ಪ್ಲೀಸ್‌, ವಾಟ್ಸಾಪಿನಲ್ಲಿ ಕಥೆ ಹೇಳೇ…


Team Udayavani, May 23, 2017, 10:51 AM IST

please.jpg

ಯಾವಾಗಲಾದ್ರೂ ಒಂದಿನ “ನಂಗೆ ನಿದ್ದೆ ಬರುತ್ತಿಲ್ಲ ಕಣೇ… ಒಂದು ಕಥೆ ಹೇಳು’ ಅಂದಾಗ ವಾಟ್ಸಾಪ್‌ನಲ್ಲಿ ವಾಯ್ಸ ಮೆಸೇಜ್‌ ಮೂಲಕ ಕಥೆ ಕೂಡ ಹೇಳುತ್ತಿದ್ದೆ. ಇದೇ ಅಲ್ವಾ ಅಮ್ಮನ ಪ್ರೀತಿ. ಅದ್ಕೆ ನಾನು ಅಮ್ಮನ ನಂತರದ ಸ್ಥಾನ ನಿಂಗೆ ಕೊಟ್ಟಿದ್ದು…

ನೀನು ಅದ್ಯಾವ ಜನ್ಮದಲ್ಲಿ ನಂಗೆ ತಾಯಿ ಆಗಿದ್ದೆಯೋ, ನಂಗಂತೂ ಗೊತ್ತಿಲ್ಲ. ಈ ಜನ್ಮದಲ್ಲಿ ಫ್ರೆಂಡ್‌ ಆಗಿ ಸಿಕ್ಕಿದ್ದೀಯಾ. ಈ ಎರಡು ವರ್ಷದ ಪಯಣದಲ್ಲಿ ಅಮ್ಮನಿಗಿಂತ ಜಾಸ್ತಿನೇ ಕಾಳಜಿ ಮಾಡಿದ್ದೀಯಾ. ನಿನ್ನನ್ನು ನಾನು ಸ್ನೇಹಿತೆ ಅನ್ನೋದಕ್ಕಿಂತ, ಈಕೆ ನಮ್ಮ ಮನೆಯಲ್ಲಿ ಒಬ್ಬಳು ಅಂತಾ ಹೇಳಿದ್ದುಂಟು.

ನಿನ್ನ ಜೊತೆ ಕೋಪ ಮಾಡ್ಕೊಂಡು ಎಷ್ಟೋ ಸಲ ದೂರ ಹೋದಾಗ ನಿನ್ನ ಕಣ್ಣೀರು ನಮ್ಮ ಸ್ನೇಹವನ್ನು ಮತ್ತೆ ಗಟ್ಟಿಗೊಳಿಸುತ್ತಿತ್ತು. ನನ್ನ ಸಣ್ಣ ಮನಸ್ಸಿನ ದೊಡ್ಡ ತಪ್ಪುಗಳನ್ನು ನಿನ್ನ ಮುಗ್ಧ ಮನಸ್ಸು ಕಾರಣಗಳನ್ನು ಕೇಳದೆ ಕ್ಷಮಿಸಿ ಬಿಡುತ್ತಿತ್ತು. ತರಗತಿಯಲ್ಲಿ ನಾನು ಮಾಡುವ ತರ್ಲೆ ಕೆಲಸಕ್ಕೆಲ್ಲ ನೀನೇ ಜವಾಬ್ದಾರಿ ಆಗಿರುತ್ತಿದ್ದೆ. ಪ್ರತಿದಿನವೂ ಕ್ಲಾಸಲ್ಲಿ ನಿನ್ನ ಹಿಂದೆ ಕೂತು ಮಾಡುತ್ತಿದ್ದ ಕಿತಾಪತಿ ಕೆಲಸಗಳಿಗೆ ಎಲ್ಲರೂ ನನ್ನ ಜೊತೆಗೆ ನಿನ್ನನ್ನೂ ಸೇರಿಸಿಕೊಂಡು ಬೈಯ್ಯುತಿದ್ದರು. ಆದ್ರೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ನನ್ನ ಹುಡುಗಾಟವನ್ನು ಸಹಿಸಿಕೊಳ್ಳುತ್ತಿದ್ದೆ.

