ನನ್ನೆ ದೆಯಲಿ, ನಿನದೇ ಕುಹೂ ಕುಹೂ


Team Udayavani, Sep 5, 2017, 10:27 AM IST

05-JOSH-5.jpg

ನಿನ್ನನ್ನು ಸ್ನೇಹಿತನೆಂದೇ ತಿಳಿದಿದ್ದೆ. ಅದೆಷ್ಟೋ ಮುಗಿಯದಷ್ಟು ಮಾತುಗಳನ್ನು ಆಡಿದ್ದೆ. ಗಂಟೆಗಟ್ಟಲೆ ಜಗಳ ಮಾಡಿದ್ದೆ. ನಕ್ಕು ಹುಣ್ಣಾಗುವಷ್ಟು ತುಂಟಾಟ ಮಾಡಿದ್ದೆ. ಅಷ್ಟೇ ಯಾಕೆ? ಚಿಕ್ಕಂದಿನಿಂದಲೂ ನೀನೇ ನನ್ನ ಜೀವದ ಗೆಳೆಯ ಎಂದೇ ತಿಳಿದಿದ್ದೆ. ಆದರೆ, ಇಂದು ನೀನು ಎದುರಿಗೆ ಬಂದರೆ ಸಾಕು, ಮನಸ್ಸು ನವಿಲಾಗುತ್ತದೆ. ಹೃದಯ ಮಿಡಿಯುತ್ತದೆ. ಮನಸೆಂಬೋ ಮನಸು ಕುಣಿದು ಕುಪ್ಪಳಿಸುತ್ತದೆ. ನಮ್ಮಿಬ್ಬರ ಸ್ನೇಹ ಅದಾವ ಕ್ಷಣದಲ್ಲಿ ಪ್ರೀತಿಯಾಗಿ ಬದಲಾಯಿತೋ, ನನಗೆ ತಿಳಿಯದು.

ಏಕಾಂತದಲ್ಲಿ ಕುಳಿತಾಗ ನಿನ್ನದೇ ನೆನಪು. ನಿನ್ನೊಡನೆ ಕಳೆದ ಸುಮಧುರ ಕ್ಷಣಗಳೇ ಕಣ್ಣ ಮುಂದೆ ಕುಣಿಯುತ್ತವೆ. ನಿನ್ನ ಆ ಮುದ್ದಾದ ಮುಖ, ಮಿಂಚಿನಂಥ ಕಣ್ಣುಗಳು, ಸಿಹಿ ತುಂಬಿದ ಮಾತುಗಳು, ಅಬ್ಟಾ… ನೆನೆದರೆ ತುಟಿಯಂಚಲಿ ನಗು. ನಿನ್ನ ಕಂಡಾಗ ಈ ಕಣ್ಣಿಗೆ ಅದೇನೋ ಸಂತೋಷ.
ಹೃದಯದಲ್ಲಿ ಎಷ್ಟೋ ಕನಸುಗಳು ಅರಳುತ್ತವೆ. ನಿನ್ನಿಂದ ನನ್ನಲ್ಲಿ ಅದೆಷ್ಟು ಬದಲಾವಣೆಗಳಾಗಿದೆಯೆಂದು ನೆನೆಸಿಕೊಂಡರೆ ಅಚ್ಚರಿಯಾಗುತ್ತದೆ.

