ ಗೂಬೆ ಅಂತನ್ನಿಸಿ ಮತ್ತೆ “ಛೇ ಛೇ, ಅವನು ಆ ಥರದ ಹುಡುಗ ಅಲ್ಲ, ಛೇ ನಾನು ಬೈದ್ನಲ್ಲಾ’ ಎಂದು ಪರಿತಪಿಸುವಲ್ಲಿ ಒಂಥರಾ ಹೇಳ್ಕೊಳ್ಳೋಕೆ ಆಗದೆ ಇರುವ ಮಾಧುರ್ಯ ಇರುತ್ತೆ ಮನಸ್ಸಲ್ಲಿ. ತಿಳೀತಾ? ತುಂಬಾ ವೇಳೆ ನಿನ್ನ ಬಳಿ ಹೇಳಿದ್ದೇನೆ; ನನಗೆ ಸುಳ್ಳಾಡುವ ಎರಡು ನಾಲಿಗೆಯವರೆಂದ್ರೆ ಆಗೋದಿಲ್ಲ. ಅಷ್ಟೆಲ್ಲ ಸುಳ್ಳಿಗರ ದ್ವೇಷಿಯಾದ ನಾನು ನಿನ್ನ ಜೀವದ ಉಸಿರಿನಷ್ಟು ಪ್ರೀತಿಸ್ತೀನಿ ಅಂದ್ರೆ ಅರ್ಥ ಆಗೋಲ್ವಾ? ನಾನೇನ್‌ ಪಫೆìಕ್ಟ್ ಹುಡ್ಗಿ ಅಲ್ಲಯ್ನಾ… ನಾನೂ ತಪ್ಪು ಮಾಡ್ತೀನಿ, ಅದನ್ನು ತಿದೊಡೂ ನಡೀತೀನಿ. ನಂಗೆ ಸಣ್ಣಪುಟ್ಟ ತಪ್ಪು ಮಾಡೋದ್‌ ಅಂದ್ರೆ ಸಖತ್‌ ಇಷ್ಟ. ನಾನೆಷ್ಟು ದಡ್ಡಿ ಅಂತ ಒಳಗೊಳಗೇ ನಗ್ತಿನಿ, ಖುಷಿಯಾಗ್ತಿನಿ. ಅದಕ್ಕಾಗಿ ಅಳ್ಳೋದಿಲ್ಲ. ಆದ್ರೆ ನೀನು ಬಿಟ್‌ ಹೋದಾಗ ಇರುಳು ಪೂರಾ ಬಿಕ್ಕಿದ್ದೇನೆ. ಜೀವನದ ಬಗ್ಗೆ ಬೇಸರಪಟ್ಟಿದ್ದೇನೆ. ಎದೆಯಲ್ಲಿ ನೋವು ಬಂದಾಗಲೇ ತಿಳಿದಿದ್ದು ಹೃದಯ ಎಡ ಭಾಗದಲ್ಲೆ„ತೆ ಅಂತ! ಪ್ರೀತಿ ಹೃದಯದಲ್ಲಿ ಇದೆ ಅಂತ ಈ ನೋವಿನ ಪುರಾವೆಯಿಂದಲೇ ತಿಳಿದಿದ್ದು. 

ಗೊತ್ತಾಯ್ತಾ? ಅಷ್ಟು ನಂಬಿಕೆ, ವಿಶ್ವಾಸ ನಿನ್‌ ಮೇಲೆ. ನಂಗೆ ನಿನ್ನನ್ನು ಇಂದ್ರ ಚಂದ್ರ ಅಂತೆಲ್ಲ ಹೊಗಳ್ಳೋಕೆ ಬರಲ್ವಯ್ನಾ. ಆದ್ರೆ, ನಾ ಪ್ರೀತಿಸುವ ಈ ಪ್ರಕೃತಿಯ ನೆರಳಿನಲ್ಲಿ ನಿನ್ನ ಕಂಪು, ಹರಿವ ತೊರೆ, ಪಕ್ಷಿಗಳ ಸ್ವರದಲ್ಲಿ ನಿನ್ನ ಇಂಪು ಮೈಗೂಡಿ ಬರುತ್ತವೆ. ಅವುಗಳಷ್ಟೇ ತಂಪಾದ ಭಾವ, ಮಡಿಲ ಚೇತರಿಕೆ ನೀಡುತ್ತವೆ. ನನಗೊಂದು ಕೆಟ್ಟ ಹವ್ಯಾಸವೆಂದರೆ, ನೇರವಾಗಿ ಹೇಳಿ ಬೈಸ್ಕೊಳ್ಳೋ ಚಾಳಿ. ಇಲ್ಲಾ, ಅಂಥವರ ಸಹವಾಸವೇ ಬೇಡಾಂತ ಕೈಮುಗಿದು ಹೊರಟ್‌ ಹೋಗ್ತಿàನಿ. ಎಷ್ಟು ಜನ ದೂರಾದ್ರೂ ಡೋಂಟ… ಕೇರ್‌.