ಅಪ್ಪನನ್ನು ಬಿಟ್ರೆ, ನನ್ನನ್ನು ಅರ್ಥ ಮಾಡ್ಕೊಂಡಿರೋ ಇನ್ನೊಂದು ಮನಸ್ಸು ಅಂದ್ರೆ ಅದು ನಿನ್ನದೇ. ನಾನೂ ಅಷ್ಟೇ… ನಿನ್ನ ಮುಗ್ಧ ಮನಸ್ಸಿನ ಸೂಕ್ಷ್ಮ ಸಂವೇದನೆಗಳನ್ನು ಕ್ಷಣಮಾತ್ರದಲ್ಲಿ ಅರ್ಥಮಾಡಿಕೊಳ್ಳುತ್ತಿದ್ದೆ. ನಿನ್ನ ಜೀವನದಲ್ಲಿ ನಡೆದ ಕೆಲ ನೆನಪುಗಳು ಯಾವುದೋ ಸನ್ನಿವೇಶಗಳಲ್ಲಿ ಹೊರ ಬಂದಾಗ ಆ ಸೂಕ್ಷ್ಮ ವೇದನೆ ನನಗೆ ಮಾತ್ರ ಗೊತ್ತಾಗುತ್ತಿತ್ತು. ಆದರೆ ಅವುಗಳಿಗೆ ಸ್ಪಂದಿಸುವ ಶಕ್ತಿ ನನ್ನ ಕಣ್ಣೀರಿಗೆ ಮಾತ್ರ ಇತ್ತು. ಕೆಲವೊಂದ್ಸಲ ನಂಗೆ ಅಮ್ಮನ ನೆನಪಾದಾಗ ತಕ್ಷಣ ನಿಂಗೆ ಮೆಸೇಜ್‌ ಮಾಡ್ತಿದ್ದೆ. ಆಗ ನೀನು ಅಮ್ಮನ ಥರಾನೆ ಸಮಾಧಾನ ಮಾಡುತ್ತಿದ್ದೆ. ಯಾವಾಗಲಾದ್ರೂ ಒಂದಿನ “ನಂಗೆ ನಿದ್ದೆ ಬರುತ್ತಿಲ್ಲ ಕಣೇ… ಒಂದು ಕಥೆ ಹೇಳು’ ಅಂದಾಗ ವಾಟ್ಸಾಪ್‌ನಲ್ಲಿ ವಾಯ್ಸ ಮೆಸೇಜ್‌ ಮೂಲಕ ಕಥೆ ಕೂಡ ಹೇಳುತ್ತಿದ್ದೆ. ಇದೇ ಅಲ್ವಾ ಅಮ್ಮನ ಪ್ರೀತಿ. ಅದ್ಕೆà ನಾನು ಅಮ್ಮನ ನಂತರದ ಸ್ಥಾನ ನಿಂಗೆ ಕೊಟ್ಟಿದ್ದು….

ನಿನ್ನ ಜೊತೆ ಇಷ್ಟೊಂದು ಸಲಿಗೆ, ಹುಡುಗಾಟ, ಮುಗ್ಧ ಸ್ನೇಹದ ಕಾಳಜಿಯಲ್ಲಿ ಜೂನಿಯರ್ ನಮಗೆ ವಿದಾಯ ಹೇಳುವ ಸಮಯ ಬಂದಿದ್ದೇ ಗೊತ್ತಾಗ್ಲಿಲ್ಲ. ಅವತ್ತೂ ಅಷ್ಟೇ, ಕಣ್ಣೀರು ಹಾಕಬಾರದು ಅಂತ ಹೇಳಿದ ನಾನೇ, ನಗುತ್ತಿದ್ದ ನಿನ್ನ ಮನಸ್ಸಿಗೆ ನೆನಪುಗಳನ್ನು ಬಿಚ್ಚಿಟ್ಟು ಕಣ್ಣೀರು ಹಾಕಿಸಿದೆ. ಅದೇನೇ ಇರಲಿ, ಈ ನಮ್ಮ ಸ್ನೇಹ ಇಲ್ಲಿಗೆ ಕೊನೆಯಾಗದೆ, ಈ ನನ್ನ ಕಂಗಳಿಗೆ ರೆಪ್ಪೆಯಂತೆ ಸಾವಿನ ಆಚೆಗೂ ನಿರಂತರವಾಗಿರಲಿ ಎಂದು ನಿನ್ನ ಮುಗ್ಧ ಮನಸ್ಸಿನ ತುಂಟ ಹೃದಯದ ಕೋರಿಕೆ.

– ಮಂಜುನಾಥ ಕೆರಿ, ಶಿವಮೊಗ್ಗ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.