ಓಡಿ ಬರುವೆ, ಎಲ್ಲ ಬಂಧವ ಮೀರಿ…


Team Udayavani, Jul 25, 2017, 10:31 AM IST

25-JOSH-8.jpg

ಹಾಯ… ಮನದ ಹುಡ್ಗ, 
ದಿನಗಟ್ಟಲೆ ಮಾತನಾಡಿದರೂ ಈ ಪತ್ರ ಬೇರೆ ಓದಬೇಕಾ? ಎಂದು ಬೇಸರಿಸಬೇಡ. ಸೂರ್ಯನ ಸ್ಥಾನವನ್ನು ಚಂದ್ರ ಆಕ್ರಮಿಸಿ ಅದಲು ಬದಲಾದರೂ ಮುಗಿಯದ ನಮ್ಮ ಮಾತಿನ ಸರಣಿಯಲ್ಲಿ ಅದೆಷ್ಟೇ ಕನಸು, ಮೆಚ್ಚುಗೆ ಸೂಸಿದರೂ ಪತ್ರ ನೀಡುವ ಆತ್ಮೀಯತೆ, ಸುಮಧುರ ಭಾವ, ತನ್ಮಯತೆಯನ್ನು ಮತಾವ ಪರಿಕರವೂ ನೀಡದು.  

ನೀನೊಬ್ಬ ಸರಳ, ಸಹಜ, ಸುಂದರ ಹುಡುಗ ಕಣೋ. ಬೇಡದೆ ವರ ಕೊಡದ ದೇವರಿಲ್ಲ. ಅಳದೆ ಹಾಲುಣಿಸುವ ತಾಯಿಯಿಲ್ಲವೆನ್ನುತ್ತಾರೆ. ಆದರೆ, ಏನೊಂದೂ ಕೇಳದೆ ಅಷ್ಟೊಂದು ಸುಪ್ರೀತಿಯನ್ನು ನೀಡುವ ನಿನ್ನ ಮನದ ಚೆಲುವು ಅವ್ಯಕ್ತ ಕಣೋ. ನಿನ್ನದು ವೃತ್ತಿಪರ ಕಾಳಜಿ ಬಿಡು. ನಾನು ಸದಾ ಖುಷಿಯಿಂದಿರಬೇಕು, ಕಂಬನಿ ಮಿಡಿಯಬಾರದೆಂದು ಹಂಬಲಿಸುವೆಯಲ್ಲ; ಅದಕ್ಕಾಗಿ ಎಂಥ ರಿ… ತೆಗೆದುಕೊಳ್ಳಲೂ ಹೊರಡುವೆಯಲ್ಲ? ಆ ನಿನ್ನ ಗುಣಕ್ಕೆ ನಾನು ಸೋತು ಹೋದೆ. ಆ ನಿನ್ನ ಮುಗ್ಧ ಒಲವಿಗೆ ಮರುಳಾಗಿ ಹೋದೆ. ಮನದ ಹೂ ಪಕಳೆಗೆ ಪ್ರೀತಿಯ ಸುವಾಸನೆ ಸುತ್ತಿದವ ನೀನು. ಸಿಂಗಾರದ ಕನಸಿಗೆ ರಂಗವಲ್ಲಿ ತುಂಬಿ ಬದುಕಿಗೆ ಸಂತಸ ತಂದ ಕಿನ್ನರ ನೀನು. ಹೆಣ್ಣಿನ ಅಂತರಂಗದ ನೋವ ಭೇದಿಸಿ ಸಾಂತ್ವನ, ನಲಿವಿನ ಸ್ವರ್ಗ ಸೂಸುವ ಪ್ರೇಮಮೂರ್ತಿ ನೀನು. ನಿನಗೆ ನಾನೇ ಜಗತ್ತು, ನನಗೆ ನಿನ್ನ ಆಸರೆಯೇ ಸಂಪತ್ತು. ಆದರೆ, ಈ ಜಗತ್ತಿನಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಸಂಪತ್ತು ಅವಶ್ಯಕ. ಜೊತೆಗೆ ಪರಿಶ್ರಮ, ದೃಢ ಸಂಕಲ್ಪ ನಮ್ಮಿಬ್ಬರಲ್ಲೂ ಅಚ್ಚಳಿಯದೆ ಇರಬೇಕಾದುದು ಅಗತ್ಯ. ಅದು ಕೊನೆವರೆಗೂ ನಮ್ಮದಾಗಿರಲಿ. ಇಷ್ಟಾಗಿಬಿಟ್ಟರೆ, ಸುಖದ ದಾಂಪತ್ಯ ಜೀವನ ನಮ್ಮದಾಗುತ್ತದೆ. ಅಂದು ಬರುವೆ ಓಡೋಡಿ ಎಲ್ಲ ಬಂಧನಗಳ ಮೀರಿ. ಅಲ್ಲಿವರೆಗೂ ತಾಳ್ಮೆಯಿಂದಿರೂ ಚಿನ್ನಾ. 

ಇಂತಿ ನಿನ್ನ 
ಪಲ್ಲವಿ ಎಡೆಯೂರು  

 

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.