ನಿನ್ನ ಆ ಮುಗ್ಧ ಸ್ವಭಾವ, ಪೆದ್ದು ಮಾತುಗಳು, ತುಂಟಾಟ ನನ್ನ ಹೃದಯವನ್ನು ಬಡಿದೆಬ್ಬಿಸಿವೆ. ನೀನು ನನ್ನೆದೆಯಲ್ಲಿ ಒಂದು ಜಾಗ ಮಾಡಿಕೊಂಡು ಕುಳಿತು ಬಿಟ್ಟಿದ್ದೀಯ. ಆ ಜಾಗದಿಂದ ಇನ್ನೆಂದೂ ನಿನ್ನನ್ನು ಹೊರಹಾಕಲು ಸಾಧ್ಯವಿಲ್ಲ. ನೀನಿಲ್ಲದ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮಿಬ್ಬರ ಪ್ರೀತಿ ಚಿಪ್ಪಿನೊಳಗಿನ ಮುತ್ತಿನಂತೆ. ಅದೆಷ್ಟು ಬಾರಿ ನಿನ್ನ ನೋಡಿದರೂ ಮತ್ತೆ ಮತ್ತೆ ನೋಡುವಾಸೆ, ನಿನ್ನ ಮಾತುಗಳನ್ನೇ ಕೇಳುತ್ತಿರುವಾಸೆ. ಪ್ರೀತೀಲಿ ಬಿದ್ದವರಿಗೆಲ್ಲಾ ಹೀಗೇ ಆಗುತ್ತಾ? ಕಾಲೇಜಿನಲ್ಲಿ ಗೆಳತಿಯರೊಡನೆ ಬರೀ ನಿನ್ನ ಬಗ್ಗೆಯೇ ಮಾತಾಡ್ತೀನಿ.

ನೆನಪಿದೆಯಾ ನಿನಗೆ? ಅಂದು ನಾನು ನಿನ್ನೊಡನೆ ಕಡಲ ತೀರದಲ್ಲಿ ಕೈ ಹಿಡಿದು ನಡೆದದ್ದು, ನೀನು ಧರಿಸಿದ್ದ ಆ ಸ್ಟೈಲಿಶ್‌ ಪ್ಯಾಂಟ್‌ ಬಗ್ಗೆ ಕಮೆಂಟ್‌ ಮಾಡಿದ್ದು, ನಿನ್ನ ಮೊಬೈಲ್‌ನಲ್ಲಿ ಇದ್ದ ಎಸ್ಸೆಮ್ಮೆಸ್‌ಗಳನ್ನು ಕದ್ದು ಓದಿದ್ದು, ಒಂದೇ ಐಸ್‌ಕ್ರೀಮ್‌ ಅನ್ನು ಇಬ್ಬರೂ ತಿಂದದ್ದು, ಸಿನಿಮಾ ನೋಡಿದ್ದು,  ಜೊತೆಗೆ ಸೆಲ್ಫಿ ತೆಗೆದುಕೊಂಡದ್ದು, ಮುಗಿಯದಷ್ಟು ಮಾತುಗಳನ್ನಾಡಿದ್ದು… 

ಉಫ್, ನಿನ್ನೊಂದಿಗೆ ಎಷ್ಟೊಂದು ಜಾಲಿಜಾಲಿಯಾಗಿ ನಡ್ಕೊಂಡಿದೀನಿ ಎಂಬುದನ್ನು ಹೇಳುತ್ತಾ ಹೋದರೆ ನನಗೇ ನಾಚಿಕೆ, ಖುಷಿ, ಒಂಥರಾ ಥ್ರಿಲ್‌ ಎಲ್ಲಾ ಒಟ್ಟೊಟ್ಟಿಗೇ ಆಗಿಬಿಡುತ್ತೆ… ಇಷ್ಟಾದ ಮೇಲೂ ಮಿಕ್ಕಿದ್ದನ್ನು ವಿವರಿಸಿ ಹೇಳಬೇಕಿಲ್ಲ ತಾನೆ? ಒಂದೇ ಹೃದಯ, ಎರಡು ದೇಹದಂತಿರುವ ನಮ್ಮಿಬ್ಬರ ಪ್ರೀತಿ ನೂರು ಕಾಲ ಚಿರವಾಗಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ…

ಗೀತಾ ಕೆ. ಬೈಲಕೊಪ್ಪ

ಟಾಪ್ ನ್ಯೂಸ್

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.