ನಿನ್‌ ಹಳೆ ಪುರಾಣವೆಲ್ಲ ನನ್‌ ಕಿವಿಗೂ ಗೊತ್ತಿದೆಯೋ. ಆದ್ರೆ ನಾನು ಅದನ್ನು ಕೇಳ್ಳೋದಿಲ್ಲ. ತಪ್ಪು$ಮಾಡೆª ಇರೋರು ಯಾರಿದ್ದಾರೆ ಹೇಳು? ಆದ್ರೆ ನೀನ್‌ ಮಾತ್ರ, ನಿಂಗೆ ಕೋಪ ಬಂದ್ರೆ ತಪ್ಪು ಮಾಡಿದ್ರೆ ಬಿಟೊಗು ಅನ್ನೊ ನಕಲಿ ಪದನ ಬಾಂಬ… ಥರಾ ಉದುರಿಸಿಬಿಡ್ತೀಯಾ.  ಯಾಕೆ? ಅಷ್ಟೊಂದು ಕಷ್ಟವಾಗಿದ್ದೀನಾ ನಾನು? ಹೀಗೆ ನೀನಿಲ್ಲ ಅಂದ್ರೆ ಇನ್ನೊಬ್ಬ, ಅವನಲ್ಲದಿದ್ರೆ ಮತ್ತೂಬ್ಬ ಅಂತ ಹುಡ್ಕೊಂಡ್‌ ಹೋದ್ರೆ ಪ್ರೀತಿ ಹ್ಯಾಗ್‌ ಆಗುತ್ತೋ ಹುಡ್ಗ? ಹೋದ್ರೂ ನೆಮ್ಮದಿ ಇರುತ್ತೇನೋ? ಮನಸ್ಸು ವಿಲ ವಿಲ ನಲುಗುತ್ತೆ ಕಣೋ. ಪ್ರೀತೀನ ಬಿಟ… ಹೋಗೋದೇ, ಹಠ ಮಾಡದೆ ಇರೋದೇ ಮೆಚೂರಿಟಿಯಾ? ಎಷ್ಟೇ ಜಗಳ ಆದರೂ ಒಂದು ಗಂಟೆ ಒಳಗೆ ಕೋಪ ಪರಾರಿಯಾಗಿ, ಹೃದಯ ತಣ್ಣಗಾಗುತ್ತೆ. ಕೊನೆವರೆಗೂ ಆ ಒಲವಿನ ಸಂಬಂಧವನ್ನು ಜತನದಿಂದ, ಸಂತಸದಿಂದ ಕಾಪಿಟ್ಟುಕೊಂಡ್ರೆ ಅದೇ ಮೆಚ್ಯೂರಿಟಿ. ಅದನ್ನೇ ಪ್ರೀತಿ ಅಂದ್ಕೋತೀನಿ ನಾನು. ಪ್ಲೀಸ್‌, ಹಿಮಾಲಯದಂತೆ ತಣ್ಣಗಾಗು ಮಾರಾಯ…
ನಾನಂತೂ ಎಲ್ಲಾನೂ ಹೇಳಿದ್ದೀನಿ. ನಂಬೋದು ಬಿಡೋದು, ನಿಂಗ್‌ ಬಿಟ್ಟಿದ್ದು. ಆದ್ರೆ ತುಂಬಾ ಅಳಿಸ್ಬೇಡ್ವೋ ನನ್ನ ಪ್ಲೀಸ್‌…

ಇಂತಿ ನಿನ್ನ ಪೆದ್ದಿ
ಮಲ್ಲಿಗೆ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.